Homeಮುಖಪುಟಕಾಶ್ಮೀರದಲ್ಲಿ ಹೊಸ ಪಕ್ಷ ಉದಯ: ಐವರಿಂದ ಪತ್ರಿಕಾಗೋಷ್ಟಿ, ಎಲ್ಲರಲ್ಲಿ ಆಶ್ಚರ್ಯ..

ಕಾಶ್ಮೀರದಲ್ಲಿ ಹೊಸ ಪಕ್ಷ ಉದಯ: ಐವರಿಂದ ಪತ್ರಿಕಾಗೋಷ್ಟಿ, ಎಲ್ಲರಲ್ಲಿ ಆಶ್ಚರ್ಯ..

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರಕ್ಕೆ ಹೊಸ ದಾರಿ ಮತ್ತು ಹೊಸ ನಾಯಕತ್ವವನ್ನು ತೋರಿಸಲು ಹೊಸ ರಾಜಕೀಯ ಪಕ್ಷವನ್ನು ಐವರು ಅಪರಿಚಿತರು ಆರಂಭಿಸಿದ್ದಾರೆ! 370ನೇ ವಿಧಿಯನ್ನು ರದ್ದುಪಡಿಸಿದ ನಂತರ ನಡೆದ ದೊಡ್ಡ ರಾಜಕೀಯ ಬೆಳವಣಿಗೆ ಇದಾಗಿದ್ದು ಕಾಶ್ಮೀರದ ಎಲ್ಲಾ ರಾಜಕೀಯ ನಾಯಕರು ಗೃಹಬಂಧನದಲ್ಲಿರುವಾಗ ಇವರಿಗೆ ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ ರಾಜಕೀಯ ಪಕ್ಷ ಘೋಷಿಸಲು ಅನುಮತಿ ಕೊಟ್ಟವರ್ಯಾರು ಎಂಬ ಪ್ರಶ್ನೆ ಈಗ ಎಲ್ಲರಲ್ಲಿ ಮೂಡಿದೆ.

ಐವರು ಪುರುಷರು ತಮ್ಮ ಪಕ್ಷವನ್ನು ಜಮ್ಮು ಕಾಶ್ಮೀರ ರಾಜಕೀಯ ಚಳವಳಿ- I ಎಂದು ಗುರುತಿಸಿದ್ದಾರೆ. “ಭಾರತ”ದೊಂದಿಗೆ ಭದ್ರವಾಗಿ ನಿಲ್ಲುತ್ತೇವೆ ಎಂದು ಘೋಷಿಸಿರುವ ಅವರನ್ನು ವಕ್ತಾರ ಶಾಹಿದ್ ಖಾನ್, ವಕೀಲ ರಾಜಾ ಅಶ್ರಫ್, ಮತ್ತು ಮುಷ್ತಾಕ್ ತಂತರಿ ಎಂದು ಗುರುತಿಸಲಾಗಿದೆ.

ಆಗಸ್ಟ್ 5ರ ನಂತರ ಕಾಶ್ಮೀರದಲ್ಲಿ ನಡೆದ ಮೊದಲ “ಅಧಿಕೃತೇತರ” ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಬೇರೆ ಯಾರೂ ಮಾಡದ” ಸಮಯದಲ್ಲಿ ಮಾತನಾಡಲು ಧೈರ್ಯ ಮಾಡುವ ಮೂಲಕ ತಮ್ಮ ಜೀವನವನ್ನು ಅಪಾಯದಲ್ಲಿಟ್ಟಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ.

ತಾವು ಪ್ರಗತಿಪರ ಮನಸ್ಸನ್ನು ಹೊಂದಿದ್ದಾರೆಂದು ಹೇಳಿಕೊಂಡಿರುವ ಅವರು “370ನೇ ವಿಧಿ ರದ್ದತಿ ನಂತರ ಕಾಶ್ಮೀರದ ಬಗ್ಗೆ ಮಾಧ್ಯಮಗಳು ನಕಾರಾತ್ಮಕತೆಯನ್ನು ತೋರಿಸುವುದನ್ನು ಬಿಟ್ಟು ಸಕಾರಾತ್ಮಕತೆಯನ್ನು ತೋರಿಸಬೇಕೆಂದು ಮಾಧ್ಯಮವನ್ನು ಒತ್ತಾಯಿಸಿದರು.

ಶಾಹಿದ್ ಖಾನ್ ಅವರು ತಮ್ಮನ್ನು ಮಾಜಿ ಪತ್ರಕರ್ತ ಎಂದು ಪರಿಚಯಿಸಿಕೊಂಡಿದ್ದಲ್ಲದೇ ನನ್ನನ್ನು ಇಲ್ಲಿರುವ ಅನೇಕರ ಬಲ್ಲರು ಎಂದರು. ಆದರೆ ಹಾಜರಿದ್ದ ವರದಿಗಾರರು ಆತನನ್ನು ತಿಳಿದಿಲ್ಲವೆಂದು ಹೇಳಿದ್ದಾರೆ.

ಸೋಮವಾರದ ಪತ್ರಿಕಾಗೋಷ್ಟಿ ನಡೆಸಲು ಸರ್ಕಾರ ಅವರಿಗೆ ಅನುಮತಿ ನೀಡಿದೆ ಎಂದು ಅವರು ಹೇಳಿದ್ದಾರೆ. ಕಾಶ್ಮೀರದ ಮುಖ್ಯವಾಹಿನಿಯ ಮತ್ತು ಪ್ರತ್ಯೇಕತಾವಾದಿ ನಾಯಕರು ಜೈಲಿನಲ್ಲಿರುವ ಸಮಯದಲ್ಲಿ ಇದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ. ಜೊತೆಗೆ ಹಲವಾರು ಟಿವಿ ಚಾನೆಲ್‌ಗಳ ಸಿಬ್ಬಂದಿಗಳು ಈ ಪತ್ರಿಕಾಗೋಷ್ಟಿಯನ್ನು ನೇರ ಪ್ರಸಾರ ಮಾಡುದ್ದಾರೆ ಮತ್ತು ಅದಕ್ಕೆ ಇನ್ನಿಲ್ಲದ ಪ್ರಾಮುಖ್ಯತೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಅವರು ಯಾರೆಂದು ಪತ್ರಕರ್ತರು ಪದೇ ಪದೇ ಕೇಳಿದಾಗ, ಅವರು “ಸಾಮಾನ್ಯ” ಮತ್ತು “ಸಾಮಾನ್ಯ” ಪುರುಷರು ಎಂದು ಸಿದ್ದಉತ್ತರ ನೀಡಿದ್ದಾರೆ.

“ನಾವು ಯಾರೆಂದು ನೀವು ಕೇಳುತ್ತಿದ್ದೀರಿ. ಅದಕ್ಕಾಗಿಯೇ ನಾವು ಮುಂದೆ ಬರಲು ಬಯಸುವುದಿಲ್ಲ. ಸದ್ಯಕ್ಕೆ ನಾವು ಏನೂ ಅಲ್ಲ…. ನಮ್ಮನ್ನು ಬಲ್ಲವರು ಹೆಚ್ಚು ಇಲ್ಲ. ಮುಂದೆ ಇಂತಹ ಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಅನೇಕ ಜನರು ನಮ್ಮ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳುತ್ತಾರೆ ಎಂದು ನಮಗೆ ತಿಳಿದಿದೆ” ಖಾನ್ ಹೇಳಿದ್ದಾರೆ.

ನಿಮ್ಮ ಪಕ್ಷವು ಜಮ್ಮು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಮಾಡುವುದನ್ನು ಬೆಂಬಲಿಸುತ್ತದೆಯೇ ಅಥವಾ ಅದನ್ನು ಪುನಃಸ್ಥಾಪಿಸಲು ಒತ್ತಾಯಿಸುತ್ತದೆಯೇ ಎಂಬ ಪ್ರಶ್ನೆಗೆ ಅವರ ಬಳಿ ಯಾವುದೇ ಸ್ಪಷ್ಟ ಉತ್ತರಗಳಿಲ್ಲ. “ವಿಶೇಷ ಸ್ಥಾನಮಾನ ಕಳೆದ 60-70 ವರ್ಷಗಳಿಂದ ನಮ್ಮೊಂದಿಗೆ ಇತ್ತು. ಇದನ್ನು ತೆಗೆದುಹಾಕುವಂತೆ ಯಾರೂ ಒತ್ತಾಯಿಸಲಿಲ್ಲ. ನಾವು ಬಹಳಷ್ಟು ಸಂಗತಿಗಳೊಂದಿಗೆ ಬದುಕುತ್ತೇವೆ. ಅದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುದನ್ನು ಕಾಲವೇ ಉತ್ತರಿಸಲಿದೆ”ಎಂದು ಖಾನ್ ಹೇಳಿದ್ದಾರೆ.

ಇವರ ಈ ಪತ್ರಿಕಾಗೋಷ್ಟಿಯು ಉತ್ತರ ಕೊಡುವುದರ ಬದಲು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಸಿದೆ. ಕಾಶ್ಮೀರದ ಎಲ್ಲಾ ರಾಜಕೀಯ ನಾಯಕರು ಗೃಹಬಂಧನದಲ್ಲಿರುವಾಗ ಇವರಿಗೆ ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ ರಾಜಕೀಯ ಪಕ್ಷ ಘೋಷಿಸಲು ಅನುಮತಿ ಕೊಟ್ಟವರ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಮುಂದೆ ಇದು ಯಾವ ರೀತಿಯ ತಿರುವು ತೆಗೆದುಕೊಳ್ಳುತ್ತದೆ ನೋಡಬೇಕಿದೆ.

ಮಾಹಿತಿ: ದಿ ಟೆಲಿಗ್ರಾಫ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read