ಲಡಾಖ್ನಲ್ಲಿನ ಗಾಲ್ವಾನ್ ಕಣಿವೆ ಗಡಿ ಪ್ರದೇಶದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ಗೆ 5 ಪ್ರಶ್ನೆಗಳನ್ನು ಕೇಳಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಟ್ವೀಟ್ ಮಾಡಿ “ಗಾಲ್ವಾನ್ನಲ್ಲಿನ ಸೈನಿಕರ ನಷ್ಟವು ತುಂಬಾ ಕಳವಳಕಾರಿ ಮತ್ತು ನೋವಿನ ಸಂಗತಿಯಾಗಿದೆ. ನಮ್ಮ ಸೈನಿಕರು ಕರ್ತವ್ಯದ ಸಾಲಿನಲ್ಲಿ ಅನುಕರಣೀಯ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದರು ಮತ್ತು ಭಾರತೀಯ ಸೇನೆಯ ಅತ್ಯುನ್ನತ ಸಂಪ್ರದಾಯಗಳಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು” ಎಂದಿದ್ದರು. ಇದಕ್ಕೆ ಉತ್ತರಿಸಿರುವ ರಾಹುಲ್ ಗಾಂಧಿ
ಅದು ತುಂಬಾ ನೋವಿನಿಂದ ಕೂಡಿದ್ದರೆ:
1. ನಿಮ್ಮ ಟ್ವೀಟ್ನಲ್ಲಿ ಚೀನಾ ಹೆಸರಿಸದೆ ಭಾರತೀಯ ಸೇನೆಯನ್ನು ಏಕೆ ಅವಮಾನಿಸುತ್ತೀರಿ?
2. ಸಂತಾಪ ಸೂಚಿಸಲು 2 ದಿನಗಳನ್ನು ಏಕೆ ತೆಗೆದುಕೊಳ್ಳಬೇಕು?
3. ಸೈನಿಕರು ಹುತಾತ್ಮರಾಗುತ್ತಿದ್ದರೂ ರ್ಯಾಲಿಗಳನ್ನು ಏಕೆ ನಡೆಸುತ್ತಿದ್ದೀರಿ?
4. ಕ್ರೋನಿ ಮಾಧ್ಯಮಗಳು ಸೈನ್ಯವನ್ನು ದೂಷಿಸುತ್ತಿರುವಾಗ ಏಕೆ ಅವಿತುಕೊಂಡಿದ್ದೀರಿ?
5. ಭಾರತ ಸರ್ಕಾರದ ಬದಲಿಗೆ ಪೇಯ್ಡ್ ಮಾಧ್ಯಮಗಳು ಸೈನ್ಯವನ್ನು ದೂಷಿಸುವುದು ಏಕೆ?
ಎಂದು ರಾಹುಲ್ ರಕ್ಷಣಾ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
If it was so painful:
1. Why insult Indian Army by not naming China in your tweet?
2. Why take 2 days to condole?
3. Why address rallies as soldiers were being martyred?
4. Why hide and get the Army blamed by the crony media?
5. Why make paid-media blame Army instead of GOI? https://t.co/mpLpMRxwS7— Rahul Gandhi (@RahulGandhi) June 17, 2020
ಇದನ್ನೂ ಓದಿ: ಗಡಿಯಲ್ಲಿ ಸೈನಿಕರ ಸಾವು: ಆಳುವವರ ಮೌನ ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು – ಸಿದ್ದರಾಮಯ್ಯ
ರಾಹುಲ್ ಗಾಂಧಿ ಸರಿಯಾದ ಪ್ರಶ್ನೆಗಳನ್ನು ಕೇಳಿದ್ದಾರೆ.