ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯದಲ್ಲಿ ಉಂಟಾಗಿರುವ ಭೀಕರ ನೆರೆ ಹಾಗೂ ಪ್ರವಾಹಕ್ಕೆ ನೆರವಾಗಲು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 41 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.
ಈ ಪರಿಹಾರ ನಿಧಿಯ ಚೆಕ್ ನ್ನು ಕೆಪಿಸಿಸಿ ಪರವಾಗಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿ. ವೈ. ಘೋರ್ಪಡೆ ರವರು ಹಾಗೂ ಶ್ರೀ ಹಾಜಿ ಷಫಿಉಲ್ಲ ರವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದಿನಾಂಕ 9-8-19 ರಂದು ವಿಧಾನ ಸೌಧದ ಅವರ ಕಛೇರಿಯಲ್ಲಿ ಸಲ್ಲಿಸಿದ್ದಾರೆ.
ಅದೇ ರೀತಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಇಂದು 49 ಸಾವಿರ ರೂಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. ಇನ್ಫೋಸಿಸ್ ನ ಸುಧಾಮೂರ್ತಿಯವರು 10 ಕೋಟಿ ನೆರವು ಘೋಷಿಸಿದ್ದಾರೆ.
ಇನ್ನು ಚಿತ್ರನಟ ಉಪೇಂದ್ರ 5 ಲಕ್ಷ ಹಣ ನೀಡಿದ್ದಾರೆ. ಶ್ರೀ ಮುರಳಿ ತಮ್ಮ ಸಿನೆಮಾ ಒಂದು ಹಾಡಿನ ಲಾಭವನ್ನು ನೆರೆಪರಿಹಾರಕ್ಕಾಗಿ ವ್ಯಯಿಸಲಿದ್ದಾರೆ.
ಸರ್ಕಾರಿ ನೌಕರರ ಸಂಘದಿಂದ ಒಂದು ದಿನದ ವೇತನವನ್ನು ನೀಡುವುದಾಗಿ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಘೋಷಿಸಿದ್ದಾರೆ.
ಮಾನವ ಬಂಧುತ್ವ ವೇದಿಕೆಯು ನಾಲ್ಕೈದು ದಿನಗಳಿಂದ ಜನರ ಸ್ಥಳಾಂತರ, ವಸತಿ ಊಟ ಇತ್ಯಾದಿ ವ್ಯವಸ್ಥೆಗಳನ್ನು ನಿರ್ವಹಿಸುತ್ತಿದೆ.