Homeಕರ್ನಾಟಕಎಕ್ಸಿಟ್ ಪೋಲ್ಸ್ ಹೊರ ಹಾಕಿದ ‘ಸರ್‍ಪ್ರೈಸ್’ಗಳು... ಈ ಪೋಲ್ಸ್ ಬಗ್ಗೆ ಅನುಮಾನ ಏಕೆಂದರೆ.....

ಎಕ್ಸಿಟ್ ಪೋಲ್ಸ್ ಹೊರ ಹಾಕಿದ ‘ಸರ್‍ಪ್ರೈಸ್’ಗಳು… ಈ ಪೋಲ್ಸ್ ಬಗ್ಗೆ ಅನುಮಾನ ಏಕೆಂದರೆ…..

ಆದರೆ, 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಈ ಸಂಸ್ಥೆಗಳು ಬಿಜೆಪಿ ಪರವಾಗಿಯೇ ಸಮೀಕ್ಷೆ ‘ರೂಪಿಸಿದ್ದವು’ ಮತ್ತು ಇದೇ ಚಾನೆಲ್‍ಗಳು ತುತ್ತೂರಿ ಊದಿದ್ದವು. ‘ಗ್ರೇಟ್ ಲೀಡರ್’ ವಾಜಪೇಯಿ 2004ರಲ್ಲಿ ಮಕಾಡೆ ಮಲಗಿದರು.

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಎಕ್ಸಿಟ್ ಪೋಲ್ಸ್ ಮತ್ತೆ ಮೋದಿಯೇ ಪ್ರಧಾನಿ ಎಂಬರ್ಥದಲ್ಲಿ ಬಂದಿವೆ. ಆದರೆ, ಇವು ಹಲವು ‘ಸರ್‍ಪ್ರೈಸ್’ ಅಂಶಗಳನ್ನೂ ನಮ್ಮ ಮುಂದಿಟ್ಟಿವೆ. 2014ರಲ್ಲಿ ಮೋದಿ ಹವಾ ಇದ್ದಾಗ ಈ ಎಲ್ಲ ಪೋಲ್ಸ್ ಹೆಚ್ಚೂ-ಕಡಿಮೆ ಸತ್ಯವನ್ನೇ ನುಡಿದಿದ್ದವು. ಆದರೆ 2004, 2009 ರಲ್ಲಿ ಇವು ನೀಡಿದ ಫಲಿತಾಂಶ ಉಲ್ಟಾಪಪ್ಟಾ ಆಗಿತ್ತು. ಈ ಸಲವೂ ಹಾಗೇಕೆ ಆಗಬಾರದು ಎಂಬ ಪ್ರಶ್ನೆ ಇಟ್ಟುಕೊಂಡೇ, ಈ ಸಲದ ಪೋಲ್ಸ್‍ಗಳ ಕುರಿತು ಒಂದು ಬರಹ ಇಲ್ಲಿದೆ…

ಬಿಜೆಪಿ ಪರವಾದ ಒಂದು ಸಣ್ಣ ಸುದ್ದಿ ಬಂದರೂ ಪಟಾಕಿ ಹೊಡೆಯುವ ‘ಮೋದಿ ಭಕ್ತರೇ’ ಎಕ್ಸಿಟ್ ಪೋಲ್ ಬಂದ ಮೇಲೂ ಅಂತಹ ಉತ್ಸಾಹ ತೋರಿಲ್ಲ! ಯಡಿಯೂರಪ್ಪ ಬಿಟ್ಟರೆ ಉಳಿದವರಿಗೆ ಈ ಎಕ್ಸಿಟ್ ಪೋಲ್ ಉತ್ಸಾಹವನ್ನೇನೂ ಕೊಟ್ಟಂತಿಲ್ಲವಲ್ಲ? ಆದರೆ, ಬಿಜೆಪಿಯೇ ಅಧಿಕಾರದಲ್ಲಿ ಇರಲಿ ಎಂದು ಬಯಸುವ ಶೇರು ಮಾರುಕಟ್ಟೆಯಲ್ಲಿ ಈ ಸಂಭ್ರಮ ಕಂಡಿದೆ.

ವಿಷಯ ಏನೆಂದರೆ, ಈ ಎಕ್ಸಿಟ್ ಪೋಲ್‍ಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಆದರೆ, ‘ಬುದ್ಧಿವಂತರು’ ನಡೆಸುವ ಸ್ಟಾಕ್ ಮಾರ್ಕೆಟ್ ಹುಚ್ಚೆದ್ದು ಕುಣಿದಿದೆ. ಅದಕ್ಕೂ ಗೊತ್ತು ಈ ಎಕ್ಸಿಟ್ ಪೋಲ್ ನಮಗಾಗಿಯೇ ಮಾಡಿದ್ದು ಎಂದು… ಮೂರು-ನಾಲ್ಕು ದಿನಗಳ ವಹಿವಾಟು ಎಂದರೆ ಅದು 20 ಲಕ್ಷ ಕೋಟಿಗಳ ದಂಧೆ!ಇದನ್ನೆಲ್ಲ ಬಿಡೋಣ… ಈಗ ನೇರವಾಗಿ ಎಕ್ಸಿಟ್ ಪೋಲ್ ಹೇಳಿದ್ದು ಸತ್ಯಕ್ಕಿಂತ ಹೇಗೆ ದೂರ ಎಂದು ನೋಡೋಣ….

ರಾಜ್ಯ ಬಿಜೆಪಿ 18-24: ಎಲ್ಲಿಂದ ಹೆಚ್ಚುವರಿ ಗಳಿಕೆ?

ಕರ್ನಾಟಕದಲ್ಲಿ 28ರಲ್ಲಿ ಬಿಜೆಪಿ 18-24ರವರೆಗೂ ಸೀಟು ಗೆಲ್ಲುವುದಂತೆ! ಇದು ಬಿಜೆಪಿಯ ಕಾರ್ಯಕರ್ತರಿಗೇ ‘ಭಯ’ ಹುಟ್ಟಿಸುವ ನ್ಯೂಸ್! ಎಲ್ಲಿಂದ ಅವರು ಗೆಲ್ಲುತ್ತಾರೆ? ಕಳೆದ ಸಲ 17 ಗೆದ್ದಿದ್ದರು. ಈಗ ಅದಕ್ಕಿಂತ ಹೆಚ್ಚುವರಿಯಾಗಿ ಗೆಲ್ಲಬಹುದಾದ 3-5 ಕ್ಷೇತ್ರ ಇವೆಯಾ? ಇದುವರೆಗಿನ ಅಂದಾಜಿನಂತೆ ಕೆಲವು ಬಿಜೆಪಿ ಎಂಪಿಗಳು ಸೋಲಬಹುದು. ಈ ಸೋತ ಕ್ಷೇತ್ರಗಳನ್ನು ಕವರ್ ಮಾಡಿಕೊಂಡು 20-23 ತಲುಪಲು ಬಿಜೆಪಿ ಹೊಸ ಕ್ಷೇತ್ರಗಳನ್ನು ಗೆಲ್ಲಬೇಕಲ್ಲ? ಇನ್ನೊಂದು ವಿಷಯ, ಸಮೀಕ್ಷೆ ಮಾಡಿದ ಸಂಸ್ಥೆ ಮತ್ತು ಅದರ ಸಹಭಾಗಿಯಾಗಿ ಅದನ್ನು ಪ್ರಕಟಿಸಿದ ಚಾನೆಲ್‍ಗಳ ಪ್ರಕಾರ, 2014ರ ಲೆಕ್ಕದಲ್ಲಿ ಇಲ್ಲಿ 17 ಬಿಜೆಪಿ ಸಂಸದರು ಇದ್ದಾರೆ! ಬಳ್ಳಾರಿಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಸೋತ ಮೇಲೆ ಬಿಜೆಪಿ ಸಂಸದರ ಸಂಖ್ಯೆ 16… ಈ ಪ್ರಾಥಮಿಕ ಅಂಕಿಸಂಖ್ಯೆಯ ತಿಳುವಳಿಕೆ ಇಲ್ಲದವರು ಅದೆಂತಹಾ ಸಮೀಕ್ಷೆ ಮಾಡಿದರು… ಅದನ್ನು ಫ್ಯಾಕ್ತುವಲ್ ಎರರ್ ಅಂದುಕೊಳ್ಳಲೂ ಆಗಲ್ಲ. ಏಕೆಂದರೆ, ಇಲ್ಲಿ ಮೈತ್ರಿಯ ಪರಿಣಾಮವಾಗಿಯೇ ಬಳ್ಳಾರಿಯಲ್ಲಿ ದೊಡ್ಡ ಲೀಡ್ ಬಂದಿದ್ದು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಮತ್ತು ನಿತ್ಯ ಸಿಎಂ ಆಕಾಂಕ್ಷಿ ಯಡಿಯೂರಪ್ಪನವರ ಸ್ವಂತ ಕ್ಷೇತ್ರದಲ್ಲಿ ಅವರ ಮಗ ಜೆಡಿಎಸ್ ವಿರುದ್ಧ ಕೇವಲ 50 ಸಾವಿರ ಓಟುಗಳಿಂದ ಗೆದ್ದರಲ್ಲವೇ? ಅದು ಮೈತ್ರಿಯ ಎಫೆಕ್ಟ್ ಅಲ್ಲವೇ?

ಎಕ್ಸಿಟ್ ಪೋಲ್ಸ್ ಪ್ರಕಾರ, ಸದ್ಯ ಇಲ್ಲಿ ಮೈತ್ರಿಯ ಪ್ರಭಾವ ಇಲ್ಲ, ಓಕೆ ಎನ್ನೋಣ… ಬಿಜೆಪಿಗೆ ಹೆಚ್ಚುವರಿ ಸೀಟು ಗೆಲ್ಲಲು ಕಾರಣವಾದ ಅಂಶವೂ ನಮಗೆ ಕಾಣುತ್ತಿಲ್ಲವಲ್ಲ?

ಆಶ್ಚರ್ಯಗಳು, ಪ್ರಶ್ನೆಗಳು, ಸಂಶಯಗಳು
ಹೀಗಾಗಿ, ಈಗ ಪ್ರಕಟವಾಗಿರುವ ಎಕ್ಸಿಟ್ ಪೋಲ್ಸ್‍ಗಳ ಮೆಥಡಾಲಜಿಯ ಬಗ್ಗೆಯೇ ಒಂದು ಸಂಶಯ ಶುರುವಾಗಿದೆ… ಹಾಗಂತ, ಇದೇನೂ ಮೊದಲಲ್ಲ, ಹಲವಾರು ರಾಜ್ಯ ವಿಧಾನಸಭೆಗಳ ಚುನಾವಣೆಗಳ ಸಂದರ್ಭದಲ್ಲೂ ಈ ಸಮೀಕ್ಷೆಗಳು ನೆಗೆದು ಬಿದ್ದಿವೆ. ಹಾಗಿದ್ದರೂ, ಇವು ಮತ್ತೆ ಮತ್ತೆ ‘ತಾವು ಅಕ್ಯುರೇಟ್’ ಎಂದು ನಮ್ಮ ಮುಂದೆ ಬರುತ್ತಿವೆ. ಅಷ್ಟಕ್ಕೂ, ಯಾರಿದು ಸಿ-ವೋಟರ್? ಯಾವುದಿದು ನೆಲ್ಸನ್? ಟುಡೆಸ್ ಚಾಣಕ್ಯದ ಹಿನ್ನೆಲೆಯೇನು? ಈ ಕುರಿತಾಗಿ ಯಾವುದೂ ಪಾರದರ್ಶಕವಾಗೇ ಇಲ್ಲ. ಈ ಎಲ್ಲ ಬಿಸಿನೆಸ್ ಕಂಪನಿಗಳು (ದಂಧೆಕೋರರು) ನಮ್ಮ ಮುಂದೆ ಹಾಜರಾಗುವುದು ಚಾನೆಲ್‍ಗಳ ಮೂಲಕ! ಈ ಚಾನೆಲ್‍ಗಳೇ ಈಗ ಎಕ್ಸಿಟ್ ಪೋಲ್ಸ್ ದಂಧೆಯ ಸಾರ್ವಜನಿಕ ಮುಖಗಳು….

ದಲ್ಲಾಳಿಗಳು ಅನ್ನಬಾರದೇಕೆ? ನಿನ್ನೆ ಎಕ್ಸಿಟ್ ಪೋಲ್ ಪ್ರಕಟವಾದ ನಂತರ ಸ್ಟಾಕ್ ಮಾರ್ಕೆಟಿನಲ್ಲಿ ಸಂಭ್ರಮ! ಅದಾನಿ ಕಂಪನಿಗಳ ಶೇರು ವಹಿವಾಟಿನಲ್ಲಿ ಶೇ.13ರಷ್ಟು ಹೆಚ್ಚಳ!

ಎನ್‍ಡಿಎಗೆ ಅತಿ ಹೆಚ್ಚು ಸೀಟು 345 ಇದ್ದರೆ, ಉಳಿದ ಬಹುತೇಕ ಸಂಸ್ಥೆಗಳು 300ಕ್ಕೂ ಹೆಚ್ಚು ನೀಡಿವೆ. ಎನ್‍ಡಿಎಗೆ 240-260 ರ ಸಂಖ್ಯೆಯನ್ನು ಎರಡೇ ಎರಡು ಕಂಪನಿ ನೀಡಿವೆ… ಸರಾಸರಿ 300 ದಾಟದೇ ಇರುತ್ತಾ?
ಇವುಗಳಲ್ಲಿ ನಿರ್ದಿಷ್ಟ ಪಕ್ಷದ ಪರವಾಗಿ ಸಮೀಕ್ಷೆಯನ್ನು ರೂಪಿಸಿಕೊಡುವುದಕ್ಕಾಗಿ ಸಿಕ್ಕಿ ಹಾಕಿಕೊಂಡಿದ್ದ ಸಿ-ವೋಟರ್ ಇದೆ.

ಪುಣ್ಯಕ್ಕೆ ‘ಪ್ರಜಾವಾಣಿ’ಯಾದರೂ, ಸಮೀಕ್ಷೆಗಳು ನಿಜವಾದ ನಿದರ್ಶನಗಳು ಕಡಿಮೆ’ ಎಂದು ಮುಖಪುಟದ ಟೈಟಲ್ಲಿನಲ್ಲಿ ಹಾಕಿದೆ…

Statistics ಎಂಬ ಆಟ!
Probability ಅನ್ನೋ ಜೂಜು!

ಈಗ ಮತ್ತೆ ನಿನ್ನೆಯ ಎಕ್ಸಿಟ್ ಪೋಲ್‍ಗೆ ಬರೋಣ. ಅವು ಹತ್ತಿರಕ್ಕೆ ಸಮೀಪ ಇರಬಹುದು, ಸರಿ ಒಪ್ಪೋಣ. ಆದರೆ ಅದನ್ನೆಲ್ಲ ವೈಜ್ಞಾನಿಕ, ಗಣಿತಶಾಸ್ತ್ರೀಯ ಮಾನದಂಡ, ಅಲ್ಗೋರಿಥಮ್‍ಗಳ ನೆರವಿನಿಂದ ಮಾಡಲಾಗಿದೆ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಈ ಎಕ್ಸಿಟ್ ಪೋಲ್‍ಗಳಿಗೆ ಮಹಾ ಯಶಸ್ಸು ಅಂತಾ ಸಿಕ್ಕಿದ್ದರೆ, ಅದು 2014ರ ಚುನಾವಣೆಯಲ್ಲಿ… ನಿಖರ ಸಂಖ್ಯೆ ಹೇಳಲಾಗದಿದ್ದರೂ, ಈ ಸಲ ಮೋದಿ ಸರ್ಕಾರವೇ ಅಂತಾ ಜನರೇ ಹೇಳುತ್ತಿದ್ದರು. (ಹಾಗೆ ಅವರನ್ನು ಮಾಧ್ಯಮಗಳು, ಸುಶಿಕ್ಷಿತರು ನಂಬಿಸಿದ್ದರು!)… ಜನರು ಹೇಳಿದ್ದನ್ನೇ ಈ ಪೋಲ್‍ಗಳು ಹೇಳಿದ್ದವು.

ಆದರೆ, 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಈ ಸಂಸ್ಥೆಗಳು ಬಿಜೆಪಿ ಪರವಾಗಿಯೇ ಸಮೀಕ್ಷೆ ‘ರೂಪಿಸಿದ್ದವು’ ಮತ್ತು ಇದೇ ಚಾನೆಲ್‍ಗಳು ತುತ್ತೂರಿ ಊದಿದ್ದವು. ‘ಗ್ರೇಟ್ ಲೀಡರ್’ ವಾಜಪೇಯಿ 2004ರಲ್ಲಿ ಮಕಾಡೆ ಮಲಗಿದರು. 2009ರಲ್ಲಿ ಮನಮೋಹನಸಿಂಗ್‍ರನ್ನು ಜರಿದು, ಅವಮಾನ ಮಾಡಿದ ಮೇಲೂ, ಈ ಸಲ ಎನ್‍ಡಿಎ ಎಂದು ಹೇಳಿದ್ದ ಸಮೀಕ್ಷೆಗಳು ಬಕ್ಕಬರಲು ಮಲಗಿದ್ದವು!
ಈ ದೇಶದಲ್ಲಿ ಈಗ ಸಮೀಕ್ಷೆಯೂ ಒಂದು ದಂಧೆಯಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...