Homeಕಥೆನಮ್ಮ ‘ಬೋರಜ್ಜಿಯ ಬ್ಯುಸಿನೆಸ್ಸು’ ಹೆಂಗಿತ್ತು ಗೊತ್ತಾ?

ನಮ್ಮ ‘ಬೋರಜ್ಜಿಯ ಬ್ಯುಸಿನೆಸ್ಸು’ ಹೆಂಗಿತ್ತು ಗೊತ್ತಾ?

- Advertisement -
- Advertisement -

|ಸಿದ್ದರಾಮು ಕೆ. ಎಸ್|

ಇವತ್ತು ದೀಪಾವಳಿಯ ಮಧ್ಯಾಹ್ನ. ಮಧ್ಯಾಹ್ನವೇ ಮೋಡ ಕವಿದು ಸಂಜೆಯಂತಾಗಿದೆ. ಇನ್ನೇನು ಮಳೆ ಬಂದೇ ಬಿಡಬಹುದು, ಮಳೆಯಲ್ಲದಿದ್ದರೆ ಸಣ್ಣ ಸೋನೆಯಾದರೂ ಬರಬಹುದು. ಹಾಗಾಗಿ ಆದಷ್ಟು ಬೇಗ ವ್ಯಾಪಾರ ಮುಗಿಸಿ ಮನೆಗೆ ಹೋಗುವ ತರಾತುರಿಯಲ್ಲಿ ಬೋರಜ್ಜಿ ಕುಳಿತಿದೆ – ಹೆದ್ದಾರಿಯಿಂದ ಅರ್ಧ ಮೈಲಿ ದೂರದಲ್ಲಿರುವ ತನ್ನೂರನ್ನು ಸಂಪರ್ಕಿಸಲು ಇರುವ ಮಣ್ಣು ದಾರಿಯು ಹೆದ್ದಾರಿಗೆ ಕೂಡಿ ಗೇಟು ಎಂದು ಕರೆಯಲ್ಪಡುವ ಜಾಗದಲ್ಲಿ, ತನ್ನಷ್ಟೇ ಮುದಿಯಾಗಿ ಸೊಂಪಾದ ನೆರಳನ್ನೂ ನೀಡಲು ಆಗದ ಸ್ಥಿತಿಯಲ್ಲಿರುವ ಆಲದ ಮರದ ಕೆಳಗೆ ಸರ್ಕಾರದವರು ಕಟ್ಟಿರುವ ಸೇತುವೆಯ ಮೇಲೆ. ಬೆಳಿಗ್ಗೆಯಿಂದ ಅಲ್ಲಿಯೇ ಕೂತಿದ್ದ ಬೋರಜ್ಜಿ ಈಗ ಬುಟ್ಟಿ ಎತ್ತಿಕೊಂಡು ರಸ್ತೆ ಪಕ್ಕಕ್ಕೆ ಬಂದು ಬುಟ್ಟಿಯನ್ನು ಕೆಳಗಿಟ್ಟು ಎರಡೂ ಕೈಯಲ್ಲಿ ಮೂರು ಮೂರು ಸೀಬೆ ಹಣ್ಣು ಹಿಡಿದು ವೇಗವಾಗಿ ಚಲಿಸುತ್ತಿದ್ದ ವಾಹನಗಳ ಗಮನ ಸೆಳೆಯಲು ನಿಧಾನವಾಗಿ ಪ್ರಯತ್ನಿಸುತ್ತಿತ್ತು. ರಸ್ತೆ ಪಕ್ಕದಲ್ಲೇ ಇದ್ದ ಮಾವಿನ ತೋಪಿನೊಳಗೆ ಮೇಯಲು ಕಟ್ಟಿ ಬಂದಿದ್ದ ತನ್ನ ಎಮ್ಮೆಯನ್ನೂ ಕೂಡ ಆಗಾಗ ಗಮನಿಸುವ ಕೆಲಸವನ್ನೂ ಅಲ್ಲಿಂದಲೇ ಮಾಡುತ್ತಿತ್ತು.

ಈಗ ದೀಪಾವಳಿಯ ಸಾಲು ರಜೆಯಾದ್ದರಿಂದ ಈ ರಸ್ತೆಯ ಮೂಲಕ ಇವತ್ತು ಮೈಸೂರಿನ ಕಡೆ ಸಾಕಷ್ಟು ವಾಹನಗಳು ಹೋಗುತ್ತವೆ. ಹಾಗಾಗಿ ಬೇಗ ವ್ಯಾಪಾರ ಮುಗಿಸಿಬಿಡಬಹುದು ಎಂಬ ವ್ಯಾವಹಾರಿಕ ಲೆಕ್ಕಾಚಾರದಲ್ಲಿ ಬೋರಜ್ಜಿ ಬೆಳಿಗ್ಗೆ ಬೇಗ ಎದ್ದು ಎರಡು ರೊಟ್ಟಿ ಬಡ್ಕಂಡು ತಿಂದು, ‘ಮಿಕ್ಕಿದ್ದು ಆಮ್ಯಾಕೆ ಮಾಡಿಕಂಡರಾತು’ ಎಂದು ಎಣಿಸಿ ವ್ಯಾಪಾರಕ್ಕೆ ಬಂದು ಕೂತಿತ್ತು.

ತನ್ನ ಗುಡಿಸಲಿನ ಹಿಂದೆ ಹದಿನೈದು ವರ್ಷಕ್ಕಿಂತಲೂ ಮುಂಚಿನಿಂದ ಇರುವ ಸೀಬೆ ಮರದಿಂದ ಹಣ್ಣು ಕಿತ್ತು ಮಾರಬಹುದು ಎಂದು ಬೋರಜ್ಜಿಗೆ ಎಂದಿಗೂ ಅನ್ನಿಸಿರಲಿಲ್ಲ. ಅಂತಹ ಪರಿಸ್ಥಿತಿಯೂ ಬಂದಿರಲಿಲ್ಲ. ಅವರಿವರ ಹೊಲದಲ್ಲಿ ಮಾಡುತ್ತಿದ್ದ ಸಣ್ಣಪುಟ್ಟ ಕೂಲಿ ಕೆಲಸದಿಂದ ಬರುತ್ತಿದ್ದ ಹಣ, ತನ್ನ ಹರೆಯದಿಂದಲೂ ಜೊತೆಗಿದ್ದ ಒಂದೇ ವಂಶದ ಎಮ್ಮೆಗಳು ಕರೆಯುತ್ತಿದ್ದ ಹಾಲಿನಿಂದ ಬರುತ್ತಿದ್ದ ಹಣ ಬೋರಜ್ಜಿಗೆ ಸಾಕಾಗಿತ್ತು. ಅದರೊಟ್ಟಿಗೆ ಇತ್ತೀಚಿಗೆ ಯೆಡಿಯೂರಪ್ಪನ ನಾನೂರು ರೂಪಾಯಿ ಪಿಂಚಣಿ ಬೇರೆ ಬರಲು ಶುರುವಾಗಿ ಇನ್ನೂ ನಿರಾಳವಾಗಿಯೇ ಜೀವನ ಸಾಗಿತ್ತು. ಮನೆ ಹಿಂದಿನ ಸೀಬೆ ಮರದ ಹಣ್ಣುಗಳು ಊರ ಹುಡುಗರಿಗೇ ಮೀಸಲು ಎನ್ನುವಂತೆ ಭಾವಿಸಿ, ಅದರ ಕುರಿತು ಬೋರಜ್ಜಿ ಮೊದಲಿನಿಂದಲೂ ಒಂದು ರೀತಿಯ ನಿರಾಸಕ್ತಿ ವಹಿಸಿಬಿಟ್ಟಿತ್ತು.

ಹದಿನೈದು ವರ್ಷದ ಹಿಂದೆ ಸಣ್ಣವರಿದ್ದ ಊರ ಹುಡುಗರೆಲ್ಲಾ ಈಗ ಬೆಳೆದು ದೊಡ್ಡವರಾದರು. ಕಾಲೇಜು ಶಿಕ್ಷಣ ಮುಗಿಸಿದರು, ಅದರ ಕರ್ಮಫಲವಾಗಿ ತುಮಕೂರು, ಬೆಂಗಳೂರು ಎಂದು ಹೋಗಿಬಿಟ್ಟರು. ಹೋದಲ್ಲಿಯೇ ಮದುವೆಯಾಗಿ ಮಕ್ಕಳನ್ನೂ ಎತ್ತುಬಿಟ್ಟರು. ಊರಲ್ಲೇ ಉಳಿದ ಸೀಬೆ ಮರದ ಹಣ್ಣಿನ ನೆನಪು ಅವರಿಗೆ ಮರೆತೇ ಹೋಯಿತು. ಹಬ್ಬಕ್ಕೋ, ರಜಕ್ಕೋ ಊರಿಗೆ ಬಂದಾಗ ಊರೊಳಗೆ ಎಲ್ಲಾದರು ಬೋರಜ್ಜಿ ಎದುರಿಗೆ ಸಿಕ್ಕರೆ ಮಾತ್ರ ಅವರಿಗೆ ಬೋರಜ್ಜಿಯ ನೆನಪಾಗುವುದು. ಬೋರಜ್ಜಿಯ ಮನೆಯ ಕಡೆ ಬಂದರೆ, ಸೀಬೆ ಮರದ ಕಡೆ ನೋಡಿದರೆ, ಬಾಲ್ಯವನ್ನು ನೆನಪಿಸಿಕೊಂಡು ಅದರ ಶ್ರಾದ್ಧಕ್ಕೆ ಎಂಬಂತೆ ಮರದಲ್ಲಿ ಹಣ್ಣುಗಳಿದ್ದರೆ ಕೆಳಗೆ ನಿಂತು ಕೈಗೆಟುಕುವ ಎರಡು ಹಣ್ಣು ಕಿತ್ತುಕೊಂಡು ಹೋಗುವರು. ಅದೂ ಅಷ್ಟು ಸಮಯವಿದ್ದರೆ.
ಆದರೆ ಬೋರಜ್ಜಿಯ ಸೀಬೆ ಮರ ಮಾತ್ರ ಕೇಳುವವರಿಲ್ಲದೆಯೂ ಹಾಡುವ ಹಕ್ಕಿಗಳಂತೆ ತಿನ್ನುವವರಿಲ್ಲದಿದ್ದರೂ ವರ್ಷಕ್ಕೊಮ್ಮೆ ಹೂವಾಗಿ ಮೈದುಂಬಿಕೊಂಡು, ಹಣ್ಣಾಗಿ ಬಾಗಿ ನಿಂತುಬಿಡುತ್ತದೆ ಚಿರಯೌವ್ವನದ ಚೆಲುವೆಯಂತೆ. ಹಣ್ಣುಗಳ ತೊಟ್ಟು ಕೊಳೆತು ಒಂದೊಂದೇ ಬಿದ್ದು ಮರದ ಅಡಿಯಲ್ಲೆಲ್ಲಾ ಹಣ್ಣಿನ ರಾಶಿಯಾಗಿಬಿಡುತ್ತದೆ. ಬೋರಜ್ಜಿಗೆ ಇದನ್ನು ಕಂಡು ‘ಕರುಳು ಚುರ್’ ಅಂದರೂ ಏನೂ ಮಾಡಲಾಗದೆ ಸುಮ್ಮನಾಗುತ್ತಾಳೆ.

ಇತ್ತೀಚಿಗೆ ಬೋರಜ್ಜಿಗೆ ಕೂಲಿ ಕೆಲಸಕ್ಕೆ ಹೋಗುವುದು ಕಷ್ಟ. ಇದ್ದ ಎಮ್ಮೆಯನ್ನು ನೋಡಿಕೊಂಡು ಕಾಲ ಹಾಕುವುದೇ ಒಂದು ದೊಡ್ಡ ಕೆಲಸ. ಎಡಿಯೂರಪ್ಪನ ನಾನೂರಕ್ಕೆ ಸಿದ್ದರಾಮಯ್ಯನ ಇನ್ನೂರು ಸೇರಿ ಒಟ್ಟು ಆರ‍್ನೂರು ಬರುವುದರಿಂದ ಜೀವನವೂ ತಕ್ಕ ಮಟ್ಟಿಗೆ ಸಲೀಸು.
ಲೈಟ್ ಬಿಲ್ ಕಲೆಕ್ಟರ್ ಲೋಕೇಶ ಪ್ರತೀ ತಿಂಗಳು ಬೋರಜ್ಜಿಯ ಮನೆಯ ಕಡೆಗೆ ಬಂದಾಗ ಸೀಬೇಹಣ್ಣು ಕಂಡರೆ ತಪ್ಪದೇ ಬಂದು ಒಂದೆರೆಡು ಹಣ್ಣು ತಿಂದು ಕವರಿನಲ್ಲಿ ಒಂದಷ್ಟು ಹಣ್ಣುಗಳನ್ನು ತುಂಬಿಕೊಂಡು ಹೋಗುವನು. ಪ್ರತೀಬಾರಿ ಸೀಬೆ ಹಣ್ಣು ಒಯ್ಯುವಾಗಲೂ ಕೃತಜ್ಞತೆಗೆ ಎಂಬಂತೆ ಬೋರಜ್ಜಿಗೆ ಈ ‘ಬ್ಯುಸಿನೆಸ್ಸು ಐಡಿಯ’ ಕೊಡಲು ಮರೆಯುತ್ತಿರಲಿಲ್ಲ – “ಅಜ್ಜಿ, ಸಂಜೆ ಹೊತ್ತು ಹೈವೇ ಪಕ್ಕ ಒಂದೈವತ್ತು ಹಣ್ಣು ಇಟ್ಕಂಡು ಕುತ್ಕೊ. ಹತ್ತು ರುಪಾಯಿಗೆ ಎರಡು ಅಂದರೂ ಅರಾಮಾಗಿ ತಗಳ್ತಾರೆ ಜನ. ಹಿಂಗ್ ಬಿದ್ದು ವೇಸ್ಟ್ ಆಗೋದೂ ತಪ್ಪುತ್ತೆ, ನಿನಗೂ ಖರ್ಚಿಗೆ ಕಾಸಾಗುತ್ತೆ”.

ಆರಂಭದಲ್ಲಿ ಇದು ಬೋರಜ್ಜಿಗೆ ಹುಡುಗಾಟ ಅನ್ನಿಸುತ್ತಿತ್ತು. ಲೋಕೇಶನ ಸಲಹೆಯನ್ನು ಪದೇ ಪದೇ ಕೇಳಿದ ಮೇಲೂ, ಆನಾಡಿ ಹಣ್ಣುಗಳು ಬಿದ್ದು ಹಾಳಾಗುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗಲಿಲ್ಲ. ಕಡೆಗೊಂದು ದಿನ ಅಜ್ಜಿ ತೀರ್ಮಾನ ಮಾಡೇ ಬಿಟ್ಟಿತು. ಸೂರ್ಯ ಇಳಿಯುವ ಹೊತ್ತಿಗೆ ಬುಟ್ಟಿಯಲ್ಲಿ ಇಪ್ಪತ್ತು-ಮೂವತ್ತು ಆರಿಸಿದ ಸೀಬೆಕಾಯಿಗಳನ್ನು ತುಂಬಿಕೊಂಡು ಹೋಗಿ ರಸ್ತೆ ಪಕ್ಕ ಕೂರುತ್ತಿತ್ತು. ಪ್ರಾರಂಭದಲ್ಲಿ ಒಂದು ರೀತಿಯಲ್ಲಿ ಮುಜುಗರವಾದರೂ ಆನಂತರದಲ್ಲಿ ನಿಧಾನವಾಗಿ ಅಭ್ಯಾಸವಾಗಿ ಹೋಯಿತು. ಹತ್ತು ರೂಪಾಯಿಗೆ ಎರಡು, ಕೆಲವೊಮ್ಮೆ ಮೂರು, ಕೆಲವೊಮ್ಮೆ ಐದರವರೆಗೂ ಮಾರುತ್ತಿತ್ತು. ಒಂದು ವೇಳೆ ವ್ಯಾಪಾರವಾಗದೇ ಉಳಿದರೆ ದಾರಿಯಲ್ಲಿ ಸಿಕ್ಕವರಿಗೆ ಉಚಿತವಾಗಿಯೂ ಕೊಟ್ಟು ಬರುತ್ತಿತ್ತು. ಲೋಕೇಶನ ಈ ಬ್ಯುಸಿನೆಸ್ಸು ಐಡಿಯಾದಿಂದ ಬೋರಜ್ಜಿಗೆ ವರಮಾನ ಬಂದಿದ್ದಕ್ಕಿಂತ ಹೆಚ್ಚಾಗಿ ಕಾಲ ಕಳೆಯಲು ಒಂದು ಒಳ್ಳೆಯ ದಾರಿ ಸಿಕ್ಕಂತಾಗಿತ್ತು.

ಇವತ್ತು ದೀಪಾವಳಿಯಾಗಿದ್ದರಿಂದ ಬೇಗ ವ್ಯಾಪಾರ ಮುಗಿಸಿ ಮನೆಗೆ ಬಂದು ಹಬ್ಬ ಮಾಡುವ ಸಲುವಾಗಿ ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಗೇ ಬಂದು ಕೂತಿತ್ತು. ಮಧ್ಯಾಹ್ನ ಎರಡು ಗಂಟೆಯಾದರೂ ವ್ಯಾಪಾರವಿಲ್ಲ! ವಾಹನಗಳಂತೂ ರಸ್ತೆ ತುಂಬ ಹೋಗುತ್ತಿವೆ; ಆದರೆ ನಿಲ್ಲಿಸುವವರು ಯಾರೂ ಇಲ್ಲ. ‘ಇನ್ನೊಂದು ಅರ್ಧ ಗಂಟೆ ನೋಡಿ ಹೋಗನ’ ಎಂದು ತೀರ್ಮಾನಿಸಿ ಬೋರಜ್ಜಿ ಎದ್ದು ಬಂದು ರಸ್ತೆಯ ಬುಡಕ್ಕೇ ನಿಂತು ಕೈಯಾಡಿಸಲು ಶುರು ಮಾಡಿತ್ತು. ಕೈಯಾಡಿಸಲು ಶುರು ಮಾಡಿ ಸರಿಯಾಗಿ ಅರ್ಧಗಂಟೆಗೆ ಒಟ್ಟಿಗೆ ಬಂದ ಮೂರು ಬೈಕುಗಳು ಬೋರಜ್ಜಿಯನ್ನು ಗಮನಿಸಿ ಹತ್ತಿರ ಬಂದು ನಿಂತವು. ವ್ಯಾಪಾರ ಶುರು ಆಯಿತು. ‘ಹತ್ತು ರೂಪಾಯಿಗೆ ಐದು ಮಾಡಿ ಕೊಡ್ತಿನಿ ತಗಳ್ರಪ್ಪ’ ಅಂತು ಅಜ್ಜಿ. ಇದ್ದ ಒಟ್ಟು ಆರು ಜನರಿಂದ ಮೂವತ್ತು ರೂಪಾಯಿಯ ವ್ಯಾಪಾರ ಆಯಿತು. ವ್ಯಾಪಾರ ಮುಗಿಸಿ ಹೊರಡುವ ಮುನ್ನ ಸೀಬೇ ಹಣ್ಣಿನ ವ್ಯಾಪಾರದ ‘ಮೆಮೊರಿ’ಗಾಗಿ ಬಂದವರು ಸೆಲ್ಫಿಗಳನ್ನು ತೆಗೆಯಲು ಶುರು ಮಾಡಿದರು.

ಹಣ್ಣುಗಳನ್ನು ಕೈಯಲ್ಲಿ ಇಟ್ಟುಕೊಂಡು, ಬಾಯಲ್ಲಿ ಇಟ್ಟುಕೊಂಡು, ತಲೆ ಮೇಲೆ ಹೊತ್ತುಕೊಂಡು!, ಕೈಗಳನ್ನು ತಿರುಗಿಸಿ, ಮುಖವನ್ನು ತಿರುಗಿಸಿ ಇನ್ನೂ ವಿಧವಿಧವಾದ ಭಂಗಿಗಳು ನಡೆದೇ ಇದ್ದವು. ಇವರ ಅವತಾರಗಳನ್ನು ನೋಡಿಕೊಂಡು ನಗುತ್ತಿದ್ದ ಬೋರಜ್ಜಿಯ ಜೊತೆಗೂ ಕೆಲವು ಸೆಲ್ಫಿಗಳಾದವು – “ಸೆಲ್ಪಿ ವಿತ್ ಸ್ಮೈಲಿಂಗ್ ಏಂಜೆಲ್” ಎಂದು! ಬಂದವರ ಗುಂಪಿನಲ್ಲಿದ್ದ ಹುಡುಗಿಯೊಬ್ಬಳು ಬುಟ್ಟಿಯನ್ನೇ ಎತ್ತಿಕೊಂಡು ತಲೆಯ ಮೇಲೆ ಮತ್ತು ಕಂಕುಳಲ್ಲಿ ಇಟ್ಟುಕೊಂಡು ಪೋಟೋ ತೆಗಿಸಿಕೊಂಡಳು. ಹಾಗೆಯೇ ಮುಂದುವರೆದು ಸರ್ಕಾರದವರ ಸೇತುವೆಯ ಮೇಲೆ ಹತ್ತಿ ನಿಂತು ದೇಹವನ್ನು ಬಳುಕಿಸುತ್ತಾ ವಿವಿಧ ಭಂಗಿಗಳಲ್ಲಿ ಫೋಟೋ ತೆಗಿಸಿಕೊಳ್ಳುವುದರಲ್ಲಿ ಮಗ್ನಳಾಗಿದ್ದಳು.

ಅದೇ ಸಮಯಕ್ಕೆ ರಸ್ತೆಯಲ್ಲಿ ಬಂದ ಲಾರಿಯೊಂದು ನಿದ್ದೆಯಲ್ಲಿ ಭಯಬಿದ್ದು ಒಮ್ಮೆಲೇ ಎಚ್ಚರಗೊಂಡು ಜೋರಾಗಿ ಚೀರುವವರಂತೆ, ರಸ್ತೆ ಪಕ್ಕದಲ್ಲಿ ಸಾಲುಗಟ್ಟಿ ನಿಂತಿದ್ದ ಬೈಕುಗಳನ್ನು ಕಂಡು ಜೋರಾಗಿ ಹಾರನ್ನು ಮಾಡಿಬಿಟ್ಟಿತು. ಇದ್ದಕ್ಕಿದ್ದಂತೆ ಬಂದ ಸದ್ದಿಗೆ ಬೆಚ್ಚಿದಂತಾಗಿ ಸೇತುವೆ ಮೇಲಿದ್ದ ಹುಡುಗಿಯು ಆಯತಪ್ಪಿ ಸೇತುವೆಯ ಹಿಂಭಾಗದಲ್ಲಿದ್ದ ಗುಂಡಿಯ ಒಳಕ್ಕೆ ಬುಟ್ಟಿಯ ಸಮೇತ ಬಿದ್ದುಬಟ್ಟಳು. ನಿನ್ನೆ ಮೊನ್ನೆ ಬಿದ್ದಿದ್ದ ಮಳೆಯಿಂದಾಗಿ ಗುಂಡಿಯೊಳಗೆ ನಿಂತಿದ್ದ ಸ್ವಲ್ಪ ನೀರಿನಲ್ಲಿ ಹುಡುಗಿ ಕೆಸರಾಗಿ ಹೋದಳು. ಬುಟ್ಟಿ ಮುರಿದು ಸೀಬೆಹಣ್ಣುಗಳೂ ಕೊಳಕಾದವು. ಉಳಿದವರು ಹುಡುಗಿಯನ್ನು ನಿಧಾನವಾಗಿ ವಿಡಿಯೋ ಸಮೇತ ಎತ್ತಿದರು. ಚೇಷ್ಟೆಯೂ ಆಯಿತು. ಹುಡುಗನೊಬ್ಬ ನಿಧಾನವಾಗಿ ಮುರಿದು ಹೋಗಿದ್ದ ಬುಟ್ಟಿಯನ್ನು ತೆಗೆದುಕೊಂಡು ಬಂದ. ಬೋರಜ್ಜಿ ಬುಟ್ಟಿಯನ್ನು ನೋಡಿ ಮಂಕಾಗಿ ಹೋಯಿತು. ಕೆಸರಾಗಿದ್ದ ಹುಡುಗಿ “ನಾನು ಬೇಗ ಫ್ರೆಶ್ ಅಪ್ ಆಗಬೇಕು” ಎಂದು ಒಂದೇ ಸಮ ಹಠ ಮಾಡತೊಡಗಿದ್ದಳು.

ಹುಡುಗನೊಬ್ಬ ಅಜ್ಜಿಯ ಬಳಿ ಬಂದು “ಸಾರಿ ಅಜ್ಜಿ. ಬೇಜಾರಾಗ್ಬೇಡಿ. ಹೊಸ ಬುಟ್ಟಿ ತಗೊಳಿ ಪ್ಲೀಸ್” ಎಂದು ಐದು ನೂರು ತೆಗೆದು ಅಜ್ಜಿಯ ಕೈಗಿಟ್ಟನು. ಉಳಿದವರೂ ‘ಸಾರಿ’ ಸೇರಿಸಿದರು. ಪುಣ್ಯಕ್ಕೆ ಸಾರಿಯ ‘ಮೆಮೊರಿ’ಗಾಗಿ ಮತ್ತೊಂದು ಸೆಲ್ಫಿ ತೆಗೆದುಕೊಳ್ಳುವ ಗೋಜಿಗೆ ಹೋಗದೆ ಬೈಕು ಹತ್ತಿ ಹೊರಟುಬಿಟ್ಟರು.

ಬೋರಜ್ಜಿಗೆ ತನ್ನ ತಿಳಿವಳಿಕೆ ಮತ್ತು ಅನುಭವದ ಆಧಾರದಲ್ಲಿ ಈ ಘಟನೆಯನ್ನು ವಿಶ್ಲೇಷಿಸಲು ಸಾಧ್ಯವಾಗಲೇ ಇಲ್ಲ. ಎಮ್ಮೆ ಅಟ್ಟಿಕೊಂಡು ಮನೆಗೆ ಬಂದು ಹಬ್ಬ ಸುರು ಮಾಡಿತು. ಸಗಣಿ ಸಾರಿಸಿ, ಪೂಜೆ ಮುಗಿಸಿ ಎಡೆಗೆ ಮಾಡಿದ್ದ ಪಾಯಸ ಹಾಕಿಕೊಂಡು ಊಟಕ್ಕೆ ಕೂತಾಗ ಸಂಜೆ ಐದು ಗಂಟೆಯಾಗಿತ್ತು. ಒಂದೆರೆಡು ತುತ್ತು ತಿನ್ನುವಷ್ಟರಲ್ಲಿ ಬೋರಜ್ಜಿಗೆ ಊಟ ಸಾಕೆನಿಸತೊಡಗಿತು. ಮತ್ತೊಂದು ತುತ್ತು ಬಲವಂತದಿಂದ ಗಂಟಲಿಗೆ ಇಳಿಸಲು ಹೋದಾಗ ವಾಕರಿಕೆ ಬಂದಂತೆ ಆಯಿತು. ತಟ್ಟೆಯಲ್ಲಿದ್ದ ಊಟವನ್ನು ಮುಸುರೆಗೆ ಹಾಕಿ ಕೈ ತೊಳೆದುಕೊಂಡು, ಮುಸುರೆ ಬಕೇಟು ಎತ್ತಿಕೊಂಡು ಎಮ್ಮೆಗೆ ಇಡಲು ಕೊಟ್ಟಿಗೆ ಕಡೆಗೆ ಹೊರಟಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...