Homeಮುಖಪುಟ2020ರ ದೆಹಲಿ ದಂಗೆಗಳು: ಇಂದಿಗೂ ಕಾಡುತ್ತಿರುವ ಪ್ರಶ್ನೆಗಳು

2020ರ ದೆಹಲಿ ದಂಗೆಗಳು: ಇಂದಿಗೂ ಕಾಡುತ್ತಿರುವ ಪ್ರಶ್ನೆಗಳು

- Advertisement -
- Advertisement -

1984ರಲ್ಲಿ ಸಿಖ್ಖರ ಮಾರಣಹೋಮದ ನಂತರ ಒಂದು ವರದಿ ಬಿಡುಗಡೆಯಾಗಿತ್ತು. ಮಾನವ ಹಕ್ಕುಗಳ ಸಂಘಟನೆಗಳಾದ ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಮತ್ತು ಪೀಪಲ್ಸ್ ಯುನಿಯನ್ ಫಾರ್ ಡೆಮಕ್ರಟಿಕ್ ರೈಟ್ಸ್ (ಪಿಯುಡಿಆರ್)ಗಳ ಜಂಟಿ ಪ್ರಯತ್ನದಿಂದ ಬಿಡುಗಡೆಯಾದ ಈ ವರದಿಯು ದೆಹಲಿಯಲ್ಲಿ ಆದ ಮಾರಣಹೋಮದ ವಾಸ್ತವವನ್ನು ದೇಶದ ಮುಂದಿಟ್ಟಿತ್ತು; ಆದರೆ, ಅದನ್ನು ಅಂದು ಆಡಳಿತದಲ್ಲಿದ್ದ ಶಕ್ತಿಗಳು ಮುಚ್ಚಿಹಾಕಲು ಪ್ರಯತ್ನಿಸಿದ್ದವು. ಕುಲದೀಪ್ ನಯ್ಯರ್, ರಜನಿ ಕೋಠಾರಿ ಹಾಗೂ ಗೋವಿಂದಾ ಮುಖೋಟಿ ಮುಂತಾದ ನಾಗರಿಕರು ರಿಸ್ಕ್ ತೆಗೆದುಕೊಂಡು, ಹಿಂಸೆಗೆ ಬಲಿಯಾದ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದ್ದರು ಹಾಗೂ ಈ ಹಿಂಸಾಚಾರಕ್ಕೆ ಕಾರಣವಾದ ಜನರನ್ನು ಹೆಸರಿಸಿದ್ದರು. ಈ ಐತಿಹಾಸಿಕ ದಾಖಲೆಯ ಕಾರಣದಿಂದ ಇಂದಿಗೂ ಆ ಸಮಯದ ದೊಡ್ಡದೊಡ್ಡ ನಾಯಕರನ್ನು ಮಾರಣಹೋಮದ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಾತ್ತಿದೆ. ಯಾವ ಸತ್ಯವನ್ನು ಕೋರ್ಟು ಕಚೇರಿಗಳು ಹಾಗೂ ನ್ಯಾಯಾಂಗದ ಆಯೋಗಗಳಿಗೆ ಹೇಳಲು ಸಾಧ್ಯವಾಗಲಿಲ್ಲವೋ, ನಾಗರಿಕರಿಂದಲೇ ರಚಿಸಲಾದ ಈ ವರದಿಯು ಅದನ್ನು ದೇಶದ ಮುಂದಿಟ್ಟಿತು.

ಅದೇ ಪರಂಪರೆಯಲ್ಲಿ ಇತ್ತೀಚಿಗೆ ಇನ್ನೊಂದು ವರದಿಯನ್ನು ಸಾರ್ವಜನಿಕಗೊಳಿಸಲಾಗಿದೆ. ಈ ವರದಿಯ ವಿಷಯ; 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಆದ ಗಲಭೆಗಳು. ಈ ಗಲಭೆಗಳನ್ನು 1984ರ ವ್ಯಾಪಕ ಮಾರಣಹೋಮದೊದೊಂದಿಗೆ ಹೋಲಿಕೆ ಮಾಡಲು ಆಗುವುದಿಲ್ಲ. ಈ ಬಾರಿ ಹಿಂಸಾಚಾರ ಹಿಂದೂ ಮತ್ತು ಮುಸ್ಲಿಂ ಇಬ್ಬರ ಕಡೆಯಿಂದಲೂ ಆಗಿತ್ತು. ಹಿಂಸಾಚಾರದಲ್ಲಿ ಪ್ರಾಣ ತೆತ್ತವರಲ್ಲಿ ಎರಡೂ ಸಮುದಾಯವದರಿದ್ದರು. ವಾಸ್ತವವೇನೆಂದರೆ ಸರಕಾರಿ ಅಫಿಡವಿಟ್‌ಗಳ ಪ್ರಕಾರ, ಈ ಗಲಭೆಗಳಲ್ಲಿ ಮೃತಪಟ್ಟ 53 ವ್ಯಕ್ತಿಗಳಲ್ಲಿ 40 ಜನ ಮುಸ್ಲಿಮರಿದ್ದರು, ಗಾಯಗೊಂಡವರಲ್ಲಿ ಹೆಚ್ಚಿನವರು ಹಾಗೂ ಮನೆ ಮತ್ತು ಅಂಗಡಿಗಳು ಹಾನಿಗೊಳಗಾಗಿ ಸಮಸ್ಯೆ ಅನುಭವಿಸಿದವರಲ್ಲಿ ಮುಕ್ಕಾಲು ಭಾಗ ಜನರು ಮುಸಲ್ಮಾರಾಗಿದ್ದರು. ಅಂದರೆ ಹಿಂಸೆಯು ಹೆಚ್ಚುಕಡಿಮೆ ಏಕಪಕ್ಷೀಯವಾಗುತ್ತು. ವಿಪರ್ಯಾಸವೇನೆಂದರೆ, ಈ ಹಿಂಸೆಯ ಆರೋಪದಲ್ಲಿ ಬಂಧಿತರಾದ ಜನರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ.

ದೆಹಲಿ ಗಲಭೆಗಳ ಬಗ್ಗೆ ಈ ಸತ್ಯವನ್ನು ದೇಶದ ಮುಂದಿಡುತ್ತ ಇತ್ತೀಚಿಗೆ ಒಂದು ವರದಿಯನ್ನು ಪ್ರಕಟಿಸಲಾಗಿದೆ. ದೇಶದ ಮಾಜಿ ಆಡಳಿತ ಅಧಿಕಾರಗಳ ಸಂಘಟನೆಯಾದ ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್‌ನಿಂದ ಪ್ರಾಯೋಜಿಸಲಾದ ಈ ಸ್ವತಂತ್ರ ವರದಿಯನ್ನು ದೇಶದ ಹೆಸರಾಂತ ಮಾಜಿ ನ್ಯಾಯಾಧೀಶರು ಬರೆದಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮದನ್ ಲೋಕುರ್, ದೆಹಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎ.ಪಿ. ಶಾ, ದೆಹಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಆರ್ ಎಸ್ ಸೋಧಿ, ಪಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಅಂಜನಾ ಪ್ರಕಾಶ್ ಹಾಗೂ ದೇಶದ ಮಾಜಿ ಗೃಹ ಸಚಿವ ಜಿ ಕೆ ಪಿಳ್ಳೈ ಅವರುಗಳು ಬರೆದ ‘ಅನ್‌ಸರ್ಟನ್ ಟೈಮ್ಸ್: ಅ ಸಿಟಿಜನ್ ಕಮಿಟಿ ರಿಪೋರ್ಟ್ ಆನ್ ದ ನಾರ್ತ್ ಈಸ್ಟ್ ದೆಹಲಿ ವಾಯಲೆನ್ಸ್ 2020’ ಎಂಬ ಈ ವರದಿಯು ಈ ಗಲಭೆಗಳ ಸತ್ಯವನ್ನು ನಿಷ್ಪಕ್ಷಪಾತದಿಂದ ತನಿಖೆ ನಡೆಸಿ ದೇಶದ ಮುಂದೆ ಇರಿಸಿದೆ.

ದೆಹಲಿಯಲ್ಲಿ ಆದ ಹಿಂಸಾಚಾರದ ಮೊದಲಿನ ಮತ್ತು ನಂತರದ ಎಲ್ಲಾ ಘಟನಾಕ್ರಮಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟಿರುವ ಈ ವರದಿಯು ನಮ್ಮ ಎದುರಿಗೆ ಹಲವು ಕಷ್ಟಕರವಾದ ಪ್ರಶ್ನೆಗಳನ್ನು ಇಡುತ್ತದೆ. ಮೊಟ್ಟಮೊದಲನೆಯದಾಗಿ, ಈ ವರದಿಯು ದೆಹಲಿಯಲ್ಲಿ ಆದ ಹಿಂಸಾಚಾರವು ಯಾವುದೇ ಒಂದು ಕಾಕತಾಳೀಯ ಅಥವಾ ಆಕಸ್ಮಿಕವಾದ ದುರ್ಘಟನೆ ಅಲ್ಲ ಎಂಬುದನ್ನು ಸ್ಪಷ್ಟಗೊಳಿಸುತ್ತದೆ. ದೀರ್ಘ ಕಾಲದಿಂದ ದ್ವೇಷದ ಹಿನ್ನೆಲೆಯನ್ನು ಸೃಷ್ಟಿಗೊಳಿಸಲಾಗುತ್ತಿತ್ತು. ಪೌರತ್ವ ಕಾಯಿದೆಯ ತಿದ್ದುಪಡಿಯ ವಿರುದ್ಧ ನಡೆದ ಆಂದೋಲನದ ಸಮಯದಲ್ಲಿ ಮುಖಂಡರು, ಟಿವಿ ಚಾನಲ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳು ಬಹಿರಂಗವಾಗಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚಾರ ಮಾಡಿದವು ಹಾಗೂ ಶಾಹೀನ್ ಬಾಗ್‌ನಂತಹ ಪ್ರತಿಭಟನೆಯ ಪ್ರದರ್ಶನಗಳನ್ನು ರಾಷ್ಟ್ರ ವಿರೋಧಿ ಎಂದು ಬಿಂಬಿಸಿದವು ಎಂದು ಈ ವರದಿಯು ಹೇಳುತ್ತದೆ. ಬಿಜೆಪಿಯ ನಾಯಕರು ದೆಹಲಿಯ ಚುನಾವಣೆಯ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದರು, ಅದರಿಂದ ಹಿಂಸೆಯ ವಾತಾವರಣ ಸೃಷ್ಟಿಯಾಯಿತು. ಪ್ರಶ್ನೆ ಏನೆಂದರೆ, ಈ ಎಲ್ಲ ಮಾಹಿತಿ ಲಭ್ಯವಿದ್ದರೂ, ಪೊಲೀಸ್, ಆಡಳಿತ, ಚುನಾವಣಾ ಆಯೋಗ ಮತ್ತು ಮಾಧ್ಯಮಗಳನ್ನು ನಿಯಂತ್ರಿಸುವ ಸಂಸ್ಥೆಗಳು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ?

ಜಹಾಂಗೀರ್‌‌‌ಪುರಿ ಗಲಭೆ: 45 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ದೆಹಲಿ ಪೊಲೀಸ್‌‌ | Naanu Gauri

ಎರಡನೆಯ ಪ್ರಶ್ನೆ, ದೆಹಲಿ ಪೊಲೀಸರ ಪಾತ್ರದ ಬಗ್ಗೆ. ಹಿಂಸೆಯ ಎಲ್ಲಾ ಮುನ್ಸೂಚನೆಗಳು ಕಂಡುಬಂದಿದ್ದರೂ ಹಾಗೂ ಇದಕ್ಕೆ ಸಂಬಂಧಿಸಿದ ಗುಪ್ತಚರ ವರದಿ ತಮಗೆ ಸಿಕ್ಕಿದ್ದರೂ, ದೆಹಲಿಯ ಪೊಲೀಸ್ ಈ ಗಲಭೆಗಳನ್ನು ತಡೆಯುವ ಪರಿಣಾಮಕಾರಿ ವ್ಯವಸ್ಥೆ ಏಕೆ ಮಾಡಲಿಲ್ಲ? ಗಲಭೆಗಳು ಶುರುವಾದ ನಂತರವೂ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಬಲವನ್ನು ಏಕೆ ನಿಯೋಜಿಸಲಿಲ್ಲ? ಕರ್ಫ್ಯೂ ವಿಧಿಸುವುದಕ್ಕೆ ಎರಡು ದಿನಗಳ ತಡ ಏಕೆ ಆಯಿತು? ಹಿಂಸಾಚಾರದ ಸಮಯದಲ್ಲಿ ಅನೇಕ ಜಾಗಗಳಲ್ಲಿ ಗಲಭೆಕೋರರ ಜೊತೆಗೆ ಪೊಲೀಸರು ಏಕೆ ಕಾಣಿಸಿಕೊಂಡಿದ್ದರು?

ಮೂರನೆಯ ಪ್ರಶ್ನೆ, ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರವನ್ನು ಕಟಕಟೆಯಲ್ಲಿ ತಂದು ನಿಲ್ಲಿಸುತ್ತದೆ. ಹಿಂಸೆಯಲ್ಲಿ ಬಲಿಯಾದ ಜನರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಮತ್ತು ತಕ್ಷಣದಲ್ಲಿ ಪರಿಹಾರ ನೀಡುವುದರಲ್ಲಿ ನಿರ್ಲಕ್ಷೆ ತೋರಿದ್ದು ಏಕೆ? ತಮ್ಮ ಮನೆಗಳಿಂದ ಹೊರದೂಡಲಾದ ಜನರಿಗಾಗಿ ನಿರ್ಮಿಸಲಾದ ರಿಲೀಫ್ ಕ್ಯಾಂಪ್‌ಗಳನ್ನು ಅಷ್ಟು ತುರಾತುರಿಯಲ್ಲಿ ಏಕೆ ಮುಚ್ಚಲಾಯಿತು? ಹಿಂಸಾಚಾರಕ್ಕೆ ಮತ್ತು ಬೆಂಕಿಕೆ ಬಲಿಯಾದ ಜನರಿಗೆ ಪರಿಹಾರ ನೀಡುವುದರಲ್ಲಿ ರೆಡ್ ಟೇಪಿಸಂ ಅಂದರೆ ಅಷ್ಟು ಸಾಂಸ್ಥಿಕ ವಿಳಂಬ ಆದದ್ದು ಏಕೆ?

ನಾಲ್ಕನೆಯ ಪ್ರಶ್ನೆ ನಮ್ಮ ನ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ದೆಹಲಿಯ ಗಲಭೆಗಳ ನಂತರ 756 ಎಫ್‌ಐಆರ್‌ಗಳನ್ನು ದಾಖಲಿಸಲಾಯಿತು. ಈ ಎಲ್ಲಾ ಎಫ್‌ಐಆರ್‌ಗಳನ್ನು ಹಾಗೂ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ನಮ್ಮ ನ್ಯಾಯ ವ್ಯವಸ್ಥೆಯ ಬಗ್ಗೆ ಈ ವರದಿಯು ನೀಡುವ ಚಿತ್ರಣವು ಹೆಚ್ಚಿನ ಭರವಸೆಯನ್ನು ಹುಟ್ಟುಹಾಕುವಂತಿಲ್ಲ. ವರದಿಯಲ್ಲಿ ಉಲ್ಲೇಖಿಸಿಲಾದ ಸಾಕ್ಷ್ಯಗಳಿಂದ ಸ್ಪಷ್ಟವಾಗುವುದೇನೆಂದರೆ, ಎಲ್ಲೆಲ್ಲಿ ಹಿಂಸಾಚಾರದಿಂದ ಮುಸ್ಲಿಮರು ಬಲಿಯಾಗಿದ್ದಾರೋ, ಅಲ್ಲಿ ದೆಹಲಿ ಪೊಲೀಸ್ ಮತ್ತು ಸರಕಾರಿ ಪ್ರಾಸಿಕ್ಯೂಷನ್ ಕಡೆಯವರು ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ನ್ಯಾಯಾಲಯದಲ್ಲಿ ಸಾಬೀತುಪಡಿಸಲಾಗಂತಹ ಪ್ರಕರಣಗಳನ್ನು ಸೃಷ್ಟಿಸಿದ್ದಾರೆ. ಆದರೆ ಎಲ್ಲಿ ಪೌರತ್ವ ಕಾಯಿದೆ ತಿದ್ದುಪಡಿಯ ವಿರೋಧಿಗಳ ವಿರುದ್ಧ ಆರೋಪವಿದೆಯೋ, ಅಲ್ಲಿ ಪೊಲೀಸರು ತಾವೇ ಖುದ್ದಾಗಿ ಮುಂದೆ ಬಂದು ಕಪೋಲಪಲ್ಪಿತ ಸಾಕ್ಷ್ಯಾಧಾರಗಳನ್ನು ಮತ್ತು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ ಹಾಗೂ ನ್ಯಾಯಾಲಯವನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ನ್ಯಾಯಾಂಗವು ಈ ವಿಷಯದ ಮೇಲೆ ದೆಹಲಿ ಪೊಲೀಸರ ಮೇಲೆ ಅತ್ಯಂತ ಕಟುವಾದ ಟೀಕೆಗಳನ್ನು ಮಾಡಿದೆ. ವಿಶೇಷವಾಗಿ, ದೆಹಲಿ ಗಲಭೆಗಳನ್ನು ಪೌರತ್ವ ಕಾಯಿದೆ ತಿದ್ದುಪಡಿಯ ವಿರೋಧಿಗಳ ಪಿತೂರಿ ಎಂದು ಹೇಳುವ ಪ್ರಕರಣಗಳ ಪರಿಶೀಲನೆ ಮಾಡುವಾಗ ಈ ವರದಿಯು, ಇಂತಹ ಸಮಯದಲ್ಲಿ ದಾಖಲಿಸಿರುವ ಪ್ರಕರಣ ನಕಲಿ ಎಂದು ಸ್ಪಷ್ಟವಾಗಿ ತೋರುತ್ತಿದೆ ಎಂಬ ತೀರ್ಮಾನಕ್ಕೆ ಬಂದಿದೆ. ಗಮನಿಸಬೇಕಾದ ವಿಷಯವೇನೆಂದರೆ, ಈ ಪ್ರಕರಣದ ನ್ಯಾಯಾಲಯ ವಿಚಾರಣೆ ಇನ್ನೂ ನಡೆಯುತ್ತಿದೆ ಹಾಗೂ ಈ ಪ್ರಕರಣದ ಅಡಿಯಲ್ಲಿ ಅನೇಕ ಸಾಮಾಜಿಕ ಕಾರ್ಯಕರ್ತರನ್ನು ಮತ್ತು ಹೋರಾಟಗಾರರನ್ನು ಜಾಮೀನು ಕೂಡ ಸಿಗದ ಯುಎಪಿಎ ನಂತಹ ಕಾಯಿದೆಯ ಅಡಿಯಲ್ಲಿ ಜೈಲಿನಲ್ಲಿ ಇರಿಸಲಾಗಿದೆ.

ಈ ನಾಲ್ಕು ಪ್ರಶ್ನೆಗಳ ಹಿಂದೆ ಅಡಗಿರುವ ದೊಡ್ಡ ಪ್ರಶ್ನೆ ಏನೆಂದರೆ, ದೇಶದ ರಾಜಧಾನಿಯಲ್ಲಿ ಸರಕಾರದ ಮೂಗಿನ ಕೆಳಗೆ ಆದ ಈ ನಾಚಿಕೆಗೇಡಿನ ಹಿಂಸಾಚಾರದ ಸತ್ಯವನ್ನು 1984ರಂತೆಯೇ ಯಾವುದೋ ಒಂದು ಸರಕಾರೇತರ ಸಂಸ್ಥೆಯ ತನಿಖೆ ನಡೆಸಿ ಮುಂದಿಡಬೇಕಾಗಿ ಬಂದಿದೆಯೆಂದರೆ, ಈ ದೇಶದಲ್ಲಿ ಕಾನೂನಿನ ಆಳ್ವಿಕೆ ಇನ್ನೂ ಇದೆಯೇ?

ಕನ್ನಡಕ್ಕೆ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....