Homeಮುಖಪುಟ"ಧರ್ಮದ ಕಾರಣಕ್ಕೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು" : ಪೋಕ್ಸೋ ಕೇಸ್‌ನಲ್ಲಿ ಖುಲಾಸೆಗೊಂಡ ಮುಸ್ಲಿಂ ಬಳೆ ವ್ಯಾಪಾರಿ

“ಧರ್ಮದ ಕಾರಣಕ್ಕೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು” : ಪೋಕ್ಸೋ ಕೇಸ್‌ನಲ್ಲಿ ಖುಲಾಸೆಗೊಂಡ ಮುಸ್ಲಿಂ ಬಳೆ ವ್ಯಾಪಾರಿ

- Advertisement -
- Advertisement -

ಹಿಂದೂ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ಗುಂಪಿನಿಂದ ಹಲ್ಲೆಗೊಳಗಾಗಿ, ಬಳಿಕ ಪೊಲೀಸರಿಂದ ಬಂಧಿತರಾಗಿದ್ದ ಬಳೆ ವ್ಯಾಪಾರಿಯನ್ನು ಮಧ್ಯ ಪ್ರದೇಶ ಇಂದೋರ್ ನ್ಯಾಯಾಲಯ ಸೋಮವಾರ (ಡಿ.2) ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ತಸ್ಲೀಂ ಅಲೀ ಎಂಬ ಬಳೆ ವ್ಯಾಪಾರಿಗೆ ರಾಖಿ ಹಬ್ಬದ ವೇಳೆ ಬಳೆ ವ್ಯಾಪಾರ ಮಾಡುವ ನೆಪದಲ್ಲಿ ಹಿಂದೂ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಗುಂಪೊಂದು ಥಳಿಸಿತ್ತು. 2021ರ ಆಗಸ್ಟ್ 22ರಂದು ಈ ಘಟನೆ ನಡೆದಿತ್ತು.

ಈ ಕುರಿತ ವೈರಲ್ ವಿಡಿಯೋದಲ್ಲಿ, ತಸ್ಲೀಂ ಅಲೀಗೆ ಥಳಿಸಿದ ಗುಂಪು ಮತ್ತೊಮ್ಮೆ ‘ಹಿಂದೂ ಪ್ರದೇಶ’ ಕ್ಕೆ ಕಾಲಿಡಬೇಡ ಎಂದು ಎಚ್ಚರಿಕೆ ನೀಡಿದ ದೃಶ್ಯವಿತ್ತು. ಈ ವಿಡಿಯೋ ದೇಶದಾದ್ಯಂತ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ತನ್ನ ಮೇಲೆ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ತಸ್ಲೀಂ ಅಲೀ ದೂರು ನೀಡಿದ್ದರು. ಇದೇ ವೇಳೆ 13 ವರ್ಷದ ಬಾಲಕಿಯೊಬ್ಬಳು ತಸ್ಲೀಂ ಅಲೀ ವಿರುದ್ದ ಪ್ರತಿದೂರು ದಾಖಲಿಸಿದ್ದರು. ಆ ದೂರು ಆಧರಿಸಿ ತಸ್ಲೀಂ ಅಲೀ ಮೇಲೆ ಪೋಕ್ಸೋ ಮತ್ತು ಐಪಿಸಿಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಜೈಲಿಗಟ್ಟಿದ್ದರು.

ತನ್ನ ಮೇಲೆ ಹಲ್ಲೆ ನಡೆಸಿದ್ದವರ ವಿರುದ್ಧ ಅಲಿ ಬನಗಂಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐದಾರು ಜನರ ಗುಂಪೊಂದು ತನ್ನ ಹೆಸರನ್ನು ಕೇಳಿ ತನ್ನನ್ನು ಥಳಿಸಿದೆ,ಕೋಮು ನಿಂದನೆಗಳನ್ನು ಮಾಡಿದೆ. ತನ್ನ ಬಳಿಯಿದ್ದ 10,000 ರೂ. ಬೆಲೆಯ ಮೊಬೈಲ್ ಫೋನ್ ಮತ್ತು ಆಧಾರ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಕಿತ್ತುಕೊಂಡಿದೆ ಎಂದು ಹೇಳಿದ್ದರು.

ಅಲೀ ಅವರ ದೂರಿನ ಆಧಾರದಲ್ಲಿ ಪೋಲಿಸರು ನಾಲ್ವರನ್ನು ಬಂಧಿಸಿದ್ದರು. ಆದರೆ, ಇದರ ಬೆನ್ನಲ್ಲೇ 13 ಹರೆಯದ ಬಾಲಕಿ ದೂರು ನೀಡಿದ್ದರಿಂದ, ಪೊಲೀಸರು ಅಲಿ ವಿರುದ್ಧವೇ ಪೊಕ್ಸೊ ಪ್ರಕರಣ ಹೂಡಿ ಜೈಲಿಗೆ ತಳ್ಳಿದ್ದರು.

ವರದಿಗಳ ಪ್ರಕಾರ, ದೂರು ದಾಖಲಿಸಿದ್ದ ಬಾಲಕಿ ಸೇರಿದಂತೆ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರಿಂದ ಇಂದೋರ್ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವಿ ರಶ್ಮಿ ಬಲ್ಟಾರ್ ಅವರು ತಸ್ಲೀಂ ಅಲಿಯನ್ನು ಖುಲಾಸೆಗೊಳಿಸಿದ್ದಾರೆ ಎಂದು ಅಲೀ ಪರ ವಕೀಲ ಶೇಖ್ ಅಲೀಮ್ ತಿಳಿಸಿದ್ದಾರೆ.

ಖುಲಾಸೆಗೊಂಡ ಬಳಿಕ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಲೀ, “ನನಗೆ ಸಂತೋಷ ಮತ್ತು ದುಃಖ ಎರಡೂ ಆಗಿವೆ. ನನ್ನ ಪರವಾಗಿ ನಿಂತವರಿಗೆ, ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದವರಿಗೆ ಮತ್ತು ನನ್ನನ್ನು ಥಳಿಸಿದವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನ ಧರ್ಮ ಮತ್ತು ನನ್ನ ಹೆಸರಿನ ಕಾರಣದಿಂದಾಗಿ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು” ಎಂದಿದ್ದಾರೆ.

“ನಾನು ಶಾಂತಿ ಬಯಸಿದ್ದೇನೆ, ನಡೆದು ಹೋದ ಘಟನೆಯನ್ನು ಮರೆಯಲು ಬಯಸುತ್ತೇನೆ. ಇಂದೋರ್ ನಗರದ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಅಲ್ಲಿಯ ಎಲ್ಲಾ ನಿವಾಸಿಗಳು ನನ್ನ ಸೋದರ- ಸೋದರಿಯರು. ಜೈಲಿನಲ್ಲಿ ಜೇಲರ್‌ಗಳಾಗಲಿ, ಪೋಲಿಸರಾಗಲಿ ನನಗೆ ಕಿರುಕುಳ ನೀಡಿರಲಿಲ್ಲ. ನಾನು ಸಂವಿಧಾನ ಮತ್ತು ನ್ಯಾಯಾಂಗದಲ್ಲಿ ವಿಶ್ವಾಸವನ್ನು ಹೊಂದಿದ್ದೆ” ಎಂದು ಹೇಳಿದ್ದಾರೆ.

“ಡಿಸೆಂಬರ್ 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದಾಗ ನಾನು ಮತ್ತೊಮ್ಮೆ ಇಂದೋರ್‌ನ ಬೀದಿಗೆ ಹೋಗಿದ್ದೆ. ಆ ವೇಳೆ ನನ್ನಲ್ಲಿ ಭಯ ಆವರಿಸಿತ್ತು. ನನಗೆ ಆರು ಮಕ್ಕಳಿದ್ದಾರೆ. ಅವರ ಹೊಟ್ಟೆ ತುಂಬಿಸಬೇಕಿದೆ. ಹಾಗಾಗಿ, ನಾನು ಮತ್ತೆ ಇಂದೋರ್‌ಗೆ ಹೋಗುತ್ತೇನೆ. ಯುಪಿಯಿಂದ ಪಂಜಾಬ್, ಇಂದೋರ್‌ನ ಬೀದಿಗಳಿಗೆ ತೆರಳಿ ಜಾತ್ರೆ, ಮೇಳಗಳಲ್ಲಿ ಬಳೆ ವ್ಯಾಪಾರ ಮಾಡುವುದೇ ನನ್ನ ಕಾಯಕ. ನನ್ನ ತಂದೆ, ಅಜ್ಜ ಕೂಡ ಇದನ್ನೇ ಮಾಡಿದ್ದರು” ಎಂದು ತಸ್ಲೀಂ ಅಲೀ ತಿಳಿಸಿದ್ದಾರೆ

ವರದಿಗಳ ಪ್ರಕಾರ, ಮುಸ್ಲಿಂ ವ್ಯಾಪಾರಿಯಾದ ತಸ್ಲೀಂ ಅಲೀ ತನ್ನ ಹೆಸರನ್ನು ಮರೆಮಾಚಿ ‘ಗೋಲು ಸಿಂಗ್’ ಎಂಬ ಹೆಸರಿನಲ್ಲಿ ಹಿಂದೂ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ. ಅಸಲಿಗೆ ‘ಗೋಲು’ ಎಂಬುವುದು ತಸ್ಲೀಂ ಅವರ ಊರಿನ ಅಥವಾ ನಿಕ್ ನೇಮ್ ಆಗಿದೆ. ಸಿಂಗ್ ಎನ್ನುವುದು ತಂದೆಯ ಹೆಸರಿನಿಂದ ಬಂದಿದೆ. ತಸ್ಲೀಂ ಅವರ ತಂದೆಯ ಹೆಸರು ಮೊಹರ್ ಅಲೀ. ದಾಖಲೆಗಳಲ್ಲಿ ಅದು ತಪ್ಪಾಗಿ ‘ಮೊಹರ್ ಸಿಂಗ್’ ಎಂದು ಬಂದಿತ್ತು. ನಂತರ ಅದು ಮೊಹರ್ ಅವರ ಮಗ ತಸ್ಲೀಂ ಆಧಾರ್ ಕಾರ್ಡ್‌ನಲ್ಲೂ ಹಾಗೇಯೇ ಮುಂದುವರೆದಿದೆ. ನ್ಯಾಯಾಲಯ ಕೂಡ ಈ ಅಂಶವನ್ನು ಗಮನಿಸಿದೆ. ಪ್ರಾಸಿಕ್ಯೂಷನ್ ತಸ್ಲೀಂ ಅಲೀಯ ಅಪರಾಧವನ್ನು ರುಜುವಾತು ಮಾಡುವಲ್ಲಿ ವಿಫಲವಾಗಿದೆ.

ತಸ್ಲೀಂ ಅಲೀ ಖುಲಾಸೆಗೊಂಡಿರುವ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಖ್ಯಾತ ಫ್ಯಾಕ್ಟ್‌ಚೆಕ್ಕರ್ ಮೊಹಮ್ಮದ್ ಝುಬೈರ್, “ಅಲೀ ಅವರು ಹಲ್ಲೆಗೊಳಗಾದಾಗ ನ್ಯೂಸ್‌ ಚಾನೆಲ್‌ಗಳು ‘ಲವ್‌ ಜಿಹಾದ್’ ಎಂಬ ಶೀರ್ಷಿಕೆ ಕೊಟ್ಟು ಸುದ್ದಿ ಮಾಡಿತ್ತು. ಈಗ ಅವರು ಎಲ್ಲಾ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಎಷ್ಟು ಚಾನೆಲ್‌ಗಳು ಸುದ್ದಿ ಮಾಡಿವೆ? ಎಂದು ಪ್ರಶ್ನಿಸಿದ್ದಾರೆ.

ಅವತ್ತು ‘ಬಳೆ ನೆಪ..ಲವ್ ಜಿಹಾದ್ ಗುರಿ’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದ್ದ ನೀವು ಖುಲಾಸೆಗೊಂಡ ಬಗ್ಗೆ ಸುದ್ದಿ ಮಾಡಿದ್ದೀರಾ? ಎಂದು ನ್ಯೂಸ್ 18 ಮಧ್ಯ ಪ್ರದೇಶ, ಉತ್ತರಾಖಂಡ ಚಾನೆಲ್‌ಗೆ ಕೇಳಿದ್ದಾರೆ.

ಇದನ್ನೂ ಓದಿ : ಸಂಭಾಲ್ ನಂತರ ಮತ್ತೊಂದು ವಿವಾದ: ಜಾಮಾ ಮಸೀದಿಯ ಮಾಲೀಕತ್ವಕ್ಕಾಗಿ ನ್ಯಾಯಾಲಯದ ಮೊರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...

ತಲೆ ಮರೆಸಿಕೊಂಡಿದ್ದ ಸ್ವತಂತ್ರ ಭಾರದ್ವಾಜ್‌ ಅರೆಸ್ಟ್ : ಪೋಕ್ಸೋ ಅಡಿ ಮತ್ತೊಂದು ಪ್ರಕರಣ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ 'ಇನ್‌ಫ್ಲುಯೆನ್ಸರ್' ಸ್ವತಂತ್ರ...

ಆರ್‌ಎಸ್ಎಸ್ ಬೆಂಬಲಿತ ಗುಂಪುಗಳಿಂದ ದೇಣಿಗೆ ಸ್ವೀಕರಿಸದಿರಲು ಅಮೆರಿಕದ ರಾಜಕಾರಣಿಗಳಿಂದ ಪ್ರತಿಜ್ಞೆ

ಅಮೆರಿಕದ ಸುಮಾರು 90 ಜನಪ್ರತಿನಿಧಿಗಳು ಮತ್ತು ರಾಜಕೀಯ ಅಭ್ಯರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಬೆಂಬಲಿತ ಗುಂಪುಗಳಿಂದ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದುತ್ವ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್...

KPSC ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ರಾಜಕೀಯ ಪಕ್ಷ ನೋಡದೆ ನಿರ್ದಾಕ್ಷಿಣ್ಯ ಕ್ರಮ – ಸಚಿವ ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ...

ಉತ್ತರ ಪ್ರದೇಶ: ಸಹಾರನ್‌ಪುರ ಕಲೆಕ್ಟರೇಟ್ ಮಸೀದಿ ಧ್ವಂಸ, ‘ಬುಲ್ಡೋಜರ್ ರಾಜಕಾರಣ’ಕ್ಕೆ ವಿಪಕ್ಷಗಳಿಂದ ಖಂಡನೆ!

ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ...

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...

ರಾಯಚೂರಿನಲ್ಲಿ ದಲಿತರ ಸರಣಿ ಕೊಲೆ: ಸಂತ್ರಸ್ತರ ಮನೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ...