Homeಮುಖಪುಟರಾಜ್ಯಸಭೆಯಲ್ಲಿ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್ ಅಂಗೀಕಾರ

ರಾಜ್ಯಸಭೆಯಲ್ಲಿ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್ ಅಂಗೀಕಾರ

- Advertisement -
- Advertisement -

ರಾಜ್ಯಸಭೆಯಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಯಾವುದೇ ಚರ್ಚೆ ನಡೆಯದ ಕಾರಣ ಪ್ರತಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು. ಆ ನಂತರ ಆಡಳಿತ ಪಕ್ಷದ ಸದಸ್ಯರು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯನ್ನು ಧ್ವನಿ ಮತದ ಮೂಲಕ ರಾಜ್ಯಸಭೆ ಬುಧವಾರ ಅಂಗೀಕರಿಸಿದರು.

ಸೋಮವಾರ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದ್ದು, ರಾಷ್ಟ್ರಪತಿಗಳ ಒಪ್ಪಿಗೆ ದೊರೆತ ನಂತರ ಮಸೂದೆ ಕಾನೂನಾಗಲಿದೆ.

ಡೇಟಾ ರಕ್ಷಣೆಗಾಗಿ ಶಾಸನವನ್ನು ರೂಪಿಸುವಲ್ಲಿ ಇದು ಕೇಂದ್ರದ ಎರಡನೇ ಪ್ರಯತ್ನವಾಗಿದೆ. ”ಪ್ರತಿಪಕ್ಷಗಳು ಸದನದಲ್ಲಿ ಮಸೂದೆಯನ್ನು ಚರ್ಚಿಸಿದ್ದರೆ ಅದು ಚೆನ್ನಾಗಿರುತ್ತಿತ್ತು. ಆದರೆ ಯಾವುದೇ ವಿರೋಧ ಪಕ್ಷದ ನಾಯಕ ಅಥವಾ ಸದಸ್ಯರಿಗೆ ನಾಗರಿಕರ ಹಕ್ಕುಗಳ ಬಗ್ಗೆ ಕಾಳಜಿ ಇಲ್ಲ” ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮೇಲ್ಮನೆಗೆ ಹೇಳಿದರು.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದ ಜಾನ್ ಬ್ರಿಟಾಸ್ ಮತ್ತು ವಿ ಶಿವದಾಸನ್ ಅವರು ಗಿಲ್ ಅವರನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದರೂ, ಅವರ ಅನುಪಸ್ಥಿತಿಯ ಕಾರಣ ಅದನ್ನು ಮತಕ್ಕೆ ಹಾಕಲಿಲ್ಲ.

ನಾಗರಿಕರ ದತ್ತಾಂಶಗಳ ಸಂಗ್ರಹಣೆ ಮತ್ತು ಸಂಸ್ಕರಣೆಯ ಸುತ್ತ ಖಾಸಗಿ ಮತ್ತು ಸರ್ಕಾರಿ ಘಟಕಗಳ ಮೇಲೆ ಕಟ್ಟುಪಾಡುಗಳನ್ನು ಈ ಮಸೂದೆ ಹೇಳುತ್ತದೆ.

ನಾಗರಿಕರ ವೈಯಕ್ತಿಕ ಡೇಟಾವನ್ನು ಸಾರ್ವಜನಿಕ ವಿಷಯವಾಗಿಸಲು ವ್ಯಕ್ತಿಯ ಒಪ್ಪಿಗೆಯನ್ನು ಪಡೆಯುವುದು ಮತ್ತು ಅವರ ಡೇಟಾವನ್ನು ಪ್ರವೇಶಿಸಲು, ಸರಿಪಡಿಸಲು, ಅಳಿಸಲು ಮತ್ತು ನಿರ್ಬಂಧಿಸಲು ಆ ವ್ಯಕ್ತಿಗೆ ಹಕ್ಕನ್ನು ನೀಡುತ್ತದೆ. ವ್ಯಕ್ತಿಗಳ ಡಿಜಿಟಲ್ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ರಕ್ಷಿಸಲು ವಿಫಲವಾದ ಘಟಕಗಳ ಮೇಲೆ 250 ಕೋಟಿ ರೂಪಾಯಿಗಳವರೆಗೆ ದಂಡವನ್ನು ಇದು ಪ್ರಸ್ತಾಪಿಸುತ್ತದೆ.

ಡೇಟಾ ಗೌಪ್ಯತೆ ಬಗ್ರುಗೆ ಕೆಲವರು ಕಾನೂನಿನ ಕೆಲವು ನಿಬಂಧನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಒಬ್ಬ ವ್ಯಕ್ತಿ ತಮ್ಮ ಡೇಟಾವನ್ನು ಹಂಚಿಕೊಳ್ಳುವ ಮೂರನೇ ವ್ಯಕ್ತಿಗಳ ಆ ಬಗ್ಗೆ ತಿಳಿಸಬೇಕಾಗಿಲ್ಲ, ಅವರ ಡೇಟಾವನ್ನು ಯಾವ ಅವಧಿಯವರೆಗೆ ಸಂಗ್ರಹಿಸಲಾಗುತ್ತದೆ ಎಂಬ ಬಗ್ಗೆ ತಿಳಿಸಿಲ್ಲ ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಹೇಳಿದೆ.

“ರಾಜ್ಯಕ್ಕೆ ವ್ಯಾಪಕ ವಿನಾಯಿತಿಗಳನ್ನು ಒದಗಿಸುವುದರ ಜೊತೆಗೆ, DPDPB [ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್], 2023ರ ಭಾರತೀಯ ನಾಗರಿಕರ ಗೌಪ್ಯತೆಯ ಹಕ್ಕನ್ನು ದುರ್ಬಲಗೊಳಿಸುವ ಮಿತಿಮೀರಿದ ಕಣ್ಗಾವಲು ವಿರುದ್ಧ ಯಾವುದೇ ಅರ್ಥಪೂರ್ಣ ಸುರಕ್ಷತೆಗಳನ್ನು ಜಾರಿಗೆ ತರಲು ವಿಫಲವಾಗಿದೆ” ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಹೇಳಿದೆ. .

ಸಾರ್ವಜನಿಕರ ಹಿತದೃಷ್ಟಿಯಿಂದ ಅಂತಹ ಮಾಹಿತಿಯನ್ನು ನಿರ್ಬಂಧಿಸಲು ಡೇಟಾ ಸಂರಕ್ಷಣಾ ಮಂಡಳಿಯಿಂದ ನಿರ್ದೇಶನವನ್ನು ಪಡೆಯಬೇಕು. ಮಾಹಿತಿಯ ಸಾರ್ವಜನಿಕಗೊಳಿಸುವುದನ್ನು ನಿರ್ಬಂಧಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ದತ್ತಾಂಶ ಸಂರಕ್ಷಣಾ ಮಂಡಳಿಯ ನೇಮಕಾತಿಗಳನ್ನು ಕೇಂದ್ರ ಸರ್ಕಾರ ಮಾಡುತ್ತದೆ.

ಇದನ್ನೂ ಓದಿ: 2018ರಿಂದ ಹೈಕೋರ್ಟ್‌ಗಳಲ್ಲಿ ಕೇವಲ 3% SC, 1.5% ST ನ್ಯಾಯಾಧೀಶರ ನೇಮಕ: ಸಮಿತಿ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read