Homeಮುಖಪುಟ'ಜೀನ್ಸ್ ಜಿಹಾದ್' ಸುಳ್ಳು ವದಂತಿ: ಮುಸ್ಲಿಂ ಕಾರ್ಮಿಕರ ಬದುಕು ಬರ್ಬಾದ್

‘ಜೀನ್ಸ್ ಜಿಹಾದ್’ ಸುಳ್ಳು ವದಂತಿ: ಮುಸ್ಲಿಂ ಕಾರ್ಮಿಕರ ಬದುಕು ಬರ್ಬಾದ್

- Advertisement -
- Advertisement -

ಉತ್ತರಪ್ರದೇಶದ ಸಂಭಾಲ್ ಮತ್ತು ದೆಹಲಿಯ ಪಶ್ಚಿಮ ಭಾಗಗಳಲ್ಲಿ ಹಲವು ಜೀನ್ಸ್ ಉತ್ಪಾದನಾ ಘಟಕಗಳನ್ನು ಸರ್ಕಾರ ಮುಚ್ಚಿದೆ. ಈ ನಿರ್ಧಾರಕ್ಕೆ ನಿಖರ ಕಾರಣಗಳು ತಿಳಿದಿಲ್ಲವಾದರೂ, ಇದು ಕಾನೂನು ಅಥವಾ ಪರಿಸರ ನಿಯಮಗಳ ಉಲ್ಲಂಘನೆ ಎಂದು ಹೇಳಲಾಗುತ್ತಿದೆ. ಆದರೆ, ಈ ನಿರ್ಧಾರದಿಂದಾಗಿ ದಶಕಗಳಿಂದ ಈ ಉದ್ಯಮವನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ನೂರಾರು ಮುಸ್ಲಿಂ ಕಾರ್ಮಿಕರು ಮತ್ತು ಅವರ ಕುಟುಂಬಗಳು ಆದಾಯವಿಲ್ಲದೆ ಬೀದಿಗೆ ಬಿದ್ದಿದ್ದಾರೆ.

ಪರಿಸರ ಮಾಲಿನ್ಯ ಮತ್ತು ಪರವಾನಗಿಗಳ ಕೊರತೆಯ ನೆಪವೊಡ್ಡಿ ಮುಸ್ಲಿಂ ಒಡೆತನದ ಜೀನ್ಸ್ ಘಟಕಗಳನ್ನು ಮುಚ್ಚಲು ಆದೇಶಿಸಲಾಗಿದೆ. ಆದರೆ, ವಾಸ್ತವದಲ್ಲಿ ಈ ಕ್ರಮಗಳಿಗೆ ಯಾವುದೇ ಆಧಾರವಿಲ್ಲದ, ಸುಳ್ಳು ‘ಜೀನ್ಸ್ ಜಿಹಾದ್’ ಎಂಬ ವದಂತಿಗಳು ನೇರವಾಗಿ ಕಾರಣವಾಗಿವೆ.

ಈ ಪಿತೂರಿ ಸಿದ್ಧಾಂತದ ಪ್ರಕಾರ, ಮುಸ್ಲಿಂ ಮಾಲೀಕತ್ವದ ಕಾರ್ಖಾನೆಗಳು ಸ್ಥಳೀಯರ ಸಂಖ್ಯೆಯನ್ನು ಕಡಿಮೆ ಮಾಡಿ, ತಮ್ಮ ಸಮುದಾಯದವರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಲಾಗಿದೆ. ಈ ವದಂತಿಗಳು ಯಾವುದೇ ಪುರಾವೆಗಳನ್ನು ಹೊಂದಿಲ್ಲದಿದ್ದರೂ, ಅಧಿಕಾರಿಗಳು ಸಮುದಾಯದವರೊಂದಿಗೆ ಸಮಾಲೋಚಿಸದೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ, ಅನೇಕ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಮತ್ತು ತಮ್ಮ ಸ್ಥಳಗಳನ್ನು ತೊರೆಯುವಂತಾಗಿದೆ. ಈ ಘಟನೆಗಳು ವಿವಿಧ ಸಮುದಾಯಗಳ ನಡುವೆ ಅಪನಂಬಿಕೆ ಮತ್ತು ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸುತ್ತಿವೆ.

ವದಂತಿಗಳ ಹುಟ್ಟು ಮತ್ತು ಪ್ರಸಾರ

‘ಜೀನ್ಸ್ ಜಿಹಾದ್’ ಎಂಬ ಪದವು ಕೆಲವು ವರ್ಷಗಳ ಹಿಂದೆ ದೆಹಲಿ ಮತ್ತು ಉತ್ತರಪ್ರದೇಶದ ಕೆಲ ಭಾಗಗಳಲ್ಲಿ ಕೋಮು ಉದ್ವಿಗ್ನತೆ ಹೆಚ್ಚಾಗಿದ್ದಾಗ ಹುಟ್ಟಿಕೊಂಡಿತು. ಸಾಮಾಜಿಕ ಮಾಧ್ಯಮ ಮತ್ತು ಕೆಲವು ರಾಜಕೀಯ ವಲಯಗಳಲ್ಲಿ ಪುರಾವೆಯಿಲ್ಲದೆ ಈ ಹೇಳಿಕೆಗಳು ಹರಡಿದವು. ಮುಸ್ಲಿಂ-ಒಡೆತನದ ಜೀನ್ಸ್ ಘಟಕಗಳು ಹಿಂದೂ ಪ್ರಧಾನ ಪ್ರದೇಶಗಳಲ್ಲಿ ಜನಸಂಖ್ಯೆ ಮತ್ತು ಸಂಸ್ಕೃತಿಯ ಮೇಲೆ ಪ್ರಭಾವ ಬೀರಲು ರಹಸ್ಯ ಅಭಿಯಾನ ನಡೆಸುತ್ತಿವೆ ಎಂದು ಈ ವದಂತಿಗಳು ಆರೋಪಿಸಿದವು. ಹಲವರು ಪದೇ ಪದೇ ಇದನ್ನು ಸುಳ್ಳು ಎಂದು ಸಾಬೀತುಪಡಿಸಿದ್ದರೂ, ಕೆಲವು ಸಾರ್ವಜನಿಕ ಮತ್ತು ಅಧಿಕಾರಿಗಳ ವಲಯಗಳಲ್ಲಿ ಇದು ಜನಪ್ರಿಯತೆ ಗಳಿಸಿತು.

ದೆಹಲಿಯ ಖಯಾಲಾ ಗ್ರಾಮದಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದ ಸಾವಿರಾರು ಮುಸ್ಲಿಂ ಕುಶಲಕರ್ಮಿಗಳು ಜೀನ್ಸ್ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಆದರೆ, ಈ ವ್ಯಾಪಾರ ಇದ್ದಕ್ಕಿದ್ದಂತೆ ‘ಅಕ್ರಮ’ ಹಾಗೂ ‘ಮಾಲಿನ್ಯ’ದ ಆರೋಪಗಳನ್ನು ಎದುರಿಸಬೇಕಾಯಿತು. ಇದೇ ರೀತಿಯ ಘಟನೆಗಳು, ಮುಸ್ಲಿಂ ಕುಶಲಕರ್ಮಿಗಳು ಹೆಚ್ಚಿರುವ ಸಂಭಾಲ್ ನಗರದಲ್ಲಿಯೂ ನಡೆದಿವೆ. ಅಲ್ಲಿಯೂ ಪರಿಸರ ನಿಯಮಗಳ ಉಲ್ಲಂಘನೆ ಮತ್ತು ಪರವಾನಗಿಗಳ ಕೊರತೆಯ ಆರೋಪದ ಮೇಲೆ ಅನೇಕ ಜೀನ್ಸ್ ಘಟಕಗಳ ಮೇಲೆ ದಾಳಿಗಳು ನಡೆದಿವೆ.

ತೀವ್ರ ಆರ್ಥಿಕ ಸಂಕಷ್ಟ

ಈ ದಾಳಿಗಳ ಪರಿಣಾಮಗಳು ತೀವ್ರವಾಗಿವೆ. ಮುಸ್ಲಿಂ ಕಾರ್ಮಿಕರು ರಾತ್ರೋರಾತ್ರಿ ಉದ್ಯೋಗ ಕಳೆದುಕೊಂಡು, ಆದಾಯವಿಲ್ಲದೆ ತಮ್ಮ ಹಳ್ಳಿಗಳಿಗೆ ಹಿಂದಿರುಗುವಂತಾಗಿದೆ. ದೆಹಲಿ ಮತ್ತು ಉತ್ತರಪ್ರದೇಶದ ಭಾಗಗಳಲ್ಲಿನ ಜೀನ್ಸ್ ಉದ್ಯಮವು ದಶಕಗಳಿಂದ ಮುಸ್ಲಿಂ ಕುಶಲಕರ್ಮಿಗಳಿಗೆ ಪ್ರಮುಖ ಉದ್ಯೋಗದ ಮೂಲವಾಗಿತ್ತು.

“ನಾವು ಕಳೆದ 20 ವರ್ಷಗಳಿಂದ ಜೀನ್ಸ್ ಹೊಲಿದು ಬದುಕುತ್ತಿದ್ದೇವೆ,” ಎಂದು ತಮ್ಮ ನೋವನ್ನು ವ್ಯಕ್ತಪಡಿಸುವ ಕಾನ್ಪುರದಿಂದ ಬಂದ ಮೊಹಮ್ಮದ್ ಸಲೀಂ, “ನಮ್ಮ ಕುಟುಂಬಗಳ ಜೀವನೋಪಾಯಕ್ಕೆ ಇದೇ ಆಧಾರವಾಗಿತ್ತು” ಎಂದು ಹೇಳುತ್ತಾರೆ. ಉನ್ನಾವೊದ ಶೌಕತ್ ಅಲಿ, “ಈಗ ಆಧಾರರಹಿತ ‘ಜಿಹಾದ್’ ವದಂತಿಗಳ ಕಾರಣದಿಂದ ನಮ್ಮ ಜೀವನವೇ ಅಪಾಯದಲ್ಲಿದೆ” ಎಂದು ಆತಂಕದಿಂದ ನುಡಿಯುತ್ತಾರೆ. ಈ ಕಾರ್ಮಿಕರ ಧ್ವನಿಗಳು, ಸುಳ್ಳು ವದಂತಿಗಳಿಂದಾಗಿ ಕಷ್ಟದಲ್ಲಿರುವ ಸಾವಿರಾರು ಜನರ ಬದುಕನ್ನು ಬಿಂಬಿಸುತ್ತವೆ.

ಸಂಭಾಲ್‌ನ ಮಾನವ ಹಕ್ಕುಗಳ ಕಾರ್ಯಕರ್ತೆ ಫರ್ಜಾನಾ ಖಾನ್, “ಪರಿಸರ ಮಾಲಿನ್ಯವೇ ನಿಜವಾದ ಸಮಸ್ಯೆಯಾಗಿದ್ದರೆ, ಎಲ್ಲ ಕಾರ್ಖಾನೆಗಳನ್ನು ಸಮಾನವಾಗಿ ಪರಿಗಣಿಸಬೇಕು. ಆದರೆ ಮುಸ್ಲಿಂ ಘಟಕಗಳನ್ನು ಮಾತ್ರ ಗುರಿಯಾಗಿಸಿ ಮುಚ್ಚಲಾಗುತ್ತಿದೆ. ಇದು ನ್ಯಾಯಯುತವಲ್ಲ ಮತ್ತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ವಿಮರ್ಶಿಸಿದರು.

ಘಟಕಗಳು ಅಧಿಕೃತವಾಗಿ ಮುಚ್ಚಲ್ಪಟ್ಟಿದ್ದರೂ, ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಿಂದ ಹೊರಬಂದಿಲ್ಲ. ತುರ್ತು ಆದೇಶಗಳನ್ನು ಪೂರ್ಣಗೊಳಿಸಲು, ಕಾರ್ಮಿಕರು ಅಧಿಕಾರಿಗಳು ಸೀಲ್ ಮಾಡಿದ ಘಟಕಗಳ ಒಳಗೆ ಬೀಗ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಹತಾಶ ಪರಿಸ್ಥಿತಿಯನ್ನು ವಿವರಿಸಿದ ಜೀನ್ಸ್ ವಾಷರ್ ಅಬ್ದುಲ್ ಮತೀನ್, “ನಮಗೆ ಈ ಕೆಲಸ ಹೊರತು ಬೇರೆ ಏನೂ ತಿಳಿದಿಲ್ಲ. ಈ ಕಾರ್ಖಾನೆಗಳು ಸಂಪೂರ್ಣವಾಗಿ ಮುಚ್ಚಿಹೋದರೆ ನಮ್ಮ ಕುಟುಂಬಗಳು ಬೀದಿಗೆ ಬೀಳುತ್ತವೆ” ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

ಐತಿಹಾಸಿಕ ಕೊಡುಗೆ 

ಭಾರತದ ಜವಳಿ ಉದ್ಯಮಕ್ಕೆ ಮುಸ್ಲಿಂ ಕುಶಲಕರ್ಮಿಗಳ ಕೊಡುಗೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಲಕ್ನೋದ ಚಿಕ್ಕಂಕರಿಯಿಂದ ಹಿಡಿದು ಜೀನ್ಸ್ ಹೊಲಿಗೆಯವರೆಗೆ, ಮುಸ್ಲಿಂ ಕಾರ್ಮಿಕರು ಈ ವಲಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವಾತಂತ್ರ್ಯಾನಂತರ ಉತ್ತರಪ್ರದೇಶ ಮತ್ತು ಬಿಹಾರದಿಂದ ಅನೇಕ ಮುಸ್ಲಿಂ ಕುಟುಂಬಗಳು ದೆಹಲಿಯಂತಹ ನಗರಗಳಿಗೆ ವಲಸೆ ಬಂದು ನುರಿತ ಕಾರ್ಮಿಕ ಸಮುದಾಯವನ್ನು ಹುಟ್ಟುಹಾಕಿದ್ದರು.

ವ್ಯಾಪಾರ ವಿಶ್ಲೇಷಕ ಆರಿಫ್ ಸಿದ್ದಿಕಿ, “ಪಶ್ಚಿಮ ದೆಹಲಿಯ ಜೀನ್ಸ್ ಉದ್ಯಮವು ಸಮುದಾಯದ ಕಠಿಣ ಪರಿಶ್ರಮದ ಫಲ. ಇದನ್ನು ದುರ್ಬಲ ಆಧಾರಗಳ ಮೇಲೆ ನಾಶ ಮಾಡುವುದು ಅನ್ಯಾಯ” ಎಂದರು.

ಮಾಲಿನ್ಯ ಮತ್ತು ಪರವಾನಗಿಗಳ ಕೊರತೆಯ ನೆಪ ಹೇಳಿ ಘಟಕಗಳನ್ನು ಮುಚ್ಚುತ್ತಿರುವ ಅಧಿಕಾರಿಗಳ ನಿರ್ಧಾರಕ್ಕೆ ಪರಿಸರ ವಕೀಲೆ ಅಂಜಲಿ ಮೆಹ್ತಾ ಪ್ರಶ್ನೆ ಎತ್ತಿದ್ದಾರೆ. “ಸಂಪೂರ್ಣವಾಗಿ ಮುಚ್ಚುವುದರ ಬದಲು, ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮವಲ್ಲವೇ? ಕಾರ್ಮಿಕರಿಗೆ ತಂತ್ರಜ್ಞಾನವನ್ನು ಸುಧಾರಿಸಲು ಮತ್ತು ಪರಿಸರ ನಿಯಮಗಳನ್ನು ಪಾಲಿಸಲು ಸಹಾಯ ನೀಡುವುದರಿಂದ ಸಮಸ್ಯೆಯನ್ನು ಪರಿಹರಿಸಬಹುದಲ್ಲವೇ?” ಎಂದು ಅವರು ಸಲಹೆ ನೀಡುತ್ತಾರೆ.

ಸಂಭಾಲ್‌ನ ಘಟಕ ಮಾಲೀಕ ಇಮ್ರಾನ್ ಖಾನ್ ಈ ಘಟನೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ. “ನಾವು ನಿಯಮಗಳನ್ನು ಪಾಲಿಸಲು ಬಯಸಿದ್ದರೂ, ಅದನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ನಮಗೆ ಸರಿಯಾದ ಮಾರ್ಗದರ್ಶನ ಸಿಗಲೇ ಇಲ್ಲ. ಇದ್ದಕ್ಕಿದ್ದಂತೆ ನಡೆಸಿರುವ ಈ ದಾಳಿಗಳು ಕೇವಲ ನಮ್ಮ ವ್ಯಾಪಾರವನ್ನು ಹಾಳುಮಾಡಿಲ್ಲ, ಬದಲಾಗಿ ನಮ್ಮ ಘನತೆಗೂ ಧಕ್ಕೆ ತಂದಿವೆ,” ಎಂದು ಅವರು ದೂರಿದರು. ಇದು, ವ್ಯವಸ್ಥಿತ ಬೆಂಬಲದ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಇತ್ತೀಚೆಗೆ ‘ಜೀನ್ಸ್ ಜಿಹಾದ್’ ಕುರಿತ ವದಂತಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸುಳ್ಳು ಆರೋಪಗಳಿಂದ ಮುಸ್ಲಿಂ ಕುಶಲಕರ್ಮಿಗಳಲ್ಲಿ ಉಂಟಾಗಿರುವ ಭಯ ಮತ್ತು ಅನಿಶ್ಚಿತತೆಯನ್ನು ನಿವಾರಿಸಲು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಕಾರ್ಮಿಕರ ಜೀವನೋಪಾಯ ಎರಡನ್ನೂ ಒಳಗೊಂಡಿರುವ ಸಮತೋಲಿತ ನೀತಿಯನ್ನು ಜಾರಿಗೊಳಿಸಬೇಕು ಮತ್ತು ಮುಸ್ಲಿಂ ಸಮುದಾಯದ ಕುಶಲಕರ್ಮಿಗಳಿಗೆ ನ್ಯಾಯಯುತ ಹಾಗೂ ಪಾರದರ್ಶಕ ಆಡಳಿತ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಜೀನ್ಸ್ ಜಿಹಾದ್’ನಂತಹ ಸುಳ್ಳು ಕಥೆಗಳು ಭಾರತದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತವೆ. ವದಂತಿಗಳು ಮತ್ತು ಪೂರ್ವಾಗ್ರಹಗಳ ಆಧಾರದ ಮೇಲೆ ನಡೆಯುವ ಯಾವುದೇ ನಿರ್ಧಾರಗಳನ್ನು ನಾವು ತಡೆಯಬೇಕು. ಎಲ್ಲ ನಾಗರಿಕರ ಹಕ್ಕುಗಳು ಮತ್ತು ಗೌರವವನ್ನು ಗೌರವಿಸುವ ಆಡಳಿತವು ದೇಶದ ಪ್ರಗತಿಗೆ ಅವಶ್ಯಕವಾಗಿದೆ. ಇಂತಹ ವದಂತಿಗಳನ್ನು ತಳ್ಳಿಹಾಕಿ, ಎಲ್ಲರನ್ನೂ ಸಮಾನವಾಗಿ ನೋಡುವ ಸಮಾಜವನ್ನು ನಾವು ನಿರ್ಮಿಸಬೇಕಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಮನವಿಗೆ ಕೇಂದ್ರಕ್ಕೆ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...