Homeಮುಖಪುಟಇವಿಎಂಗಳು ಎಷ್ಟು ಸುರಕ್ಷಿತ? ಚುನಾವಣೆ ಹಿನ್ನೆಲೆಯಲ್ಲಿ ಒಂದು ಗಂಭೀರ ಪ್ರಶ್ನೆ

ಇವಿಎಂಗಳು ಎಷ್ಟು ಸುರಕ್ಷಿತ? ಚುನಾವಣೆ ಹಿನ್ನೆಲೆಯಲ್ಲಿ ಒಂದು ಗಂಭೀರ ಪ್ರಶ್ನೆ

ಕ್ಯಾಲಿಫೋರ್ನಿಯಾದ ಸ್ಟ್ಯಾನ್‍ಫೊರ್ಡ್ ಯೂನಿವರ್ಸಿಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿಜ್ಞಾನಿ ಡೇವಿಡ್.ಎಲ್.ಡಿಲ್ ಅವರು ಇವಿಎಂ ಮತಯಂತ್ರ ಮತ್ತು ಆನ್‍ಲೈನ್ ವೋಟಿಂಗ್ ವಿರುದ್ಧದ ಚಳವಳಿಯಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿದ್ದಾರೆ.

- Advertisement -
- Advertisement -

| ದೊಡ್ಡಿಪಾಳ್ಯ ನರಸಿಂಹಮೂರ್ತಿ |

‘ಇವಿಎಂ ವಿರೋಧಿಗಳು ಆಧುನಿಕ ತಂತ್ರಜ್ಞಾನದ ವಿರೋಧಿಗಳು, ಇವರು ದೇಶವನ್ನು ಕತ್ತಲ ಯುಗಕ್ಕೆ ಕೊಂಡೊಯ್ಯಲು ಬಯಸಿದ್ದಾರೆ’ ಎಂತಲೂ, ‘ಇವಿಎಂ ನಲ್ಲಿ ದೋಷಾರೋಪಣೆ ಮಾಡುವುದು ಸೋತ ಪಕ್ಷಗಳ ಮಾಮೂಲಿ ವಾದ’ ಎಂತಲೂ, ‘ಇವಿಎಂ ಗಳನ್ನು ಹ್ಯಾಕ್ ಮಾಡಲು ಅಥವ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ, ಇಡೀ ಜಗತ್ತು ಇವಿಎಂಗಳನ್ನು ಒಪ್ಪಿಕೊಂಡಿದೆ’ ಎಂತಲೂ ಇವಿಎಂ ಪರ ವಕಾಲತ್ತು ವಹಿಸುವವರ ವಾದ. ಈ ವಾದ ಸರಣಿಯನ್ನು ಬೆಂಬಲಿಸುವವರಲ್ಲಿ ಬಹಳಷ್ಟು ಜನಪರ ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರೂ ಕೂಡ ಇದ್ದಾರೆ.

ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವೆ, ಇಲ್ಲವೆ ಎಂಬುದನ್ನು ತೀರ್ಮಾನಿಸಬೇಕಾದವರು ರಾಜಕಾರಣಿಗಳೋ ಅಥವ ಮಾಧ್ಯಮದವರೋ ಅಲ್ಲ. ಚುನಾವಣಾ ಆಯೋಗದ ಅಧಿಕಾರಿಗಳೂ ಅಲ್ಲ. ಈ ತೀರ್ಮಾನ ಕೈಗೊಳ್ಳಬೇಕಾದವರು ಈ ಕ್ಷೇತ್ರದಲ್ಲಿ ಪರಿಣತಿಯುಳ್ಳ ತಂತ್ರಜ್ಞರು, ವಿಜ್ಞಾನಿಗಳು.

ಆದರೆ ನಮ್ಮಲ್ಲಿ ಇವಿಎಂಗಳ ವಿಶ್ವಾಸಾರ್ಹತೆಯನ್ನು ಸಮರ್ಥಿಸಿ ದೊಡ್ಡ ಗಂಟಲಿನಲ್ಲಿ ವಾದ ಮಂಡಿಸುತ್ತಿರುವವರು ರಾಜಕಾರಣಿಗಳು ಹಾಗೂ ಚುನಾವಣಾ ಆಯೋಗದ ಪ್ರಭೃತಿಗಳು. ಮಾಧ್ಯಮದವರು ಕೂಡ ಆಡಳಿತಾರೂಢ ಪಕ್ಷದ ಪರ ಬ್ಯಾಟಿಂಗ್‍ಗೆ ಇಳಿದಿರುವುದರಲ್ಲಿ ಯಾರಿಗೂ ಆಶ್ಚರ್ಯವಿಲ್ಲ.

ಆದರೆ ಎಲೆಕ್ಟ್ರಾನಿಕ್ ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಈ ಬಗ್ಗೆ ಏನನ್ನುತ್ತಾರೆ? 2010ರ ಜುಲೈನಲ್ಲಿ ವಿಜ್ಞಾನ ವಿಷಯಗಳ ವರದಿಗಾರ ಜೂಲಿಯನ್ ಸಿಡಲ್ ಭಾರತದಲ್ಲಿ ಬಳಸಲಾಗುತ್ತಿರುವ ಇವಿಎಂಗಳ ಬಗ್ಗೆ ಬಿಬಿಸಿಗೆ ಒಂದು ವಿಸ್ತೃತ ವರದಿ ಮಾಡಿದರು. ಆ ವರದಿ ಹೇಳುವಂತೆ ಅಮೆರಿಕದ ಮಿಚಿಗನ್ ಯೂನಿವರ್ಸಿಟಿಯ ಸಂಶೋಧಕರ ತಂಡ ಭಾರತದ ಇವಿಎಂಗಳ ಕಾರ್ಯಕ್ಷಮತೆ ಬಗ್ಗೆ ಒಂದು ತನಿಖೆ ನಡೆಸಿ, ಯಾವುದೇ ಮೊಬೈಲ್‍ಗಳ ಮೂಲಕ ಇವಿಎಂ ಕೋಡ್ (ಆ ಕೋಡ್ ಗೊತ್ತಿರುವವರು) ಬಳಸಿ ಇವಿಎಂಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಮತ್ತು ಫಲಿತಾಂಶವನ್ನು ತಮಗೆ ಬೇಕಾದ ಹಾಗೆ ಬದಲಿಸಬಹುದು ಎಂಬುದನ್ನು ಸಾಬೀತು ಮಾಡಿದ್ದರು.

2009ರ ಜೂನ್ 21ರಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೀಗೆ ಬರೆದಿದೆ: “ಕಾಗದ ರಹಿತ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಮತದಾರರು ತಮ್ಮ ಆಯ್ಕೆಯ ಮತ ಚಲಾವಣೆ ಮಾಡುತ್ತಾರೆ. ಎಲ್ಲ ಮತಗಳ ಚಲಾವಣೆ ಮುಗಿದ ಮೇಲೆ ಮತಯಂತ್ರ ಫಲಿತಾಂಶ ತೋರಿಸುತ್ತದೆ. ಆದರೆ ಕುತಂತ್ರಪೂರಿತ ಸಾಫ್ಟ್‍ವೇರ್‍ಗಳ ಮೂಲಕ ಅಥವ ಇವಿಎಂ ಹ್ಯಾಕಿಂಗ್ ಮೂಲಕ ಅಕ್ರಮಗಳನ್ನೆಸಗುವುದು, ಮತಗಳನ್ನು ಕದಿಯುವುದು ಸಾಧ್ಯವಿಲ್ಲ ಎಂಬ ಯಾವ ಭರವಸೆಯೂ ಇಲ್ಲ. ಮತ್ತು ಅನುಮಾನ ಬಂದಾಗ ಮತಗಳ ಮರುಎಣಿಕೆಯೂ ಸಾಧ್ಯವಿಲ್ಲ.”

ಕ್ಯಾಲಿಫೋರ್ನಿಯಾದ ಸ್ಟ್ಯಾನ್‍ಫೊರ್ಡ್ ಯೂನಿವರ್ಸಿಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿಜ್ಞಾನಿ ಡೇವಿಡ್.ಎಲ್.ಡಿಲ್ ಅವರು ಇವಿಎಂ ಮತಯಂತ್ರ ಮತ್ತು ಆನ್‍ಲೈನ್ ವೋಟಿಂಗ್ ವಿರುದ್ಧದ ಚಳವಳಿಯಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿದ್ದಾರೆ. ತಮ್ಮ ಈ ಹೋರಾಟದಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದಾರೆ. ಅವರ ಮಾತುಗಳನ್ನೇ ಕೇಳೋಣ. “ಪ್ರೋಗ್ರಾಮಿಂಗ್‍ನಲ್ಲಿ ತಪ್ಪುಗಳು, ಉಪಕರಣಗಳು ತಪ್ಪಾಗಿ ಕಾರ್ಯನಿರ್ವಹಿಸುವುದು (malfunctioning), ದುರುದ್ದೇಶಪೂರ್ವಕ ಟ್ಯಾಂಪರಿಂಗ್‍ಗಳಿಗೆ ತುತ್ತಾಗುವ ಅಪಾಯ ಯಾವುದೇ ಕಂಪ್ಯೂಟರೀಕೃತ ಮತಯಂತ್ರಗಳ ಅಂತರ್ಗತ ಗುಣವಾಗಿರುತ್ತದೆ. ಕಾಗದರಹಿತ ಇವಿಎಂ ಉಪಕರಣಗಳ ಮೇಲೆ ಸಾರ್ವಜನಿಕರು ವಿಶ್ವಾಸವಿಡಲು ಯಾವುದೇ ಸ್ಪಷ್ಟ ಆಧಾರವಿಲ್ಲ ಎಂಬ ಅಂಶವನ್ನು ಒಪ್ಪಿಕೊಳ್ಳಲು ಇದು ಸರಿಯಾದ ಸಮಯ.”

ಇಂತಹ ಗೊಂದಲಮಯ ಸಂದರ್ಭದಲ್ಲೇ ‘ಜನತಾ ಕಾ ರಿಪೋರ್ಟರ್’ ಎಂಬ ಜಾಲತಾಣ ಬಹಿರಂಗಗೊಳಿಸಿದ ಸುದ್ದಿ ಆಘಾತಕಾರಿಯಾಗಿದೆ.

ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅಲ್ಲಿ ಭಾರೀ ಹಗರಣವೊಂದು ನಡೆದಿತ್ತು. ಸರ್ಕಾರಿ ಸ್ವಾಮ್ಯದ ಜಿಎಸ್‍ಪಿಸಿ ಕಂಪನಿಗೆ ಸೇರಿದ 20,000 ಕೋಟಿ ಮೌಲ್ಯದ ಷೇರುಗಳನ್ನು ಜಿಯೋ ಗ್ಲೋಬಲ್ ರಿಸೋರ್ಸಸ್ ಎಂಬ ಕಂಪನಿಯೊಂದಕ್ಕೆ ಅನಾಮತ್ತು ವರ್ಗಾಯಿಸಲಾಗಿತ್ತು. ಈಗ ಇವಿಎಂಗಳಲ್ಲಿ ಅಳವಡಿಸುತ್ತಿರುವ ಮೈಕ್ರೋಚಿಪ್‍ಗಳನ್ನು ಹಾಗೂ ಪ್ರೋಗ್ರಾಮಿಂಗ್ ಸಾಫ್ಟ್‍ವೇರ್‍ಗಳನ್ನು ಸಪ್ಲೈ ಮಾಡಲು ‘ಮೈಕ್ರೋಚಿಪ್ಸ್ ಇಂಕ್’ ಎಂಬ ಅಮೆರಿಕದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಆಘಾತಕಾರಿ ವಿಷಯವೆಂದರೆ ಜಿಎಸ್‍ಪಿಸಿಯ 20,000 ಕೋಟಿ ಮೊತ್ತವನ್ನು ಗುಳುಂಮಾಡಿದ ಜಿಯೋ ರಿಸೋರ್ಸ್ ಮತ್ತು ಈ ಮೈಕ್ರೋ ಚಿಪ್ಸ್ ಇಂಕ್ ಕಂಪನಿಗಳೆರಡೂ ಅಮೆರಿಕದ ‘ಕೀ ಕ್ಯಾಪಿಟಲ್ ಕಾರ್ಪೊರೇಷನ್’ನ ಒಡೆತನದಲ್ಲಿವೆ ಎಂದು ನಾಸ್ಡಾಕ್‍ನ ದಾಖಲೆಗಳು ಹೇಳುತ್ತವೆ.
ತೆರೆಮರೆಯಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಬಲ್ಲವರಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...