Homeಪುಸ್ತಕ ವಿಮರ್ಶೆಬಳಗೋಡಕ್ಕೆ ಟಿಸಿ ಬಂದ ಕಥೆ; 'ಹಸಿರು ಟಾವೆಲ್'-ರೈತನೊಬ್ಬನ ಜೀವನ ಕಥನದಿಂದ ಆಯ್ದ ಅಧ್ಯಾಯ

ಬಳಗೋಡಕ್ಕೆ ಟಿಸಿ ಬಂದ ಕಥೆ; ‘ಹಸಿರು ಟಾವೆಲ್’-ರೈತನೊಬ್ಬನ ಜೀವನ ಕಥನದಿಂದ ಆಯ್ದ ಅಧ್ಯಾಯ

- Advertisement -
- Advertisement -

ಸೂಡಿಯಲ್ಲಿ ಪರಸಪ್ಪ ಎನ್ನುವ ದಲಾಲಿ ವ್ಯಾಪಾರಿಯ ಕಿರುಕುಳ ಜೋರಾಗಿತ್ತು. ಸಾವಿರಾರು ಕುಟುಂಬಕ್ಕೆ ಸಾಲ ಕೊಟ್ಟಿದ್ದ. ಆ ಸಾಲದ ಬಲೆಯಲ್ಲಿ ಒಮ್ಮೆ ಸಿಲುಕಿದರೆ ಮತ್ತೆ ವಾಪಸ್ ಬಿಡಿಸಿಕೊಂಡು ಬರೋದು ರೈತರಿಗೆ ಬಹಳ ಕಷ್ಟವಾಗುತ್ತಿತ್ತು. ಅದೊಂದು ತಿರುಗುಣಿ ಇದ್ದಂಗೆ. ಬಡ್ಡಿ, ಚಕ್ರಬಡ್ಡಿ ತಿರುಗುಣಿಯಲ್ಲೇ ರೈತರು ಬಿದ್ದು ಹೊರಳಾಡಬೇಕಿತ್ತು. ಆಮೇಲೆ ಬಡ್ಡಿ ಕೊಡದೇ ಇರುವವರ ಆಸ್ತಿಯನ್ನು ಜಬರ್‌ದಸ್ತಿ ಮಾಡಿ ಬೇರೆಯವರಿಗೆ ಬರೆಸಿಕೊಟ್ಟು ತನ್ನ ರೊಕ್ಕ ಪಡೆಯುತ್ತಿದ್ದ. ಪರಸಪ್ಪನ ಹತ್ತಿರ ಹೀಗೆ ಸಾಲ ಪಡೆದ ಎಷ್ಟೋ ರೈತರು ಬಡ್ಡಿ ಕಟ್ಟದೆ ಹೊಲ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

ಇವರ ಉಪಟಳಕ್ಕೆ ಬೇಸತ್ತಿದ್ದ ರೈತನೊಬ್ಬ ಇದಕ್ಕೆ ಪರಿಹಾರ ಸಿಗಬಹುದೆಂದು ಕೂಡ್ಲೆಪ್ಪನವರ ಬಳಿಗೆ ಬಂದು ಅತ್ತು ಕರೆದಿದ್ದ. ಅವರು ಇದಕ್ಕೆ ಏನಾದರೂ ಮಾಡಲೇಬೇಕೆಂಬ ಯೋಚನೆಗೆ ಬಿದ್ದರು. ದಲಾಲರ ದಬ್ಬಾಳಿಕೆ ವಿರೋಧಿಸಿ ಸಂಘದಿಂದ ಕರಪತ್ರ ಹಾಕಿಸಿದರು. ರೈತಸಂಘದ ಕಾರ್ಯಕರ್ತರೆಲ್ಲ ಸೇರಿ ಕಾರು ಬಾಡಿಗೆ ಪಡೆದು ಸುತ್ತ ಮುತ್ತಲ ಇಪ್ಪತ್ತು ಹಳ್ಳಿಗೆ ಆ ಕರಪತ್ರ ಹಂಚಿದರು.

ಸಾಲ ಪಡೆದ ರೈತರು ಆ ಕರಪತ್ರವನ್ನು ಸಾಲಿ ಕಲಿತ ಮಕ್ಕಳ ಹತ್ತಿರ ಕದ್ದು ಮುಚ್ಚಿ ಓದಿಸಿದರು. ಏನೇನಾಗುತ್ತದೋ ಎಂದು ಜನ ಬಹಳ ಭಯಗೊಂಡಿದ್ದರು. ಹಳ್ಳಿಗಳ ಚಹಾದಂಗಡಿ, ಕಟಿಂಗ್ ಅಂಗಡಿ, ಗುಡಿ, ಮಸೀದಿಗಳ ಕಟ್ಟೆ ಮೇಲೆ ಗುಂಪುಗೂಡಿದ ಜನರಲ್ಲಿ ಈ ಕರಪತ್ರದ್ದೇ ಚರ್ಚೆ. ಒಂದೂರಿನಲ್ಲಿ ಕನಿಷ್ಠ ಅರ್ಧದಷ್ಟು ಜನರಾದರೂ ಪರಸಪ್ಪನ ಹತ್ತಿರ ಸಾಲ ಪಡೆದವರೇ ಆಗಿದ್ದರು. ಸಾಲಗಾರರು ಆ ಕರಪತ್ರ ಮಡಚಿ ಬೊಕ್ಕಣದಲ್ಲಿ ಇಟ್ಕೊಂಡು ಅಡ್ಡಾಡುತ್ತ ಕದ್ದುಮುಚ್ಚಿ ಅವರಿಗೆ ಇವರಿಗೆ ತೋರಿಸೋರು. ಆ ಬಗ್ಗೆ ಬಹಿರಂಗವಾಗಿ ಮಾತಾಡೋಕೆ ಹೆದರುತ್ತಿದ್ದರು. ಪರಸಪ್ಪ ಅಷ್ಟೊಂದು ಭಯವನ್ನು ರೈತರೊಳಗೆ ಬಿತ್ತಿದ್ದ.

ರೈತ ಸಂಘದ ಕರಪತ್ರ ನೋಡಿ ದಲಾಲ ಪರಸಪ್ಪ ಕುದ್ದು ಹೋದ. ಇದು ಅನಿರೀಕ್ಷಿತವಾಗಿ ಅಪ್ಪಳಿಸಿದ ಆಘಾತವಾಗಿತ್ತು. ಅವನ ಮೈ ತುಂಬಾ ರಕ್ತದ ಬದಲು ಸಿಟ್ಟು ಹರಿದಾಡಿತು. ಬರುವ ಸಾಲಗಳಾದರೂ ಬರಲೆಂದು ಹಳ್ಳಿಗಳ ಕಡೆ ವಸೂಲಿಗೆ ತೆರಳಿದ. ಮೊದಲಿಗಿಂತ ಕಠೋರವಾಗಿದ್ದ. ಆದರೆ, ಹಳ್ಳಿಗಳಿಗೆ ಹೋದಾಗ ಜನರ ವರ್ತನೆಗಳು ಮೊದಲಿಗಿಂತ ಈಗ ಬದಲಾಗಿದ್ದು ಗೋಚರವಾಗತೊಡಗಿತು. ಬಂದಾಗೊಮ್ಮೆ ವಿಧೇಯತೆ ತೋರುತ್ತ, ನಮಸ್ಕಾರ ಹೇಳುತ್ತಾ, ಸಾಲ ಹರಿಯಲೆಂದೇ ತಿಂಗಳಪೂರ್ತಿ ಕೂಲಿ ಮಾಡಿದ ದುಡ್ಡನ್ನು ಇವನ ಬೊಗಸೆಗೆ ಹಾಕುತ್ತಿದ್ದರು. ಆಗೆಲ್ಲ ಬಡ್ಡಿ ಹಣ ಕೊಡದಿದ್ದರೆ ಬೆದರಿಕೆ ಹಾಕುತ್ತಿದ್ದ. ಇದರಿಂದ ಹೆದರಿದ್ದ ಜನ ಹೊಟ್ಟೆ ಬಟ್ಟೆಗೆ ಇರದಿದ್ದರೂ ಅಡ್ಡಿ ಇಲ್ಲ, ಬಡ್ಡಿ ಕೊಡಲು ಹಣ ಹೊಂದಿಸುತ್ತಿದ್ದರು. ಈಗ ಜನ ಯಾಕೋ ಹೆದರಿದಂತೆ ಕಾಣುತ್ತಿಲ್ಲ. ಇದು ಪರಸಪ್ಪನನ್ನು ಮತ್ತಷ್ಟು ಕೆರಳಿಸತೊಡಗಿತು.

ರಾತ್ರಿ ಕನಸು ಬಿದ್ದರೆ ಅದರಲ್ಲಿ ರೈತಸಂಘದ ಕರಪತ್ರವೇ ಪಟಪಟಿಸಿ ನಿದ್ದೆಗೆಡುತ್ತಿದ್ದ. ಬೆಳಗಾದರೆ ಎಂದಿನಂತೆ ಹಳ್ಳಿಗಳಿಗೆ ಸಾಲ ವಸೂಲು ಮಾಡಲು ಹೋಗೋದು ಈಗೀಗ ಕಿರಿಕಿರಿ ಅನಿಸತೊಡಗಿತ್ತು. ಜನ ಸುಮ್ಮನಿದ್ದರೂ ಅಪಹಾಸ್ಯ ಮಾಡಿದಂತೆ ತೋರುತ್ತಿತ್ತು. ತಲೆಯೊಳಗೆ ನೂರಾರು ಹುಳುಗಳು ಓಡಾಡಿದಂತೆನಿಸುತ್ತಿತ್ತು. ಇದಕ್ಕೆ ಏನಾದರೂ ಮಾಡಲೇಬೇಕೆಂದು ಮನಸೊಳಗೆ ಅಕಲು ಹಾಕತೊಡಗಿದ.

ಜನರಿಗೆ ಭಯ ಹುಟ್ಟಿಸಲು ಮಾಸ್ತಕಟ್ಟಿಯ ಒಬ್ಬ ರೈತನನ್ನು ನಾಪತ್ತೆ ಮಾಡಿದ. ಆದರೆ, ಭಯದ ಬದಲು ಈ ತಂತ್ರ ಪರಸಪ್ಪನಿಗೇ ತಿರುವುಮುರುವಾಯಿತು. ಮಾಸ್ತಕಟ್ಟಿಯ ಜನ ಹನುಮಸಾಗರ ಪೊಲೀಸ್ ಠಾಣೆಗೆ ಹೋಗಿ ಅಲ್ಲಿನ ಪಿಎಸ್‌ಐ ಹುಡುಗಿ ಎನ್ನುವವರಿಗೆ ಕಂಪ್ಲೆಂಟ್ ಕೊಟ್ಟರು. ರೈತಸಂಘದ ಕರಪತ್ರವನ್ನು ಈ ಮೊದಲೇ ಗಮನಿಸಿದ್ದ ಪಿಎಸ್‌ಐ, ಪರಸಪ್ಪನನ್ನು ಒದ್ದು ಜೈಲಿಗೆ ಹಾಕಿದ. ರೊಕ್ಕದ ಪ್ರಭಾವ ಇದ್ದುದರಿಂದ ಕೆಲವೇ ದಿನಗಳಲ್ಲಿ ಪರಸಪ್ಪ ಜೈಲಿನಿಂದ ಹೊರಬಂದ. ಆದರೆ, ಪರಸಪ್ಪ ಜೈಲಿಗೆ ಹೋಗಿಬಂದಿದ್ದು ಹಳ್ಳಿಗಳಲ್ಲೆಲ್ಲಾ ಗುಲ್ಲೆದ್ದು ’ಬೇಸಿ ಮಾಡ್ಯಾರ ನೋಡು ಅಂವಂಗ’ ಅಂತ ಜನ ಮಾತಾಡಿಕೊಂಡರು.

ನೆಲ್ಲೂರಿನಲ್ಲಿ ಸಾಲ ವಸೂಲಿಗೆ ಬಂದಾಗ ಲೆಕ್ಕದ ಪುಸ್ತಕ ಕಸಿದುಕೊಂಡು ಜನ ನಾಲ್ಕು ಹೊಡೆದು ಕಳಿಸಿದರು. ಅವತ್ತಿನಿಂದ ಪರಸಪ್ಪನಿಗೆ ಬುಗಿಲು ಹೊಕ್ಕಿತು. ಬಡ್ಡಿ, ಚಕ್ರಬಡ್ಡಿ ಬಿಟ್ಟು ಕೊಟ್ಟ ದುಡ್ಡನ್ನಷ್ಟೇ ವಿನಯದಿಂದ ಕೇಳತೊಡಗಿದ. ದಲಾಲಿ ಅಂಗಡಿಯವರ ಸಾಲ, ಸಾಲ ಕೊಟ್ಟ ಖಾಸಗಿ ವ್ಯಕ್ತಿಗಳು ರೈತರಿಗೆ ಕಿರುಕುಳ ಕೊಡೋದನ್ನು ನಿಲ್ಲಿಸತೊಡಗಿದರು. ರೈತಸಂಘದ ಕಾಳಜಿಯ ಬಗ್ಗೆ ಜನ ಮಾತಾಡುತ್ತ, ಸಂಘಟಿತರಾಗತೊಡಗಿದರು.

***

ಬೆಳೆಗಳು ಅಷ್ಟಕ್ಕಷ್ಟೆ ಬರುತ್ತಿದ್ದರಿಂದ ರೈತರಿಗೆ ವಿದ್ಯುತ್ ಬಿಲ್ ತುಂಬೋದು ತ್ರಾಸದಾಯಕವಾಗತೊಡಗಿತ್ತು. ಇದನ್ನೆಲ್ಲ ಮನಗಂಡ ರೈತ ಸಂಘ ಕರ ನಿರಾಕರಣೆ ಚಳವಳಿ ಹಮ್ಮಿಕೊಂಡಿತು. ಬೋರ್‌ಗಳಿಗೆ ಅಳವಡಿಸಿದ್ದ ಮೀಟರ್‌ಗಳನ್ನೆಲ್ಲ ಕಿತ್ತು ರೈತರು ಕೊಪ್ಪಳಕ್ಕೆ ಹೋಗಿ ಕೊಟ್ಟುಬಂದರು. ರೈತರ ಪ್ರಬಲ ವಿರೋಧ ಎದುರಿಸಬೇಕಾದುದರಿಂದ ವಿದ್ಯುತ್ ಬಿಲ್ ವಸೂಲಿ ಮಾಡಲು ಹಳ್ಳಿಗಳಿಗೆ ಬರುವುದಕ್ಕೆ ಹಿಂದೇಟು ಹಾಕತೊಡಗಿದರು. ಹದಿಮೂರು ವರ್ಷಗಳವರೆಗೆ ರೈತರು ಹೀಗೆ ವಿದ್ಯುತ್ ಬಿಲ್ ತುಂಬಲಿಲ್ಲ.

ರೈತ ಸಂಘ ಇದೇ ಹೊತ್ತಿನಲ್ಲಿ ಇಬ್ಬಾಗ ಆಯ್ತು. ನಂಜುಂಡಸ್ವಾಮಿ ಬಣ ಮತ್ತು ಪುಟ್ಟಣ್ಣಯ್ಯ ಬಣಗಳಾದ ಮೇಲೆ ನಂಜುಂಡಸ್ವಾಮಿ ರೋಣದಲ್ಲಿ ಬಂದು ಮೂರು ದಿನ ಉಳಿದರು. ರೋಣ ತಾಲ್ಲೂಕಿನ ರೈತರು ತಮ್ಮ ಜೊತೆಗಿರಬೇಕೆಂಬುದು ನಂಜುಂಡಸ್ವಾಮಿಯವರ ಹಂಬಲವಾಗಿತ್ತು. ಆದರೂ ರೋಣದಲ್ಲಿ ರೈತರು ಎರಡು ಬಣಗಳಾಗಿ ಒಡೆದುಹೋದರು.

ಕೂಡ್ಲೆಪ್ಪನವರು ನಂಜುಂಡಸ್ವಾಮಿ ಬಣದಲ್ಲಿ ಉಳಿದರು. ಅಂದಿನಿಂದ ನಂಜುಂಡಸ್ವಾಮಿಯವರು ಕೂಡ್ಲೆಪ್ಪನವರಿಗೆ ರೈತ ಚಳವಳಿಯ ಮಾರ್ಗದರ್ಶನ ಮಾಡತೊಡಗಿದರು. ನಂಜುಂಡಸ್ವಾಮಿಯವರ ಮೂಲಕ ಇವರಿಗೆಲ್ಲ ಪೆರಿಯಾರ್ ಆಲೋಚನೆ ಪರಿಚಯ ಆಯ್ತು. ರೈತರು ತಿಳಿದುಕೊಳ್ಳಬೇಕಾದ ಕಾನೂನುಗಳ ಬಗೆಗಿನ ಸಾಹಿತ್ಯವನ್ನು ರೈತ ಮುಖಂಡರಿಗೆ ತಲುಪಿಸುತ್ತಿದ್ದರು. ಕರಪತ್ರಗಳು ಕೂಡ ಹೊಸ ತಿಳಿವಳಿಕೆ ನೀಡುವುದರ ಜೊತೆಗೆ ಅರಿವನ್ನು ತಿದ್ದುವಂತಿರುತ್ತಿದ್ದವು. ಪ್ರಭುತ್ವದ ಹುನ್ನಾರಗಳನ್ನು ಬಹುಬೇಗನೆ ಗ್ರಹಿಸುವಂತಾಯಿತು. ಸೈದ್ಧಾಂತಿಕವಾಗಿ ಆಗ ಕೂಡ್ಲೆಪ್ಪನವರು ಗಟ್ಟಿಗೊಳ್ಳತೊಡಗಿದರು.

ಅದೆಷ್ಟು ಗಟ್ಟಿ ಎಂದರೆ ಅಧಿಕಾರಶಾಹಿಯನ್ನು ರಾಜಾರೋಷವಾಗಿ ವಿರೋಧಿಸುವುದನ್ನು, ನೇರವಾಗಿ ಮಾತಾಡುವುದನ್ನು ಕಲಿತರು. ಬಳಗೋಡದಲ್ಲಿ ಒಮ್ಮೆ ಟಿಸಿ ಸುಟ್ಟಿತ್ತು. ಕೆಇಬಿಯವರು ಟಿ.ಸಿ.ಹಾಕಲೇ ಇಲ್ಲ. ರೈತರು ಸಂಘಟಿತರಾಗಿ ಕೆಇಬಿಗೆ ಹೋಗಿ ಮುತ್ತಿಗೆ ಹಾಕಲು ನಿರ್ಧರಿಸಿದರು. ಆಗ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ಹದಿನಾರು ಎತ್ತಿನ ಚಕ್ಕಡಿಗಳೊಂದಿಗೆ ನೂರಾರು ರೈತರು ಕೆಇಬಿಯೊಳಗೆ ನುಗ್ಗಿದರು. ಆಗ ಅಲ್ಲಿದ್ದ ಸಿಪಿಐ ಒಬ್ಬ, ರೈತ ಮುಖಂಡ ಕೂಡ್ಲೆಪ್ಪನವರಿಗೆ ’ಚಕ್ಕಡಿ ಒಳ ಬಿಡಬೇಡ್ರಿ..’ ಅಂತ ಕೈ ಜಗ್ಗಾಡಿದ.

ಆಗ ಕೂಡ್ಲೆಪ್ಪನವರು ’ಏನಪ್ಪ ಇದನ್ನೇ ಓದಿದ್ದಾ ನೀನು. ನಾವು ಏನ್ ಮಾಡ್ತಿದಿವಿ ಅನ್ನೋದೇನಾದ್ರು ಅರಿವಿದೆಯಾ ನಿನಗೆ. ದಾಂಧಲೆ ಮಾಡೋಕೆ ಬಂದಿದಿವಾ ನಾವು. ಟಿ.ಸಿ. ಸುಟ್ಟು ರೈತರ ಬೆಳೆಗೆ ನೀರು ಇಲ್ದ ಒಣಗಾಕ ಹತ್ಯಾವು. ಬೆಳಿ ಬರದಿದ್ರೆ ನಾಳೆ ಏನು ಊಟ ಮಾಡ್ತಿರಿ. ರೈತರೇನು ಶ್ರೀಮಂತರಲ್ಲ. ಅವ್ರಿಗೆ ನಿಮ್ಮಂಗ ತಿಂಗಳಾ ತಿಂಗಳ ತಪ್ಪದ ಪಗಾರ ಬರೋದಿಲ್ಲ. ನೀವೆಲ್ಲ ತಿಳಿವಳಿಕೆ ಇರೋರು. ಇದ್ನೆಲ್ಲಾ ನಿಮಗ ಹೇಳಬೇಕೇನು..’ ಅಂತ ಮುಖಕ್ಕೆ ಹೊಡೆದಂಗೆ ಹೇಳಿದರು.

ಇವರ ಮಾತುಗಳಿಂದ ಸಿಪಿಐಗೆ ಜ್ಞಾನೋದಯವಾಗಿರಬೇಕು. ಮರು ಮಾತಾಡದೇ ಅಲ್ಲಿಂದ ಕಾಲ್ಕಿತ್ತು ತಾಸು ಎರಡು ತಾಸು ಆಫೀಸಿನಲ್ಲಿ ಕುಳಿತವರು ಮತ್ತೆ ಹೊರಗೆ ಬರಲೇ ಇಲ್ಲ. ಬದಲಾಗಿ ರೈತರಿಗೆಲ್ಲ ಸಪೋರ್ಟ್ ಮಾಡುತ್ತ, ಅವರಿಗೆಲ್ಲ ನಾಲ್ಕೈದು ದಿನ ಊಟಕ್ಕೆ ವ್ಯವಸ್ಥೆ ಮಾಡಿದ. ರೈತರು ಅಲ್ಲೇ ಕೆಇಬಿ ಆವರಣದಲ್ಲಿ ಮೇವು ಹಾಕಿ ಎತ್ತುಗಳನ್ನು ಕಟ್ಟಿದ್ದರು.

ಕೊನೆಗೆ ರೈತರೊಂದಿಗೆ ಮಾತಾಡಲು ಎಸ್‌ಪಿ ಬರಬೇಕಾಯಿತು. ರಾಜೀ ಮಾಡಲು ನೋಡಿದರು. ’ಎಲ್ಲ ರೈತರು ನೂರು ರೂಪಾಯಿ ತುಂಬ್ರಿ. ಟಿಸಿ ಕೊಡಿಸೋ ವ್ಯವಸ್ಥೆ ಮಾಡೋಣು..’ ಅಂದ್ರು.

ಕೂಡ್ಲೆಪ್ಪನವರು ’ಒಂದು ರೂಪಾಯಿ ತುಂಬೋದಿಲ್ಲ. ರೈತರು ಕಷ್ಟದಾಗಿದಾರ. ನಯಾಪೈಸೆ ಬೆಳೆ ಬಂದಿಲ್ಲ. ರೈತರು ರೊಕ್ಕ ಎಲ್ಲಿಂದ ಕೊಡಬೇಕು. ಅವ್ರಿಗೆಲ್ಲ ಊಟುದ್ದ ಚಿಂತಿ ಆಗೇತಿ. ಇಂತಾದ್ರಾಗ ಟಿಸಿ ಕೊಡ್ಲಿಲ್ಲಂದ್ರ ಹೆಂಗ. ಟಿಸಿ ಕೊಡೋವರೆಗೂ ನಾವು ಪ್ರತಿಭಟನೆ ಮಾಡ್ತಿವಿ..’ ಅಂದರು.

ಆಗ ರೈತರೆಲ್ಲ ’ರೈತ ವಿರೋಧಿ ಸರಕಾರಕ್ಕೆ ಧಿಕ್ಕಾರ’, ’ರೈತ ವಿರೋಧಿ ಅಧಿಕಾರಿಗಳಿಗೆ ಧಿಕ್ಕಾರ’, ಅಂತ ಘೋಷಣೆ ಹಾಕತೊಡಗಿದರು. ಹೋರಾಟಕ್ಕೆ ಮಣಿದ ಎಸ್‌ಪಿ ಕೆಇಬಿ ಅಧಿಕಾರಿಗಳ ಜೊತೆ ಚರ್ಚಿಸಿ ಟಿಸಿ ಕಳಿಸಲು ಒಪ್ಪಿಸಿದರು. ರೈತರು ಹೋರಾಟ ಹಿಂತೆಗೆದುಕೊಂಡರು. ಮರುದಿನವೇ ಬಳಗೋಡಕ್ಕೆ ಟಿಸಿ ಬಂತು.

ಟಿ.ಎಸ್.ಗೊರವರ

ಟಿ.ಎಸ್. ಗೊರವರ
ಗದಗ ಜಿಲ್ಲೆಯವರಾದ ಟಿ.ಎಸ್. ಗೊರವರ, ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಹೊರತಂದಿದ್ದಾರೆ. ಸದ್ಯ ’ಸಂಗಾತ’ ತೈಮಾಸಿಕ ಸಾಹಿತ್ಯ ಪತ್ರಿಕೆ ಸಂಪಾದಕ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...