Homeಮುಖಪುಟದ್ರಾವಿಡಮೂಲದ ಕನ್ನಡವನ್ನು ಬೆನ್ನತ್ತಿ...

ದ್ರಾವಿಡಮೂಲದ ಕನ್ನಡವನ್ನು ಬೆನ್ನತ್ತಿ…

- Advertisement -
- Advertisement -

| ಡಾ. ಸರ್ಜಾಶಂಕರ ಹರಳಿಮಠ |

ದ್ರಾವಿಡಶೋಧದ ನೆಲೆಯ ಕನ್ನಡ ಅಸ್ಮಿತೆಯ ಮುಖ್ಯ ಚಹರೆಯೆಂದರೆ ಸ್ವವಿಮರ್ಶೆಯ ಗುಣ. ಇದು ಇಂಗ್ಲಿಷನ್ನೋ ಅಥವಾ ನೆರೆಯ ಭಾಷೆಯನ್ನೋ ಕನ್ನಡದ ವೈರಿಭಾಷೆಯೆಂದು ಪರಿಗಣಿಸುವುದಿಲ್ಲ. ಸಂಸ್ಕೃತವನ್ನು ಕನ್ನಡಕ್ಕೆ ಕಂಟಕ ತರುತ್ತಿದೆ ಎಂದು ಭಾವಿಸಿದರೂ ಅಲ್ಲಿ ಮುಖ್ಯವಾಗಿರುವುದು ಭಾಷೆಯಾಗಿ ಸಂಸ್ಕೃತಕ್ಕಿಂತಲೂ ಸಂಸ್ಕೃತದ ಮೂಲಕ ತಮ್ಮ ಶ್ರೇಷ್ಠತೆಯನ್ನು ಪ್ರತಿಷ್ಟಾಪಿಸಲು ಬಯಸುವ ಸಾಮಾಜಿಕ ವರ್ಗ.

ಭಾರತದಲ್ಲಿ ಬ್ರಿಟಿಷ್ ಅಧಿಕಾರಿಗಳು ದಕ್ಷಿಣ ಭಾರತದ ಭಾಷೆಗಳ ಮೂಲವನ್ನು ಅರಿಯಲು ಸಂಶೋಧನೆಗೆ ತೊಡಗಲು ಭಾಷಾ ಸಂಬಂಧಿ ಆಸಕ್ತಿ ಮತ್ತು ಸ್ಥಳೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುವುದು ಪ್ರಮುಖ ಪ್ರೇರಣೆಯಾಗಿದ್ದವು. ಆದರೆ ಈ ಸಂಶೋಧಕರು ಹೊರಗೆಡಹಿದ ಫಲಿತಗಳು ಮಾತ್ರ ಭಾರತದ ಸಾಮಾಜಿಕ ವಲಯದಲ್ಲಿ ಸಂಚಲನೆಗೆ ಕಾರಣವಾಯಿತು. ಪುರೋಹಿತಶಾಹಿ ವರ್ಗದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದ, ಬಹುಸಂಖ್ಯಾತ ತಳವರ್ಗದವರಿಗೆ ಅಲಭ್ಯವಾಗಿದ್ದ ಶಿಕ್ಷಣ ಸೌಲಭ್ಯವೇ ಕಾರಣವಾಗಿ ಸಮಾಜದಲ್ಲಿ ಜಾತಿ ತಾರತಮ್ಯ, ಅವಮಾನ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗಿತ್ತು. ಸಂಸ್ಕೃತ ಪುರೋಹಿತಶಾಹಿ ವರ್ಗದ ಭಾಷೆಯಾಗಿದ್ದು ಈ ಭಾಷೆಯನ್ನು ಕಲಿಯಲು ಬೇರೆಯವರಿಗೆ ನಿರ್ಬಂಧವಿತ್ತು. ಪರಿಣಾಮವಾಗಿ ಭಾರತೀಯ ಬಹುಸಂಖ್ಯಾತ ತಳವರ್ಗದಲ್ಲಿ ಪುರೋಹಿತಶಾಹಿ ಮತ್ತು ಸಂಸ್ಕೃತದ ಮೇಲಿನ ಸಿಟ್ಟು ಬೇರ್ಪಡಿಸಲಾಗದಂತಿತ್ತು. ಆದರೂ ಕನ್ನಡದ ಮೂಲಭಾಷೆ ಸಂಸ್ಕೃತ ಎನ್ನುವ ಪ್ರಚಲಿತದಲ್ಲಿದ್ದ ನಂಬಿಕೆಯ ಹಿನ್ನೆಲೆಯಲ್ಲಿ ಆ ಸಿಟ್ಟು ವ್ಯಕ್ತವಾಗುತ್ತಿರಲಿಲ್ಲ. ಯಾವಾಗ ಕನ್ನಡ ಸಂಸ್ಕೃತದಿಂದ ಟಿಸಿಲೊಡೆದ ಭಾಷೆ ಅಲ್ಲ, ಇದು ದ್ರಾವಿಡಭಾಷಾ ಕುಟುಂಬದಿಂದ ಬಂದ ಭಾಷೆ ಎನ್ನುವ ಸತ್ಯ ಅನಾವರಣವಾಯಿತೋ ಅದು ತಳವರ್ಗದವರಲ್ಲಿ ಸ್ವಾಭಿಮಾನದ ಸಂಗತಿಯಾಗಿ ಹೊರಹೊಮ್ಮತೊಡಗಿತು. ಅಂದರೆ ಕನ್ನಡವನ್ನು ಸಂಸ್ಕೃತದಿಂದ ಬೇರ್ಪಡಿಸಿ, ದ್ರಾವಿಡ ನೆಲೆಯಿಂದ ನೋಡುವುದು ಭಾಷಿಕ ಕಾರಣಕ್ಕಿಂತ ಸಾಮಾಜಿಕ ಕಾರಣಕ್ಕಾಗಿ ಮುನ್ನೆಲೆಗೆ ಬಂದಿತು. ಈ ಅಂಶಗಳು ದ್ರಾವಿಡಮೂಲದ ಕನ್ನಡವನ್ನು ಪುನರೂಪಿಸುವ ಪ್ರಯತ್ನದ ಹಿಂದೆಯೂ ದಟ್ಟವಾಗಿರುವುದನ್ನು ಗುರುತಿಸಬಹುದು.

‘ದ್ರಾವಿಡ’ ಎಂಬ ಪದವು ದೇಶವಾಚಕವಾಗಿ, ಜನಾಂಗವಾಚಕವಾಗಿ ಸಾಮಾನ್ಯವಾಗಿ ರೂಢಿಯಲ್ಲಿದೆ. ದ್ರಾವಿಡಭಾಷೆ ಎಂದಾಗ ಅದು ಒಂದು ಭಾಷಾವರ್ಗವನ್ನು ಹೆಸರಿಸುತ್ತದೆ. ಸಂಸ್ಕೃತ ವಿದ್ವಾಂಸರ ಪ್ರಕಾರ ದ್ರಾವಿಡ ಎಂಬುದು ದಕ್ಷಿಣ ಭಾರತದ ಒಂದು ಭೂಭಾಗವೇ ಆಗಿದೆ. ಸಂಸ್ಕೃತದ ಮಹಾವಿದ್ವಾಂಸನಾದ ಫೆಡ್ರಿಕ್ ಮ್ಯಾಕ್ಸ್ ಮುಲ್ಲರ್ ಮೊತ್ತಮೊದಲ ಬಾರಿಗೆ ಹತ್ತೊಂಬತ್ತನೆಯ ಶತಮಾನದ ದಶಕದಲ್ಲಿ ದ್ರಾವಿಡ ಭಾಷೆಗಳನ್ನು ವಿಭಾಗಿಸಿದ. ಅಲ್ಲಿಂದ ಮುಂದೆ ‘ದ್ರಾವಿಡ’ ಎಂಬುದು ಒಂದು ಭಾಷಿಕ ಪರಿಕಲ್ಪನೆಯಾಗಿ ಭಾರತದಲ್ಲಿ ನಿರ್ದಿಷ್ಟವಾದ ಒಂದು ‘ಭಾಷಾ ಪರಿವಾರ’ ಎಂಬರ್ಥದಲ್ಲಿ ಪ್ರಕಟಗೊಂಡಿತು ಸಾಮಾನ್ಯವಾಗಿ ದಕ್ಷಿಣ ಭಾರತವನ್ನು ದೃಷ್ಟಿಯಲ್ಲಿರಿಸಿಕೊಂಡು ಅದನ್ನು ದ್ರಾವಿಡ ನಾಡೆಂದು, ಇಲ್ಲಿ ವಾಸ ಮಾಡುವ ಜನರನ್ನು ದ್ರಾವಿಡರು ಎಂದು ಗುರುತಿಸುವುದಿದೆ. ಇನ್ನೂ ನಿರ್ದಿಷ್ಟವಾಗಿ ದ್ರಾವಿಡ ಪದವನ್ನು ವ್ಯಾಪಕವಾಗಿ ‘ತಮಿಳ’ ಪದಕ್ಕೆ ಪರ್ಯಾಯವಾಗಿ ಬಳಸಲಾಗಿದೆ.

ಶಂಬಾ ಅವರು ಪಾಶ್ಚಾತ್ಯ ಮಾನವಶಾಸ್ತ್ರಜ್ಞರು ಮತ್ತು ದೇಶಿ ವಿದ್ವಾಂಸರ ‘ದ್ರಾವಿಡ’ ಅಧ್ಯಯನಗಳನ್ನು ಆಧರಿಸಿ, ‘ದ್ರಾವಿಡ’ ಪದಕ್ಕಿರುವ ಅರ್ಥವ್ಯಾಪ್ತಿಯನ್ನು ಚರ್ಚಿಸುತ್ತಾರೆ. ‘ದ್ರಾವಿಡ’ ಪ್ರಯೋಗ ವೈದಿಕ ವಾಙ್ಮಯದಲ್ಲಿ ‘ದಸ್ಯು’ಗಳನ್ನು ನಿರ್ದೇಶಿಸುವ ಪದ. ಆರ್ಯರೊಂದಿಗೆ ಹೋರಾಡಿದ ದಸ್ಯುಗಳೇ ದ್ರಾವಿಡರಾಗಿದ್ದು, ದ್ರಾವಿಡ ಮೂಲದ ‘ಬ್ರಾಹೂಯಿ’ ಭಾಷೆ ಇಂದಿಗೂ ಬಲೂಚಿಸ್ಥಾನದ ಪರಿಸರದಲ್ಲಿರುವುದು, ಸಿಂಧು ಸಂಸ್ಕೃತಿಯು ದ್ರಾವಿಡರ ಅಸ್ತಿತ್ವಕ್ಕೆ ಪ್ರಬಲ ಪುರಾವೆಯೆನ್ನುವುದು ಶಂಬಾ ಅವರ ವಾದ. ಇಂದಿನ ತಮಿಳರು ಮತ್ತು ಕನ್ನಡಿಗರು ಮೂಲ ದ್ರಾವಿಡ ಪಂಗಡಕ್ಕೆ ಸೇರಿದವರೆನ್ನುವುದನ್ನು ಹಳಗನ್ನಡ ಮತ್ತು ತಮಿಳು ಭಾಷೆಗಳೆರಡು ಒಡೆಯುವ ಪೂರ್ವದಲ್ಲಿದ್ದ ಏಕರೂಪ ‘ಕಂದಮಿಳ’ ಭಾಷೆ. ಕಂದಮಿಳ ಭಾಷೆಯನ್ನಾಡುವವರೇ ‘ಕಂದಮಿಳರು’, ದ್ರಾವಿಡ ಸಂಸ್ಕøತಿಯ ಮೂಲಿಗರಾದ ‘ಕಂದಮಿಳರು’ ಕ್ರಿಸ್ತಪೂರ್ವ ಸು.2000 ವರ್ಷಗಳ ಹಿಂದೆ ನರ್ಮದೆಯ ಪರಿಸರದಲ್ಲಿ ಅಂದರೆ ಇಂದಿನ ಗುಜರಾಥ (ಲಾಟ), ಬಂಗಾಲ, ಮಹಾರಾಷ್ಟ್ರದಲ್ಲಿ ನೆಲೆಸಿದ್ದರು ಎಂದು ಶಂಬಾ ಅವರು ನಿರ್ಣಯಕ್ಕೆ ಬರುತ್ತಾರೆ.

ದ್ರಾವಿಡಶೋಧದ ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಪ್ರಯತ್ನದ ಹಿಂದಿನ ಪ್ರೇರಣೆಗಳಿಗೆ ಹಲವು ಆಯಾಮಗಳಿವೆ. ತಿಳಿವಳಿಕೆಯ ಕೊರತೆಯಿಂದ ಆಗಿರಬಹುದಾದ ಸಂಸ್ಕೃತವೇ ಕನ್ನಡದ ಮೂಲ ಎಂಬ ಸಮಾಜದಲ್ಲಿದ್ದ ನಂಬಿಕೆಯು ಸಂಶೋಧನೆಗಳು ನಡೆದು ಸತ್ಯ ತಿಳಿದ ನಂತರ ಸ್ವಲ್ಪಮಟ್ಟಿಗೆ ಬದಲಾಯಿತು. ಆದರೆ ಸಂಸ್ಕೃತವೇ ಕನ್ನಡದ ಮೂಲ ಎಂಬ ವಾದವನ್ನು ಒಂದು ವರ್ಗ ಮುಂದುವರೆಸಿದ್ದು ಇದರ ಹಿಂದೆ ನಿರ್ದಿಷ್ಠ ಉದ್ದೇಶ ಇರುವುದನ್ನು ಹೇಳಿತು. ಈ ಉದ್ದೇಶ ಭಾಷಾಮೂಲದ್ದಾಗಿರದೆ ವರ್ಗ ಹಿತಾಸಕ್ತಿಯದ್ದಾಗಿತ್ತು.

ಕನ್ನಡ ಅಸ್ಮಿತೆಯನ್ನು ದ್ರಾವಿಡ ನೆಲೆಯಿಂದ ನೋಡುವ ಚಿಂತನಾಕ್ರಮದ ಹಿಂದೆ ಭಾಷಿಕ ಕಾರಣವೂ ಇದೆ. ಈ ಭಾಷಿಕ ಕಾರಣವೂ ಸಾಮಾಜಿಕ ನೆಲೆಯಲ್ಲಿ ಅಂತರ್ಗತವಾಗಿದೆ. ಬರಹದ ಭಾಷೆ ಸಂಸ್ಕೃತದಿಂದ ಪ್ರಭಾವಿತವಾಗಿದ್ದು ಆಡುಭಾಷೆಗಿಂತ ಭಿನ್ನವಾಗಿದೆ. ಬರಹದ ಭಾಷೆಯ ಎದುರು ಆಡುಭಾಷೆ ಕೀಳರಿಮೆಯನ್ನು ಅನುಭವಿಸುತ್ತಿದ್ದು, ಮುಖ್ಯವಾಗಿ ತಳವರ್ಗದವರಿಗೆ ಇದು ಬಳಕೆಯ ಸಂದರ್ಭದಲ್ಲಿ ತೊಡಕಾಗಿ ಪರಿಣಮಿಸುತ್ತ್ತಿದೆ. ಆಡುಭಾಷೆಯ ಕನ್ನಡ ಹೆಚ್ಚು ಸಂಸ್ಕೃತ ಪದಗಳಿಲ್ಲದ ಮೂಲ ಕನ್ನಡ ಭಾಷೆಗೆ ಹತ್ತಿರವಾಗಿದೆ. ಇದು ತಳವರ್ಗದವರಿಗೆ ಬಳಸಲು ಸುಲಭವಾಗಿದೆ. ಆಡುಭಾಷೆಯ ಕನ್ನಡವನ್ನೇ ಬರಹದಲ್ಲಿಯೂ ಬಳಸುವಂತೆ ದ್ರಾವಿಡ ನೆಲೆಯ ಕನ್ನಡ ಅಸ್ಮಿತೆ ಒತ್ತಾಯಿಸುತ್ತದೆ. ಈ ಒತ್ತಾಯದ ಹಿಂದೆ ಎರಡು ಉದ್ದೇಶಗಳಿವೆ. ಮೊದಲನೆಯದು ಸಂಸ್ಕೃತದ ವಿರೋಧ. ಒಂದು ಭಾಷೆಯ ಹೇರಿಕೆಯ ವಿರೋಧ, ಆ ಸಂಸ್ಕೃತಿಯ ವಿರೋಧವೂ ಆಗಿಬಿಡುತ್ತದೆ. ಎರಡನೆಯದು ಸಂಸ್ಕೃತದ ಹಿಡಿತದಿಂದ ಹೊರಬರುವ ಮತ್ತು ತಳವರ್ಗದ ಕನ್ನಡ ಭಾಷೆಯನ್ನು ಮೇಲ್ಚಲನೆಗೊಳಪಡಿಸುವ ಉದ್ದೇಶ.

ದ್ರಾವಿಡಶೋಧದ ನೆಲೆಯ ಕನ್ನಡ ಅಸ್ಮಿತೆಯ ಮುಖ್ಯ ಚಹರೆಯೆಂದರೆ ಸ್ವವಿಮರ್ಶೆಯ ಗುಣ. ಇದು ಇಂಗ್ಲಿಶನ್ನೋ ಅಥವಾ ನೆರೆಯ ಭಾಷೆಯನ್ನೋ ಕನ್ನಡದ ವೈರಿಭಾಷೆಯೆಂದು ಪರಿಗಣಿಸುವುದಿಲ್ಲ. ಸಂಸ್ಕೃತವನ್ನು ಕನ್ನಡಕ್ಕೆ ಕಂಟಕ ತರುತ್ತಿದೆ ಎಂದು ಭಾವಿಸಿದರೂ ಅಲ್ಲಿ ಮುಖ್ಯವಾಗಿರುವುದು ಭಾಷೆಯಾಗಿ ಸಂಸ್ಕೃತಕ್ಕಿಂತಲೂ ಸಂಸ್ಕೃತದ ಮೂಲಕ ತಮ್ಮ ಶ್ರೇಷ್ಠತೆಯನ್ನು ಪ್ರತಿಷ್ಟಾಪಿಸಲು ಬಯಸುವ ಸಾಮಾಜಿಕ ವರ್ಗ. ದ್ರಾವಿಡಶೋಧದ ನೆಲೆ ಕನ್ನಡದೊಳಗೆ ಪರಿವರ್ತನೆ ಮತ್ತು ಸುಧಾರಣೆಯ ಮೂಲಕ ಕನ್ನಡವನ್ನು ಉಳಿಸಲು ಮತ್ತು ಬೆಳೆಸಲು ಪ್ರಯತ್ನಿಸುತ್ತದೆ. ಇದು ಕನ್ನಡದೊಳಗೇ ಇರುವ ವಿವಿಧ ಸಾಮಾಜಿಕ ವರ್ಗಗಳ ಹಿತಾಸಕ್ತಿಗಳು ಕನ್ನಡಕ್ಕೆ ಉಂಟು ಮಾಡುತ್ತಿರುವ ತೊಡಕುಗಳನ್ನು ಪ್ರಧಾನವಾಗಿ ಗಮನಿಸುತ್ತದೆ.

ಕನ್ನಡದಲ್ಲಿ ದ್ರಾವಿಡಶೋಧದ ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಡುತ್ತಿರುವವರಲ್ಲಿ ಡಿ.ಎನ್.ಶಂಕರಭಟ್ಟರು ಮತ್ತು ಕೆ.ವಿ.ನಾರಾಯಣ ಅವರು ಪ್ರಮುಖರು. ಡಿ.ಎನ್.ಶಂಕರಭಟ್ಟರು ದ್ರಾವಿಡಮೂಲದ ಕನ್ನಡವನ್ನು ಪುನರ್ ರೂಪಿಸುವ ಪ್ರಯತ್ನದಲ್ಲಿದ್ದಾರೆ. ಕೆ.ವಿ.ನಾರಾಯಣ ಅವರು ಜಾಗತಿಕ ಪರಿವರ್ತನೆಗಳು, ಆಧುನಿಕ ತಂತ್ರಜ್ಞಾನ, ಸಾಮಾಜಿಕ ಚಲನೆಗಳು, ವ್ಶೆಜ್ಞಾನಿಕವಾಗಿ ಕಂಡುಕೊಂಡ ಕಲಿಕೆಯ ಸಾಮಥ್ರ್ಯ, ಹೀಗೆ ಎಲ್ಲ ಆಯಾಮಗಳಿಂದಲೂ ಕನ್ನಡಕ್ಕೆ ಆಗುವ ಪರಿಣಾಮಗಳನ್ನು ಮುಕ್ತವಾಗಿ ಚಿಂತಿಸಿದರೂ ಈ ಚಿಂತನೆಗಳು ದ್ರಾವಿಡ ಮೂಲದಿಂದ ಹೊರಡುತ್ತವೆ ಎನ್ನುವುದು ಮುಖ್ಯವಾದ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...