HomeದಿಟನಾಗರFact Check: ಮುಸ್ಲಿಮರು ನಮಾಝ್ ಮುಗಿಸಿ ಬರುವ ಹಳೆಯ ವಿಡಿಯೋ ತಪ್ಪಾಗಿ ಹಂಚಿಕೆ

Fact Check: ಮುಸ್ಲಿಮರು ನಮಾಝ್ ಮುಗಿಸಿ ಬರುವ ಹಳೆಯ ವಿಡಿಯೋ ತಪ್ಪಾಗಿ ಹಂಚಿಕೆ

- Advertisement -
- Advertisement -

ರಂಝಾನ್ ಹಬ್ಬ ಅಥವಾ ಈದುಲ್ ಫಿತರ್ ದಿನದಂದು ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಈದ್ಗಾಗೆ ನಮಾಝ್‌ಗೆ ತೆರಳಿ ವಾಪಸ್‌ ಬರುತ್ತಿರುವ ಹಳೆಯ ವಿಡಿಯೋವೊಂದು ತಪ್ಪಾದ ಮಾಹಿತಿಯೊಂದಿಗೆ ಶೇರ್ ಆಗ್ತಿದೆ.

ಉತ್ತರಾಖಂಡದ ನೈನ್‌ತಾಲ್ ಜಿಲ್ಲೆಯ ಹಲ್ದ್ವಾನಿಯ ಬಂಭೂಲ್ಪುರದಲ್ಲಿ ಗುರುವಾರ (ಫೆ.8) ಸಂಜೆ ಮದ್ರಸಾ-ಮಸೀದಿ ತೆರವು ವೇಳೆ ಘರ್ಷಣೆ ನಡೆದ ಬಳಿಕ ಈ ವಿಡಿಯೋ ಮುನ್ನಲೆಗೆ ಬಂದಿದೆ.

ಬಲಪಂಥೀಯ ಎಕ್ಸ್‌ಖಾತೆ ‘We the people(@ajaychauhan41)’ ನಲ್ಲಿ ವಿಡಿಯೋವನ್ನು ಹಂಚಿಕೊಂಡು “ಹರಿದ್ವಾರ ಹಿಂದೂ ದೇವರುಗಳ ನಾಡು, ದೇವಭೂಮಿ ಎಂದು ಕರೆಯಲಾಗುತ್ತದೆ” ಬರೆಯಲಾಗಿದೆ. ಈ ಮೂಲಕ ಹಿಂದೂ ದೇವರುಗಳ ನಾಡಿನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗ್ತಿದೆ ಎಂಬರ್ಥದಲ್ಲಿ ಪರೋಕ್ಷವಾಗಿ ಕೋಮುದ್ವೇಷ ಕಾರಲಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ

‘Kreately.in'(@KreatelyMedia) ಎಂಬ ಮತ್ತೊಂದು ಎಕ್ಸ್ ಖಾತೆಯಲ್ಲೂ ಈ ವಿಡಿಯೋವನ್ನು ಹಂಚಿಕೊಂಡು “ಉತ್ತರಾಖಂಡದ ಹರಿದ್ವಾರಕ್ಕೆ ನಿಮಗೆ ಸುಸ್ವಾಗತ” ಎಂದು ಬರೆಯಲಾಗಿದೆ. ಇಲ್ಲಿಯೂ ಪರೋಕ್ಷವಾಗಿ ಕೋಮು ವೈಷಮ್ಯ ತೋರ್ಪಡಿಸಲಾಗಿದೆ.

ಫೋಸ್ಟ್ ಲಿಂಕ್ ಇಲ್ಲಿದೆ

‘शून्य’ (@Shunyaa00) ಎಂಬ ಮತ್ತೊಂದು ಎಕ್ಸ್ ಖಾತೆಯಲ್ಲೂ ಇತ್ತೀಚೆಗೆ ಈ ವಿಡಿಯೋ ಹಂಚಿಕೊಂಡು “ಹರಿದ್ವಾರ ಉತ್ತರಾಖಂಡ” ಎಂದು ಬರೆಯಲಾಗಿದೆ.

ಪೋಸ್ಟ್‌ ಲಿಂಕ್ ಇಲ್ಲಿದೆ

ಫ್ಯಾಕ್ಟ್ ಚೆಕ್‌ : ಉತ್ತರಾಖಂಡದ ಹಲ್ದ್ವಾನಿಯಲ್ಲಿ ಹಿಂಸಾಚಾರ ಭುಗಿಲೆದ್ದಿರುವುದರಿಂದ ಈ ವಿಡಿಯೋ ಮಹತ್ವ ಪಡೆದುಕೊಂಡಿದೆ. ಹಳೆಯ ವಿಡಿಯೋವೊಂದನ್ನು ಇತ್ತೀಚೆಗೆ ತಪ್ಪಾದ ಮಾಹಿತಿಯೊಂದಿಗೆ ಪೋಸ್ಟ್‌ ಮಾಡುವ ಮೂಲಕ ಮುಸ್ಲಿಂ ಸಮುದಾಯದ ವಿರುದ್ದ ಕೋಮು ದ್ವೇಷಕ್ಕೆ ಪ್ರೇರೇಪಣೆ ನೀಡಲಾಗ್ತಿದೆ. ಹಾಗಾಗಿ, ನಾನುಗೌರಿ.ಕಾಂ ಈ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ಮಾಡಿದೆ.

ವಿಡಿಯೋ ಕುರಿತು ತಿಳಿಯಲು ಮೊದಲು ನಾವು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಡಿದ್ದೇವೆ. ಈ ವೇಳೆ ಮೇ, 5, 2022ರಂದು ‘Dr Vijay Sharma'(@mahadev123456) ಎಂಬ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿರುವುದು ಕಂಡು ಬಂದಿದೆ.

ವಿಡಿಯೋ ಜೊತೆಗೆ “ಹರಿದ್ವಾರದ ಜ್ವಾಲಾಪುರ ಈದ್ಗಾದಲ್ಲಿ ನಮಾಝ್ ಬಳಿಕದ ದೃಶ್ಯ ನೋಡಿ. ಹರಿಯ ನಗರವು ಅಲ್ಲಾಹನ ನಗರ ಆಗಿದೆ. ಉತ್ತರಾಖಂಡದಲ್ಲಿ ಮುಸ್ಲಿಮರು ಎಲ್ಲಿಂದ ಬಂದರು ಎಂದು ಯೋಚಿಸುವುದು ಒಳಿತು. ಇಲ್ಲಿನ ಪೂರ್ವಜರು ಹಿಂದೂ ಬ್ರಾಹ್ಮಣರು, ಹಿಂದೂ ರಜಪೂತರು ಅಥವಾ ಹಿಂದೂ ಹರಿಜನರು” ಎಂದು ಬರೆಯಲಾಗಿದೆ. ಬಿಜೆಪಿ, ಸಿಎಂ ಪುಷ್ಕರ್ ಸಿಂಗ್ ಧಾಮಿಯವರಿಗೆ ಟ್ಯಾಗ್ ಮಾಡಲಾಗಿದೆ.

ಈ ಮೂಲಕ ನಮಗೆ ಗೊತ್ತಾಗಿದ್ದು, ಇತ್ತೀಚಿನದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ 2022ರ ಒಂದು ರಂಝಾನ್ ಹಬ್ಬದ ಸಂದರ್ಭದ್ದು, ಮುಸ್ಲಿಮರು ಹರಿದ್ವಾರದ ಜ್ವಾಲಾಪುರ ಈದ್ಗಾದಲ್ಲಿ ನಮಾಝ್ ಮುಗಿಸಿ ಬಂದ ದೃಶ್ಯವಿದು ಎಂದು.

ನಾವು ಮೇಲೆ ತಿಳಿಸಿದ ‘Dr Vijay Sharma’ ಎಂಬ ಎಕ್ಸ್ ಖಾತೆಯಲ್ಲೂ ವಿಡಿಯೋ ಪೋಸ್ಟ್ ಮಾಡಿರುವ ಉದ್ದೇಶ ಕೋಮುದ್ವೇಷ ಹರಡುವುದಾಗಿದೆ. ಆದರೆ, ಇಲ್ಲಿ ವಿಡಿಯೋ ಎಲ್ಲಿಯದ್ದು ಮತ್ತು ಯಾವಾಗದ್ದು ಎಂದು ನಿಜವಾದ ಮಾಹಿತಿ ಕೊಡಲಾಗಿದೆ.

ಹಿಂದಿ ಸುದ್ದಿ ವಾಹಿನಿ ‘ಭಾರತ್‌ವರ್ಷ್‌24×7’ನ ಫೇಸ್‌ಬುಕ್‌ ಖಾತೆಯಲ್ಲೂ ಮೇಲಿನ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, “ಮೇ 3,2022ರಂದು ಈದುಲ್‌ ಫಿತರ್ ಅಂಗವಾಗಿ ಮುಸ್ಲಿಮರು ನಮಾಝ್ ಮುಗಿಸಿ ಬರುವ ದೃಶ್ಯ” ಎಂದು ಬರೆಯಲಾಗಿದೆ. “ಹಿಂದೂಗಳು ಮುಸ್ಲಿಮರಿಗೆ ಆಹಾರ ವಿತರಿಸಿ, ಹಬ್ಬದ ಸುಭಾಶಯ ತಿಳಿಸಿ ಕೋಮು ಸೌಹಾರ್ದತೆ ಸಾರಿದ್ದಾರೆ” ಎಂದು ವರದಿ ಹೇಳಿದೆ.

ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದ ವಿಚಾರವೇನೆಂದರೆ, ಮುಸ್ಲಿಮರು ಗುಂಪಾಗಿ ಬರುತ್ತಿರುವ ವಿಡಿಯೋ ಮೇ 3,2022ರಂದು ಈದುಲ್ ಫಿತರ್ ಪ್ರಯುಕ್ತ ಉತ್ತರಾಖಂಡದ ಹರಿದ್ವಾರದ ಜ್ವಾಲಾಪುರ ಈದ್ಗಾದಲ್ಲಿ ನಮಾಝ್ ಮುಗಿಸಿ ಬಂದಿರುವುದಾಗಿ. ಇದು ಇತ್ತೀಚಿನ ವಿಡಿಯೋ ಅಲ್ಲ, ಯಾವುದೇ ಕೋಮು ಸಂಘರ್ಷ, ಪ್ರತಿಭಟನೆಗೆ ಸಂಬಂಧಿಸಿದಲ್ಲ.

ಇದನ್ನೂ ಓದಿ : Fact Check: ‘ಬಾಬ್ರಿ ಮಸೀದಿಯ ಜಾಗ ಮರಳಿ ಮುಸ್ಲಿಮರಿಗೆ ಸಿಗಲಿದೆ’ ಎಂದು ಗ್ರ್ಯಾಂಡ್ ಮುಫ್ತಿ ಎಪಿ ಉಸ್ತಾದ್ ಹೇಳಿದ್ರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...