ಮಹಾರಾಷ್ಟ್ರದ ಶಿವಸೇನೆ ಉದ್ದವ್ ಬಾಳ ಸಾಹೇಬ್ ಠಾಕ್ರೆ (ಯುಬಿಟಿ) ಪಕ್ಷದ ನಾಯಕ ವಿನೋದ್ ಘೋಸಾಲ್ಕರ್ ಅವರ ಪುತ್ರ ಅಭಿಷೇಕ್ ಘೋಸಾಲ್ಕರ್ ಅವರನ್ನು ಫೇಸ್ಬುಕ್ ಲೈವ್ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮುಂಬೈನ ಉಪನಗರ ದಹಿಸಾರ್ನಲ್ಲಿ ನಿನ್ನೆ (ಫೆ.8) ಸಂಜೆ ನಡೆದ ಈ ಘಟನೆ ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಸಿದೆ. ಅಭಿಷೇಕ್ ಘೋಸಾಲ್ಕರ್ಗೆ ಗುಂಡಿಕ್ಕಿದ ಬಳಿಕ ಆರೋಪಿ ಮೌರಿಸ್ ನೊರೊನ್ಹಾ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಶಿವಸೇನೆ ಯುಬಿಟಿ ನಾಯಕ ಸಂಜಯ್ ರಾವುತ್ ಎಕ್ಸ್ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸಿಎಂ ಏಕನಾಥ್ ಶಿಂಧೆ ಜೊತೆ ಆರೋಪಿ ಮೌರಿಸ್ ನೊರೊನ್ಹಾ ಇರುವುದು ಕಂಡು ಬಂದಿದೆ.
महाराष्ट्रात गुंडा राज!
अभिषेक घोसाळकर यांच्यावर गोळ्या झाडणारा मोरिश narohna चार दिवसांपूर्वीच
वर्षा बंगल्यावर होता.मुख्यमंत्री त्याला भेटले. मोरीश याला शिंदे सेनेत येण्याचे आमंत्रण दिले!(वर्षा बंगला गुंड टोळ्यांचा अड्डा झालाय)आज त्यानें अभिषेकवर गोळ्या चालवून बळी घेतला!
फडणविस… pic.twitter.com/px2scxZ4jV— Sanjay Raut (@rautsanjay61) February 8, 2024
“ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವರ್ಷ ಭೂಗತ ಪಾತಕಿಗಳ ಪಾಲಿಗೆ ಸ್ವರ್ಗವಾಗಿ ಬದಲಾಗಿದೆ. ಗೃಹ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವುದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು” ಎಂದು ಫೋಟೋ ಜೊತೆಗೆ ಸಂಜಯ್ ರಾವುತ್ ಬರೆದುಕೊಂಡಿದ್ದಾರೆ.
Second political shooting in a week. Mauris Naronha fired at former corporator Abhishek, son of Shiv Sena (UBT) leader Vinod Ghosalkar. Then Mauris also committed suicide by shooting himself.
Does Maharashtra want to become Bihar? It's difficult..pic.twitter.com/d0BX9VBMdG
— Ashish Singh (@AshishSinghKiJi) February 8, 2024
ಗುಂಡೇಟಿಗೆ ಬಲಿಯಾದ ಮಾಜಿ ಕಾರ್ಪೋರೇಟರ್ ಅಭಿಷೇಕ್ ಘೋಸಾಲ್ಕರ್ ಸಾಮಾಜಿಕ ಕಾರ್ಯಕರ್ತ ಎಂದು ಹೇಳಲಾಗಿರುವ ಆರೋಪಿ ನೊರೊನ್ಹಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಫೇಸ್ಬುಕ್ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲೈವ್ನ ಕೊನೆಯಲ್ಲಿ ನೊರೊನ್ಹಾ ಎದ್ದು ಹೋಗಿದ್ದಾನೆ. ಆತನ ಹಿಂದೆಯೇ ಅಭಿಷೇಕ್ ಘೋಸಾಲ್ಕರ್ ಎದ್ದು ಹೋಗಲು ಅನಿಯಾದಾಗ ಗುಂಡಿನ ದಾಳಿ ನಡೆದಿದೆ. ಅಭಿಷೇಕ್ ಅವರಿಗೆ ಗುಂಡೇಟು ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಆ ಕಡೆಯಿಂದ ಯಾರು ಗುಂಡಿಕ್ಕಿದ್ದಾರೆ ಎಂದು ಗೊತ್ತಾಗಿಲ್ಲ. ಅಭಿಷೇಕ್ ಘೋಸಾಲ್ಕರ್ಗೆ ಅವರ ಜೊತೆಯಿದ್ದ ಮೌರಿಸ್ ನೊರೊನ್ಹಾ ಗುಂಡಿಕ್ಕಿದ್ದು, ಬಳಿಕ ಆತನ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಈಶ್ವರಪ್ಪ ‘ಗುಂಡಿಕ್ಕಿ ಕೊಲ್ಲಿ’ ಹೇಳಿಕೆ: ಗೋಡ್ಸೆ ಸಂತತಿಯವರ ಭಯೋತ್ಪಾದಕ ಮನಸ್ಥಿತಿ ಅನಾವರಣ ಎಂದ ಕಾಂಗ್ರೆಸ್