Homeಮುಖಪುಟನಾನು ಕಂಡತೆ ಸಿನಿಮಾ: ಸಿನಿಯಾನ ಅಂಕಣದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ನಾನು ಕಂಡತೆ ಸಿನಿಮಾ: ಸಿನಿಯಾನ ಅಂಕಣದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಇಂತಹ ಸಂದರ್ಭದಲ್ಲಿ ಎಂತ ಚಿತ್ರಗಳನ್ನು ಮಾಡಬೇಕು? ಯಾವ ಕಥೆಗಳನ್ನು ಹೇಳುವುದು? ನನಗೆ ಸಿಕ್ಕಿರುವ ಉತ್ತರ; ನಮ್ಮ ಕಥೆಗಳು, ನಮ್ಮ ಬದುಕು, ನಮ್ಮ ಭಾಷೆ, ಸಂಸ್ಕೃತಿ, ಪ್ರದೇಶದ ನಮ್ಮೊಳಗೆ ಹುದುಗಿರುವ ಕಥೆಗಳು

- Advertisement -
- Advertisement -

ಸಿನಿಯಾನ:10

| ರಾಜಶೇಖರ್ ಅಕ್ಕಿ |

ಸುಮಾರು ನೂರೈವತ್ತು ವರ್ಷಗಳ ಹಿಂದೆ ಶುರುವಾದ ಸಿನೆಮಾ ತನ್ನ ಸುದೀರ್ಘ ಪಯಣವನ್ನು ಕ್ರಮಿಸಿದೆ. ಕಳೆದ ಅರ್ಧ ಶತಮಾನದಲ್ಲಿ ಇಡೀ ವಿಶ್ವವನ್ನೇ ಪ್ರಭಾವಿಸಿದ ಮಾಧ್ಯಮ ಸಿನೆಮಾ. ನಮ್ಮ ದೇಶದಲ್ಲಂತೂ ಸಿನೆಮಾ ಪ್ರಭಾವ ಎಷ್ಟಿದೆಯೆಂದರೆ, ಇತರ ಹಲವು ದೇಶಗಳ ಸಿನೆಮಾಗಳಲ್ಲಿ ಮಾಡುವಂತೆ ಸಿನೆಮಾಕ್ಕೆ ಸಂಬಂಧವಿಲ್ಲದೇ ಯಾರನ್ನೂ ಚಿತ್ರಗಳಲ್ಲಿ ಕಾಸ್ಟಿಂಗ್ ಮಾಡೋದು ತುಂಬಾ ಕಷ್ಟ. ಏಕೆಂದರೆ ಅವರಿಗೆ ಒಂದು ಸೀನ್ ಮಾಡು ಎಂದ ಕೂಡಲೇ ಯಾವುದೋ ಒಬ್ಬ ನಟನನ್ನು ಅನುಕರಿಸತೊಡಗುತ್ತಾರೆ.

ಇರಲಿ, ಸಿನೆಮಾ ಒಂದು ಮಾಧ್ಯಮ, ಕಥೆ ಹೇಳುವ ಮಾಧ್ಯಮ. ಚಲಿಸುವ ಚಿತ್ರಗಳನ್ನು ಜೋಡಿಸಿ (justaposition) ಕಥೆಯನ್ನು ಹೇಳುವ ನೇರ ಮಾಧ್ಯಮವೇ ಸಿನೆಮಾ. ಹೌದು ಸಿನೆಮಾ ನೇರ. ಬೇರೆಲ್ಲ ಕಥೆ ಹೇಳುವ ಮಾಧ್ಯಮಗಳಲ್ಲಿ ಕಥೆ ಪ್ರೇಕ್ಷಕನ ತಲೆಯಲ್ಲಿ ಮೂಡಿಬರುತ್ತದೆ. ಒಂದು ಕಾದಂಬರಿ ಎಂದರೆ ಅಲ್ಲಿರುವುದು ಹಾಳೆ ಮತ್ತು ಅಕ್ಷರಗಳಷ್ಟೇ, ಆದರೆ ಅದರಿಂದ ಕಥೆ ಮೂಡುವುದು ತಮ್ಮ ತಲೆಯೊಳಗೆ. ನಾಟಕಕ್ಕೆ ಬಂದಾಗ ಸಸ್ಪೆನ್ಷನ್ ಆಫ್ ಡಿಸ್‍ಬಿಲೀಫ್ ಎನ್ನುವ ಪ್ರಕ್ರಿಯೆ ನಮ್ಮ ತಲೆಯೊಳಗೆ ನಡೆಯುತ್ತಿರುತ್ತದೆ. ನಮ್ಮೆದುರಿಗೆ ಕಾಣುತ್ತಿರುವುದು ಮನೆಯ ಸೆಟ್ ಎಂದು ಗೊತ್ತಿದ್ದರೂ, ಚೂರಿ ಹಾಕಿಕೊಂಡು ಸಾಯುತ್ತಿರುವ ನಟನ ಹೊಟ್ಟೆಯಿಂದ ಹೊರಬರುತ್ತಿರುವುದು ಕೆಂಪು ಕರ್ಚೀಫ್ ಎಂದು ಗೊತ್ತಿದ್ದರೂ ನಾವು ಅಲ್ಲಿ ಅಪನಂಬಿಕೆಯಿಂದ ನೋಡುವುದಿಲ್ಲ. ನಟರು ಏನು ಹೇಳಬಯಸುತ್ತಿದ್ದಾರೋ ಅದನ್ನೇ ನಂಬುವ ಪ್ರಯತ್ನ ನಾವು ಮಾಡುತ್ತಿರುತ್ತೇವೆ. ಆದರೆ ಸಿನೆಮಾ ಹಾಗಲ್ಲ. ಪರದೆಯ ಮೇಲೆ ನಡೆಯುವುದೇ ಸತ್ಯ.

ಇನ್ನು ಕಥೆ ಅಂದರೆ ಏನು? ಇದನ್ನು ವಿವರಿಸುವುದೇ ಕಷ್ಟ. ಕಥೆ ಎನ್ನುವುದು ಸಾರ್ವತ್ರಿಕವಾಗಿದ್ದರೂ ಸಿನೆಮಾಗೆ ಬರೆಯುವ ಕಥೆಗೆ ಕೆಲವು ಮಿತಿಗಳಿರುತ್ತವೆ. ಕಥೆಯ ಒಂದು ವ್ಯಾಖ್ಯೆಯನ್ನು ರಚಿಸಲು ನನಗೆ ಸಾಧ್ಯವಾಗಿಲ್ಲ. ಅದಕ್ಕೆ ಪ್ರಾರಂಭ, ಮಧ್ಯ ಮತ್ತು ಅಂತ್ಯವಿರುತ್ತದೆಯೆಂತಲೂ, ಅದರಲ್ಲಿ ಸಂಘರ್ಷವಿರುತ್ತದೆಯೆಂತಲೂ ಮತ್ತು ಅದಕ್ಕೊಂದು ಸ್ಟ್ರಕ್ಷರ್ ಇರುತ್ತದೆಯೆಂದೂ ಹೇಳುತ್ತಿರುತ್ತೇನೆ. ಇವುಗಳಲ್ಲಿ ನಾನು ಹೆಚ್ಚು ಒತ್ತು ನೀಡುವುದು ಸ್ಟ್ರಕ್ಚರ್ ಮೇಲೆಯೇ.

ಜಗತ್ತಿನ ಎಲ್ಲಾ ವಸ್ತುಗಳಿಗೂ ಒಂದು ಸ್ಟ್ರಕ್ಚರ್ ಇರುತ್ತೆ. ಕೆಲವು ವಸ್ತುಗಳ ಸ್ಟ್ರಕ್ಷರ್ ನಾವು ಕಾಣಬಹುದು ಇನ್ನಿತರ ವಸ್ತುಗಳ ಸ್ಟ್ರಕ್ಚರ್ ಕಾಣದೇ ಇರಬಹುದು. ನಮಗೆ ಇಲ್ಲಿ ಬೇಕಿರುವ ಸ್ಟ್ರಕ್ಚರ್ ಎಂದರೆ, ಯಾವುದೇ ಒಂದು ವಸ್ತು ಮನುಷ್ಯನ ಬಳಕೆಗೆ ಬರುತ್ತೆ ಅಂದರೆ ಅದಕ್ಕೆ ಅದರದೇ ಆದ ಸ್ಟ್ರಕ್ಚರ್ ಇರುತ್ತೆ. ಒಂದು ಟೇಬಲ್‍ಗೆ ನಾಲ್ಕು ಕಾಲುಗಳು ಒಂದು ಹಲಗೆಯದ್ದೋ, ಕಟ್ಟಿಗೆಯದ್ದೋ ಟಾಪ್ ಇರುತ್ತೆ, ಕುರ್ಚಿಗೂ ನಾಲ್ಕು ಕಾಲುಗಳು, ಒಂದು ಟಾಪ್ ಜೊತೆಗೆ ಬೆನ್ನೂ ಇರುತ್ತೆ. ಇದು ಅವುಗಳ ಸ್ಟ್ರಕ್ಚರ್. ಕಾಲು, ಟಾಪ್ ಮತ್ತು ಇನ್ನಿತರ ವಸ್ತುಗಳ ಅನುಪಾತವೂ ಸರಿಯಾಗಿರಬೇಕು ಇಲ್ಲದಿದ್ದರೆ ಅದರ ಉದ್ದೇಶಕ್ಕೆ ಅದು ಪೂರಕವಾಗುವುದಿಲ್ಲ; ತನ್ನ ಕಾರ್ಯ ನಿರ್ವಹಿಸಲಾಗುವುದಿಲ್ಲ. ಅದೇ ರೀತಿ ಕತೆಗೂ ತನ್ನದೇ ಆದ ಸ್ಟ್ರಕ್ಚರ್ ಇರುತ್ತೆ. ಆ ಸ್ಟ್ರಕ್ಚರ್ ಕೆಟ್ಟಾಗ ಸಿನೆಮಾ ಪ್ರೇಕ್ಷಕರ ಗಮನವನ್ನು ಹಿಡಿದಿಡಲು ಆಗುವುದಿಲ್ಲ. ಒಂದು ಕುರ್ಚಿಯನ್ನು ಎಷ್ಟೇ ಸುಂದರವಾಗಿ ರಚಿಸಬೇಕೆಂದರೂ ಮೊದಲು ಅದರ ಸ್ಟ್ರಕ್ಚರ್ ಗಟ್ಟಿಗೊಳಿಸಿದ ನಂತರವೇ. ಸಿನೆಮಾ ವಿಷಯದಲ್ಲಿ ಅನೇಕರು ಈ ನಿಟ್ಟಿನಲ್ಲಿ ವಿಫಲರಾಗುತ್ತಾರೆ. ತಮಗಿಷ್ಟವಾದ ಭಾವನೆಗಳು, ವಿಷಯಗಳು, ಪಾತ್ರಗಳು, ಸನ್ನಿವೇಶಗಳನ್ನು ಸುಂದರವಾಗಿ ಬರೆದು ಚಿತ್ರೀಕರಿಸಿದಾಗ ಆ ಸುಂದರತೆಯೇ ಸ್ಟ್ರಕ್ಚರ್‍ಗೆ ಅಡ್ಡಿಯಾಗಿ ಸಿನೆಮಾ ಕುಸಿದು ಬೀಳುವ ಸಾಧ್ಯತೆಯಿರುತ್ತದೆ.

ಗಟ್ಟಿಯಾದ ಸ್ಟ್ರಕ್ಚರ್ ಹೊಂದುವುದು ಹೇಗೆ? ಅನೇಕ ಸಿನೆಮಾ ಪಂಡಿತರು ಅನೇಕ ರೀತಿಯಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ನಮ್ಮ ಕಥೆಯನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಹೇಳುವುದು, ಕಥೆಯ ಉದ್ದೇಶವನ್ನು ಸ್ಪಷ್ಟಪಡಿಸುವುದು, ಕಥೆಯ ಪ್ರಮುಖ ಅಂಶಕ್ಕೆ ಪೂರಕವಾಗಿದ್ದನ್ನು ಮಾತ್ರ ಇಟ್ಟುಕೊಂಡು ಮಿಕ್ಕಿದನ್ನು ತೆಗೆದು ಬಿಸಾಕುವುದು, ಹೀಗೆ ಹಲವಾರು ರೀತಿಯಲ್ಲಿ ನಮ್ಮ ನಮ್ಮ ಉತ್ತರವನ್ನು ಕಂಡುಕೊಳ್ಳಬಹುದು.

ಸಿನೆಮಾ ಎಂದರೆ ಬೆಳಕು, ನೆರಳು, ಕನಸು, ವಾಸ್ತವಗಳ ಆಟ ಎಂದು ಪಿ. ಲಂಕೇಶ್ ಹೇಳಿದ್ದ ನೆನಪು. ಕಲೆಯ ಇತರ ಮಾಧ್ಯಮಗಳಲ್ಲೂ ಇವು ಇದ್ದರೂ ಸ್ಪಷ್ಟವಾಗಿ ವ್ಯಕ್ತವಾಗುವುದು ಸಿನೆಮಾದಲ್ಲಿಯೇ. ನಮ್ಮ, ನಮ್ಮ ಸಮಾಜದ ಇತಿಹಾಸ, ವರ್ತಮಾನ ಮತ್ತು ಭವಿಷ್ಯಗಳು, ಕಥೆಗಾರ ಗ್ರಹಿಸಿದಂತೆ ಸಿನೆಮಾದಲ್ಲಿ ಮೂಡಿಬರುತ್ತವೆ. ನಮ್ಮ ಸುತ್ತಲಿನ ಕಥೆಗಳು, ನಮ್ಮ ಕನಸುಗಳೇ ಕಥೆಗೆ ಸ್ಫೂರ್ತಿ. ಅಮೆರಿಕದ ಅಂದರೆ ಹಾಲಿವುಡ್ ಸಿನೆಮಾಗಳನ್ನು ನೋಡಿದರೆ, ಅವುಗಳನ್ನು ಪ್ರಭಾವಿಸುವುದು ಅವರುಗಳ ಕನಸುಗಳು. ಅಮೆರಿಕಾ ಹೊಸ ದೇಶವಾದುದರಿಂದ, ಅಲ್ಲಿರುವ ಎಲ್ಲರೂ ವಲಸಿಗರಾದುದರಿಂದ ಅವರ ಕಲ್ಪನೆಗಳೇ ಅವರ ಚಿತ್ರಗಳನ್ನು ರೂಪಿಸುತ್ತವೆ. ಅದರೊಂದಿಗೆ, ಅನೇಕ ನಿರ್ದೇಶಕರು ತಮ್ಮ ಜೀವನದ ಅನೇಕ ಹುಡುಕಾಟಗಳನ್ನು ಅವರ ಚಿತ್ರಗಳಲ್ಲಿಯೇ ಮಾಡುತ್ತಾರೆ. ಕೆಲವರು ಮನುಕುಲದ ಭವಿಷ್ಯದ ಪ್ರಶ್ನೆಗೆ ಉತ್ತರ ಹುಡುಕಿದರೆ, ಕೆಲವರು ಜೀವನದ ಸಾರ್ಥಕತೆಗೂ, ಕೆಲವರು ಮನುಷ್ಯನ, ಸಮಾಜದ ಕೆಡುಕಿನ, ಒಳ್ಳೇತನದ ಆಳದ ಪ್ರಶ್ನೆಗೆ ಉತ್ತರ ಹುಡುಕಿದರೆ, ಇನ್ನಿತರರು ದೇಶಕಾಲಗಳನ್ನು ಮೀರಲು ಪ್ರಯತ್ನಿಸುತ್ತ ಮನುಷ್ಯನ ಕಲ್ಪನಾಶಕ್ತಿಯನ್ನೇ ಒರೆಗೆ ಹಚ್ಚುತ್ತಾರೆ.

ಇದು ಹಾಲಿವುಡ್. ವಿಶ್ವದ ಎಲ್ಲೆಡೆ ಪ್ರಸಿದ್ಧವಾಗಿರುವ ಹಾಲಿವುಡ್ ಸಿನೆಮಾಗಳಿಗೆ ಕೆಲವು ದೇಶಗಳಲ್ಲಿ ಪ್ರವೇಶವಿಲ್ಲ. (ಈಗ ಇಂಟರ್‍ನೆಟ್ ಬಂದ ಮೇಲೆ ಪರಿಸ್ಥಿತಿ ಬೇರೆ ಆಗಿರಬಹುದು). ಅಂತಹ ಒಂದು ದೇಶ ಇರಾನ್. ವಿಶ್ವದಲ್ಲಿ ಯುರೋಪಿಯನ್ ಮತ್ತು ಹಾಲಿವುಡ್ ಸಿನೆಮಾಗಳ ನಂತರ ಹೆಚ್ಚು ಪ್ರಸಿದ್ಧವಿರುವ ಸಿನೆಮಾಗಳು ಇರಾನಿನ ಸಿನೆಮಾಗಳು. ಹಾಲಿವುಡ್ ಅಲ್ಲಿಗೆ ತಲುಪದಿರುವುದು ಅಲ್ಲಿ ಒಳ್ಳೇ ಪರಿಣಾಮವೇ ಬೀರಿದೆ. ಆ ಚಿತ್ರಗಳು, ಅಲ್ಲಿಯ ನಿರ್ದೇಶಕರಿಗೆ ಅನುಕರಿಸಲು ಯಾವುದೇ ಚಿತ್ರಗಳಿರಲಿಲ್ಲ. ಅಲ್ಲಿಯ ನೋಡುಗರಿಗೂ ತಮ್ಮ ಚಿತ್ರಗಳಿಂದ ಇಂತಹದ್ದೇ ಆದ ನಿರೀಕ್ಷೆಗಳಿರಲಿಲ್ಲ. ಹಾಗಾಗಿ, ಅವರು ತಮ್ಮ ಕಥೆಗಳನ್ನೇ ಹೇಳಲು ಪ್ರಾರಂಭಿಸಿದರು. ಅಲ್ಲಿ ತಾಂತ್ರಿಕತೆ ಪ್ರದರ್ಶನವಿಲ್ಲ, ಸಾಹಸದೃಶ್ಯಗಳಿಲ್ಲ, ಹಾಡುಗಳಿಲ್ಲ, ಕುಣಿತವಿಲ್ಲ, ಸೆನ್ಸಾರ್ ಕಾರಣದಿಂದ ಲೈಂಗಿಕ ದೃಶ್ಯ ಬಿಡಿ, ತಲೆಗೆ ಸ್ಕಾರ್ಫ್ ಹಾಕದ ಮಹಿಳೆಯರಿಲ್ಲ. ಈ ಇತಿಮಿತಿಗಳೇ ಇರಾನಿನ ಸಿನೆಮಾಗೆ ವರದಾನವಾದವು, ಅಥವಾ ಅಲ್ಲಿಯ ನಿರ್ದೇಶಕರು ವರದಾನವಾಗಿ ಬಳಸಿಕೊಂಡು ಇರಾನಿನ ಸಮಾಜವನ್ನು ಜಗತ್ತಿನೆದುರಿಗೆ ತಂದಿಟ್ಟರು.

ಭಾರತದಲ್ಲಿ ಹಾಗಾಗಲಿಲ್ಲ. ನಮ್ಮ ಅನೇಕ ಶ್ರೇಷ್ಠ ನಿರ್ದೇಶಕರು ಪಶ್ಚಿಮದಿಂದ ಪ್ರಭಾವಿತರಾದವರು. ಅದರಿಂದ ಅನೇಕ ಒಳ್ಳೆಯ ಚಿತ್ರಗಳೂ, ಅದಕ್ಕಿಂತ ಹೆಚ್ಚು ಕೆಟ್ಟ ಚಿತ್ರಗಳು ಮೂಡಿ ಬಂದವು. ನಮ್ಮ ಅನೇಕ ಚಿತ್ರಗಳಿಗೆ ಇತರ ಚಿತ್ರಗಳೇ ಸ್ಫೂರ್ತಿ. ಜೀವನವು ಕಲೆಗೆ ಸ್ಫೂರ್ತಿಯಾಗಿ, ಕಲೆಯು ಜೀವನಕ್ಕೆ ಸ್ಫೂರ್ತಿಯಾಗಬೇಕು ಎನ್ನುವುದು ನಮ್ಮ ಚಿತ್ರರಂಗಕ್ಕೆ ಅಷ್ಟು ಅನ್ವಯವಾಗಲಿಲ್ಲ. 50 ಅಥವಾ 60ರ ದಶಕದಲ್ಲಿ ಸಿನೆಮಾಗಳು ಜನಪ್ರಿಯವಾಗತೊಡಗಿದಾಗ ನಮ್ಮ ಸಮಾಜವೇ ಭಿನ್ನವಾಗಿತ್ತು. ಮನರಂಜನೆಯ ಸಾಧನಗಳು ಇದ್ದವಾದರೂ ಸಿನೆಮಾದ ಆಗಮನ ಸಮಾಜದಲ್ಲಿ ಸಂಚಲನ ಮೂಡಿಸಿತು. ಬೆಳ್ಳಿ ಪರದೆಯ ಮೇಲೆ ಚಲಿಸುವ ಚಿತ್ರಗಳನ್ನು ನೋಡುವುದೇ ಮನರಂಜನೆಯಾಗಿತ್ತು, ಅಂತಹ ಸಂದರ್ಭದಲ್ಲಿ ಪೌರಾಣಿಕ, ಸಾಮಾಜಿಕ ಚಿತ್ರಗಳೂ, ಸಕಲಗುಣಸಂಪನ್ನ ನಾಯಕನನ್ನು ದೊಡ್ಡ ಪರದೆಯ ಮೇಲೆ ನೋಡುವುದು ಎಷ್ಟು ಖುಷಿ ಕೊಟ್ಟಿರಬಹುದು ಎನ್ನುವುದು ನಮಗೆ ಈಗ ಊಹಿಸಲೂ ಆಗದು. ಆದರೆ ಆ ಕಾಲಘಟ್ಟ ಮುಗಿದಿದೆ. ಮೊಬೈಲ್ ಪರದೆಯ ಮೇಲೇ ಸಿನೆಮಾ ನೋಡಬಹುದು, ವಿಶ್ವದ ಶ್ರೇಷ್ಠ ಸಾಹಸ ದೃಶ್ಯಗಳನ್ನು ನಮ್ಮ ಕೈಅಳತೆಯಲ್ಲಿವೆ, ಎಲ್ಲಾ ಬಗೆಯ ಚಿತ್ರಗಳ ಶ್ರೇಷ್ಠ ಕೊಡುಗೆಗಳನ್ನು ಬೇಕಾದಾಗ ನೋಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಎಂತ ಚಿತ್ರಗಳನ್ನು ಮಾಡಬೇಕು? ಯಾವ ಕಥೆಗಳನ್ನು ಹೇಳುವುದು? ನನಗೆ ಸಿಕ್ಕಿರುವ ಉತ್ತರ; ನಮ್ಮ ಕಥೆಗಳು, ನಮ್ಮ ಬದುಕು, ನಮ್ಮ ಭಾಷೆ, ಸಂಸ್ಕೃತಿ, ಪ್ರದೇಶದ ನಮ್ಮೊಳಗೆ ಹುದುಗಿರುವ ಕಥೆಗಳು. ಒಳಗಿನಿಂದ ಬಂದ ಕಥೆಗಳಿಗೆ ಯಾವುದೇ ಕಾಂಪಿಟೇಷನ್ ಇರುವುದಿಲ್ಲ.

ಇದನ್ನು ಓದಿರಿ ಪರದೆಯ ಮೇಲೆ ವರ್ಲ್ಡ್ ವಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...