Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಮೋದಿ ಆಡಳಿತದಲ್ಲಿ ಜನರ ಮೇಲಿನ ಹಲ್ಲೆ ಅಧಿಕವಾಗಿದೆ: ಎಚ್.ಎಸ್.ದೊರೆಸ್ವಾಮಿ

ಮೋದಿ ಆಡಳಿತದಲ್ಲಿ ಜನರ ಮೇಲಿನ ಹಲ್ಲೆ ಅಧಿಕವಾಗಿದೆ: ಎಚ್.ಎಸ್.ದೊರೆಸ್ವಾಮಿ

- Advertisement -
- Advertisement -

ಆಡಳಿತ ನಡೆಸುವವರು ಸರ್ವಾಧಿಕಾರಿಗಳಂತೆ ದರ್ಪದಿಂದ ನಡೆಸಿಕೊಳ್ಳುವುದನ್ನು ಭಾರತೀಯ ಜನತೆ ಮತ್ತು ಭಾರತದ ವಿಚಾರವಂತ ಗಣ್ಯರು ನಿಸ್ಸಹಾಯಕರಂತೆ, ಮೂಕಪ್ರೇಕ್ಷಕರಂತೆ ನೋಡಿ, ಕೈಕಟ್ಟಿ ಕೂರುತ್ತಾರಾ…?

ಪ್ರದರ್ಶನ ಪಿತಾಮಹ ಮೋದಿಯವರು ಗಳಿಗೆಗೊಂದು ನಾಟಕ ಮಾಡುತ್ತಾರೆ, ಪ್ರಹಸನ ಮಾಡುತ್ತಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ತಬ್ಬಿಕೊಂಡಿದ್ದೋ ತಬ್ಬಿಕೊಂಡಿದ್ದು. ಇಷ್ಟು cheap ಆಗಿ ಬಿಟ್ಟರೇ ಈ ಇಬ್ಬರೂ?

ಬ್ರಿಟನ್ನಿನ ಮಹಾರಾಣಿ ಯಾರದಾದರೂ ಕೈ ಕುಲುಕಬೇಕಾದರೆ ಕೈಗೆ ಕೈಚೀಲ ಹಾಕಿಕೊಳ್ಳುತ್ತಾರೆ. ಕೈ ಕುಲುಕುವವನಿಗೆ ಯಾವ ಚರ್ಮರೋಗ ಇದೆಯೋ ಎಂದು ಹೆದರಿಕೆ. ಮೋದಿ, ಟ್ರಂಪ್‍ಗಳಿಗೆ ಅದೆಷ್ಟು ಕಾಯಿಲೆ ಇದೆಯೋ? ಆದರೂ ಒಬ್ಬರನ್ನೊಬ್ಬರನ್ನು ತಬ್ಬಿಕೊಳ್ಳುವುದರಲ್ಲಿ ಅವರ ಅಟ್ಟಹಾಸವೆಷ್ಟು? ಸಭ್ಯತೆ ಮೀರಿ ನಡೆದುಕೊಳ್ಳುವುದು ಅವರಿಗೆ ಭೂಷಣವಲ್ಲ. ಟ್ರಂಪ್, ಮೋದಿಯವರನ್ನು ಭಾರತದ ರಾಷ್ಟ್ರಪಿತ ಮಾಡಿದ. ಗಾಂಧೀಜಿ ಸೋಗು ಹಾಕಿದ್ದು ರಾಷ್ಟ್ರಪಿತ, ಮೋದಿಯೇ ಅಸಲಿ ರಾಷ್ಟ್ರಪಿತ. ಗಾಂಧೀಜಿ ಹತ್ಯೆಯಾದ 72 ವರ್ಷಗಳ ಮೇಲೆ ಅಮೆರಿಕದ ಅಧ್ಯಕ್ಷರು ಮೋದಿಯವರನ್ನೇ ನಿಜವಾದ ರಾಷ್ಟ್ರಪಿತ ಮಾಡಿದ್ದಾರೆ. ನಕಲಿ ರಾಷ್ಟ್ರಪಿತ ಗಾಂಧೀಜಿಯನ್ನು ಬಯಲಿಗೆಳೆದು ಅಸಲಿ ಮೋದಿಯನ್ನು ರಾಷ್ಟ್ರಪಿತನ ಸ್ಥಾನದಲ್ಲಿ ಕೂಡಿಸಿದ ಟ್ರಂಪ್‍ಗೆ ಆರ್‍ಎಸ್‍ಎಸ್ ಕೃತಜ್ಞತೆಗಳನ್ನು ಅರ್ಪಿಸಬೇಕು. ಮುಂದೆ ಒಂದು ದಿನ ನಿಜವಾದ ರಾಮ ಮೋದಿಯೇ ಹೊರತು ಅಯೋಧ್ಯೆ ರಾಮನಲ್ಲ ಎನ್ನುವ ಕಾಲ ಬರಲೂಬಹುದು.

ಸೆಕ್ಷನ್ 370 ನ್ನು ಹಿಂಪಡೆದು ಕಾಶ್ಮೀರವನ್ನು ಒಡೆದು, ಪ್ರಜಾಪ್ರಭುತ್ವವನ್ನು ಕೊನೆಗಾಣಿಸಿ ಕಾಶ್ಮೀರವನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳುವ ಮೋದಿ ಸರ್ಕಾರದ ವಿರುದ್ಧ 250 ಭಾರತೀಯ ಗಣ್ಯರು ಮೋದಿಯವರಿಗೆ ಪತ್ರ ಬರೆದಿದ್ದಾರೆ. ಶಿಕ್ಷಣ ತಜ್ಞರು, ಪತ್ರಕರ್ತರು, ರಾಜಕೀಯ ನಾಯಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಕಾಶ್ಮೀರದ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಬೇಕು. ಅಲ್ಲಿ ವಿಧಾನಸಭೆಯ ಚುನಾವಣೆ ನಡೆಸಬೇಕು. 370ನೇ ವಿಧಿಯನ್ನು ರದ್ದುಪಡಿಸುವ ವಿಚಾರದಲ್ಲಿ ಅಲ್ಲಿಯ ಪ್ರಜೆಗಳ ಅಭಿಪ್ರಾಯವನ್ನು ಪಡೆದೇ ಮುಂದುವರೆಯಬೇಕು. ಅಲ್ಲಿಯ ಗಣ್ಯರ ಅಭಿಪ್ರಾಯವನ್ನು ಪಡೆಯದೇ ನಿರ್ಧಾರಕ್ಕೆ ಬಂದಿರುವುದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ. ಕಣಿವೆ ರಾಜ್ಯದಲ್ಲಿನ ನಾಯಕರನ್ನು ಗೃಹಬಂಧನದಲ್ಲಿಟ್ಟು, ಸುದ್ದಿ ಮಾಧ್ಯಮಗಳನ್ನು ಅಡಗಿಸಿಟ್ಟು, ಭಾರತದ ಇತರ ಭಾಗಗಳಿಗೆ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬ ಸುದ್ದಿ ಹರಡದಂತೆ ತಡೆಗಟ್ಟಿರುವುದು ಸರಿಯಲ್ಲ ಎಂದೂ ಈ ಗಣ್ಯರು ಮೋದಿಯವರಿಗೆ ಬರೆದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ 45 ಜನ ಗಣ್ಯರ ಮೇಲೆ ರಾಜದ್ರೋಹ ಆಪಾದನೆ ಹೊರಿಸಿ ನ್ಯಾಯಾಲಯಕ್ಕೆ ಹೋಗಿದ್ದನ್ನು ಖಂಡಿಸಿ ಚಲನಚಿತ್ರ ಪ್ರಮುಖರು, ಕಲಾವಿದರು, ಪತ್ರಿಕಾ ಪ್ರತಿನಿಧಿಗಳು ಮೊದಿಯವರಿಗೆ ಪತ್ರ ಬರೆದು ಮೋದಿಯವರ ಆಡಳಿತ ರೀತಿಯನ್ನ ಒಪ್ಪದವರ ಮೇಲೆ ರಾಜದ್ರೋಹ ಆಪಾದನೆ ಹೊರಿಸುವುದು ಎಷ್ಟು ಸರಿ? ಪ್ರಧಾನಮಂತ್ರಿಯನ್ನು ಪ್ರಶ್ನಿಸುವ ಹಕ್ಕು ಪ್ರಜೆಗಳಿಗೆ ಇಲ್ಲವೇ? ಎಂದು ನೂರಾರು ಗಣ್ಯರು ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಆ 49 ಗಣ್ಯರ ಮೇಲೆ ಹಾಕಿದ್ದ ಮೊಕದ್ದಮೆಯನ್ನು ಹಿಂಪಡೆಯಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಆಡಳಿತ ನಡೆಸುವವರು ಸರ್ವಾಧಿಕಾರಿಗಳಂತೆ ದರ್ಪದಿಂದ ನಡೆಸಿಕೊಳ್ಳುವುದನ್ನು ಭಾರತೀಯ ಜನತೆ ಮತ್ತು ಭಾರತದ ವಿಚಾರವಂತ ಗಣ್ಯರು ನಿಸ್ಸಹಾಯಕರಂತೆ, ಮೂಕಪ್ರೇಕ್ಷಕರಂತೆ ನೋಡಿ, ಕೈಕಟ್ಟಿ ಕೂಡುವುದಿಲ್ಲ. ಬದಲಿಗೆ ಸರ್ಕಾರದ ಹುಚ್ಚಾಟಗಳನ್ನು ಪ್ರತಿಭಟಿಸುತ್ತಾರೆ. ಹಿಟ್ಲರ್‍ಗಿರಿ ಬೆಳೆಯಲು ಬಿಡುವುದಿಲ್ಲ ಎಂಬುದು ಮೇಲೆ ಹೇಳಿದ ಎರಡು ಪ್ರಕರಣಗಳಿಂದ ಸಾಬೀತಾಗಿದೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ‘Halt the hate’ ಎಂದು ಭಾರತ ಸರ್ಕಾರಕ್ಕೆ ತಿಳಿಸಿದೆ. ದ್ವೇಷಾಪರಾಧ, ಗುಂಪು ಹಲ್ಲೆಯಂತಹ ಕೃತ್ಯಗಳು 2017-18ರಲ್ಲಿ ಕಡಿಮೆ ಇದ್ದದ್ದು 2019ರ ಮೊದಲ ಆರು ತಿಂಗಳಲ್ಲಿ ಅತಿಹೆಚ್ಚು ಘಟನೆಗಳು ನಡೆದಿವೆ.

2015ರಲ್ಲಿ ದ್ವೇಷಾಪರಾಧಗಳು 51 ಇತ್ತು. 2016ರಲ್ಲಿ 240, 2017ರಲ್ಲಿ 212, 2018ರಲ್ಲಿ 210 ಕೃತ್ಯಗಳು ಸಂಭವಿಸಿದ್ದರೆ 2019ರ ಮೊದಲ ಆರು ತಿಂಗಳಲ್ಲೇ 180 ಕೃತ್ಯಗಳು ನಡೆದಿವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಹೇಳಿ ಆಮ್ನೆಸ್ಟಿ ತನ್ನ ಕಳವಳ ವ್ಯಕ್ತಪಡಿಸಿದೆ. ನಡೆದಿರುವ ಒಟ್ಟು 180 ಪ್ರಕರಣಗಳಲ್ಲಿ ಧರ್ಮದ ಹೆಸರಿನಲ್ಲಿ 44 ಕೃತ್ಯಗಳು ನಡೆದಿವೆ. ಈ ಪೈಕಿ 40 ಪ್ರಕರಣಗಳು ಮುಸ್ಲಿಮರ ಮೇಲೆ, 4 ಕೃತ್ಯಗಳು ಕ್ರಿಶ್ಚಿಯನ್ನರ ಮೇಲೆ ನಡೆದಿವೆ. ಮೋದಿ ಇದುವರೆಗೂ ಈ ದುಷ್ಕೃತ್ಯ ನಡೆಯುತ್ತಿದ್ದರೂ ಒಮ್ಮೆಯೂ ಅದರ ಬಗೆಗೆ ಬಾಯಿ ಬಿಟ್ಟಿಲ್ಲ. ಮೋದಿಯ ಈ ದಿವ್ಯ ಮೌನವನ್ನು ದುಷ್ಕೃತ್ಯ ನಡೆಯುತ್ತಿರುವುದಕ್ಕೆ ಮೋದಿಯವರ ಸಮ್ಮತಿ ಇದೆಯೆಂದು ಅರ್ಥೈಸಬೇಕಾದಿತು.

ಇದಲ್ಲದೆ 2000 ದಿಂದ 2018ರ ನಡುವೆ ಭಾರತದಲ್ಲಿ ಕರ್ತವ್ಯನಿರತರಾಗಿದ್ದ 64 ಪತ್ರಕರ್ತರ ಹತ್ಯೆ ಆಗಿದೆ. ಪತ್ರಕರ್ತರ ವಿರುದ್ಧ ವಿವಿಧ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ. 12 ರಾಜ್ಯಗಳಲ್ಲಿ 2000-2018ರ ಮಧ್ಯೆ ತಮ್ಮ ವಿಮರ್ಶಾತ್ಮಕ ಬರವಣಿಗೆಗಾಗಿ 21 ಪತ್ರಕರ್ತರ ಮೇಲೆ ಖಟ್ಲೆ ಹೂಡಲಾಗಿದೆ. 2017ರ ಸೆಪ್ಟಂಬರ್‌ 5 ರಂದು ತಮ್ಮ ಮನೆಗೆ ಪ್ರವೇಶ ಮಾಡುವಾಗಲೇ ‘ಗೌರಿ ಲಂಕೇಶ್’ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್‍ರನ್ನು ಹತ್ಯೆ ಮಾಡಲಾಯಿತು. ಹಾಗೂ 2018ರ ಜೂನ್14 ರಂದು ರೈಸಿಂಗ್ ಕಾಶ್ಮೀರದ ಸಂಪಾದಕರಾದ ಶುಜಾತ್ ಬುಕಾರಿಯವರ ಹತ್ಯೆಯಾಯಿತು. ಹಲ್ಲೆಗೊಳಗಾದ 65 ಪತ್ರಕರ್ತರ ವ್ಯಕ್ತಿ ವಿವರಗಳನ್ನು ‘Silencing Journalists’ ಎಂಬ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಒಟ್ಟಿನಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ವರ್ಗದ ಜನರ ಮೇಲೂ ಹಲ್ಲೆ ಮಾಡುವುದು ಅಧಿಕಗೊಂಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...