Homeಆರೋಗ್ಯಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು

ಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು

ಅರೋಗ್ಯ ಸರಿಯಿಲ್ಲದಿದ್ದರೆ ವಿಶ್ರಮಿಸಿ. ಅನಾರೋಗ್ಯದಲ್ಲಿ ಹೆಚ್ಚಿನ ಕೆಲಸ/ಯೋಚನೆ ಮಾಡಿ ಆರೋಗ್ಯ ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಖಿನ್ನತೆ ಇದೆ ಎಂದೆನಿಸಿದರೆ ವೈದ್ಯಕೀಯ ಸಲಹೆ/ಸಮಾಲೋಚನೆ ಪಡೆಯಿರಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-18

ಮಾನಸಿಕ ಒತ್ತಡ ಎಂದ ಕೂಡಲೇ ನಮಗೆ ಒಂದು ರೀತಿಯ ಹೆದರಿಕೆ, ಆತಂಕ ಶುರುವಾಗುತ್ತದೆ. ಅದರ ಭಯಾನಕ ಪರಿಣಾಮಗಳ ದೃಶ್ಯ ಕಣ್ಣಮುಂದೆ ಬರುತ್ತವೆ. ಹಾಗಾದರೆ ಮಾನಸಿಕ ಒತ್ತಡಗಳನ್ನು ತಡೆದುಕೊಳ್ಳುವುದು ಹೇಗೆ?

ಮಾನಸಿಕ ಒತ್ತಡ (ಸ್ಟ್ರೆಸ್) ಒಂದು ಭಾವನಾತ್ಮಕ ಮಾನಸಿಕ ಉದ್ವೇಗ ಮತ್ತು ದೈಹಿಕ ಬಿಗುಪು. ಯಾವುದೋ ಸನ್ನಿವೇಶ ಅಥವಾ ನಮ್ಮ ನಿಯಂತ್ರಣದಲ್ಲಿರದ ವಿಷಯದ ಬಗ್ಗೆಯ ಯೋಚನೆಯಿಂದಾಗಿ ನಾವು ನಿರಾಶೆ, ಆತಂಕಕ್ಕೆ, ಕೋಪಕ್ಕೆ, ಕ್ಷೋಭೆಗೆ ಒಳಗೊಂಡಾಗ, ಪರೀಕ್ಷೆ, ಸವಾಲನ್ನು ಎದುರಿಸಬೇಕಾದಾಗ ದೈಹಿಕ ಪ್ರತಿಕ್ರಿಯೆಯೇ ಸ್ಟ್ರೆಸ್. ಇದು ಧನಾತ್ಮಕವೂ ಆಗಿರಬಹುದು ಅಥವಾ ಜೀವರಸ ಹಿಂಡುವ ಶಕ್ತಿಯೂ ಆಗಿರಬಹುದು. ಹಲವರು ಇಂತಹ ಒತ್ತಡದಲ್ಲಿ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಾರೆ. ಕೆಲವರು ಕೆಲಸದ ಸಮಯಮಿತಿ (ಡೆಡ್ಲೈನ್)ಯಿಂದಾಗಿ ಹೆದರಿ ಏನೂ ತೋಚದೆ, ಭ್ರಮೆಗೆ ಸಿಲುಕುತ್ತಾರೆ. ಸ್ವಲ್ಪ ಸಮಯದ ಒತ್ತಡ ಪ್ರೇರೇಪಕವೂ ಆಗಬಹುದು ಆದರೆ ದೀರ್ಘ ಸಮಯದ ಒತ್ತಡ ಆಸ್ಪತ್ರೆಗೂ ಸೇರಿಸಬಹುದು, ಆದ್ದರಿಂದ ಅದನ್ನು ನಿಭಾಯಿಸುವುದು ಅತ್ಯಗತ್ಯ.

ಇನ್ನೊಂದು ಒತ್ತಡ ಬರುವುದು ನಮ್ಮ ಸಮಾನಸ್ಕಂಧರಿಂದ (ಪೀರ್ ಪ್ರೆಷರ್). ಈ ಒತ್ತಡ ಅವರಿಂದ ಯಾವುದೋ ದುರಭ್ಯಾಸಕ್ಕೋ, ಕೆಟ್ಟ ಕೆಲಸಕ್ಕೋ ಬರಬಹುದು ಅಥವಾ ನಾವೂ ಮಿಕ್ಕವರಂತೆ ಆಗಬೇಕು ಎನ್ನುವ ನಮ್ಮ ಸ್ವಂತ ಹಂಬಲದಿಂದಲೂ ಬರಬಹುದು. ಉದಾ: ಮಾದಕ ವಸ್ತುಗಳ ಸೇವನ, ಅಸಾಮಾಜಿಕ ನಡವಳಿಕೆ, ಇತ್ಯಾದಿ.

ಒತ್ತಡ ತಡೆದುಕೊಳ್ಳಲು ನಮ್ಮ ಮನಸ್ಸು ಸ್ವಚ್ಛವಾಗಿರಬೇಕು, ಹಗುರವಾಗಿರಬೇಕು. ನಮ್ಮ ಜೀವನದ ಗುರಿ ಸ್ಪಷ್ಟವಾಗಿರಬೇಕು.

ಇದಕ್ಕೆ ಸಹಕಾರಿಯಾಗುವ ಹತ್ತು ನಡೆಗಳು:

1. ಕಾಫಿ, ಸಾರಾಯಿ, ತಂಬಾಕು ಮುಂತಾದ ವ್ಯಸನಗಳನ್ನು ತ್ಯಜಿಸಿ. ಇವು ಸಣ್ಣ ಪ್ರಮಾಣದಲ್ಲಿ ಉತ್ತೇಜನಕಾರಿ ಎಂದು ಎನಿಸಿದರೂ, ಕ್ರಮೇಣ ಅಭ್ಯಾಸ ಹೆಚ್ಚಾಗಿ, ಯಾವಾಗ ವ್ಯಸನಕ್ಕೆ ತಿರುಗುತ್ತದೋ ಹೇಳಲು ಸಾಧ್ಯವಿಲ್ಲ. ಖಂಡಿತಾ ನಿಮ್ಮನ್ನು ಪ್ರಪಾತಕ್ಕೆ ಎಳೆದುಕೊಂಡು ಹೋಗುತ್ತವೆ. ಇದರ ಬದಲಿಗೆ ಎಳನೀರು, ಹರ್ಬಲ್ ಟೀ, ಹಣ್ಣಿನ ರಸ (ಅಧಿಕ ಅಥವಾ ಬಿಳಿ ಸಕ್ಕರೆ ಇಲ್ಲದ), ತಂಪು ಪಾನೀಯಗಳನ್ನು ಕುಡಿಯಿರಿ. ಇದರಿಂದ ದೇಹ ದ್ರವಹೀನಗೊಳ್ಳದೆ ಸ್ಟ್ರೆಸ್ ನಿಂದ ಹೋರಾಡುವಲ್ಲಿ ಸಹಕಾರಿಯಾಗುತ್ತದೆ. ಆಹಾರ ನಿಯಮಿತವಾಗಿ ಸೇವಿಸಿ. ಊಟದಲ್ಲಿ ಸಮತೋಲನೆ ಮತ್ತು ಪೌಷ್ಟಿಕಾಂಶ ಇರಲಿ. ಪಾಚನಕ್ರಿಯೆ ಸುಗಮವಾಗಿರಲಿ. ಇದರಿಂದ ಮನಸ್ಸು ಹಗುರವಾಗಿರುತ್ತದೆ.

2. ವ್ಯಾಯಾಮ ಅಥವಾ ದೈಹಿಕ ಶ್ರಮದಲ್ಲಿ ಭಾಗವಹಿಸಿ. ಒತ್ತಡದಿಂದಾಗಿ ದೇಹದ ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ನಮ್ಮ ದೇಹವನ್ನು ರಕ್ಷಿಸುವ ಹಾರ್ಮೋನುಗಳು ಇಂದಿನ ಒತ್ತಡಕ್ಕೆ ಸರಿಹೊಂದುವುದಿಲ್ಲ. ದೈಹಿಕ ವ್ಯಾಯಾಮ, ಹೊರಗಿನ ಮುಕ್ತ ವಾತಾವರಣ ನಮ್ಮ ಬಿಗುಪನ್ನು ಕಡಿಮೆ ಮಾಡಿ, ಮನಸ್ಸಿನ ವ್ಯಾಕುಲತೆಯನ್ನು ಸಡಿಲಗೊಳಿಸುತ್ತದೆ. ನಿದ್ದೆಯೂ ಸರಿಯಾಗಿ ಬರುತ್ತದೆ.

3. ಸರಿಯಾಗಿ ನಿದ್ರಿಸದಿರುವುದು ಸಹ ವ್ಯಾಕುಲತೆಯ ಲಕ್ಷಣ. ಮನಸ್ಸು ರಿಲಾಕ್ಸ್ ಆಗಿಲ್ಲದಿದ್ದಾಗ ನಿದ್ದೆ ಹಾರಿ ಹೋಗುವುದು ಸಹಜ. ಅಂತಹ ಸಮಯದಲ್ಲಿ ನಿದ್ದೆ ಮಾತ್ರೆ ಅಥವಾ ಇತರ ವ್ಯಸನಗಳಿಗೆ ಮಾರು ಹೋಗದೆ, ಮನಸ್ಸನ್ನು ಹಗುರಗೊಳಿಸುವ ಸಂಗೀತ ಕೇಳಿ. ಪ್ರಯೋಜನಕಾರಿ ಹಗುರವಾದ ಪುಸ್ತಕ ಓದಿ. ನಿಮ್ಮ ಮಲಗುವ ಕೋಣೆಯಲ್ಲಿ ನಿದ್ರೆಗೆ ಸೂಕ್ತವಾಗುವಂತಹ ವಾತಾವರಣ ಕಲ್ಪಿಸಿ, ಬೆಳಕು ಜಾಸ್ತಿ ಇಲ್ಲದಿರಲಿ. ಹೆಚ್ಚಿನ ಬುದ್ಧಿಶಕ್ತಿ ಬೇಕಾಗುವ ಕೆಲಸ ಮಲಗುವ ಮುನ್ನ ಮಾಡಬೇಡಿ. ಪ್ರತಿದಿನ (ರಾತ್ರಿ ಮತ್ತು ಬೆಳಿಗ್ಗೆ) ಅದೇ ಸಮಯಕ್ಕೆ, ಬೇಗ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಬೆಳಿಗ್ಗೆ ಮನಸ್ಸು ಹಗುರವೂ, ಉಲ್ಲಾಸ ಭರಿತವೂ ಆಗಿರುತ್ತದೆ.

4. ಮನಸ್ಸನ್ನು ತಿಳಿಗೊಳಿಸುವ ಕಸರತ್ತು ಮಾಡಿ: ಯೋಗ, ಪ್ರಾಣಾಯಾಮ, ಸ್ವಯಂ-ವಶೀಕರಣ ತಂತ್ರಗಳನ್ನು ಬಳಸಿ, ನಿಮ್ಮನ್ನು ನೀವೇ ಶಾಂತಗೊಳಿಸಲು ಕಲಿಯಿರಿ.

 

5. ಇನ್ನೊಬ್ಬರೊಂದಿಗೆ ಮಾತನಾಡಿ. ಅದು ನಿಮ್ಮ ಸಹೋದ್ಯೋಗಿ/ಸಹಪಾಠಿ, ಪೋಷಕ/ಶಿಕ್ಷಕ/ಗುರು ಅಥವಾ ಸ್ನೇಹಿತರಾಗಿರಬಹುದು. ನಿಮ್ಮ ಬಗ್ಗೆ ತೀರ್ಪು ನೀಡದ, ಕೇವಲ ಸಲಹೆ ನೀಡಬಲ್ಲ ವ್ಯಕ್ತಿಯ ಜೊತೆ ನಿಮ್ಮ ಆತಂಕ ಹಂಚಿಕೊಳ್ಳಿ. ಅಂತಹ ವ್ಯಕ್ತಿ ಇಲ್ಲದಿದ್ದಲ್ಲಿ ಪರಿಣಿತರ (ಕೌನ್ಸೆಲ್ಲಿಂಗ್) ಸಲಹೆ ಪಡೆಯಿರಿ.

6. ಸ್ಟ್ರೆಸ್ ಡೈರಿ ಬರೆಯಿರಿ. ನಿಮ್ಮ ಆತಂಕದ ಸನ್ನಿವೇಶಗಳು, ಅನುಭವಗಳು, ಪರಿಹಾರಗಳನ್ನು ಒಂದು ದಿನಚರಿ ಪುಸ್ತಕದಲ್ಲಿ ಬರೆದಿಡಿ. ಪ್ರತಿಯೊಂದು ಸನ್ನಿವೇಶಕ್ಕೂ/ಕಾರಣಕ್ಕೂ ಒಂದು ಸೂಚ್ಯಾಂಕ ನೀಡಿ, ಅತ್ಯಂತ ಹೆಚ್ಚಿನ ಒತ್ತಡಕ್ಕೆ 10, ತೀರಾ ಕಡಿಮೆಗೆ 1, ಹೀಗೆ ಅಂಕಗಳನ್ನು ನೀಡುತ್ತಾ ಬನ್ನಿ. ಕೆಲವೇ ದಿನಗಳಲ್ಲಿ ನಿಮ್ಮ ಆತಂಕಕ್ಕೆ ಕಾರಣ ಮತ್ತು ಪರಿಹಾರ ಎರಡೂ ನಿಮ್ಮ ಮುಂದೆ ಇರುತ್ತದೆ. ಇದರಿಂದ ಅಂತಹ ಸನ್ನಿವೇಶದಿಂದ ದೂರವಿರಲು ಮತ್ತು ಧೈರ್ಯದಿಂದ ಸೆಣಸಾಡುವ ಉಪಾಯ ದೊರಕುತ್ತದೆ.

7. ನಿಯಂತ್ರಣ ನಿಮ್ಮ ಕೈಗೆ ತೆಗೆದುಕೊಳ್ಳಿ. ನಿಮ್ಮನ್ನು ನಿಯಂತ್ರಿಸುವ “ರಿಮೋಟ್” ಬೇರೆಯವರ ಕೈಗೆ ಕೊಡಬೇಡಿ. ನಿಮ್ಮ ಸಮಸ್ಯೆಯನ್ನು, ಆದಷ್ಟು ಮಟ್ಟಿಗೆ, ನೀವೇ ಪರಿಹರಿಸಿಕೊಳ್ಳಿ. ಸಣ್ಣ ಪುಟ್ಟ ತೊಂದರೆಗೂ ಇನ್ನೊಬ್ಬರ ಬಳಿ ಓಡಿ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಡಿ. ಅವರು ನಿಮ್ಮ ದುರ್ಬಲತೆಯ ದುರುಪಯೋಗ ಮಾಡಿಕೊಳ್ಳಬಹುದು. ಅವಶ್ಯಕತೆ ಎನಿಸಿದಾಗ ಪರಿಣಿತರ ಸಲಹೆ ಪಡೆಯಿರಿ.

8. ಸಮಯ ನಿರ್ವಹಣೆ ಕಲಿಯಿರಿ. ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದಿದ್ದಾಗ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ನಿಮ್ಮ ಕೆಲಸದ, ಆದ್ಯತೆಯ, ಸಮಯದ, ಪಟ್ಟಿ ಮಾಡಿಕೊಂಡು ಅದರಂತೆ ಚಲಿಸಿ. ಯಾವುದು ಮುಖ್ಯ ಮತ್ತು ಅವಸರವೋ ಅದನ್ನು ಮೊದಲು ಮಾಡಿ. ಮುಖ್ಯವಲ್ಲದ, ಅವಸರವಿಲ್ಲದ ಕೆಲಸ ಸಮಯ ಸಿಕ್ಕಾಗ ಮಾಡಿ.

9. ಇಲ್ಲ ಎನ್ನುವುದನ್ನು ಕಲಿಯಿರಿ. ದಾಕ್ಷಿಣ್ಯಕ್ಕೆ ಬಲಿಯಾಗಿ ಕೈಯಲ್ಲಾಗದ/ಮನಸ್ಸು ಒಪ್ಪದ ಕೆಲಸಕ್ಕೆ ಒಪ್ಪಿಕೊಳ್ಳಬೇಡಿ. ಇಲ್ಲ ಎನ್ನುವುದನ್ನು ಕಲಿಯಿರಿ. ನೀವು “ಇಲ್ಲ” ಎಂದರೆ “ಇಲ್ಲ” ಎನ್ನುವುದನ್ನು ಬೇರೆಯವರಿಗೆ ಅರ್ಥವಾಗುವಂತೆ, ನಯವಾಗಿ ತಿಳಿಸಿ. ಪ್ರತಿಯೊಂದು “ಇಲ್ಲ”ವೂ ಜಗಳಕ್ಕೆ ಕಾರಣವಾಗುವುದಿಲ್ಲ.

10. ಅರೋಗ್ಯ ಸರಿಯಿಲ್ಲದಿದ್ದರೆ ವಿಶ್ರಮಿಸಿ. ಅನಾರೋಗ್ಯದಲ್ಲಿ ಹೆಚ್ಚಿನ ಕೆಲಸ/ಯೋಚನೆ ಮಾಡಿ ಆರೋಗ್ಯ ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಖಿನ್ನತೆ ಇದೆ ಎಂದೆನಿಸಿದರೆ ವೈದ್ಯಕೀಯ ಸಲಹೆ/ಸಮಾಲೋಚನೆ ಪಡೆಯಿರಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...