Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್‌: ಬಬಿಯಾ ಮೊಸಳೆ ಸಸ್ಯಾಹಾರಿಯಲ್ಲ; ವೈರಲ್‌ ಫೋಟೋ ಬಬಿಯಾದ್ದಲ್ಲ

ಫ್ಯಾಕ್ಟ್‌ಚೆಕ್‌: ಬಬಿಯಾ ಮೊಸಳೆ ಸಸ್ಯಾಹಾರಿಯಲ್ಲ; ವೈರಲ್‌ ಫೋಟೋ ಬಬಿಯಾದ್ದಲ್ಲ

ಶೋಭಾ ಕರಂದ್ಲಾಜೆ ಮತ್ತು ಮತ್ತಿತರರು ಸಂತಾಪ ಸೂಚಿಸಿರುವ ಮೊಸಳೆಯ ಕುರಿತು ಆಸಕ್ತಿಕರ ಸಂಗತಿಗಳು ಇಲ್ಲಿವೆ...

- Advertisement -
- Advertisement -

“ಕಾಸರಗೋಡು ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಸಸ್ಯಹಾರಿ ಮೊಸಳೆ ಬಬಿಯಾ ಭಾನುವಾರ ರಾತ್ರಿ ಮೃತಪಟ್ಟಿದೆ. 75 ವರ್ಷದ ಮೊಸಳೆಯು ಭಕ್ತರನ್ನು ಆಕರ್ಷಿಸುತ್ತಿತ್ತು. ದೇವಾಲಯದಿಂದ ನೀಡಲಾಗುತ್ತಿದ್ದ ಅಕ್ಕಿ ಮತ್ತು ಬೆಲ್ಲವನ್ನು ಮಾತ್ರ ಸೇವಿಸುತ್ತಿತ್ತು” ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಭಕ್ತರು ದಿನಕ್ಕೆರಡು ಬಾರಿ ಪ್ರಸಾದವನ್ನು ಅರ್ಪಿಸುತ್ತಿದ್ದರು. 1945ರಲ್ಲಿ ಬ್ರಿಟಿಷ್ ಸೈನಿಕನೊಬ್ಬ ಈ ಲೇಕ್‌ ದೇವಾಲಯದಲ್ಲಿದ್ದ ಮೊಸಳೆಯ ಮೇಲೆ ಗುಂಡು ಹಾರಿಸಿದನು. ಕೆಲವೇ ದಿನಗಳಲ್ಲಿ ಬಬಿಯಾ ದೇವಾಲಯದ ಕೊಳದಲ್ಲಿ ಕಾಣಿಸಿಕೊಂಡಿತು ಎಂಬ ನಂಬಿಕೆಗಳಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೊಸಳೆಗಳು ಮೂಲತಃ ಮಾಂಸಾಹಾರಿ ಪ್ರಾಣಿಗಳಾಗಿದ್ದು, ಎಂದಿಗೂ ಬಬಿಯಾ ಯಾರನ್ನೂ ಹೆದರಿಸಲಿಲ್ಲ. ಸಸ್ಯಾಹಾರಿ ಮೊಸಳೆ ಎಂಬ ಹೆಸರನ್ನೂ ಪಡೆಯಿತು. ಕಳೆದ ಕೆಲವು ದಿನಗಳಿಂದ ಈ ಮೊಸಳೆಯ ಆರೋಗ್ಯ ಸರಿಯಿಲ್ಲದ ಕಾರಣ ಪಶುವೈದ್ಯರಿಂದ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು ಎಂದು ದೇವಸ್ಥಾನದ ಧರ್ಮದರ್ಶಿ ಉದಯಕುಮಾರ್ ಆರ್ ಗಟ್ಟಿ ತಿಳಿಸಿದ್ದಾರೆ.

“ಕಳೆದ ಎರಡು ದಿನಗಳ ಹಿಂದೆ ಬಬಿಯಾ ಆಹಾರಕ್ಕಾಗಿ ಬಂದಿರಲಿಲ್ಲ. ನಾವು ಹುಡುಕಾಟ ನಡೆಸಿದೆವು. ಆದರೆ ಅದು ಪತ್ತೆಯಾಗಲಿಲ್ಲ. ಭಾನುವಾರ ರಾತ್ರಿ ಅದು ಕೆರೆಯಲ್ಲಿ ಸತ್ತಿರುವುದನ್ನು ನಾವು ನೋಡಿದೆವು” ಎಂದು ಅವರು ಹೇಳಿದ್ದಾರೆ.

ಬಬಿಯಾ ದೇವಾಲಯದ ಎಲ್ಲಾ ಸ್ಥಳಗಳಿಗೆ ಪ್ರವೇಶಿಸುತ್ತಿತ್ತು. ದೇವಾಲಯದ ಸುತ್ತಲಿನ ಕೊಳದಲ್ಲಿ ಅಥವಾ ದೇವಾಲಯದ ಮೆಟ್ಟಿಲುಗಳ ಮೇಲೆ ತಿರುಗಾಡುತ್ತಿತ್ತು. ಬಬಿಯಾ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಜೊತೆಗೆ ಇದನ್ನು ಸಸ್ಯಾಹಾರಿ ಮೊಸಳೆಯೆಂದೇ ಬಿಂಬಿಸಿದ್ದಾರೆ. ಯಾವುದೋ ಮೊಸಳೆಯ ಚಿತ್ರವನ್ನು ಬಬಿಯಾ ಎಂದು ತೋರಿಸಿ ಹಂಚಿಕೊಳ್ಳುತ್ತಿದ್ದಾರೆ.

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ, “ಅನಂತಪುರ ಲೇಕ್‌ ದೇವಸ್ಥಾನದ ದೇವರ ಮೊಸಳೆ ಬಬಿಯಾ ವಿಷ್ಣು ಪಾದಕ್ಕೆ ಸೇರಿಕೊಂಡಿದೆ. ದೈವಿಕ ಮೊಸಳೆಯು ಅನಂತಪದ್ಮನಾಭ ಸ್ವಾಮಿಯ ಅನ್ನ ಮತ್ತು ಬೆಲ್ಲದ ಪ್ರಸಾದವನ್ನು ತಿನ್ನುವ ಮೂಲಕ 70 ವರ್ಷಗಳ ಕಾಲ ದೇವಾಲಯದ ಸರೋವರದಲ್ಲಿ ವಾಸಿಸುತ್ತಿತ್ತು ಮತ್ತು ದೇವಾಲಯವನ್ನು ಕಾಪಾಡಿತು. ಆಕೆಗೆ ಸದ್ಗತಿ ಸಿಗಲಿ, ಓಂ ಶಾಂತಿ” ಎಂದು ಬರೆದಿದ್ದಾರೆ.

ಮೊಸಳೆಗೆ ಬಾಗಿ ನಮಿಸುತ್ತಿರುವ ವ್ಯಕ್ತಿಯೊಬ್ಬರ ಫೋಟೋ ಸೇರಿದಂತೆ ಬಬಿಯಾ ಹಾಗೂ ದೇವಸ್ಥಾನದ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಅನೇಕರು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಬಿಯಾ ಮೊಸಳೆ ಸಸ್ಯಾಹಾರಿಯಾಗಿತ್ತು ಎಂದೇ ಬಹುತೇಕ ಮಾಧ್ಯಮಗಳು ವರದಿ ಮಾಡಿವೆ.

ಮೊಸಳೆಗೆ ನಮಿಸುತ್ತಿರುವ ವ್ಯಕ್ತಿಯೊಬ್ಬರ ಚಿತ್ರ ಬಬಿಯಾ ಹೆಸರಲ್ಲಿ ವೈರಲ್ ಆಗುತ್ತಿದೆ. ಇದು ಬಬಿಯಾ ಮೊಸಳೆಗೆ ಸಂಬಂಧಿಸಿದ್ದಲ್ಲ ಎಂದು ‘ಫ್ಯಾಕ್ಟ್‌ಚೆಕ್’ ವೆಬ್‌ಸೈಟ್‌ ‘ಆಲ್ಟ್‌ ನ್ಯೂಸ್‌’ ಸಹಸಂಸ್ಥಾಪಕ ಜುಬೇರ್‌ ಟ್ವೀಟ್ ಮಾಡಿದ್ದಾರೆ.

ಶೋಭಾ ಕರಂದ್ಲಾಜೆಯವರಿಗೆ ವಿಡಿಯೊವೊಂದನ್ನು ಟ್ಯಾಗ್ ಮಾಡಿ ಪ್ರತಿಕ್ರಿಯೆ ನೀಡಿರುವ ಜುಬೇರ್‌, “ಎರಡನೇ ಚಿತ್ರವು ಬಬಿಯಾಗೆ ಸಂಬಂಧಿಸಿಲ್ಲ. ಇದು ಕೋಸ್ಟಾ ರಿಕನ್ ಮೊಸಳೆ ‘ಪೊಚೊ’ ಆಗಿದೆ. ಅದರ ಮಾಸ್ಟರ್ ‘ಗಿಲ್ಬರ್ಟೊ ಶೆಡ್ಡೆನ್’ ಜೊತೆಗಿದ್ದಾರೆ” ಎಂದು ಸ್ವಷ್ಟಪಡಿಸಿದ್ದಾರೆ.

ಎನ್‌ಡಿಟಿವಿ, ರಿಪಬ್ಲಿಕ್ ಟಿವಿ ಸೇರಿದಂತೆ ಕೆಲವು ಮಾಧ್ಯಮಗಳು ನಕಲಿ ಫೋಟೋವನ್ನು ವರದಿ ಮಾಡಿರುವ ಕುರಿತು ಅವರು ಗಮನ ಸೆಳೆದಿದ್ದಾರೆ.

‘ಇದು ಸಸ್ಯಾಹಾರಿ ಮೊಸಳೆಯೇ?’ ಎಂಬ ಪ್ರಶ್ನೆ ಎದ್ದಿದೆ. ಜುಬೇರ್‌ ಮತ್ತೊಂದು ಹಳೆಯ ವಿಡಿಯೊವನ್ನು ಟ್ವೀಟ್‌ ಮಾಡಿ ಕುತೂಹಲ ಹುಟ್ಟಿಸಿದ್ದಾರೆ. ಈ ವಿಡಿಯೊದಲ್ಲಿ ‘ಬಬಿಯಾ’ ಮೊಸಳೆಗೆ ‘ಕೋಳಿ’ಯನ್ನು ಆಹಾರವಾಗಿ ನೀಡುತ್ತಿರುವುದು ದಾಖಲಾಗಿದೆ.

ಫೆಬಿನ್‌ ಎಂಬವರು ಈ ಕುರಿತು ಟ್ವೀಟ್ ಮಾಡಿದ್ದು, “ಹಳೆಯ ಫೇಸ್‌ಬುಕ್ ಪೋಸ್ಟ್‌ವೊಂದರ ಲಿಂಕ್ ಲಗತ್ತಿಸಿದ್ದಾರೆ”. ಕಳೆದ ಜುಲೈ ವೇಳೆ ಇ.ಉನ್ನಿಕೃಷ್ಣನ್ ಅವರು ಮಲಯಾಳಂನಲ್ಲಿ ಬರೆದಿರುವ ಪೋಸ್ಟ್‌ ಬಬಿಯಾ ಕುರಿತು ಮತ್ತಷ್ಟು ಬೆಳಕು ಚೆಲ್ಲುತ್ತದೆ.

ಕಾಲು ಶತಮಾನದ ಮೊದಲು ಅಂದರೆ 1997ರಲ್ಲಿ ಮಾಧ್ಯಮ ಶಿಕ್ಷಣದ ಭಾಗವಾಗಿ ಪ್ರಾಣಿಗಳ ಕುರಿತು ತಯಾರಿಸಿದ ಡಾಕ್ಯುಮೆಂಟರಿಯನ್ನು ಅವರು ಪೋಸ್ಟ್‌ ಮಾಡಿರುವುದನ್ನು ಕಾಣಬಹುದು. “ಕೋಳಿ ತಿನ್ನುವ ಮೊಸಳೆಯನ್ನು ಶುದ್ಧ ಸಸ್ಯಾಹಾರಿಯಾಗಿ ದೇವಾಲಯದ ಜೀರ್ಣೋದ್ಧಾರದ ನಂತರ ಪರಿವರ್ತಿಸಲಾಗಿದೆ” ಎಂದು ಅವರು ಉಲ್ಲೇಖಿಸಿದ್ದಾರೆ. ಬಬಿಯಾ ಮೊಸಳೆಯು ಕೋಳಿ ತಿನ್ನುತ್ತಿರುವುದನ್ನು ಈ ಸಾಕ್ಷ್ಯಚಿತ್ರದ ಹತ್ತನೇ ನಿಮಿಷದ ನಂತರ ಗಮನಿಸಬಹುದು.

ಇದನ್ನೂ ಓದಿರಿ: ಭಾರತ್‌ ಜೋಡೋ ಯಾತ್ರೆ: ರಾಹುಲ್‌ ಕುರಿತು ಸಾಲುಸಾಲು ಸುಳ್ಳುಸುದ್ದಿ ಹರಿಬಿಟ್ಟ ಬಿಜೆಪಿ

ಬಬಿಯಾ ಕುರಿತು ಕೃಷ್ಣಕುಮಾರ್‌ ಹೆಗ್ಡೆ ಎಂಬವರು ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದು ಕನ್ನಡದಲ್ಲಿಯೇ ಮಾಹಿತಿ ಒದಗಿಸಿದ್ದಾರೆ. “ತನ್ನ ಶಾಂತ ಸ್ವಭಾವದಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಅನಂತಪುರ ಸರೋವರ ಕ್ಷೇತ್ರದ ಕೇಂದ್ರಬಿಂದು ಮೊಸಳೆ ಬಬಿಯಾ ವಯೋಸಹಜ ಕಾರಣಗಳಿಂದಾಗಿ ಮೃತಪಟ್ಟಿದೆ. ‘ದೇವರ ಮೊಸಳೆ’ ಎಂದೇ ಕರೆಯಲ್ಪಡುತ್ತಿದ್ದ ಬಬಿಯಾ ಜೀವಂತವಿದ್ದಾಗಲೇ ಅದರ ಬಗ್ಗೆ ಹಲವಾರು ದಂತಕಥೆಗಳಿದ್ದವು. ಅದರಲ್ಲಿ ಬಹಳಷ್ಟು ಸತ್ಯವೂ ಕೂಡ. ಆದರೆ ಅದು ಶುದ್ಧ ಸಸ್ಯಾಹಾರಿ ಎನ್ನುವ ವಿಚಿತ್ರ ಸುದ್ದಿ ಮಾತ್ರ ಶುದ್ದಸುಳ್ಳು” ಎಂದಿದ್ದಾರೆ.

“ಹಿಂದೆ ಭಕ್ತರ ವತಿಯಿಂದ ಬಬಿಯಾನಿಗೆ ಕೋಳಿಗಳನ್ನು ಅರ್ಪಿಸಲಾಗುತ್ತಿತ್ತು. ಅದನ್ನು ಶಾಕಾಹಾರಿಯಾಗಿ ಪರಿವರ್ತಿಸುವ ಹೆಣಗಾಟಗಳ ನಡುವೆ ಅದು ಸರೋವರಕ್ಕೆ ಬರುತ್ತಿದ್ದ ಚಿಕ್ಕ ಪುಟ್ಟ ಹಕ್ಕಿಗಳನ್ನು ಹಿಡಿಯುತ್ತಿದ್ದದ್ದನ್ನೂ ಕಂಡವರು ಧಾರಾಳ ಮಂದಿ ಇದ್ದಾರೆ. ಮಾಂಸಾಹಾರಿಯಾದೊಡನೆ ಅದರ ದಿವ್ಯತೆಯೋ ಭವ್ಯತೆಯೋ ಕಡಿಮೆಯಾಗಲಾರದು. ಮಾಂಸಾಹಾರಿಯಾಗಿಯೂ ಅದು ಅನಂತಪುರ ಕ್ಷೇತ್ರದ ಹೆಮ್ಮೆಯೂ ಹೌದು. ಹೆಗ್ಗುರುತೂ ಹೌದು.. ಅದನ್ನು ಮರೆಮಾಚಿ ನೈಜತೆಯನ್ನು ಬಚ್ಚಿಟ್ಟು ರೋಚಕವಾಗಿಸುವುದರಲ್ಲಿ ಅರ್ಥವಿಲ್ಲ. ಅದೂ ಒಂದು ರೀತಿಯ ವೈದಿಕಶಾಹಿ ಮಾನಸೀಕತೆಯ ಉದಾಹರಣೆಯಷ್ಟೇ” ಎಂದಿರುವ ಅವರು ಹಳೆಯ ಫೋಟೋವೊಂದನ್ನು ಲಗತ್ತಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...