Homeಅಂಕಣಗಳುಮೋದಿ ಸರ್ವಾಧಿಕಾರ ಇಂದಿರಾಗಾಂಧಿ ಸರ್ವಾಧಿಕಾರ ಒಂದೇನಾ?..: ಪ್ರಭಾತ್ ಪಟ್ನಾಯಕ್

ಮೋದಿ ಸರ್ವಾಧಿಕಾರ ಇಂದಿರಾಗಾಂಧಿ ಸರ್ವಾಧಿಕಾರ ಒಂದೇನಾ?..: ಪ್ರಭಾತ್ ಪಟ್ನಾಯಕ್

ಮೋದಿಯವರು ಮತ್ತು ಇಂದಿರಾಗಾಂಧಿಯವರ ನಡುವೆ ಇರುವ ವ್ಯತ್ಯಾಸಗಳು

- Advertisement -
ಮೂಲ : ಪ್ರಬಾತ್ ಪಟ್ನಾಯಕ್
ಅನು : ಬಿ. ಶ್ರೀಪಾದ ಭಟ್
ಓದುಗರಿಗೆ ಸೂಚನೆ:
ಈ ಲೇಖನದ ನಿರೂಪಣೆ ಡಿ.ಎನ್.ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಕಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು, ಪ್ರೂಫ್ ವ್ಯತ್ಯಾಸ ಎಂದು ಬಗೆಯಬಾರದೆಂದು ಕೋರುತ್ತೇವೆ.
ಮಾನವ ಹಕ್ಕುಗಳ ಮೇಲೆ ಹಲ್ಲೆ, ಅದಿಕಾರದ ಕೇಂದ್ರೀಕರಣ ಮತ್ತು ಭಯವನ್ನ ಸೃಶ್ಟಿಸುವ ವಾತವರಣ ಈ ಕಾರಣಗಳಿಗೆ ನರೇಂದ್ರ ಮೋದಿಯನ್ನ ಇಂದಿರಾ ಗಾಂದಿಯವರ ತುರ್ತುಪರಿಸ್ಥಿತಿಯ ದಿನಗಳಿಗೆ ಹೋಲಿಸಬಹುದು. ಆದರೆ ಈ ಹೋಲಿಕೆ ಇಲ್ಲಿಗೆ ನಿಲ್ಲುತ್ತದೆ. ವಾಸ್ತವದಲ್ಲಿ ಅನೇಕ ವಿಶಯಗಳಲ್ಲಿ ಇವರಿಬ್ಬರೂ ತುಂಬಾ ಬಿನ್ನವಾಗಿದ್ದಾರೆ. ಮೊದಲನೆಯದಾಗಿ ತುರ್ತುಪರಿಸ್ಥಿತಿಯ ಸಂದರ್ಬದಲ್ಲಿ ದೊಂಬಿ ಹತ್ಯೆಗಳು (lynch mobs) ನಡೆಯುತ್ತಿರಲಿಲ್ಲ, ಮತಾಂದರು ಬೀದಿಯಲ್ಲಿ ನಿಂತು ಜನರನ್ನ ಹೆದರಿಸುತ್ತ ‘ರಾಶ್ಟ್ರೀಯತೆ’ಯ ಪಾಠ ಹೇಳಿಕೊಡುತ್ತಿರಲಿಲ್ಲ. ಈಗ ಸರಕಾರದ ವೈಫಲ್ಯವನ್ನ ಟೀಕೆ ಮಾಡುವವರ ಮೇಲೆ ಹಿಂದುತ್ವದ ಮತೀಯವಾದಿಗಳು ಹಲ್ಲೆ ಮಾಡಿ ತಪ್ಪು ಒಪ್ಪಿಕೊಳ್ಳುವಂತೆ ದೌರ್ಜನ್ಯ ನಡೆಸುತ್ತಿದ್ದಾರೆ. ಮತ್ತು ಈ ಪ್ರಜ್ಞಾವಂತರ ನೆತ್ತಿಯ ಮೇಲೆ ಸದಾ ಬಂದನದ ಬೀತಿಯ ಕತ್ತಿ ತೂಗುತ್ತಲೆ ಇರುತ್ತದೆ. ಫೇಸ್‍ಬುಕ್‍ನಲ್ಲಿ   ಸರಕಾರವನ್ನ ಟೀಕಿಸಿದ ಪ್ರಾದ್ಯಾಪಕರನ್ನ ಮಂಡಿಯೂರಿ ಕ್ಷಮಾಪಣೆ ಕೇಳುವಂತೆ ಮಾಡಿದ ಇತ್ತೀಚಿನ ಘಟನೆಯನ್ನ ಮರೆಯಲು ಸಾದ್ಯವಿಲ್ಲ.
ಹೊಸ ರಾಶ್ಟ್ರೀಯತೆ
ಎರಡನೆಯದಾಗಿ ಈಗಿನ ದಬ್ಬಾಳಿಕೆಯು ಹಿಂದುತ್ವವೆಂದರೆ ಅದು ‘ರಾಶ್ಟ್ರೀಯತೆ’ಯ ಸಿದ್ದಾಂತವೆಂದು ಹುಯಿಲಿಡುತ್ತಿದೆ. ಆದರೆ ಯಾವುದೆ ಸಾಮ್ಯತೆ ಇಲ್ಲದ ಸ್ವಾತಂತ್ರ್ಯ ಸಂದರ್ಬದ ಕಲೋನಿಯಲ್ ವಿರೋದಿ ರಾಶ್ಟ್ರೀಯತೆಯ ಹೆಸರನ್ನ ಬಳಸಿಕೊಂಡು ಲಾಬ ಪಡೆದುಕೊಳ್ಳುತ್ತಿದೆ. ತುರ್ತುಪರಿಸ್ಥಿತಿಯ ಕಾಲದ ದಬ್ಬಾಳಿಕೆಯಲ್ಲಿ ಇಂದಿರಾಗಾಂದಿಯವರ ಟೀಕಾಕಾರರನ್ನ ಗೌರವಾನ್ವಿತರು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗಿನ ದಬ್ಬಾಳಿಕೆಯು ಟೀಕಾಕಾರರನ್ನ ತುಚ್ಚವಾಗಿ ಪರಿಗಣಿಸುತ್ತಿದೆ  ಮತ್ತು ಅವರನ್ನ ‘ಜನವಿರೋದಿ’ ಎಂದು ಕರೆಯಲಾಗುತ್ತಿದೆ. ವಿರೋದಪಕ್ಷಗಳನ್ನ ಬ್ರಶ್ಟರು ಎಂದು ದಾಳಿ ಮಾಡಲಾಗುತ್ತಿದೆ. ಜನರ ಮುಂದೆ ಅವರ ನೈತಿಕತೆಯನ್ನ ನಾಶ ಮಾಡುವ ಉದ್ದೇಶದಿಂದ ಈ ದಬ್ಬಾಳಿಕೆ ಮಾಡಲಾಗುತ್ತಿದೆ.
ಮೂರನೆಯ ವ್ಯತ್ಯಾಸವೆಂದರೆ ಸರಕಾರವು ಮಾದ್ಯಮವನ್ನ ಕಬ್ಜಾ ಮಾಡಿಕೊಂಡಿರುವುದು. ತುರ್ತುಪರಿಸ್ಥಿತಿಯ ಸಂದರ್ಬದಲ್ಲಿ ಮುದ್ರಣ ಮಾದ್ಯಮವನ್ನ ಸೆನ್ಸಾರ್‍ಶಿಪ್ ಮಾಡಲಾಗಿತ್ತು. ಇದನ್ನ ವಿರೋದಿಸಿ ಖಾಲಿ ಪುಟಗಳಲ್ಲಿ ಪತ್ರಿಕೆಯನ್ನ ಮುದ್ರಿಸಲಾಗುತ್ತಿತ್ತು. ಈಗ (ಕೆಲವನ್ನ ಹೊರತುಪಡಿಸಿ) ಬಹುಪಾಲು ಮಾದ್ಯಮಗಳು ಹಿಂದುತ್ವದ ಅಂಗಣದಲ್ಲಿವೆ. ಈ ಮಾದ್ಯಮಗಳನ್ನ ಬಳಿಸಿಕೊಂಡು ವಿರೋದ ಪಕ್ಷಗಳನ್ನ ಬಗ್ಗುಬಡಿಯಲಾಗುತ್ತಿದೆ
ಮಾದ್ಯಮಗಳ ಬದಲಾದ ಪಾತ್ರವು ತುರ್ತುಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿಯ ನಡುವಿನ ನಾಲ್ಕನೆ ಮುಖ್ಯ ವ್ಯತ್ಯಾಸ. ಬಂಡವಾಳಶಾಹಿಗಳ ಹಿತಾಸಕ್ತಿಯೊಂದಿಗೆ ಸಂಪೂರ್ಣವಾಗಿ  ಅಡವಿಟ್ಟಿರುವ ಮೋದಿ ಸರಕಾರಕ್ಕೆ ಹೋಲಿಸಿದರೆ ಇಂದಿರಾಗಾಂದಿ ಸರಕಾರವು ಬಂಡವಾಳಶಾಹಿಗಳೊಂದಿಗೆ ಅಂತರವನ್ನ ಕಾಯ್ದುಕೊಂಡಿತ್ತು  ಮತ್ತು ಬಂಡವಾಳಶಾಹಿ ವಿರೋದಿ ಮುಂಗಡಪತ್ರ ಮಂಡಿಸಿತ್ತು. ಸ್ವಾತಂತ್ರೋತ್ತರ ನಂತರ ಯಾವುದೆ ಸರಕಾರವು ಮೋದಿ ಸರಕಾರದಶ್ಟು ಬಂಡವಾಳಶಾಹಿಗಳ ಜೊತೆ ಅನೋನ್ಯತೆಯಿಂದ ಇರಲಿಲ್ಲ. ಇದು ಅಡಾನಿಯ ಖಾಸಗಿ ವಿಮಾನಗಳಲ್ಲಿ ಮೋದಿ ಸುತ್ತಾಡುವಶ್ಟರ ಮಟ್ಟಿಗೆ ಗೆಳೆತನ ಹೊಂದಿದೆ. (ತಮ್ಮ ಪತ್ನಿ ಕಮಲಾ ನೆಹರೂ ಅವರು ಸ್ವಿಸ್ ದೇಶದ ಆರೋಗ್ಯದಾಮದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಹಿಂದುತ್ವವಾದಿಗಳು ಸದಾ ಹೀಗೆಳೆಯುವ ನೆಹರೂ ಅವರಿಗೆ ವಿದೇಶಕ್ಕೆ ತೆರಳಲು ಅವಶ್ಯಕವಾದ ಹಣವಿರಲಿಲ್ಲ. ಜಿ.ಡಿ.ಬಿರ್ಲಾ ಹಣಕಾಸು ನೆರವು ಒದಗಿಸಲು ಮುಂದಾದಾಗ ನೆಹರೂ ಆ ನೆರವನ್ನ ತಿರಸ್ಕರಿಸಿದರು. ಬದಲಿಗೆ ತಾವೆ ಹಣದ ವ್ಯವಸ್ಥೆ  ಮಾಡಿಕೊಂಡರು)
ಅಲ್ಪಸಂಖ್ಯಾತ ವಿರೋದಿ
ಅಲ್ಪಸಂಖ್ಯಾತರ ವಿರುದ್ದ ಅದರಲ್ಲೂ ಮುಸ್ಲಿಂರ ವಿರುದ್ದ ಮೋದಿ ಸರಕಾರದ ದೌರ್ಜನ್ಯ ಐದನೆ ವ್ಯತ್ಯಾಸ. ಇಂದಿರಾಗಾಂದಿಯವರ ದಬ್ಬಾಳಿಕೆಯು ಯಾವುದೆ ಜಾತಿ, ದರ್ಮ, ಜನಾಂಗದ ವಿರುದ್ದವಿರಲಿಲ್ಲ. ಇದು ತುಂಬಾ ಸರಳವಾಗಿ ತನ್ನ ರಾಜಕೀಯ ವಿರೋದಿಗಳ ವಿರುದ್ದ ಅದರಲ್ಲೂ ಮೋಸದ ಚಟುವಟಿಕೆ ಮಾಡುತ್ತಿದ್ದ ಅವರ ಮಗ ಸಂಜಯ ಗಾಂದಿಯವರ ವಿರೋದಿಗಳ ವಿರುದ್ದವಾಗಿತ್ತು. ಜೊತೆಗೆ ಇತಿಹಾಸವನ್ನ ತಿರುಚಿ ಸತ್ಯವನ್ನ ಮರೆಮಾಚಿ ಮಕ್ಕಳ ತಲೆಯೊಳಗೆ ಸುಳ್ಳುಗಳನ್ನ ತುರುಕಿ ತಮ್ಮದೆ ದೇಶದ ಪ್ರಜೆಗಳ ವಿರುದ್ದ ದ್ವೇಶ ಹುಟ್ಟಿಸುವಂತಹ ಕೆಲಸವನ್ನ ಇಂದಿರಾಗಾಂದಿ ಎಂದಿಗೂ ಮಾಡಲಿಲ್ಲ.
ವೈಜ್ಞಾನಿಕ ಮನೋದರ್ಮವನ್ನ ತಿರಸ್ಕರಿಸಿ ಅವೈಜ್ಞಾನಿಕವಾದ, ಕಟ್ಟು ಕತೆಗಳ ಸಿದ್ದಾಂತವನ್ನ ವಿಜ್ಞಾನವೆಂದು ಪ್ರತಿಪಾದಿಸುವ ಪ್ರಮಾಣಿಸಿ ನೋಡುವ ಮನೋದರ್ಮವನ್ನ ಗೇಲಿ ಮಾಡುವ ಈಗಿನ ಮೋದಿ ಸರಕಾರದ ಮನಸ್ಥಿತಿ ಆರನೆ ವ್ಯತ್ಯಾಸವಾಗಿದೆ. ಕಳೆದ ಅನೇಕ ದಶಕಗಳಿಂದ ಆರೆಸ್ಸಸ್ ಈ ತರಹದ ಮತಿಹೀನ ಸಿದ್ದಾಂತಗಳನ್ನ ಪ್ರಚಾರ ಮಾಡುತ್ತಿತ್ತು ಇಂದು ಇದು ಸರಕಾರದ ಇಲಾಖೆಗಳಲ್ಲಿ ವ್ಯಾಪಿಸಿಕೊಂಡಿದೆ. ಬಾರತೀಯ ವಿಜ್ಞಾನ ಕಾಂಗ್ರೆಸ್ ಸಹ ಇದರಿಂದ ಹೊರತಾಗಿಲ್ಲ.
ಮೋದಿ ಸರಕಾರವು ಸಾರ್ವಜನಿಕ ಸಂಸ್ಥೆಗಳನ್ನ ಅದರಲ್ಲೂ ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಜ್ಯ ವಿವಿಗಳನ್ನ ನೈತಿಕವಾಗಿ ನಾಶ ಮಾಡಿದ್ದು ಏಳನೆ ವ್ಯತ್ಯಾಸವಾಗಿದೆ. ವಿಮರ್ಶಾತ್ಮಕ ಚಿಂತನೆಗಳನ್ನ ಹತ್ತಿಕ್ಕುವುದರ ಮೂಲಕ ಬೌದ್ದಿಕವಾಗಿ ಅವುಗಳನ್ನ ಸಾಯಿಸಲಾಗುತ್ತಿದೆ. ಒಂದುವೇಳೆ ವಿಮರ್ಶಾತ್ಮಕ ಚಿಂತನೆ, ಬೋದನೆಗಳಿಗೆ ಒತ್ತಾಯಿಸಿದರೆ  ಆ ಸಾರ್ವಜನಿಕ ಸಂಸ್ಥೆಗಳಿಗೆ ಅನುದಾನವನ್ನ ನಿರಾಕರಿಸಲಾಗುತ್ತದೆ ಮತ್ತು ಜೆಎನ್‍ಯುನಲ್ಲಿ ನಡೆದಂತೆ “ರಾಶ್ಟ್ರವಿರೋದಿ”ಗಳಿಗೆ ಆಶ್ರಯ ನೀಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತದೆ. ಈ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಾದ ಜೆಎನ್‍ಯು, ಹೈದರಬಾದ್ ವಿವಿ, ಪುಣೆಯ ಫಿಲ್ಮ ಇನ್ಸಟ್ಯೂಟ್, ಟಾಟಾ ಇನ್ಸಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಇತ್ಯಾದಿಗಳು ಇಂದು ಉಸಿರಾಡಲು ಕಶ್ಟಪಡುತ್ತಿರುವುದನ್ನ ಕಂಡಾಗ ಇದು ಈ ಕಾಲದ ದುರಂತವನ್ನ ಹೇಳುತ್ತದೆ. ಈ ಮುಂಚೆ ಈ ರೀತಿ ಎಂದಿಗೂ ನಡೆದಿರಲಿಲ್ಲ ಯಾವುದೆ ಸರಕಾರವು ಸ್ವತಂತ್ರ ಚಿಂತನೆಗೆ ಇಂತಹ ಅಸಡ್ಡೆ, ತಿರಸ್ಕರಾರ ತೋರಿರಲಿಲ್ಲ
ದಬ್ಬಾಳಿಕೆ
ತುರ್ತುಪರಿಸ್ಥಿತಿಯ ದಿನಗಳಿಗೂ ಮೋದಿಯ ವರ್ಶಗಳಿಗೂ ಇರುವ ಮೇಲಿನ ಈ ವ್ಯತ್ಯಾಸಗಳನ್ನ ಸಂಕ್ಷಿಪ್ತವಾಗಿ ಈ ರೀತಿ ಮಂಡಿಸಬಹುದು
ತುರ್ತುಪರಿಸ್ಥಿತಿಯು ಪ್ರಬುತ್ವದಿಂದ ಹೇರಲ್ಪಟ್ಟ ನಿರಂಕುಶ ಅದಿಕಾರವಾಗಿತ್ತು. ಸಂಪೂರ್ಣ ಕೇಂದ್ರೀಕರಣಗೊಂಡಿತ್ತು. ಅದು ಪ್ರಜಾಪ್ರಬುತ್ವದ ಸಮಾಜ ವ್ಯವಸ್ಥೆ ಮತ್ತು ಬಂಡವಾಳಶಾಹಿ ಅಬಿವೃದ್ದಿಯ ನಡುವಿನ ವೈರುಧ್ಯಗಳ ಕಾರಣದಿಂದ ಉಂಟಾಗಿತ್ತು. ಆದರೆ ಆಗ ಬಂಡವಾಳಶಾಹಿ ನೇರವಾಗಿ ಆಡಳಿತದ ಪ್ರತಿನಿದಿ ಆಗಿರಲಿಲ್ಲ. ಮೋದಿಯವರ ಈ ವರ್ಶಗಳು ಸಮಾಜದ ಮೇಲೆ ಪ್ರಬುತ್ವದ ನಿರಂಕುಶ ಅದಿಕಾರದ ದಬ್ಬಾಳಿಕೆಯ ಜೊತೆಗೆ ಅತಿಯಾಗಿ ಕೇಂದ್ರೀಕರಣಗೊಂಡಿತ್ತು. ದ್ವೇಶ ಸಾದಿಸುವ ಭಕ್ತರ ಒಂದು ಪಡೆಯನ್ನ ಪ್ರೋತ್ಸಾಹಿಸುತ್ತಿರುವ ಮೋದಿಯವರ ಆಡಳಿತ ಒಬ್ಬರನ್ನ ಮತ್ತೊಬ್ಬರ ವಿರುದ್ದ ಎತ್ತಿಕಟ್ಟುತ್ತಿದೆ. ಮತ್ತು ಬಂಡವಾಳಶಾಹಿಗಳ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುತ್ತಿದೆ.
ಮುಂದಿನ ಕಂತು ಓದಲು ಇಲ್ಲಿ ಕ್ಲಿಕ್ಕಿಸಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...