Homeಮುಖಪುಟ"ಧರ್ಮದ ಕಾರಣಕ್ಕೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು" : ಪೋಕ್ಸೋ ಕೇಸ್‌ನಲ್ಲಿ ಖುಲಾಸೆಗೊಂಡ ಮುಸ್ಲಿಂ ಬಳೆ ವ್ಯಾಪಾರಿ

“ಧರ್ಮದ ಕಾರಣಕ್ಕೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು” : ಪೋಕ್ಸೋ ಕೇಸ್‌ನಲ್ಲಿ ಖುಲಾಸೆಗೊಂಡ ಮುಸ್ಲಿಂ ಬಳೆ ವ್ಯಾಪಾರಿ

- Advertisement -
- Advertisement -

ಹಿಂದೂ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ಗುಂಪಿನಿಂದ ಹಲ್ಲೆಗೊಳಗಾಗಿ, ಬಳಿಕ ಪೊಲೀಸರಿಂದ ಬಂಧಿತರಾಗಿದ್ದ ಬಳೆ ವ್ಯಾಪಾರಿಯನ್ನು ಮಧ್ಯ ಪ್ರದೇಶ ಇಂದೋರ್ ನ್ಯಾಯಾಲಯ ಸೋಮವಾರ (ಡಿ.2) ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ತಸ್ಲೀಂ ಅಲೀ ಎಂಬ ಬಳೆ ವ್ಯಾಪಾರಿಗೆ ರಾಖಿ ಹಬ್ಬದ ವೇಳೆ ಬಳೆ ವ್ಯಾಪಾರ ಮಾಡುವ ನೆಪದಲ್ಲಿ ಹಿಂದೂ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಗುಂಪೊಂದು ಥಳಿಸಿತ್ತು. 2021ರ ಆಗಸ್ಟ್ 22ರಂದು ಈ ಘಟನೆ ನಡೆದಿತ್ತು.

ಈ ಕುರಿತ ವೈರಲ್ ವಿಡಿಯೋದಲ್ಲಿ, ತಸ್ಲೀಂ ಅಲೀಗೆ ಥಳಿಸಿದ ಗುಂಪು ಮತ್ತೊಮ್ಮೆ ‘ಹಿಂದೂ ಪ್ರದೇಶ’ ಕ್ಕೆ ಕಾಲಿಡಬೇಡ ಎಂದು ಎಚ್ಚರಿಕೆ ನೀಡಿದ ದೃಶ್ಯವಿತ್ತು. ಈ ವಿಡಿಯೋ ದೇಶದಾದ್ಯಂತ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ತನ್ನ ಮೇಲೆ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ತಸ್ಲೀಂ ಅಲೀ ದೂರು ನೀಡಿದ್ದರು. ಇದೇ ವೇಳೆ 13 ವರ್ಷದ ಬಾಲಕಿಯೊಬ್ಬಳು ತಸ್ಲೀಂ ಅಲೀ ವಿರುದ್ದ ಪ್ರತಿದೂರು ದಾಖಲಿಸಿದ್ದರು. ಆ ದೂರು ಆಧರಿಸಿ ತಸ್ಲೀಂ ಅಲೀ ಮೇಲೆ ಪೋಕ್ಸೋ ಮತ್ತು ಐಪಿಸಿಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಜೈಲಿಗಟ್ಟಿದ್ದರು.

ತನ್ನ ಮೇಲೆ ಹಲ್ಲೆ ನಡೆಸಿದ್ದವರ ವಿರುದ್ಧ ಅಲಿ ಬನಗಂಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐದಾರು ಜನರ ಗುಂಪೊಂದು ತನ್ನ ಹೆಸರನ್ನು ಕೇಳಿ ತನ್ನನ್ನು ಥಳಿಸಿದೆ,ಕೋಮು ನಿಂದನೆಗಳನ್ನು ಮಾಡಿದೆ. ತನ್ನ ಬಳಿಯಿದ್ದ 10,000 ರೂ. ಬೆಲೆಯ ಮೊಬೈಲ್ ಫೋನ್ ಮತ್ತು ಆಧಾರ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಕಿತ್ತುಕೊಂಡಿದೆ ಎಂದು ಹೇಳಿದ್ದರು.

ಅಲೀ ಅವರ ದೂರಿನ ಆಧಾರದಲ್ಲಿ ಪೋಲಿಸರು ನಾಲ್ವರನ್ನು ಬಂಧಿಸಿದ್ದರು. ಆದರೆ, ಇದರ ಬೆನ್ನಲ್ಲೇ 13 ಹರೆಯದ ಬಾಲಕಿ ದೂರು ನೀಡಿದ್ದರಿಂದ, ಪೊಲೀಸರು ಅಲಿ ವಿರುದ್ಧವೇ ಪೊಕ್ಸೊ ಪ್ರಕರಣ ಹೂಡಿ ಜೈಲಿಗೆ ತಳ್ಳಿದ್ದರು.

ವರದಿಗಳ ಪ್ರಕಾರ, ದೂರು ದಾಖಲಿಸಿದ್ದ ಬಾಲಕಿ ಸೇರಿದಂತೆ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರಿಂದ ಇಂದೋರ್ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವಿ ರಶ್ಮಿ ಬಲ್ಟಾರ್ ಅವರು ತಸ್ಲೀಂ ಅಲಿಯನ್ನು ಖುಲಾಸೆಗೊಳಿಸಿದ್ದಾರೆ ಎಂದು ಅಲೀ ಪರ ವಕೀಲ ಶೇಖ್ ಅಲೀಮ್ ತಿಳಿಸಿದ್ದಾರೆ.

ಖುಲಾಸೆಗೊಂಡ ಬಳಿಕ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಲೀ, “ನನಗೆ ಸಂತೋಷ ಮತ್ತು ದುಃಖ ಎರಡೂ ಆಗಿವೆ. ನನ್ನ ಪರವಾಗಿ ನಿಂತವರಿಗೆ, ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದವರಿಗೆ ಮತ್ತು ನನ್ನನ್ನು ಥಳಿಸಿದವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನ ಧರ್ಮ ಮತ್ತು ನನ್ನ ಹೆಸರಿನ ಕಾರಣದಿಂದಾಗಿ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು” ಎಂದಿದ್ದಾರೆ.

“ನಾನು ಶಾಂತಿ ಬಯಸಿದ್ದೇನೆ, ನಡೆದು ಹೋದ ಘಟನೆಯನ್ನು ಮರೆಯಲು ಬಯಸುತ್ತೇನೆ. ಇಂದೋರ್ ನಗರದ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಅಲ್ಲಿಯ ಎಲ್ಲಾ ನಿವಾಸಿಗಳು ನನ್ನ ಸೋದರ- ಸೋದರಿಯರು. ಜೈಲಿನಲ್ಲಿ ಜೇಲರ್‌ಗಳಾಗಲಿ, ಪೋಲಿಸರಾಗಲಿ ನನಗೆ ಕಿರುಕುಳ ನೀಡಿರಲಿಲ್ಲ. ನಾನು ಸಂವಿಧಾನ ಮತ್ತು ನ್ಯಾಯಾಂಗದಲ್ಲಿ ವಿಶ್ವಾಸವನ್ನು ಹೊಂದಿದ್ದೆ” ಎಂದು ಹೇಳಿದ್ದಾರೆ.

“ಡಿಸೆಂಬರ್ 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದಾಗ ನಾನು ಮತ್ತೊಮ್ಮೆ ಇಂದೋರ್‌ನ ಬೀದಿಗೆ ಹೋಗಿದ್ದೆ. ಆ ವೇಳೆ ನನ್ನಲ್ಲಿ ಭಯ ಆವರಿಸಿತ್ತು. ನನಗೆ ಆರು ಮಕ್ಕಳಿದ್ದಾರೆ. ಅವರ ಹೊಟ್ಟೆ ತುಂಬಿಸಬೇಕಿದೆ. ಹಾಗಾಗಿ, ನಾನು ಮತ್ತೆ ಇಂದೋರ್‌ಗೆ ಹೋಗುತ್ತೇನೆ. ಯುಪಿಯಿಂದ ಪಂಜಾಬ್, ಇಂದೋರ್‌ನ ಬೀದಿಗಳಿಗೆ ತೆರಳಿ ಜಾತ್ರೆ, ಮೇಳಗಳಲ್ಲಿ ಬಳೆ ವ್ಯಾಪಾರ ಮಾಡುವುದೇ ನನ್ನ ಕಾಯಕ. ನನ್ನ ತಂದೆ, ಅಜ್ಜ ಕೂಡ ಇದನ್ನೇ ಮಾಡಿದ್ದರು” ಎಂದು ತಸ್ಲೀಂ ಅಲೀ ತಿಳಿಸಿದ್ದಾರೆ

ವರದಿಗಳ ಪ್ರಕಾರ, ಮುಸ್ಲಿಂ ವ್ಯಾಪಾರಿಯಾದ ತಸ್ಲೀಂ ಅಲೀ ತನ್ನ ಹೆಸರನ್ನು ಮರೆಮಾಚಿ ‘ಗೋಲು ಸಿಂಗ್’ ಎಂಬ ಹೆಸರಿನಲ್ಲಿ ಹಿಂದೂ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ. ಅಸಲಿಗೆ ‘ಗೋಲು’ ಎಂಬುವುದು ತಸ್ಲೀಂ ಅವರ ಊರಿನ ಅಥವಾ ನಿಕ್ ನೇಮ್ ಆಗಿದೆ. ಸಿಂಗ್ ಎನ್ನುವುದು ತಂದೆಯ ಹೆಸರಿನಿಂದ ಬಂದಿದೆ. ತಸ್ಲೀಂ ಅವರ ತಂದೆಯ ಹೆಸರು ಮೊಹರ್ ಅಲೀ. ದಾಖಲೆಗಳಲ್ಲಿ ಅದು ತಪ್ಪಾಗಿ ‘ಮೊಹರ್ ಸಿಂಗ್’ ಎಂದು ಬಂದಿತ್ತು. ನಂತರ ಅದು ಮೊಹರ್ ಅವರ ಮಗ ತಸ್ಲೀಂ ಆಧಾರ್ ಕಾರ್ಡ್‌ನಲ್ಲೂ ಹಾಗೇಯೇ ಮುಂದುವರೆದಿದೆ. ನ್ಯಾಯಾಲಯ ಕೂಡ ಈ ಅಂಶವನ್ನು ಗಮನಿಸಿದೆ. ಪ್ರಾಸಿಕ್ಯೂಷನ್ ತಸ್ಲೀಂ ಅಲೀಯ ಅಪರಾಧವನ್ನು ರುಜುವಾತು ಮಾಡುವಲ್ಲಿ ವಿಫಲವಾಗಿದೆ.

ತಸ್ಲೀಂ ಅಲೀ ಖುಲಾಸೆಗೊಂಡಿರುವ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಖ್ಯಾತ ಫ್ಯಾಕ್ಟ್‌ಚೆಕ್ಕರ್ ಮೊಹಮ್ಮದ್ ಝುಬೈರ್, “ಅಲೀ ಅವರು ಹಲ್ಲೆಗೊಳಗಾದಾಗ ನ್ಯೂಸ್‌ ಚಾನೆಲ್‌ಗಳು ‘ಲವ್‌ ಜಿಹಾದ್’ ಎಂಬ ಶೀರ್ಷಿಕೆ ಕೊಟ್ಟು ಸುದ್ದಿ ಮಾಡಿತ್ತು. ಈಗ ಅವರು ಎಲ್ಲಾ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಎಷ್ಟು ಚಾನೆಲ್‌ಗಳು ಸುದ್ದಿ ಮಾಡಿವೆ? ಎಂದು ಪ್ರಶ್ನಿಸಿದ್ದಾರೆ.

ಅವತ್ತು ‘ಬಳೆ ನೆಪ..ಲವ್ ಜಿಹಾದ್ ಗುರಿ’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದ್ದ ನೀವು ಖುಲಾಸೆಗೊಂಡ ಬಗ್ಗೆ ಸುದ್ದಿ ಮಾಡಿದ್ದೀರಾ? ಎಂದು ನ್ಯೂಸ್ 18 ಮಧ್ಯ ಪ್ರದೇಶ, ಉತ್ತರಾಖಂಡ ಚಾನೆಲ್‌ಗೆ ಕೇಳಿದ್ದಾರೆ.

ಇದನ್ನೂ ಓದಿ : ಸಂಭಾಲ್ ನಂತರ ಮತ್ತೊಂದು ವಿವಾದ: ಜಾಮಾ ಮಸೀದಿಯ ಮಾಲೀಕತ್ವಕ್ಕಾಗಿ ನ್ಯಾಯಾಲಯದ ಮೊರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...