Homeಮುಖಪುಟ'ಇಂಡಿಯಾ ಔಟ್' ಅಭಿಯಾನ: ಏನಿದು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ?

‘ಇಂಡಿಯಾ ಔಟ್’ ಅಭಿಯಾನ: ಏನಿದು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ?

- Advertisement -
- Advertisement -

ಭಾರತದ ಉತ್ಪನ್ನಗಳು ಬಾಂಗ್ಲಾದೇಶದಲ್ಲಿ ಬಹಿಷ್ಕಾರದ ಕರೆಗಳನ್ನು ಎದುರಿಸುತ್ತಿದ್ದು, ಭಾರತ ಮತ್ತು ಬಾಂಗ್ಲಾದೇಶದ ಸಂಬಂಧ ನಿಜಕ್ಕೂ ಹಳಸಿದ್ಯಾ ಎಂಬ ಪ್ರಶ್ನೆ ಮೂಡಿದೆ. ಢಾಕಾದ ಶೇಖ್ ಹಸೀನಾ ಸರ್ಕಾರದ ಜೊತೆ ಭಾರತ ಉತ್ತಮ ಸಂಬಂಧವನ್ನು ಹೊಂದಿದೆ, ಆದರೆ ಶೇಖ್ ಹಸೀನಾ ಮತ್ತು ಅವರ ಅವಾಮಿ ಲೀಗ್‌ಗೆ ವಿರುದ್ಧವಾಗಿರುವ ಪಕ್ಷಗಳು ಮತ್ತು ನಾಯಕರು ಮಾಲ್ಡೀವ್ಸ್‌ನಲ್ಲಿನ ರೀತಿಯಲ್ಲಿ ‘ಇಂಡಿಯಾ ಔಟ್’ ಅಭಿಯಾನಕ್ಕೆ ಕರೆಯನ್ನು ನೀಡಿದ್ದಾರೆ.

ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ಬಾಂಗ್ಲಾದೇಶದ “ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಿ” ಎಂಬ ಭಾವನೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ, ಮೋದಿ ಸರ್ಕಾರವು ಸೋಮವಾರ ರಂಜಾನ್ ಮತ್ತು ಈದ್‌ಗೆ ಮುಂಚಿತವಾಗಿ ಬಾಂಗ್ಲಾದೇಶಕ್ಕೆ 50,000 ಟನ್ ಈರುಳ್ಳಿಯನ್ನು ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿದೆ. ವಿಶೇಷವಾಗಿ ರಂಜಾನ್ ಅವಧಿಯಲ್ಲಿ ಹಬ್ಬದ ಮತ್ತು ಉಪವಾಸದ ಸಮಯದಲ್ಲಿ ಭಕ್ಷ್ಯಗಳಿಗೆ, ಈರುಳ್ಳಿ ಮುಖ್ಯವಾಗಿದೆ. ಈರುಳ್ಳಿ ರಫ್ತು ನಿಷೇಧಿಸಲಾಗಿದೆಯಾದರೂ, ಸರ್ಕಾರವು ಎರಡು ಆಪ್ತ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಯುಎಇಗೆ ವಿನಾಯಿತಿ ನೀಡಿದೆ. ಭಾರತವು ಡಿಸೆಂಬರ್ 2023ರಲ್ಲಿ ಈರುಳ್ಳಿ ರಫ್ತು ನಿಷೇಧಿಸಿತ್ತು.

ಅಲ್ ಜಝೀರಾ ವರದಿಯು ಢಾಕಾದ ಪಂಥಾಪತ್ ಪ್ರದೇಶದಲ್ಲಿ ಭಾರತೀಯ ಉತ್ಪನ್ನಗಳನ್ನು ಸಂಗ್ರಹಿಸುವ ಅಂಗಡಿಗಳು ಭಾರತದ ಹೊಸ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದೆ ಎಂಬುವುದನ್ನು ವರದಿ ಮಾಡಿದೆ. ಫೆಬ್ರವರಿಯಲ್ಲಿ ಢಾಕಾ ಮತ್ತು ಚಿತ್ತಗಾಂಗ್‌ನಲ್ಲಿನ ಹಲವಾರು ಅಂಗಡಿಗಳ ಮಾರಾಟಗಾರರು ಅಡುಗೆ ಎಣ್ಣೆ, ಸಂಸ್ಕರಿಸಿದ ಆಹಾರಗಳು, ಶೌಚಾಲಯಗಳು, ಸೌಂದರ್ಯವರ್ಧಕಗಳು ಮತ್ತು ಬಟ್ಟೆಗಳಂತಹ ಭಾರತೀಯ ಉತ್ಪನ್ನಗಳ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ವಾಯ್ಸ್ ಆಫ್ ಅಮೇರಿಕಾಗೆ ಮಾಹಿತಿ ನೀಡಿದ್ದಾರೆ.

ಬಾಂಗ್ಲಾದೇಶದ ಆನ್‌ಲೈನ್ ಅಭಿಯಾನವು ಹೆಚ್ಚಾಗಿ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದೆ ಮತ್ತು ಭಾರತ ವಿರೋಧಿ ಪೋಸ್ಟ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ‘ಬಾಯ್ಕಾಟ್ ಇಂಡಿಯಾ’ ಅಭಿಯಾನದ ಪ್ರಮುಖ ಚಾಲಕರಲ್ಲಿ ಒಬ್ಬರು ಪ್ಯಾರಿಸ್ ಮೂಲದ ಪಿನಾಕಿ ಭಟ್ಟಾಚಾರ್ಯ ಎಂದು ಹೇಳಲಾಗಿದೆ.  ಬಾಂಗ್ಲಾದೇಶದಿಂದ ಗಡಿಪಾರು ಮಾಡಲಾಗಿದ್ದ ಬ್ಲಾಗರ್, ಆನ್‌ಲೈನ್ ಕಾರ್ಯಕರ್ತ ಮತ್ತು ಮಾನವ ಹಕ್ಕುಗಳ ರಕ್ಷಕ ಎಂದು ತನ್ನನ್ನು ತಾನು ವಿವರಿಸಿಕೊಳ್ಳುವ ವೈದ್ಯ ಪಿನಾಕಿ, ಜನವರಿ ಮಧ್ಯದಲ್ಲಿ ‘ಇಂಡಿಯಾ ಔಟ್’ ಅಭಿಯಾನವನ್ನು ಆರಂಭಿಸಿದ್ದರು.

4,000ಕ್ಕೂ ಹೆಚ್ಚು ಪೋಸ್ಟ್‌ಗಳು #BoycottIndianProducts ಜೊತೆಗೆ #IndiaOut ಮತ್ತು #BoycottIndiaದಂತಹ ಹ್ಯಾಶ್‌ಟ್ಯಾಗ್‌ಗಳನ್ನು ತೋರಿಸುತ್ತದೆ, ಹಸೀನಾ ಪ್ರಮಾಣವಚನ ಸ್ವೀಕರಿಸಿದ ಒಂದು ವಾರದ ನಂತರ ಬಾಂಗ್ಲಾದೇಶದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇವುಗಳು ಹೆಚ್ಚಾಗಿ ಕಂಡು ಬಂದಿದೆ.

ಆನ್‌ಲೈನ್ ನ್ಯೂಸ್ ಪೋರ್ಟಲ್ ‘ಢಾಕಾ ಪೋಸ್ಟ್’ ಮಾರ್ಚ್‌ನಲ್ಲಿ 12 ಬಾಂಗ್ಲಾದೇಶದ ಪಕ್ಷಗಳು ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿವೆ ಎಂದು ವರದಿ ಮಾಡಿದೆ. ಬಹಿಷ್ಕಾರಕ್ಕೆ ಕರೆ ನೀಡಿದವರಲ್ಲಿ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಮತ್ತು ಪ್ರಮುಖ ಇಸ್ಲಾಮಿಸ್ಟ್ ಪಕ್ಷವಾದ ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿ ಇರಲಿಲ್ಲ ಎನ್ನಲಾಗಿದೆ. 2022-2023ರಲ್ಲಿ ಉತ್ಪನ್ನಗಳ ಬಹಿಷ್ಕಾರದ ಪರಿಣಾಮವು ಆರ್ಥಿಕವಾಗಿ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ ಈ ಬೆಳವಣಿಗೆಯು ಭಾರತಕ್ಕೆ ಎಚ್ಚರಿಕೆಯಾಗಿದೆ ಎಂಬುವುದು ಗಮನಾರ್ಹ.

‘ಭಾರತದ ಉತ್ಪನ್ನಗಳ ಬಹಿಷ್ಕಾರ’ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಚಿತ್ತಗಾಂಗ್ ವಿಶ್ವವಿದ್ಯಾಲಯದ  ಮುಂತಸ್ಸಿರ್ ಮಾಮೂನ್, ಬಾಂಗ್ಲಾದೇಶದಲ್ಲಿ ಈ ಅಭಿಯಾನದ ಪ್ರಭಾವ ಬೀರಿರುವುದು ಕಂಡು ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ. ಒಂದು ರೀತಿಯ ಭಾರತೀಯ-ವಿರೋಧಿ ಅಲೆ ಬಾಂಗ್ಲಾದಲ್ಲಿ ಯಾವಾಗಲೂ ಪ್ರಚಲಿತದಲ್ಲಿದೆ, ಆದರೆ ಪ್ರಸ್ತುತ ಬಹಿಷ್ಕಾರದ ಅಭಿಯಾನವು ಸಾಮಾಜಿಕ ಮಾಧ್ಯಮ ಕೇಂದ್ರಿತವಾಗಿದೆ ಎಂದು ಮನೋಹರ್ ಪರಿಕ್ಕರ್ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣೆ ಸಂಸ್ಥೆಯ ಸ್ಮೃತಿ ಪಟ್ಟನಾಯಕ್ ಹೇಳಿದ್ದಾರೆ.

ಇದನ್ನು ಓದಿ: ಪ್ರೊ.ಜಿ.ಎನ್‌ ಸಾಯಿಬಾಬಾ ಖುಲಾಸೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋದ ಸರಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...