Homeಮುಖಪುಟದೆಹಲಿಯ ಗಾರ್ಗಿ ಕಾಲೇಜಿನ ಮೇಲೆ ದಾಳಿ: ಮನೆ ಬಾಗಿಲಿಗೆ ಬಂದ ಫ್ಯಾಸಿಸ್ಟ್ ಪಡೆ

ದೆಹಲಿಯ ಗಾರ್ಗಿ ಕಾಲೇಜಿನ ಮೇಲೆ ದಾಳಿ: ಮನೆ ಬಾಗಿಲಿಗೆ ಬಂದ ಫ್ಯಾಸಿಸ್ಟ್ ಪಡೆ

ಭವಿಷ್ಯದಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಏನು ಕಾದಿದೆ ಎಂಬುದರ ಝಲಕ್ ದೆಹಲಿಯ ಕಾಲೇಜಿನಲ್ಲಿ ಕಂಡಿದೆ.

- Advertisement -
- Advertisement -

ಮೊದಲವರು ಜೆಎನ್‌ಯುಗೆ ಬಂದರು, ನೀವು ದನಿಯೆತ್ತಲಿಲ್ಲವೇಕೆಂದರೆ, ‘ಅವರು ಎಡಪಂಥೀಯರು, ಅರ್ಬನ್ ನಕ್ಸಲ್‌ಗಳು, ದೇಶದ್ರೋಹಿಗಳು, ಅವರಿಗೆ ಹಾಗೆಯೇ ಆಗಬೇಕಿತ್ತು’.

ನಂತರ ಅವರು ಜಾಮಿಯಾಕ್ಕೆ ಬಂದರು, ನೀವು ದನಿಯೆತ್ತಲಿಲ್ಲ. ಏಕೆಂದರೆ ‘ಅವರು ಮುಸ್ಲಿಮರು, ಭಯೋತ್ಪಾದಕರು, ಅವರಿಗೆ ಹಾಗೆಯೇ ಆಗಬೇಕಿತ್ತು’.

ನಂತರ ಅವರು ಶಾಹೀನ್ ಬಾಗ್‌ನತ್ತ ಗುಂಡೆಸೆದರು, ನೀವು ಆಗಲೂ ಮಾತನಾಡಲಿಲ್ಲ. ‘ಅವರು ಹಣಕ್ಕಾಗಿ ಪ್ರತಿಭಟಿಸುತ್ತಿದ್ದ, ದಾರಿತಪ್ಪಿದ ಮಹಿಳೆಯರಾಗಿದ್ದರು’.

ನಂತರ ಅವರು ಈ ದೇಶದ ರಾಜಕೀಯ ರಹಿತ ಹೆಣ್ಣುಮಕ್ಕಳಾದ ಗಾರ್ಗಿ ಹುಡುಗಿಯರತ್ತ ಬಂದರು. ಆಗ ನಿಮ್ಮ ಪರವಾಗಿ ದನಿಯೆತ್ತಲು ಏನೂ ಇರಲಿಲ್ಲ.

ಕಳೆದ ವಾರದಲ್ಲಿ ಗಾರ್ಗಿ ಕಾಲೇಜಿನಲ್ಲಿ ನಡೆದದ್ದನ್ನು ಕೇಳಿ ಬಹಳಷ್ಟು ಜನರು ಶಾಕ್‌ಗೊಳಗಾಗಿದ್ದಾರೆ. ಗುಂಪೊಂದು ಹೆಣ್ಣು ಮಕ್ಕಳ ಮೈಮುಟ್ಟಿ, ಲೈಂಗಿಕ ಕಿರುಕುಳ ಕೊಟ್ಟು, ಅವರ ಮುಂದೆಯೇ ಮುಷ್ಠಿಮೈಥುನ ನಡೆಸಿದ್ದಾರೆ. ಇದೆಲ್ಲವೂ ನಡೆದದ್ದು ದೇಶದ ರಾಜಧಾನಿಯಲ್ಲಿ, ದೆಹಲಿ ಪೊಲೀಸರು, ಶಿಕ್ಷಕರು ಮತ್ತು ಕಾಲೇಜು ಭದ್ರತಾ ಸಿಬ್ಬಂದಿಯ ಎದುರು ಎಂಬುದು ಇನ್ನೂ ಶಾಕಿಂಗ್ ಆದದ್ದಾಗಿದೆ. ಸಿಎಎ ಪರವಾದ ಪ್ರತಿಭಟನೆಯೊಂದನ್ನು ಮುಗಿಸಿಕೊಂಡು ಬಂದು ಜೈ ಶ್ರೀರಾಂ ಎಂಬ ಘೋಷಣೆ ಕೂಗುತ್ತಿದ್ದ ಬಿಜೆಪಿಯ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ಈ ಲೈಂಗಿಕ ಹಲ್ಲೆ ನಡೆದಿದೆ ಎಂಬುದನ್ನು ಗಮನಿಸಬೇಕಿದೆ. ಅವರಲ್ಲಿ ಬಹುತೇಕ ಜನರಿಗೆ ದೆಹಲಿ ಹೈಕೋರ್ಟ್‌ ಜಾಮೀನು ಸಹ ನೀಡಿದೆ.

ಇದು ಏನನ್ನು ತೋರಿಸುತ್ತದೆ? ಗೋವಿನ ಹೆಸರಲ್ಲಿ, ಲವ್ ಜಿಹಾದ್ ಹೆಸರಿನಲ್ಲಿ ಮತ್ತು ಮುಸ್ಲಿಮರು ಹೆಸರಿನಲ್ಲಿ ಕೊಲ್ಲಲು ತಯಾರು ಮಾಡಲಾಗಿದ್ದ ಗುಂಪು ನಿಮ್ಮ ನೆರೆಹೊರೆಗೆ, ಮನೆಗೆ, ಕಾಲೇಜು ಕ್ಯಾಂಪಸ್ಸುಗಳ ಬಳಿಗೆ ಬಂದಿದೆ ಎಂಬುದನ್ನು ತೋರುತ್ತಿದೆ. ಇಂತಹ ಕೊಳಕು ಕೃತ್ಯಗಳನ್ನೆಸಗಲು ಸದರಿ ಗುಂಪನ್ನು ರೂಪಿಸಿದ್ದು, ಬಲ ತುಂಬಿದ್ದು ಮತ್ತು ಸಾಯುಧರನ್ನಾಗಿಸಿದ್ದು ಪುರುಷಹಂಕಾರ ತುಂಬಿದ ಫ್ಯಾಸಿಸ್ಟ್ ಬಲಪಂಥೀಯ ತಾತ್ವಿಕತೆಯೇ ಆಗಿದೆ.

ಅವರ ಆದರ್ಶ ನಾರಿ ಚೌಕಟ್ಟಿಗೆ ಸರಿಯಾಗಿ ಹೊಂದಿಕೊಳ್ಳದ ಮಹಿಳೆಯರನ್ನು ಸ್ತ್ರೀ ದ್ವೇಷ ಮತ್ತು ಅಸಹನೆಯ ಮತ್ತನ್ನು ಏರಿಸಿಕೊಂಡಿರುವ ಗುಂಪು ಇಷ್ಟಪಡುವುದಿಲ್ಲ. ಆ ಗುಂಪು ಶಹೀನ್‌ಬಾಗ್‌ನ ಮಹಿಳೆಯರನ್ನು ರೇಪ್ ಮಾಡುತ್ತೇವೆಂದು ಬಹಿರಂಗವಾಗಿ ಹೇಳುತ್ತದೆ. ಅದೇ ರೀತಿ ನರೇಂದ್ರ ಮೋದಿ ಸರ್ಕಾರವನ್ನು ವಿರೋಧಿಸುವ ಜೆಎನ್‌ಯು, ಜಾಮಿಯಾ ಅಥವಾ ಯಾವುದೇ ವಿದ್ಯಾರ್ಥಿಗಳನ್ನು ಕೊಲ್ಲುವುದಾಗಿ ಅಬ್ಬರಿಸುತ್ತದೆ. ಆಳುತ್ತಿರುವವರ ಶಾಮೀಲುದಾರಿಕೆ ಮತ್ತು ಸರ್ಕಾರೀ ಯಂತ್ರಾಂಗದ ಬೆಂಬಲದೊಂದಿಗೆ ದೇಶದ ಯಾವುದೇ ಭಾಗದಲ್ಲಿ ಅಪರಾಧೀ ಕೃತ್ಯಗಳನ್ನೆಸಗಲು ತಮಗೆ ಲೈಸೆನ್ಸ್ ಸಿಕ್ಕಿದೆ ಎಂದು ಅದು ಭಾವಿಸಿದೆ.

ಮಧ್ಯಮವರ್ಗ ಅಥವಾ ಮೇಲ್ವರ್ಗದ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ವಾದಿಸುವ ಸಂಸ್ಕಾರಯುತ ಜನವರ್ಗಗಳು ಫ್ಯಾಸಿಸ್ಟ್ ಗುಂಪಿನ ಇಂತಹ ಕೃತ್ಯಗಳ ಕುರಿತು ಉಸಿರೆತ್ತುವುದಿಲ್ಲ.

ಮುಂದಿನ ದಿನಗಳ ಸೂಚನೆ

ಕ್ಯಾಂಪಸ್ಸುಗಳ ಮೇಲಿನ ದಾಳಿಯು ಬಿಜೆಪಿ ಸರ್ಕಾರದ ಪ್ರಮುಖ ಗುಣಲಕ್ಷಣಗಳಲ್ಲೊಂದಾಗಿದೆ. ಈ ಸರ್ಕಾರವು ಸುಶಿಕ್ಷಿತರನ್ನು ಮತ್ತು ಶಿಕ್ಷಣ ಪಡೆಯಬಯಸುವವರನ್ನು ದ್ವೇಷಿಸುತ್ತದೆ. ದೇಶದುದ್ದಗಲದ ಹಲವಾರು ಕ್ಯಾಂಪ್ಸಸುಗಳಲ್ಲಿ ಇದು ಪುನರಾವರ್ತನೆಯಗಿದೆ. ಕಳೆದ ಐದು ವರ್ಷಗಳಲ್ಲಿ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳನ್ನು ವಿಲನ್‌ಗಳನ್ನಾಗಿಸುವ ಕೆಲಸ ಅವ್ಯಾಹತವಾಗಿ ನಡೆದದ್ದಲ್ಲದೇ ದಾಳಿ ಮಾಡಲಾಗಿದೆ.

ಮಹಿಳೆಯರ ಕುರಿತಾದ ಇವರ ದ್ವೇಷದ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಏನು ಕಾದಿದೆಯೋ ಅದನ್ನು ಗಾರ್ಗಿ ಕಾಲೇಜಿನ ಹುಡುಗಿಯರು ಈಗ ಅನುಭವಿಸಿದ್ದಾರೆ. ಗಾರ್ಗಿ ಕಾಲೇಜಿನ ಪ್ರಿನ್ಸಿಪಾಲೆರ ಹುಡುಗಿಯರು ಲಕ್ಷ್ಮಣರೇಖೆಯನ್ನು ದಾಟಿದ್ದರಿಂದ ಇದಾಗಿದೆಯೆಂದು ಹೇಳಿಬಿಟ್ಟಿದ್ದನ್ನೂ ಗಮನಿಸಬೇಕು. ಎಲ್ಲೆಡೆ ಮಹಿಳೆಯರು ಸಮಾನ ಅವಕಾಶಗಳು ಮತ್ತು ಸಮಾನವಾಗಿ ತಮ್ಮನ್ನು ನಡೆಸಿಕೊಳ್ಳಬೇಕೆಂಬ ಹಕ್ಕೊತ್ತಾಯವನ್ನು ಮುಂದಿಡುತ್ತಿದ್ದಾರಾದರೂ, ಇಂತಹ ಘಟನೆಗಳು ‘ರಕ್ಷಣೆ’ಯ ಹೆಸರಿನಲ್ಲಿ ಮಹಿಳೆಯರನ್ನು ಮತ್ತಷ್ಟು ಪಂಜರದ ಗೊಂಬೆಗಳನ್ನಾಗಿಸುವ ಸಾಧ್ಯತೆಯೇ ಹೆಚ್ಚು.

ಎಲ್ಲಾ ಕ್ಯಾಂಪಸ್ಸುಗಳಲ್ಲೂ ಹುಡುಗಿಯರು ತಮಗೂ 24 ಗಂಟೆಗಳ ಗ್ರಂಥಾಲಯ, ಅಲ್ಲಿಗೆ ಮುಕ್ತವಾಗಿ ಓಡಾಡಲು ಸ್ವಾತಂತ್ರ್ಯ ಇತ್ಯಾದಿಗಳು ಬೇಕೆಂದು ಕೇಳುತ್ತಿದ್ದಾರೆ. ಆದರೆ, ಪುರುಷ ಕೇಂದ್ರಿತ ದೃಷ್ಟಿಕೋನವು ಇವೆಲ್ಲವನ್ನೂ ರಕ್ಷಣೆಯ ಹೆಸರಿನಲ್ಲಿ ಅಥವಾ ಹಸಿ ಹಸಿಯಾಗಿ ‘ನಿಮಗೆ ಇವುಗಳ ಅಗತ್ಯವಿಲ್ಲ’ ಎಂದು ಹೇಳುತ್ತಾ ಹಿಂದೆ ತಳ್ಳಲು ಇಂತಹ ಘಟನೆಗಳು ನೆಪವಾಗುತ್ತವೆ. ಗಾರ್ಗಿ ಕಾಲೇಜಿನ ಮೇಲೆ ದಾಳಿ ನಡೆಸಿದವರ ಮೇಲೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದಿರುವುದು ದೇಶದೆಲ್ಲೆಡೆಯ ವಿದ್ಯಾರ್ಥಿನಿಯರ ಭವಿಷ್ಯದ ಮೇಲೂ ಹಾಕಿದ ಕಲ್ಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

24 ವರ್ಷಗಳ ಮೋದಿ ವರ್ಚಸ್ಸನ್ನು 2 ವಾರಗಳಲ್ಲಿ ಧೂಳೀಪಟ ಮಾಡಿದ ಸಿಜೆಪಿ: CJP ಆಂದೋಲನಕ್ಕೆ ಅರುಂಧತಿ ರಾಯ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ವರ್ಚಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನಾ ಆಂದೋಲನವು ಕೇವಲ ಎರಡು ವಾರಗಳಲ್ಲಿ ಬುಡಸಮೇತ ಅಲ್ಲಾಡಿಸಿದೆ. ಇದು ಯಾವುದೇ...

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್ ಗೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆಯಿಂದ ಬಹಿರಂಗ ಪತ್ರ

ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ...

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...