Homeಅಂತರಾಷ್ಟ್ರೀಯಹಂಗೇರಿಯನ್ ಕಾದಂಬರಿಕಾರ ಲಾಸ್ಲೋ ಕ್ರಾಸ್ನಾಹೊರ್ಕಾಯ್‌ಗೆ 2025ರ ಸಾಹಿತ್ಯ ನೊಬೆಲ್‌ ಪ್ರಶಸ್ತಿ

ಹಂಗೇರಿಯನ್ ಕಾದಂಬರಿಕಾರ ಲಾಸ್ಲೋ ಕ್ರಾಸ್ನಾಹೊರ್ಕಾಯ್‌ಗೆ 2025ರ ಸಾಹಿತ್ಯ ನೊಬೆಲ್‌ ಪ್ರಶಸ್ತಿ

- Advertisement -
- Advertisement -

ಹಂಗೇರಿಯ ಪ್ರಸಿದ್ಧ ಕಾದಂಬರಿಕಾರ ಲಾಸ್ಲೊ ಕ್ರಾಸ್ನಾಹೊರ್ಕಾಯ್ ತಮ್ಮ ತಾತ್ವಿಕ, ದು:ಖಮಯ ಹಾಸ್ಯ ಮತ್ತು ವಿಶಿಷ್ಟ ಶೈಲಿಯ ಕೃತಿಗಳಿಗಾಗಿ 2025ರ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಸ್ಟಾಕ್‌ಹೋಮ್‌ನಲ್ಲಿ ಗುರುವಾರ (ಅ.9) ಪ್ರಶಸ್ತಿ ಘೋಷಣೆಯಾಗಿದ್ದು, ಕ್ರಾಸ್ನಾಹೊರ್ಕಾಯ್ ಅವರ ‘ಪ್ರೇರಕ ಮತ್ತು ದೂರದೃಷ್ಟಿಯ ಕೃತಿಗಳಿಗಾಗಿ (compelling and visionary oeuvre)ಈ ಗೌರವವನ್ನು ನೀಡಲಾಗಿದೆ ಎಂದು ಸ್ವೀಡಿಷ್ ಅಕಾಡೆಮಿ ತಿಳಿಸಿದೆ.

ಕ್ರಾಸ್ನಾಹೊರ್ಕಾಯ್ ಅವರ “Herscht 07769” ಕಾದಂಬರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ವರದಿಯಾಗಿದೆ.

1954 ಜನವರಿ 5 ರಂದು ಹಂಗೇರಿಯ ಜಿಯುಲಾದಲ್ಲಿ ಜನಿಸಿದ ಕ್ರಾಸ್ನಾಹೊರ್ಕಾಯ್ ಅವರ ಕಾದಂಬರಿಗಳು ಒಂದೇ ಉದ್ದನೆಯ, ಸಂಕೀರ್ಣವಾದ ವಾಕ್ಯಗಳಲ್ಲಿ ರಚಿತವಾಗಿರುತ್ತವೆ. ಇದು ಅವರನ್ನು ವಿಶಿಷ್ಟ ಬರಹಗಾರನನ್ನಾಗಿ ಮಾಡಿದೆ. ಅವರ ಕೃತಿಗಳು ತಾತ್ವಿಕ ಚಿಂತನೆ, ದು:ಖದ ಹಾಸ್ಯ, ಮತ್ತು ಮಾನವ ಸ್ಥಿತಿಯ ಆಳವಾದ ಚಿತ್ರಣವನ್ನು ಒಳಗೊಂಡಿರುತ್ತವೆ.

ಕ್ರಾಸ್ನಾಹೊರ್ಕಾಯ್ ಅವರ ಕೃತಿಗಳು ಜಾಗತಿಕ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ. ಅವರ ಕಾದಂಬರಿಗಳು ಹಂಗೇರಿಯ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶಗಳನ್ನು ಚಿತ್ರಿಸುವುದರ ಜೊತೆಗೆ, ಸಾರ್ವತ್ರಿಕ ಮಾನವೀಯ ವಿಷಯಗಳನ್ನು ಸ್ಪರ್ಶಿಸುತ್ತವೆ.

ಸ್ವೀಡಿಷ್ ಅಕಾಡೆಮಿಯು ಕ್ರಾಸ್ನಾಹೊರ್ಕಾಯ್ ಅವರ ಕೃತಿಗಳ “ದೀರ್ಘವಾದ, ಆಕರ್ಷಕವಾದ ವಾಕ್ಯಗಳ ಮೂಲಕ ಓದುಗರನ್ನು ತಮ್ಮ ಕಾಲ್ಪನಿಕ ಜಗತ್ತಿಗೆ ಕರೆದೊಯ್ಯುವ” ಶಕ್ತಿಯನ್ನು ಶ್ಲಾಘಿಸಿದೆ.

ಈ ಬಾರಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾರತದ ಅಮಿತಾವ್ ಘೋಷ್ ಹಾಗೂ ಸಲ್ಮಾನ್ ರುಶ್ದಿ ಕೂಡ ಇದ್ದರು. ಇಬ್ಬರೂ ದೀರ್ಘಕಾಲದಿಂದಲೇ ವಿಶ್ವ ಸಾಹಿತ್ಯ ವೇದಿಕೆಯಲ್ಲಿ ಪ್ರಭಾವ ಬೀರಿದ ಲೇಖಕರು.

ಘೋಷ್ ಅವರ “The Shadow Lines, The Hungry Tide”ಮುಂತಾದ ಕೃತಿಗಳು ಭಾರತೀಯ ಇತಿಹಾಸ, ವಲಸೆ, ಮತ್ತು ಪರಿಸರ ಚಿಂತನೆಗಳ ಕುರಿತ ಆಳವಾದ ಅನ್ವೇಷಣೆಗೆ ಹೆಸರುವಾಸಿಯಾಗಿವೆ. ರಶ್ದಿ ಅವರ “Midnight’s Children” ಮತ್ತು “The Satanic Verses” ಕೃತಿಗಳು ಭಾರತೀಯ ಇಂಗ್ಲಿಷ್ ಸಾಹಿತ್ಯದ ದಿಕ್ಕು ತೋರಿಸಿದ ಕೃತಿಗಳೆಂದು ಪರಿಗಣಿಸಲಾಗುತ್ತದೆ.

ಎರಡು ವರ್ಷಗಳ ಗಾಝಾ ‘ನರಮೇಧ’: 20,179 ಕಂದಮ್ಮಗಳನ್ನು ಹತ್ಯೆಗೈದ ಇಸ್ರೇಲ್, ಆಹಾರ ವಂಚಿತರಾದ 12 ಲಕ್ಷಕ್ಕೂ ಅಧಿಕ ಮಕ್ಕಳು

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನವದೆಹಲಿ| ಕೆಂಪು ಕೋಟೆ ಬಳಿ ಕಾರು ಸ್ಫೋಟ; 8 ಸಾವು, ಹಲವರಿಗೆ ಗಾಯ

ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ (ಲಾಲ್ ಕಿಲಾ) ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರಿನಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, 24 ಜನರು...

ಡಿಜಿಟಲ್ ಡ್ಯಾಶ್‌ಬೋರ್ಡ್‌, 24X7 ಆಸ್ಪತ್ರೆ ಬೆಂಬಲ : ಪೋಕ್ಸೋ ಸಂತ್ರಸ್ತರ ಪುನರ್ವಸತಿಗೆ ಮಾದರಿ ಎಸ್‌ಒಪಿ ಬಿಡುಗಡೆ ಮಾಡಿದ ಹೈಕೋರ್ಟ್

ಲೈಂಗಿಕ ದೌರ್ಜನ್ಯಗಳಿಗೆ ಒಳಗಾದ ಅಪ್ರಾಪ್ತರ ರಕ್ಷಣೆ ಮತ್ತು ಪುನರ್ವಸತಿಗೆ ಒಂದು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (Standard Operating Procedure-SOP) ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. "ಹಲವಾರು ಬಾರಿ ಈ ಸಂಬಂಧ ನಿರ್ದೇಶನಗಳನ್ನು...

ತಿರುಪತಿ ಪ್ರವೇಶ ಮಾರ್ಗದಲ್ಲಿ ಮಾಂಸಾಹಾರ ಸೇವನೆ; ಇಬ್ಬರು ನೌಕರರನ್ನು ವಜಾಗೊಳಿಸಿದ ಟಿಟಿಡಿ

ತಿರುಪತಿ ಗಿರಿಯ ದೇವಾಲಯದ ಪ್ರವೇಶ ದ್ವಾರವಾದ ಅಲಿಪಿರಿ ಬಳಿ ಮಾಂಸಾಹಾರ ಸೇವಿಸುತ್ತಿದ್ದಾರೆಂದು ಆರೋಪಿಸಲಾದ ವೀಡಿಯೊ ಕಾಣಿಸಿಕೊಂಡ ನಂತರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇಬ್ಬರು ಹೊರಗುತ್ತಿಗೆ ನೌಕರರನ್ನು ವಜಾಗೊಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ...

ಬಿಹಾರ ವಿಧಾನಸಭೆ ಚುನಾವಣೆ| ಪ್ರಚಾರಕ್ಕೆ ಅಪ್ರಾಪ್ತ ಮಕ್ಕಳ ಬಳಕೆ; ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಎನ್‌ಸಿಪಿಸಿಆರ್‌ ನೋಟಿಸ್

ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕನನ್ನು ವೇದಿಕೆಗೆ ಕರೆತರಲಾಗಿದೆ ಎಂಬ ವರದಿಗಳ ಬಗ್ಗೆ ಭಾರತದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಗಂಭೀರ ಕಳವಳ ವ್ಯಕ್ತಪಡಿಸಿದೆ....

ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಮದ್ಯಪಾನ-ಮೊಬೈಲ್ ಬಳಕೆ; ಹಿರಿಯ ಜೈಲಾಧಿಕಾರಿಗಳ ಅಮಾನತು

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಾನೂನುಬಾಹಿರ ಚಟುವಟಿಕೆಗಳು, ಮೊಬೈಲ್ ಬಳಕೆ, ಮದ್ಯಪಾನ ಮತ್ತು ಹಣ ಕೊಟ್ಟವರಿಗೆ ವಿಐಪಿ ಉಪಚಾರದ ವೀಡಿಯೊಗಳು ವೈರಲ್ ಆದ ನಂತರ ಹಿರಿಯ ಜೈಲು ಅಧಿಕಾರಿಗಳನ್ನು ರಾಜ್ಯ ಸರ್ಕಾರ...

ಮಹಿಳೆಯರು ದೇಶದ ಅತಿ ದೊಡ್ಡ ಅಲ್ಪಸಂಖ್ಯಾತರು : ಸುಪ್ರೀಂ ಕೋರ್ಟ್ ಟಿಪ್ಪಣಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಒದಗಿಸುವ ಸಂವಿಧಾನ (ನೂರ ಆರನೇ ತಿದ್ದುಪಡಿ) ಕಾಯ್ದೆ 2023 (ನಾರಿ ಶಕ್ತಿ ವಂದನ ಅಧಿನಿಯಂ)ರ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಗೆ...

ಎಲ್.ಕೆ ಅಡ್ವಾಣಿಯನ್ನು ಹಾಡಿ ಹೊಗಳಿದ ಶಶಿ ತರೂರ್ : ಅಂತರ ಕಾಯ್ದುಕೊಂಡ ಕಾಂಗ್ರೆಸ್

ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರನ್ನು 'ನಿಜವಾದ ಮುತ್ಸದ್ದಿ' ಎಂದು ಬಣ್ಣಿಸಿದ ಪಕ್ಷದ ಸಂಸದ ಶಶಿ ತರೂರ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ ಕಾಂಗ್ರೆಸ್ ಅಂತರ...

ಮಧ್ಯಪ್ರದೇಶ| ‘ನನ್ನ ಜೊತೆ ಮದ್ಯಪಾನ ಮಾಡುವ ಹಕ್ಕು ನಿನಗಿಲ್ಲ..’; ಎಂದು ದಲಿತ ಯುವಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜಾತಿ ಆಧಾರಿತ ಹಿಂಸಾಚಾರದ ಒಂದು ಆತಂಕಕಾರಿ ಪ್ರಕರಣ ವರದಿಯಾಗಿದ್ದು, ಇಬ್ಬರು ಸ್ನೇಹಿತರ ನಡುವೆ ಕುಡಿದು ನಡೆದ ಜಗಳ ಚಾಕುವಿನಿಂದ ಹಲ್ಲೆಗೆ ಇರಿದ ಹಂತಕ್ಕೆ ತಲುಪಿದೆ. ಪೊಲೀಸರ ಪ್ರಕಾರ, ಮಹಾವೀರ್ ಕಾಲೋನಿಯ ನಿವಾಸಿಗಳಾದ...

‘ಆರ್‌ಎಸ್‌ಎಸ್ ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿ 100 ವರ್ಷ’: ಪ್ರಿಯಾಂಕ್ ಖರ್ಗೆ ಆರೋಪ

ಬೆಂಗಳೂರು: 'ಇತಿಹಾಸವು ಆರ್‌ಎಸ್‌ಎಸ್ ದೇಶಕ್ಕೆ ಬಗೆದ ದ್ರೋಹದ ಉದಾಹರಣೆಗಳಿಂದ ತುಂಬಿಕೊಂಡಿದೆ. ಇಡೀ ಬಿಜೆಪಿ ವ್ಯವಸ್ಥೆ ಎಷ್ಟೇ ಪ್ರಯತ್ನಿಸಿದ್ದರೂ ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಚರಿತ್ರೆಯನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

ಆರ್‌ಎಸ್‌ಎಸ್‌ ನೋಂದಣಿ ಮಾಡಿಕೊಂಡಿಲ್ಲ ಏಕೆ? ಒತ್ತಡಕ್ಕೆ ಮಣಿದು ಉತ್ತರ ಕೊಟ್ಟ ಭಾಗವತ್

ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರ್‌ಎಸ್‌ಎಸ್‌) ನೋಂದಣಿ ಏಕೆ ಮಾಡಿಕೊಂಡಿಲ್ಲ? ಎಂಬ ಪ್ರಶ್ನೆಯ ಸುತ್ತ ಚರ್ಚೆಗಳು ಇತ್ತೀಚೆಗೆ ಕಾವು ಪಡೆದುಕೊಂಡಿವೆ. ಪರಿಣಾಮ, ಸಾಮಾನ್ಯ ಜನರೂ ಕೂಡ ಆರ್‌ಎಸ್‌ಎಸ್‌ ಭಾರತೀಯ ಕಾನೂನಿನಡಿ ನೋಂದಣಿ...