Homeಕರ್ನಾಟಕಎಕ್ಸಿಟ್ ಪೋಲ್ಸ್ ಹೊರ ಹಾಕಿದ ‘ಸರ್‍ಪ್ರೈಸ್’ಗಳು... ಈ ಪೋಲ್ಸ್ ಬಗ್ಗೆ ಅನುಮಾನ ಏಕೆಂದರೆ.....

ಎಕ್ಸಿಟ್ ಪೋಲ್ಸ್ ಹೊರ ಹಾಕಿದ ‘ಸರ್‍ಪ್ರೈಸ್’ಗಳು… ಈ ಪೋಲ್ಸ್ ಬಗ್ಗೆ ಅನುಮಾನ ಏಕೆಂದರೆ…..

ಆದರೆ, 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಈ ಸಂಸ್ಥೆಗಳು ಬಿಜೆಪಿ ಪರವಾಗಿಯೇ ಸಮೀಕ್ಷೆ ‘ರೂಪಿಸಿದ್ದವು’ ಮತ್ತು ಇದೇ ಚಾನೆಲ್‍ಗಳು ತುತ್ತೂರಿ ಊದಿದ್ದವು. ‘ಗ್ರೇಟ್ ಲೀಡರ್’ ವಾಜಪೇಯಿ 2004ರಲ್ಲಿ ಮಕಾಡೆ ಮಲಗಿದರು.

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಎಕ್ಸಿಟ್ ಪೋಲ್ಸ್ ಮತ್ತೆ ಮೋದಿಯೇ ಪ್ರಧಾನಿ ಎಂಬರ್ಥದಲ್ಲಿ ಬಂದಿವೆ. ಆದರೆ, ಇವು ಹಲವು ‘ಸರ್‍ಪ್ರೈಸ್’ ಅಂಶಗಳನ್ನೂ ನಮ್ಮ ಮುಂದಿಟ್ಟಿವೆ. 2014ರಲ್ಲಿ ಮೋದಿ ಹವಾ ಇದ್ದಾಗ ಈ ಎಲ್ಲ ಪೋಲ್ಸ್ ಹೆಚ್ಚೂ-ಕಡಿಮೆ ಸತ್ಯವನ್ನೇ ನುಡಿದಿದ್ದವು. ಆದರೆ 2004, 2009 ರಲ್ಲಿ ಇವು ನೀಡಿದ ಫಲಿತಾಂಶ ಉಲ್ಟಾಪಪ್ಟಾ ಆಗಿತ್ತು. ಈ ಸಲವೂ ಹಾಗೇಕೆ ಆಗಬಾರದು ಎಂಬ ಪ್ರಶ್ನೆ ಇಟ್ಟುಕೊಂಡೇ, ಈ ಸಲದ ಪೋಲ್ಸ್‍ಗಳ ಕುರಿತು ಒಂದು ಬರಹ ಇಲ್ಲಿದೆ…

ಬಿಜೆಪಿ ಪರವಾದ ಒಂದು ಸಣ್ಣ ಸುದ್ದಿ ಬಂದರೂ ಪಟಾಕಿ ಹೊಡೆಯುವ ‘ಮೋದಿ ಭಕ್ತರೇ’ ಎಕ್ಸಿಟ್ ಪೋಲ್ ಬಂದ ಮೇಲೂ ಅಂತಹ ಉತ್ಸಾಹ ತೋರಿಲ್ಲ! ಯಡಿಯೂರಪ್ಪ ಬಿಟ್ಟರೆ ಉಳಿದವರಿಗೆ ಈ ಎಕ್ಸಿಟ್ ಪೋಲ್ ಉತ್ಸಾಹವನ್ನೇನೂ ಕೊಟ್ಟಂತಿಲ್ಲವಲ್ಲ? ಆದರೆ, ಬಿಜೆಪಿಯೇ ಅಧಿಕಾರದಲ್ಲಿ ಇರಲಿ ಎಂದು ಬಯಸುವ ಶೇರು ಮಾರುಕಟ್ಟೆಯಲ್ಲಿ ಈ ಸಂಭ್ರಮ ಕಂಡಿದೆ.

ವಿಷಯ ಏನೆಂದರೆ, ಈ ಎಕ್ಸಿಟ್ ಪೋಲ್‍ಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಆದರೆ, ‘ಬುದ್ಧಿವಂತರು’ ನಡೆಸುವ ಸ್ಟಾಕ್ ಮಾರ್ಕೆಟ್ ಹುಚ್ಚೆದ್ದು ಕುಣಿದಿದೆ. ಅದಕ್ಕೂ ಗೊತ್ತು ಈ ಎಕ್ಸಿಟ್ ಪೋಲ್ ನಮಗಾಗಿಯೇ ಮಾಡಿದ್ದು ಎಂದು… ಮೂರು-ನಾಲ್ಕು ದಿನಗಳ ವಹಿವಾಟು ಎಂದರೆ ಅದು 20 ಲಕ್ಷ ಕೋಟಿಗಳ ದಂಧೆ!ಇದನ್ನೆಲ್ಲ ಬಿಡೋಣ… ಈಗ ನೇರವಾಗಿ ಎಕ್ಸಿಟ್ ಪೋಲ್ ಹೇಳಿದ್ದು ಸತ್ಯಕ್ಕಿಂತ ಹೇಗೆ ದೂರ ಎಂದು ನೋಡೋಣ….

ರಾಜ್ಯ ಬಿಜೆಪಿ 18-24: ಎಲ್ಲಿಂದ ಹೆಚ್ಚುವರಿ ಗಳಿಕೆ?

ಕರ್ನಾಟಕದಲ್ಲಿ 28ರಲ್ಲಿ ಬಿಜೆಪಿ 18-24ರವರೆಗೂ ಸೀಟು ಗೆಲ್ಲುವುದಂತೆ! ಇದು ಬಿಜೆಪಿಯ ಕಾರ್ಯಕರ್ತರಿಗೇ ‘ಭಯ’ ಹುಟ್ಟಿಸುವ ನ್ಯೂಸ್! ಎಲ್ಲಿಂದ ಅವರು ಗೆಲ್ಲುತ್ತಾರೆ? ಕಳೆದ ಸಲ 17 ಗೆದ್ದಿದ್ದರು. ಈಗ ಅದಕ್ಕಿಂತ ಹೆಚ್ಚುವರಿಯಾಗಿ ಗೆಲ್ಲಬಹುದಾದ 3-5 ಕ್ಷೇತ್ರ ಇವೆಯಾ? ಇದುವರೆಗಿನ ಅಂದಾಜಿನಂತೆ ಕೆಲವು ಬಿಜೆಪಿ ಎಂಪಿಗಳು ಸೋಲಬಹುದು. ಈ ಸೋತ ಕ್ಷೇತ್ರಗಳನ್ನು ಕವರ್ ಮಾಡಿಕೊಂಡು 20-23 ತಲುಪಲು ಬಿಜೆಪಿ ಹೊಸ ಕ್ಷೇತ್ರಗಳನ್ನು ಗೆಲ್ಲಬೇಕಲ್ಲ? ಇನ್ನೊಂದು ವಿಷಯ, ಸಮೀಕ್ಷೆ ಮಾಡಿದ ಸಂಸ್ಥೆ ಮತ್ತು ಅದರ ಸಹಭಾಗಿಯಾಗಿ ಅದನ್ನು ಪ್ರಕಟಿಸಿದ ಚಾನೆಲ್‍ಗಳ ಪ್ರಕಾರ, 2014ರ ಲೆಕ್ಕದಲ್ಲಿ ಇಲ್ಲಿ 17 ಬಿಜೆಪಿ ಸಂಸದರು ಇದ್ದಾರೆ! ಬಳ್ಳಾರಿಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಸೋತ ಮೇಲೆ ಬಿಜೆಪಿ ಸಂಸದರ ಸಂಖ್ಯೆ 16… ಈ ಪ್ರಾಥಮಿಕ ಅಂಕಿಸಂಖ್ಯೆಯ ತಿಳುವಳಿಕೆ ಇಲ್ಲದವರು ಅದೆಂತಹಾ ಸಮೀಕ್ಷೆ ಮಾಡಿದರು… ಅದನ್ನು ಫ್ಯಾಕ್ತುವಲ್ ಎರರ್ ಅಂದುಕೊಳ್ಳಲೂ ಆಗಲ್ಲ. ಏಕೆಂದರೆ, ಇಲ್ಲಿ ಮೈತ್ರಿಯ ಪರಿಣಾಮವಾಗಿಯೇ ಬಳ್ಳಾರಿಯಲ್ಲಿ ದೊಡ್ಡ ಲೀಡ್ ಬಂದಿದ್ದು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಮತ್ತು ನಿತ್ಯ ಸಿಎಂ ಆಕಾಂಕ್ಷಿ ಯಡಿಯೂರಪ್ಪನವರ ಸ್ವಂತ ಕ್ಷೇತ್ರದಲ್ಲಿ ಅವರ ಮಗ ಜೆಡಿಎಸ್ ವಿರುದ್ಧ ಕೇವಲ 50 ಸಾವಿರ ಓಟುಗಳಿಂದ ಗೆದ್ದರಲ್ಲವೇ? ಅದು ಮೈತ್ರಿಯ ಎಫೆಕ್ಟ್ ಅಲ್ಲವೇ?

ಎಕ್ಸಿಟ್ ಪೋಲ್ಸ್ ಪ್ರಕಾರ, ಸದ್ಯ ಇಲ್ಲಿ ಮೈತ್ರಿಯ ಪ್ರಭಾವ ಇಲ್ಲ, ಓಕೆ ಎನ್ನೋಣ… ಬಿಜೆಪಿಗೆ ಹೆಚ್ಚುವರಿ ಸೀಟು ಗೆಲ್ಲಲು ಕಾರಣವಾದ ಅಂಶವೂ ನಮಗೆ ಕಾಣುತ್ತಿಲ್ಲವಲ್ಲ?

ಆಶ್ಚರ್ಯಗಳು, ಪ್ರಶ್ನೆಗಳು, ಸಂಶಯಗಳು
ಹೀಗಾಗಿ, ಈಗ ಪ್ರಕಟವಾಗಿರುವ ಎಕ್ಸಿಟ್ ಪೋಲ್ಸ್‍ಗಳ ಮೆಥಡಾಲಜಿಯ ಬಗ್ಗೆಯೇ ಒಂದು ಸಂಶಯ ಶುರುವಾಗಿದೆ… ಹಾಗಂತ, ಇದೇನೂ ಮೊದಲಲ್ಲ, ಹಲವಾರು ರಾಜ್ಯ ವಿಧಾನಸಭೆಗಳ ಚುನಾವಣೆಗಳ ಸಂದರ್ಭದಲ್ಲೂ ಈ ಸಮೀಕ್ಷೆಗಳು ನೆಗೆದು ಬಿದ್ದಿವೆ. ಹಾಗಿದ್ದರೂ, ಇವು ಮತ್ತೆ ಮತ್ತೆ ‘ತಾವು ಅಕ್ಯುರೇಟ್’ ಎಂದು ನಮ್ಮ ಮುಂದೆ ಬರುತ್ತಿವೆ. ಅಷ್ಟಕ್ಕೂ, ಯಾರಿದು ಸಿ-ವೋಟರ್? ಯಾವುದಿದು ನೆಲ್ಸನ್? ಟುಡೆಸ್ ಚಾಣಕ್ಯದ ಹಿನ್ನೆಲೆಯೇನು? ಈ ಕುರಿತಾಗಿ ಯಾವುದೂ ಪಾರದರ್ಶಕವಾಗೇ ಇಲ್ಲ. ಈ ಎಲ್ಲ ಬಿಸಿನೆಸ್ ಕಂಪನಿಗಳು (ದಂಧೆಕೋರರು) ನಮ್ಮ ಮುಂದೆ ಹಾಜರಾಗುವುದು ಚಾನೆಲ್‍ಗಳ ಮೂಲಕ! ಈ ಚಾನೆಲ್‍ಗಳೇ ಈಗ ಎಕ್ಸಿಟ್ ಪೋಲ್ಸ್ ದಂಧೆಯ ಸಾರ್ವಜನಿಕ ಮುಖಗಳು….

ದಲ್ಲಾಳಿಗಳು ಅನ್ನಬಾರದೇಕೆ? ನಿನ್ನೆ ಎಕ್ಸಿಟ್ ಪೋಲ್ ಪ್ರಕಟವಾದ ನಂತರ ಸ್ಟಾಕ್ ಮಾರ್ಕೆಟಿನಲ್ಲಿ ಸಂಭ್ರಮ! ಅದಾನಿ ಕಂಪನಿಗಳ ಶೇರು ವಹಿವಾಟಿನಲ್ಲಿ ಶೇ.13ರಷ್ಟು ಹೆಚ್ಚಳ!

ಎನ್‍ಡಿಎಗೆ ಅತಿ ಹೆಚ್ಚು ಸೀಟು 345 ಇದ್ದರೆ, ಉಳಿದ ಬಹುತೇಕ ಸಂಸ್ಥೆಗಳು 300ಕ್ಕೂ ಹೆಚ್ಚು ನೀಡಿವೆ. ಎನ್‍ಡಿಎಗೆ 240-260 ರ ಸಂಖ್ಯೆಯನ್ನು ಎರಡೇ ಎರಡು ಕಂಪನಿ ನೀಡಿವೆ… ಸರಾಸರಿ 300 ದಾಟದೇ ಇರುತ್ತಾ?
ಇವುಗಳಲ್ಲಿ ನಿರ್ದಿಷ್ಟ ಪಕ್ಷದ ಪರವಾಗಿ ಸಮೀಕ್ಷೆಯನ್ನು ರೂಪಿಸಿಕೊಡುವುದಕ್ಕಾಗಿ ಸಿಕ್ಕಿ ಹಾಕಿಕೊಂಡಿದ್ದ ಸಿ-ವೋಟರ್ ಇದೆ.

ಪುಣ್ಯಕ್ಕೆ ‘ಪ್ರಜಾವಾಣಿ’ಯಾದರೂ, ಸಮೀಕ್ಷೆಗಳು ನಿಜವಾದ ನಿದರ್ಶನಗಳು ಕಡಿಮೆ’ ಎಂದು ಮುಖಪುಟದ ಟೈಟಲ್ಲಿನಲ್ಲಿ ಹಾಕಿದೆ…

Statistics ಎಂಬ ಆಟ!
Probability ಅನ್ನೋ ಜೂಜು!

ಈಗ ಮತ್ತೆ ನಿನ್ನೆಯ ಎಕ್ಸಿಟ್ ಪೋಲ್‍ಗೆ ಬರೋಣ. ಅವು ಹತ್ತಿರಕ್ಕೆ ಸಮೀಪ ಇರಬಹುದು, ಸರಿ ಒಪ್ಪೋಣ. ಆದರೆ ಅದನ್ನೆಲ್ಲ ವೈಜ್ಞಾನಿಕ, ಗಣಿತಶಾಸ್ತ್ರೀಯ ಮಾನದಂಡ, ಅಲ್ಗೋರಿಥಮ್‍ಗಳ ನೆರವಿನಿಂದ ಮಾಡಲಾಗಿದೆ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಈ ಎಕ್ಸಿಟ್ ಪೋಲ್‍ಗಳಿಗೆ ಮಹಾ ಯಶಸ್ಸು ಅಂತಾ ಸಿಕ್ಕಿದ್ದರೆ, ಅದು 2014ರ ಚುನಾವಣೆಯಲ್ಲಿ… ನಿಖರ ಸಂಖ್ಯೆ ಹೇಳಲಾಗದಿದ್ದರೂ, ಈ ಸಲ ಮೋದಿ ಸರ್ಕಾರವೇ ಅಂತಾ ಜನರೇ ಹೇಳುತ್ತಿದ್ದರು. (ಹಾಗೆ ಅವರನ್ನು ಮಾಧ್ಯಮಗಳು, ಸುಶಿಕ್ಷಿತರು ನಂಬಿಸಿದ್ದರು!)… ಜನರು ಹೇಳಿದ್ದನ್ನೇ ಈ ಪೋಲ್‍ಗಳು ಹೇಳಿದ್ದವು.

ಆದರೆ, 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಈ ಸಂಸ್ಥೆಗಳು ಬಿಜೆಪಿ ಪರವಾಗಿಯೇ ಸಮೀಕ್ಷೆ ‘ರೂಪಿಸಿದ್ದವು’ ಮತ್ತು ಇದೇ ಚಾನೆಲ್‍ಗಳು ತುತ್ತೂರಿ ಊದಿದ್ದವು. ‘ಗ್ರೇಟ್ ಲೀಡರ್’ ವಾಜಪೇಯಿ 2004ರಲ್ಲಿ ಮಕಾಡೆ ಮಲಗಿದರು. 2009ರಲ್ಲಿ ಮನಮೋಹನಸಿಂಗ್‍ರನ್ನು ಜರಿದು, ಅವಮಾನ ಮಾಡಿದ ಮೇಲೂ, ಈ ಸಲ ಎನ್‍ಡಿಎ ಎಂದು ಹೇಳಿದ್ದ ಸಮೀಕ್ಷೆಗಳು ಬಕ್ಕಬರಲು ಮಲಗಿದ್ದವು!
ಈ ದೇಶದಲ್ಲಿ ಈಗ ಸಮೀಕ್ಷೆಯೂ ಒಂದು ದಂಧೆಯಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...