Homeನ್ಯಾಯ ಪಥಪುಟಕ್ಕಿಟ್ಟ ಪುಟಗಳು: ಶುಭ ಸಂದೇಶ ಹೊಸ ಒಡಂಬಡಿಕೆ - ಯೋಗೇಶ್ ಮಾಸ್ಟರ್

ಪುಟಕ್ಕಿಟ್ಟ ಪುಟಗಳು: ಶುಭ ಸಂದೇಶ ಹೊಸ ಒಡಂಬಡಿಕೆ – ಯೋಗೇಶ್ ಮಾಸ್ಟರ್

ಬಸವನ ಕುರುಹನ್ನು ಉಳಿಸಿ ವಿಜೃಂಭಿಸಲು ಪ್ರಾರಂಭದ ಬಸವಪ್ರೇಮಿಗಳು ಪುರಾಣದ ಮೊರೆ ಹೋದಂತೆ ಪ್ರಾರಂಭದ ಕ್ರೈಸ್ತರು ಕ್ರಿಸ್ತನ ಮಹತ್ವವನ್ನು ವಿಜೃಂಭಿಸಲು ಪವಾಡಗಳ ಮೊರೆ ಹೋದರು.

- Advertisement -
- Advertisement -

ಅತ್ಯಂತ ಹೆಚ್ಚು ಮುದ್ರಣವಾದ ಪುಸ್ತಕ ಬೈಬಲ್. ಅದರ ಪ್ರತಿಗಳಷ್ಟು ಕ್ರೈಸ್ತರಿರದಿದ್ದರೂ, ಧರ್ಮಪ್ರಚಾರದ ಕರ್ತವ್ಯದಿಂದ ಪಾದ್ರಿಗಳು ಭಾಷೆಗಳನ್ನು ಕಲಿತು ಬೈಬಲ್ಲನ್ನೂ ಮತ್ತು ಕ್ರಿಸ್ತನನ್ನೂ ಜನರಿಗೆ ಪರಿಚಯಿಸಿದರು. ಇದರ ಅಡ್ಡಪರಿಣಾಮಗಳಾಗಿ ನಿಘಂಟುಗಳು ಪ್ರಾದೇಶಿಕ ಭಾಷೆಗಳಿಗೆ ಲಭ್ಯವಾದವು ಮತ್ತು ಅಕ್ಷರವಂಚಿತ ವರ್ಗದವರು ಸುಶಿಕ್ಷಿತರಾದರು. ಕನ್ನಡಕ್ಕೆ ಕಿಟ್ಟಲ್ ನಿಘಂಟನ್ನು ನೀಡಿದಂತೆ ಕ್ರೈಸ್ತರು ಬಹಳಷ್ಟು ಭಾಷೆಗಳಿಗೆ ನಿಘಂಟುಗಳನ್ನು ನೀಡಿದರು.

ಶುಭ ಸಂದೇಶವೆಂದರೆ ಕ್ರಿಸ್ತನ ಜೀವನ ಮತ್ತು ಅವನ ಆಪ್ತ ಶಿಷ್ಯರು ತಮ್ಮ ಗುರುವಿನ ಶುಭ ಸಂದೇಶವನ್ನು ಪ್ರಚಾರ ಮಾಡಿದ ಕತೆ. ಇದನ್ನು ಒಡಂಬಡಿಕೆ ಅಥವಾ ಒಪ್ಪಂದ ಎನ್ನುವುದು. ಏಕೆಂದರೆ, ದೇವರು ಮಾನವರೊಂದಿಗೆ ಮಾಡಿಕೊಂಡಿರುವ ಹೊಸ ಒಪ್ಪಂದ ಎಂದು. ಮನುಷ್ಯರ ಬಾಳ್ವೆಗೆ ಬೇಕಾದ ಸತ್ಯವನ್ನೇ ದೇವರೆಂದು, ಅದರ ಮಗನಾಗಿ ಗುರುತಿಸಿಕೊಂಡ ಯೇಸು ತನ್ನಪ್ಪನ ಒಲವ ಪಡೆಯಲು ತಾನೇ ಬೆಳಕು ಮತ್ತು ಮಾರ್ಗವಾದ.

ಯೇಸು ದೇವಾಲಯಗಳಲ್ಲಿನ ವ್ಯಾಪಾರಿ ಧೋರಣೆಗಳನ್ನು ಖಂಡಿಸಿ ಆ್ಯಂಗ್ರೀ ಯಂಗ್‍ಮ್ಯಾನ್‍ನಂತೆ ಅಲ್ಲಿ ವಸ್ತುಗಳನ್ನೆಲ್ಲಾ ಚೆಲ್ಲಾಡಿ, ಚಾಟಿ ಬೀಸಿ ಕೂಗಾಡುತ್ತಾನೆ “ದೇವಾಲಯವನ್ನು ಸಂತೆಯನ್ನಾಗಿಸಬೇಡಿ” ಎಂದು. ರೋಮ್ ಚಕ್ರಾಧಿಪತ್ಯದ ಅಂಕೆಯಲ್ಲಿದ್ದ ಯೆಹೂದಿಗಳು ಮೌಢ್ಯ ಮತ್ತು ಸಂಪ್ರದಾಯಗಳಲ್ಲಿ ಬಿದ್ದಿದ್ದಾರೆಂದು ಅರ್ಥವಾಗಿ ಯೇಸುವೂ ಕಲ್ಯಾಣದ ಬಸವಣ್ಣನಂತೆ ಸಮಾಜದಿಂದ ಬಹಿಷ್ಕೃತರೊಂದಿಗೆ, ತಳವರ್ಗದವರೊಂದಿಗೆಯೇ ಸೇರಿ ಕಣ್ಣು ತೆರೆಸಲು ಪ್ರಾರಂಭಿಸುತ್ತಾನೆ.

ಅವನ ಬೆಟ್ಟದ ಮೇಲಿನ ಬೋಧನೆ ಮತ್ತು ಸಂದರ್ಭಾನುಸಾರ ನೀಡುವ ತಿಳುವಳಿಕೆ ಈಗೂ ಅತ್ಯದ್ಭುತ ಮತ್ತು ಸೂಕ್ಷ್ಮ ಒಳನೋಟಗಳು. ತಲೆ ಮೇಲೆ ಆಣೆ ಮಾಡಿದರೆ ಕಪ್ಪು ಕೂದಲನ್ನು ಬೆಳ್ಳಗಾಗಿಸದು, ಬಿಳಿಯದನ್ನು ಕಪ್ಪಾಗಿಸದು ಎನ್ನುತ್ತಾ ಮೌಢ್ಯವನ್ನು ಧಿಕ್ಕರಿಸಿದರೆ, ದೇವರಿಗೆ ನೈವೇದ್ಯ ನೀಡುವಾಗ ಮೊದಲು ನಿನ್ನ ನೆರೆಯವನೊಂದಿಗಿನ ವ್ಯಾಜ್ಯವನ್ನು ಬಗೆಹರಿಸಿ ಆರಾಧನೆ ಸಲ್ಲಿಸು ಎನ್ನುತ್ತಾ ದೇವರಿಗಿಂತ ಮುಖ್ಯ ಮಾನವನೊಂದಿಗಿನ ನಿನ್ನ ಸಂಬಂಧ ಎಂದು ಸೌಹಾರ್ದತೆ ತೋರುತ್ತಾನೆ. ಹಾದರದವಳಿಗೆ ಕಲ್ಲೊಗೆಯುವ ಮಂದಿಗೆ ತಪ್ಪು ಮಾಡದವರು ಮೊದಲು ಕಲ್ಲು ಬೀರಲಿ ಎಂದು ಸಮಾಜದ ಸೋಗಲಾಡಿ ನೈತಿಕತೆಯನ್ನು ಪ್ರಶ್ನಿಸುತ್ತಾನೆ. ಭೀತಿಯ ದೇವರನ್ನು ಪ್ರೀತಿಯ ತಂದೆಯನ್ನಾಗಿಸಿ ಸಾಂಪ್ರದಾಯಕ ಪರಿಕಲ್ಪನೆಯನ್ನು ತೊಲಗಿಸಿಬಿಡುತ್ತಾನೆ. ಬದುಕು ಮತ್ತು ಬೋಧನೆಗಳ ಪೂರ್ತಿ ಪ್ರೀತಿ, ಸಾಮರಸ್ಯ, ಕ್ಷಮೆ, ಆತ್ಮಾವಲೋಕನ, ಪಶ್ಚಾತ್ತಾಪದಂತಹ ಮೌಲ್ಯಗಳನ್ನೇ ಪ್ರತಿಪಾದಿಸುತ್ತಾನೆ.

ಮ್ಯಾಥ್ಯೂ, ಮಾರ್ಕ್, ಲೂಕ್ ಮತ್ತು ಜಾನ್ ಅವರದ್ದನ್ನೇ ಪ್ರಧಾನವಾಗಿ ಬೈಬಲ್ಲಿನಲ್ಲಿ ಹೊಂದಿದ್ದರೂ ಅವರ ಬರವಣಿಗೆಗಳಲ್ಲಿಯೇ ವ್ಯತ್ಯಾಸಗಳಿವೆ. ಯೇಸುವಿನ ಕಾಲದಲ್ಲಿ ಬದುಕಿದ್ದ ಜೋಸೆಫಸ್‍ನ ಬರವಣಿಗೆಗಳನ್ನು ಇವರು ತೆಗೆದುಕೊಳ್ಳದೇ ಇರುವುದಕ್ಕೆ ಕಾರಣ ಧಾರ್ಮಿಕತೆಯನ್ನು ಗಟ್ಟಿಗೊಳಿಸದೇ ವಾಸ್ತವದ ಶೈಲಿಯಲ್ಲಿರಬಹುದು. ಯೇಸುವೇ ಪವಾಡಗಳನ್ನು ಅಲ್ಲಗಳೆಯುವಾಗ ಬೈಬಲ್ಲು ಪವಾಡಗಳಿಂದಲೇ ತುಂಬಿವೆ. ಉತ್ಪ್ರೇಕ್ಷೆ ಮತ್ತು ರೂಪಕಗಳಲ್ಲಿ ನಾವು ಯೇಸುವನ್ನು ಗುರುತಿಸಬೇಕು.

ಕರ್ನಾಟಕದಲ್ಲಿ ಬಸವಣ್ಣನ ಮರಣಾನಂತರ ಶರಣರು ಚೆಲ್ಲಾಪಿಲ್ಲಿಯಾದಂತೆ ಕ್ರಿಸ್ತನ ಮರಣಾನಂತರವೂ ಅವನ ಶಿಷ್ಯರು ಚೆಲ್ಲಾಪಿಲ್ಲಿಯಾಗಿದ್ದರು. ಬಸವನ ಕುರುಹನ್ನು ಉಳಿಸಿ ವಿಜೃಂಭಿಸಲು ಪ್ರಾರಂಭದ ಬಸವಪ್ರೇಮಿಗಳು ಪುರಾಣದ ಮೊರೆ ಹೋದಂತೆ ಪ್ರಾರಂಭದ ಕ್ರೈಸ್ತರು ಕ್ರಿಸ್ತನ ಮಹತ್ವವನ್ನು ವಿಜೃಂಭಿಸಲು ಪವಾಡಗಳ ಮೊರೆ ಹೋದರು. ಗುಟ್ಟಾಗಿ ಒಟ್ಟಾಗುತ್ತಾ ಧರ್ಮಸಭೆಗಳನ್ನು ಮಾಡುತ್ತಾ ಹೊರಗಿನ ಸಮಾಜಕ್ಕೆ ಬಂದಿದ್ದು ಅವರ ತ್ಯಾಗ ಬಲಿದಾನಗಳ ಕತೆಯೇ.

ಕ್ರಿಸ್ತನೆಂಬ ಕ್ರಾಂತಿಯೋಗಿ ತನ್ನ ಜೀವಿತಾವಧಿಯಲ್ಲಿ ಪ್ರೀತಿ, ಕರುಣೆ, ಸೌಹಾರ್ದ, ಕ್ಷಮೆ, ಪಶ್ಚಾತ್ತಾಪ, ಸಮಾನತೆ ಇವುಗಳೆಲ್ಲವನ್ನೂ ಹೊಂದಿರುವ ವ್ಯಕ್ತಿಗಳನ್ನು ರೂಪಿಸಲು, ಸಮಾಜವನ್ನು ಕಟ್ಟಲು ಯತ್ನಿಸಿದ್ದೇ ಪವಾಡ. ಇದೇ ಶುಭ ಸಂದೇಶದ ಪುಟಗಳಲ್ಲಿ ಪುಟಕ್ಕಿಟ್ಟಂತೆ ಹೊಳೆಯುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...