ದೆಹಲಿಯ ಸಂಪುಟ ಸಚಿವರು ಹಾಗೂ ಎಎಪಿ ನಾಯಕರಾದ ಅತಿಶಿ ಮರ್ಲೇನಾ ಮತ್ತು ಸೌರಭ್ ಭಾರದ್ವಾಜ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಅನ್ಫಾಲೋ ಮಾಡಿದ್ದಾರೆ ಎಂದು ಹೇಳುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅನೇಕ ಎಕ್ಸ್ ಬಳೆದಾರರು ಈ ಕುರಿತ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿ, ಇಲ್ಲಿ
ಫ್ಯಾಕ್ಟ್ಚೆಕ್ : ಇಬ್ಬರು ಸಂಪುಟ ಸಚಿವರು ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಎಕ್ಸ್ನಲ್ಲಿ ಫಾಲೋ ಮಾಡುತ್ತಿಲ್ಲ ಎಂಬ ಸುದ್ದಿಯ ಬಗ್ಗೆ ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.
ಇದಕ್ಕಾಗಿ ‘Twexport‘ಗೂಗಲ್ ಕ್ರೋಮ್ ಎಕ್ಸ್ಟೆಂಶನ್ ಟೂಲ್ ಬಳಸಿ ನಾವು ಸಚಿವ ಭಾರಧ್ವಾಜ್ ಅವರು ಫಾಲೋ ಮಾಡುತ್ತಿರುವ ವ್ಯಕ್ತಿಗಳ ಪಟ್ಟಿ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಫಾಲೋ ಮಾಡುತ್ತಿರುವುದು ಕಂಡು ಬಂದಿದೆ.
ಈ ಕುರಿತು ಸಚಿವ ಸೌರಭ್ ಭಾರದ್ವಾಜ್ ಅವರು ಎಕ್ಸ್ನಲ್ಲಿ ಸ್ಪಷ್ಟನೆ ನೀಡಿದ್ದು, “ನಾನು ಅರವಿಂದ್ ಕೇಜ್ರಿವಾಲ್ ಅವರನ್ನು ಎಕ್ಸ್ನಲ್ಲಿ ಫಾಲೋ ಮಾಡುತ್ತಿಲ್ಲ ಎಂಬುವುದು ಸುಳ್ಳು ಸುದ್ದಿ. ನಾವಿಬ್ಬರು ಪರಸ್ಪರ ಫಾಲೋ ಮಾಡುತ್ತಿದ್ದೇವೆ” ಎಂದಿದ್ದಾರೆ.
To all those spreading fake news, I and @ArvindKejriwal ji both follow each other.
Yesterday’s Ramlila Maidan Rally was superhit. Delhi people are with Kejriwal. pic.twitter.com/d4iacrEWBa
— Saurabh Bharadwaj (@Saurabh_MLAgk) April 1, 2024
‘Phantombuster‘ಮತ್ತೊಂದು ಟೂಲ್ ಬಳಸಿ ನಾವು ಸಚಿವೆ ಅತಿಶಿ ಅವರು ಎಕ್ಸ್ನಲ್ಲಿ ಫಾಲೋ ಮಾಡುತ್ತಿರುವವರ ಪಟ್ಟಿ ಪರಿಶೀಲಿಸಿದ್ದೇವೆ. ಈ ವೇಳೆ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಫಾಲೋ ಮಾಡುತ್ತಿರುವುದು ಕಂಡು ಬಂದಿದೆ.
ಆಮ್ ಆದ್ಮಿ ಪಕ್ಷದ ಮುಖ್ಯ ಮಾಧ್ಯಮ ಸಂಯೋಜಕರಾಗಿರುವ ವಿಕಾಸ್ ಯೋಗಿ ಅವರು ಈ ಕುರಿತು ಎಕ್ಸ್ನಲ್ಲಿ ಸ್ಪಷ್ಟನೆ ನೀಡಿದ್ದು, “ಇಬ್ಬರು ಸಚಿವರಾದ ಅತಿಶಿ ಮತ್ತು ಭಾರದ್ವಾಜ್ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಬಿಜೆಪಿ ಐಟಿ ಸೆಲ್ ಸುಳ್ಳು ಸುದ್ದಿಗಳ ಬಗ್ಗೆ ಜಾಗರೂಕರಾಗಿರಿ” ಎಂದು ಬರೆದುಕೊಂಡಿದ್ದಾರೆ.
Fake News Alert 🚨
Both Cabinet Ministers Atishi and Saurabh Bharadwaj are following the AAP Chief Arvind Kejriwal Ji.
Beware of fake news being peddled by the BJP IT Cell Ecosystem https://t.co/LfO3LtoWeT pic.twitter.com/roq76cD7xM
— Vikas Yogi (@vikaskyogi) April 1, 2024
ನಾವು ವಿವಿಧ ಟೂಲ್ಗಳನ್ನು ಬಳಸಿ ನಡೆಸಿದ ಪರಿಶೀಲನೆ ಮತ್ತು ಆಮ್ ಆದ್ಮಿ ಪಕ್ಷದ ಅಧಿಕೃತ ಮೂಲಗಳ ಪ್ರಕಾರ ದೆಹಲಿ ಸರ್ಕಾರ ಸಚಿವ ಸಂಪುಟದ ಸಚಿವರು ಹಾಗೂ ಆಪ್ ನಾಯಕರಾದ ಅತಿಶಿ ಮರ್ಲೇನಾ ಮತ್ತು ಸೌರಭ್ ಭಾರದ್ವಾಜ್ ಅವರು ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಫಾಲೋ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು.
ಇದನ್ನೂ ಓದಿ : Fact Check : ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆಯಾ?