Homeಮುಖಪುಟಸತತ ವೈಫಲ್ಯಗಳ ನಡುವೆಯೂ ಮೋದಿ ಭಾರೀ ಜನ ಬೆಂಬಲ ಹೊಂದಿರುವುದು ಹೀಗೆ...

ಸತತ ವೈಫಲ್ಯಗಳ ನಡುವೆಯೂ ಮೋದಿ ಭಾರೀ ಜನ ಬೆಂಬಲ ಹೊಂದಿರುವುದು ಹೀಗೆ…

- Advertisement -
- Advertisement -

ಮೋದಿಯವರ ಕಳೆದ ಆರು ವರ್ಷಗಳ ಅವಧಿಯಲ್ಲಿ ಹಲವಾರು ವಿಷಯಗಳಲ್ಲಿ ಸತತ ವೈಫಲ್ಯ ಕಂಡಿದ್ದಾರೆ. ಈ ಒಂದು ವರ್ಷದಿಂದಂತೂ ವೈಫಲ್ಯಗಳ ಸಂಖ್ಯೆ ಏರುತ್ತಲೇ ಇದೆ. ಆದರೆ ಇದರಿಂದ ಮೋದಿಯವರ ಜನಪ್ರಿಯತೆ ಅಥವಾ ಜನಬೆಂಬಲ ಕಡಿಮೆಯಾಗಿಲ್ಲ. ಏಕೆ? ಸತತ ವೈಫಲ್ಯಗಳ ನಡುವೆಯೂ ಅವರು ಭಾರೀ ಜನ ಬೆಂಬಲ ಹೊಂದಿರುವುದು ಹೇಗೆ?

ಅದಕ್ಕೆ ಉತ್ತರ ಹುಡುಕುವ ಮೊದಲು ಮೋದಿ 2.0 ವೈಫಲ್ಯಗಳ ಪಟ್ಟಿ ನೋಡೋಣ.

1. CAA/NRC ತರುತ್ತೇವೆ ಅಂತ ಜನಗಳ ಮಧ್ಯೆ ಭಯದ ವಾತಾವರಣ ಮೂಡಿಸಿದ್ದು.

2. GDP ಕಳೆದ ಕೆಲವು ವರ್ಷದಿಂದ ಸತತ ಇಳಿಕೆ ಆಗುತ್ತಿದ್ದು JAN-MAR ತ್ರೈಮಾಸಿಕದಲ್ಲಿ 3.1% ಕುಸಿದಿದೆ. ಅಂದರೆ ಇದು ಲಾಕ್‌ಡೌನ್ ಆಗುವ ಮುಂಚಿನ ತಿಂಗಳಿನ ಪರಿಸ್ಥಿತಿಯಾದರೆ ಲಾಕ್‌ಡೌನ್‌ ನಂತರದ್ದು ಹೇಗಿರುತ್ತದೆ? ಈ ಜಿಡಿಪಿ ದರ ಕಳೆದ 11 ವರ್ಷದಲ್ಲೇ ಅತಿ ಕಡಿಮೆ. ಅಲ್ಲದೇ ಇದು ನೆರೆಹೊರೆಯ ಪಾಕಿಸ್ತಾನ,  ಬಾಂಗ್ಲಾದೇಶಕ್ಕಿಂತ ಕಡಿಮೆ ಇದೆ.

3. ಕೆಟ್ಟ ವಿದೇಶಾಂಗ ನೀತಿಗಳಿಂದ ಪುಟ್ಟ ರಾಷ್ಟ್ರಗಳಾದ ನೇಪಾಳ, ಮಾಲ್ಡೀವ್ಸ್ ಭಾರತದ ವಿರುದ್ಧವೇ ಮಾತಾನಾಡುತ್ತಿರುವುದು.

4. ಚೀನಾ ದೇಶವು ಭಾರತದ ಗಡಿ ಒಳಗೆ ಅತಿಕ್ರಮ ಪ್ರವೇಶ ಮಾಡಿದೆ. ಆದರೂ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಇರುವುದು.

5. ಈ ವರ್ಷದ ಜನವರಿ 30ರಂದೇ ಮೊದಲ ಕೊರೊನ ಪ್ರಕರಣ ￰ದಾಖಲಾದರೂ, ಮಾರ್ಚ್‌ ಮಧ್ಯಭಾಗದವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು.

6. ಫೆಬ್ರವರಿ 24 ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕರೆಸಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಿ ಗುಜರಾತ್, ಮಹಾರಾಷ್ಟ್ರದಲ್ಲಿ ಕೊರೊನ ವ್ಯಾಪಕವಾಗಿ ಹಬ್ಬಲು ಕಾರಣವಾಗಿದ್ದು.

7. ಕೊರೊನಾ ವ್ಯಾಪಕವಾಗಿ ಹರುಡುತ್ತಿದೆ ಎಂದು ಗೊತ್ತಿದ್ದರೂ ಮಧ್ಯಪ್ರದೇಶಕ್ಕೆ ತಮ್ಮ ಬಿಜೆಪಿ ಸರ್ಕಾರ ರಚಿಸುವುದಕ್ಕಾಗಿ ಜನರಿಗೆ ಮಾಹಿತಿ ಕೊಡದೆ ಮುಚ್ಚಿಟ್ಟಿದ್ದು.

8. ದೇಶದ ಜನರಿಗೆ ಯಾವುದೇ ಮಾಹಿತಿ ಕೊಡದೆ ರಾತ್ರೋರಾತ್ರಿ ಅವೈಜ್ಞಾನಿಕವಾಗಿ ಲಾಕ್‌ಡೌನ್‌ ಘೋಷಿಸಿದ್ದು.

9. ವಲಸೆ ಕಾರ್ಮಿಕರಿಗೆ ಯಾವುದೇ ಸೌಲಭ್ಯ ಒದಗಿಸದೆ, ನಿರ್ಲಕ್ಷ್ಯ ಮಾಡಿದ್ದರಿಂದ ನೂರಾರು ಜನ ರಸ್ತೆಗಳಲ್ಲಿಯೇ ಪ್ರಾಣ ಬಿಟ್ಟಿದ್ದು,

10. ಮೊದಲೇ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಮುಚ್ಚುವ ಸ್ಥಿತಿಯಲ್ಲಿದ್ದವು. ಅವುಗಳ  ಪುನಶ್ಚೇತನಕ್ಕೆ ಸಾಕಷ್ಟು ಹಣಕಾಸಿನ ನೆರವು ಕೊಡದೆ 20ಲಕ್ಷ ಕೋಟಿ ಅನ್ನೋ ಸಾಲದ package ಘೋಷಿಸಿ ಮಾಡಿ ಲಕ್ಷಾಂತರ ವ್ಯಾಪಾರಸ್ಥರು ಬೀದಿಗೆ ಬಿಳೋ ಹಾಗೆ ಮಾಡಿದ್ದು.

ಇವೆಲ್ಲವೂ ಮೇಲ್ನೋಟಕ್ಕೆ ಕಾಣುವ ವೈಫಲ್ಯಗಳು. ಇನ್ನು ಬಹಳಷ್ಟು ವೈಫಲ್ಯಗಳು ಕಾಣವುದಿಲ್ಲ. ಆದರೆ  ಅದರ ಪರಿಣಾಮ ಮುಂದಿನ ದಿನಗಳಲ್ಲಿ ಕಾಣುತ್ತೇವೆ.

ಈಗ ಮೋದಿ ಜನ ಬೆಂಬಲದ ಹಿಂದೆ ಇವರು ಸತ್ಯವನ್ನು ತಿಳಿಯುವ. ಅಂದರೆ ಒಂದು ವ್ಯವಸ್ಥೆ ಹೇಗೆ ಮೋದಿಯನ್ನ ಅನಪೇಕ್ಷಿತ ನಾಯಕನ್ನನ್ನಾಗಿ ಮಾಡಿದ್ರು ಅನ್ನೋದನ್ನ ತಿಳ್ಕೊಳೋ ಸಣ್ಣ ಪ್ರಯತ್ನ ಮಾಡೋಣ.

ನಮ್ಮ ದೇಶದಲ್ಲಿ ಪುರಾಣ, ಪುಣ್ಯ ಕಥೆಗಳಿಗೆ ಕಮ್ಮಿ ಇಲ್ಲ. ಅದರಿಂದ ಬಹುಪಾಲು ಜನಕ್ಕೆ ದೇವರ ಮೇಲೆ ಅತೀವ ಭಯ ಮತ್ತೆ ಭಕ್ತಿ. ನಮಗೆ ದೇವರ ಮೇಲೆ ಇಷ್ಟು ಭಯ ಭಕ್ತಿ ಬರಕ್ಕೆ ಕಾರಣ ದೇವರುಗಳ ಮೇಲೆ ಇರೋ ಕಥೆಗಳು. ಈಗ ಯಾವುದೇ ದೇವರ ಕಥೆಗಳನ್ನು ನೋಡಿದ್ರೆ ನಮಗೆ ಅಲ್ಲಿ ದೇವರ ಹುಟ್ಟು, ಬಾಲ್ಯ, ಯೌವನ ಮತ್ತೆ ದೇವರಿಂದ ರಾಕ್ಷಸರ ಸಂಹಾರ ಆಗೋವರೆಗೂ ಅತಿರಂಜಿತವಾಗಿ ಇರುತ್ತೆ. ಈಗ ಮೋದಿಯವರ ಹುಟ್ಟು ತಗೋಳಿ. ಅದು ಬಡತನದಲ್ಲಿ ಆಗಿದ್ದು ಮನೆಯಲ್ಲಿ ಬಹಳ ಕಷ್ಟ ಇದ್ರೂ ಮೋದಿ ಸಾಮಾನ್ಯ ಬಾಲಕರಿಗಿಂತ ಸ್ವಾಭಿಮಾನಿ, ಚುರುಕು. ಮತ್ತು ಮೋದಿ ದೇಶ ಪ್ರೇಮ ಎಂತದ್ದು ಅಂದ್ರೆ ಟೀಗಳನ್ನ ಸೈನಿಕರಿಗೆ ಉಚಿತವಾಗಿ ಕೊಡ್ತಾ ಇದ್ರೂ. ಮೋದಿ ಧೈರ್ಯ ಎಂತದ್ದು ಅಂದ್ರೆ ಚಿಕ್ಕ ಹುಡುಗನಾಗಿದ್ದಾಗ ಮೊಸಳೆ ಹಿಡ್ಕೊಂಡು ಮನೆಗೆ ಬಂದಿದ್ರು. ಇದೊಂತರ ಶ್ರೀಕೃಷ್ಣ ಬಾಲ್ಯದಲ್ಲಿ ಕಾಳಿಂಗಮರ್ದನ ಮಾಡಿದ ರೀತಿ ಇಂತ ಕಟ್ಟು ಕಥೆಗಳನ್ನ ಜನಗಳ ತಲೇಲಿ ತುರುಕಿದ್ದು.

ಆಮೇಲೆ ಮದುವೆ ಆಗಿ ವಾರದಲ್ಲೇ ಹೆಂಡತಿ ಬಿಟ್ಟಿದ್ದನ್ನು ಎಲ್ಲ ಬಿಟ್ಟು ಸನ್ಯಾಸಿ ಆದ ಬುದ್ಧನಿಗೆ ಹೋಲಿಕೆ ಮಾಡೋದು. ಬುದ್ಧನ ತರ ಎಲ್ಲ ಬಿಟ್ಟು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿದ್ರು ಅಂತ, ಮೋದಿ ಸಾಮಾನ್ಯ ಜನರ ತರ ಊಟ, ನಿದ್ರೆ ಮಾಡಲ್ಲ ದಿನಕ್ಕೆ 18 ಘಂಟೆ ದುಡೀತಾರೆ. ಇದೆಲ್ಲ ಅವರ ಸ್ವಂತಕ್ಕೆ ಮಾಡಿಲ್ಲ. ಎಲ್ಲ ದೇಶಸೇವೆಗೇ ಅಂತ ನಂಬಿಸೋದು. ಒಂದು ರೀತಿ ಮೋದಿನ ದೇವರ ಸಮ ಇಲ್ಲ ಅದಕ್ಕಿಂತ ಜಾಸ್ತಿ ಅನ್ನೋ ತರ ಮಾಡಿದ್ದಾರೆ.

ಮೋದಿಗೇ ದುರ್ಬಲ ವಿರೋಧಿಗಳನ್ನು ಎದುರು ನಿಲ್ಲಿಸಲು ಮಾಧ್ಯಮದ ಪಾತ್ರ ಬಹಳಷ್ಟಿದೆ. ಪಾಕಿಸ್ತಾನ ಇರಬಹುದು ಇಲ್ಲ ರಾಹುಲ್ ಇರಬಹುದು. ಯಾವ ಕಡೆಯಿಂದ ಪಾಕಿಸ್ತಾನ ಇಂಡಿಯಾಗೇ ಸಮ ಇಲ್ಲ ಅನ್ನೋದು ಸಣ್ಣ ಮಕ್ಕಳಿಗೂ ಗೊತ್ತು. ಇದೆ ಮಾಧ್ಯಮ ಮೋದಿ ಬಂದ್ರೆ ಪಾಕಿಸ್ತಾನದ ಭಯ ಇರಲ್ಲ, ಪಾಕಿಸ್ತಾನನ ನಿರ್ನಾಮ ಮಾಡ್ತಾರೆ ಅಂತ ನಂಬಿಸಿದ್ದಾರೆ.

ಯಾವ ಮೋದಿ ಬಂದ್ರೆ ಹಿಂದೂ ಧರ್ಮದ ಪುನರುತ್ತಾನ ಆಗುತ್ತೆ ಅಂತ ಮಾಧ್ಯಮಗಳು ಹೇಳಿದ್ರೋ ಅದೇ ಮಾಧ್ಯಮ ಮತ್ತೆ ಹಿಂದೂ ಧರ್ಮ ಅಪಾಯದಲ್ಲಿದೆ ಅಂತ ಭ್ರಮೆ ಹುಟ್ಟಿಸಿದ್ದಾರೆ. ಹಾಗಾದ್ರೆ ಮೋದಿ ಬಂದು ಇಷ್ಟು ವರ್ಷ ಆದ್ರೂ ಅಪಾಯ ಹೋಗಿಲ್ಲ ಅಂದ್ರೆ ಇನ್ನು ಇವರನ್ನ ಯಾಕೆ ಗೆಲ್ಲಿಸಬೇಕು ಅಂತ ಯಾರು ಯಾಕೆ ಯೋಚನೆ ಮಾಡ್ತಿಲ್ಲ ? ಇದೆ ತರಹ ಜರ್ಮನ್ ನಾಝಿಗಳಲ್ಲೂ ಭಯ ಹುಟ್ಟಿಸಿ ಗೆಲ್ಲುತ್ತಿದ್ದರು. ಅದನ್ನೆ ಇಲ್ಲಿಯೂ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಮೋದಿ ಹೇಳೋ ಪ್ರತಿ ಸುಳ್ಳಿಗೂ ಒಂದು ಕಥೆ ಕಟ್ಟಿ ಅದನ್ನ ಜನಗಳಿಗೆ ತಲುಪಿಸೋದು SOCIAL MEDIA ಐಟಿ ಸೆಲ್‌ಗಳ ಕೆಲಸ. ಅವರ ಐಟಿ ಸೆಲ್‌ ಎಷ್ಟು ಪ್ರಭಾವಶಾಲಿ ಎಂದರೆ ಕನಿಷ್ಠ 2000 ದಷ್ಟು FAKE WEBSITE ಗಳು ಮೋದಿ ಪರವಾಗಿ ಸತತ 24 ಘಂಟೆ ಕೆಲಸ ￰ಮಾಡುತ್ತಿದ್ದಾರೆ. ಭಾರತದ ನಿಜ ಇಂಡಿಯನ್‌ ಆರ್ಮಿ ಫೇಸ್‌ಬುಕ್‌ ಪುಟಕ್ಕಿಂತಲು ಬಿಜೆಪಿಯ INDIAN ARMY FAN PAGE ಪುಟಕ್ಕೆ ಹೆಚ್ಚಿನ ಹಿಂಬಾಲಕರಿದ್ದಾರೆ. ಹತ್ತಾರು ಫೇಕ್‌ ವೆಬ್‌ಸೈಟ್‌ಗಳಿವೆ. ಇವುಗಳ ಕೆಲಸ ದಿನ ಬೆಳಗಾದ್ರೆ ಮೋದಿ ಪರವಾಗಿ ಹೊಗೊಳೊದು ಮತ್ತು ಮೋದಿ ವಿರೋಧಿಗಳ ವೈಯಕ್ತಿಕ ತೇಜೋವಧೆ ಮಾಡುವುದು.

ಇದಿಷ್ಟು ಒಂದು ಕಡೆಯಾದ್ರೆ ಮತ್ತೊಂದು ಕಡೆ ಭಾರತದ ಬಹುತೇಕ ಮಾಧ್ಯಮಗಳು ಅದು ಹೇಗೆ ಕೆಲಸ ಮಾಡ್ತಾ ಇವೆ ಅಂತ ಹೇಳೋದೇ ಬೇಡ. 1947 ರಿಂದ ಪತ್ರಿಕಾ ಮಾಧ್ಯಮ ಸಂಸ್ಥೆಗಳು ಸರ್ಕಾರದ ತಪ್ಪುಗಳು ಮತ್ತೆ ಅದರ ವಿರುದ್ಧ ಕೆಲಸ ಮಾಡುತ್ತಿದ್ದವು. ಆದರೆ ಈಗ ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ಮೋದಿ ತಪ್ಪುಗಳ ವಿರುದ್ಧ ಮಾತಾಡಲು ಭಯಪಡುತ್ತವೆ. ಬೆರಳೆಣಿಕೆಯ ಕೆಲವೇ ಮಾಧ್ಯಮಗಳು ಮಾತ್ರ ಸತ್ಯ ತಿಳಿಸಲು ಒದ್ದಾಡುತ್ತಿವೆ.

ಕೊನೆ ಮಾತು : ಇಷ್ಟೆಲ್ಲಾ ಜನಬೆಂಬಲ ಬಹುಶಃ ಯಾವ ಪ್ರಧಾನಿಗೂ ಸಿಕ್ಕಿಲ್ಲ. ಮೋದಿ ಒಂದು ರೀತಿಯಲ್ಲಿ ಅವರೊಬ್ಬ ಅದೃಷ್ಟವಂತ. ಆದರೆ ಅವರಿಗೆ ಸಿಕ್ಕಿರುವ ಸುವರ್ಣಾವಕಾಶವನ್ನು ಅವರು ಹಾಳು ಮಾಡುತ್ತಿದ್ದಾರೆ. ಅವರ ಏಕಪಕ್ಷಿಯ ನಿರ್ಧಾರಗಳಿಂದ ದೇಶದ ಆರ್ಥಿಕತೆ, ಸಾಮಾಜಿಕ ಪರಿಸ್ಥಿತಿ ಎಲ್ಲವೂ ಪಾತಾಳ ತಲುಪುತ್ತಿದೆ.

ಇದು ಜನರಿಗೆ ಆದಷ್ಟು ಬೇಗ ಅರ್ಥವಾದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಇದು ಸರಿಪಡಿಸಲಾರದಷ್ಟು ದೂರ ಹೋಗುವುದರಲ್ಲಿ ಸಂದೇಹವಿಲ್ಲ.

(ಲೇಖಕರು ಸಾಮಾಜಿಕ ಕಾರ್ಯಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ಕನಿಷ್ಟ ಬೆಂಬಲ ಬೆಲೆ (MSP) ಬಗ್ಗೆ ಸುಳ್ಳು ಹೇಳಿತೇ ಮೋದಿ ಸರ್ಕಾರ!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಒಬ್ಬ ವ್ಯಕ್ತಿ ಎಶ್ಟೇ ದಕ್ಶನಿದ್ದರೂ, ದೇಶದ ಅದಿಕಾರ ಒಬ್ಬ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾದರೆ ದುರಂತ ಕಟ್ಟಿಟ್ಟ ಬುತ್ತಿ. ‌ನಮ್ಮ ದೇಶದಲ್ಲಿ ಏನಾಗಬಾರದಿತ್ತೋ ಅದು ಈಗ ಆಗುತ್ತಿದೆ.

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...