Homeಮುಖಪುಟಪ್ರಚಾರಕ್ಕೆ ಪ್ರಧಾನಿ ಕಚೇರಿ, ವಿಮಾನ ಬಳಸುತ್ತಿರುವ ಮೋದಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ರಾವತ್

ಪ್ರಚಾರಕ್ಕೆ ಪ್ರಧಾನಿ ಕಚೇರಿ, ವಿಮಾನ ಬಳಸುತ್ತಿರುವ ಮೋದಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ರಾವತ್

- Advertisement -
- Advertisement -

ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಪರ ಪ್ರಚಾರಕ್ಕೆ ತಮ್ಮ ಕಚೇರಿಯನ್ನು ಬಳಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ್ದಾರೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಆರೋಪಿಸಿದ್ದಾರೆ.

“ಪ್ರಧಾನಿಯವರ ಪ್ರವಾಸಕ್ಕೆ ಸರ್ಕಾರಿ ವಿಮಾನವನ್ನು ಬಳಸುತ್ತಿದ್ದರೆ, ಚುನಾವಣಾ ಆಯೋಗವು ಅವರಿಗೆ ವೆಚ್ಚದ ಬಿಲ್ ಕಳುಹಿಸಬೇಕು ಮತ್ತು ಆ ಪಕ್ಷದ ಖಾತೆಯಿಂದ ಹಣವನ್ನು ವಸೂಲಿ ಮಾಡಬೇಕು. ಕಳೆದ ಕೆಲವು ದಿನಗಳಿಂದ, ಚುನಾವಣೆ ಘೋಷಣೆಯಾದ ನಂತರ, ನರೇಂದ್ರ ಮೋದಿ ಅವರು ಸರ್ಕಾರಿ ಹೆಲಿಕಾಪ್ಟರ್‌ಗಳಲ್ಲಿ ಸಂಚರಿಸುತ್ತಿದ್ದಾರೆ” ಎಂದು ರಾವತ್ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಇತ್ತೀಚಿನ ಮುಂಬೈ ಭೇಟಿಯನ್ನು ಟೀಕಿಸಿದ ರಾವತ್, “ಅದಾನಿಗೆ ನೀಡಲು ಭೂಮಿಯನ್ನು ಹುಡುಕಲು ಅವರು ನಗರಕ್ಕೆ ಬಂದಿದ್ದಾರೆ” ಎಂದು ಹೇಳಿದ್ದಾರೆ.

“ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು (ಗೌತಮ್) ಅದಾನಿಗೆ ನೀಡಲಾಗಿದೆ. ಮುಂಬೈನಲ್ಲಿ 10 ಅಲ್ಲ 100 ಸಭೆಗಳನ್ನು ಮಾಡಿ. ಮುಂಬೈನಿಂದ ಬಿಜೆಪಿಯನ್ನು ಸಂಪೂರ್ಣವಾಗಿ ಹೊರಹಾಕಬೇಕೆಂದು ಮುಂಬೈ ಜನರು ನಿರ್ಧರಿಸಿದ್ದಾರೆ. ಇದು ದೇಶದಲ್ಲಿ ನಡೆಯುತ್ತಿದೆ. ಆದರೆ ಮುಂಬೈನಲ್ಲಿ ಹತ್ತು ಸಭೆಗಳು ನಡೆಯುತ್ತವೆ, ಅವರಿಗೆ ಒಂದು ಸ್ಥಾನವೂ ಸಿಗುವುದಿಲ್ಲ. ನನ್ನ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ” ಎಂದು ಅವರು ಹೇಳಿದರು.

ಸೋಮವಾರ ಪ್ರಧಾನಿ ಮೋದಿ ಅವರು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 90ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲು ಮುಂಬೈಗೆ ಭೇಟಿ ನೀಡಿದ್ದರು.

ಆದರೆ ಇಂಡಿಯಾ ಮೈತ್ರಿಕೂಟದ ನಾಯಕರ ಆರೋಪಕ್ಕೆ ಬಿಜೆಪಿ ತಿರುಗೇಟು ಕೊಟ್ಟಿದೆ. ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಪ್ರತಿಪಕ್ಷಗಳು ಹೆದರುತ್ತಿವೆ ಎಂದು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೇಲಾರ್ ಹೇಳಿದ್ದಾರೆ. ಹಿರಿಯರಿಗೆ ಅಗೌರವ ತೋರುವುದನ್ನು ಮರಾಠಿ ಸಂಸ್ಕೃತಿ ಕಲಿಸುವುದಿಲ್ಲ ಎಂದರು.

“ಮರಾಠಿ ಸಂಸ್ಕೃತಿಯು ನಿಮಗೆ ಹಿರಿಯರನ್ನು ಅಗೌರವ ತೋರುವುದುನ್ನು ಎಂದಿಗೂ ಕಲಿಸುವುದಿಲ್ಲ. ಉದ್ಧವ್ (ಠಾಕ್ರೆ) ಅಂತಹ ಹೇಳಿಕೆಗಳನ್ನು ಬೆಂಬಲಿಸುತ್ತಾರೆಯೇ? ಅವರು ಮೋದಿಯವರ ಜನಪ್ರಿಯತೆ ಮತ್ತು ಅವರ ನಾಯಕತ್ವಕ್ಕೆ ಹೆದರುತ್ತಾರೆ. ರಾವುತ್ ಅವರಿಗೆ ಮೂಲಭೂತ ನಾಗರಿಕ ಪ್ರಜ್ಞೆ ಮತ್ತು ಜ್ಞಾನದ ಕೊರತೆಯಿದೆ. ನಾವು ಅವರಿಗೆ ಕಲಿಯಲು ನಾಗರಿಕ ಪುಸ್ತಕಗಳನ್ನು ಕಳುಹಿಸುತ್ತೇವೆ. ನೀತಿ ಸಂಹಿತೆಯ ಸಮಯದಲ್ಲೂ , ಉನ್ನತ ಹುದ್ದೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಹೀಗಾಗಿ, ಪ್ರಧಾನಿ ಮೋದಿ ಇಂದು ಆರ್‌ಬಿಐ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಯಾವುದೇ ರಾಜಕೀಯ ಕಾಮೆಂಟ್ ಮಾಡಲಿಲ್ಲ” ಎಂದು ಆಶಿಶ್ ಶೇಲಾರ್ ಹೇಳಿದ್ದಾರೆ.

ಎನ್‌ಸಿಪಿ (ಎಸ್‌ಸಿಪಿ) ಶಾಸಕ ಜಿತೇಂದ್ರ ಅವ್ಹಾದ್ ಅವರು ಚುನಾವಣಾ ಆಯೋಗವು ಬಿಜೆಪಿಯ ವಿಸ್ತೃತ ಅಂಗವಾಗಿದೆ ಮತ್ತು ಅವರ ದೂರುಗಳ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ನನ್ನ ಕ್ಷೇತ್ರದಲ್ಲಿಯೂ ಸಹ ಕ್ಷೇತ್ರದ ಹಲವು ಗೋಡೆಗಳಲ್ಲಿ ಬಿಜೆಪಿ ಚಿಹ್ನೆ ಕಾಣುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ, ಚುನಾವಣಾ ಆಯೋಗ ಬಿಜೆಪಿಯ ಅಸ್ತ್ರವಾಗಿದೆ, ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಇದನ್ನೂ ಓದಿ; ಮಹುವಾ ಮೊಯಿತ್ರಾ ವಿರುದ್ಧ ಮನಿ ಲಾಂಡರಿಂಗ್ ಕೇಸ್ ದಾಖಲಿಸಿದ ಜಾರಿ ನಿರ್ದೇಶನಾಲಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...