HomeUncategorizedಜೆಎನ್‌ಯು ಹಿಂಸೆ: ಪ್ರಜಾತಂತ್ರದ ಸೌಂದರ್ಯದ ಮೇಲಿನ ದಾಳಿ - ಸರೋವರ್‌ ಬೆಂಕಿಕೆರೆ

ಜೆಎನ್‌ಯು ಹಿಂಸೆ: ಪ್ರಜಾತಂತ್ರದ ಸೌಂದರ್ಯದ ಮೇಲಿನ ದಾಳಿ – ಸರೋವರ್‌ ಬೆಂಕಿಕೆರೆ

ಪ್ರತಿ ದಮನದ ನಂತರವೂ ಧೂಳಿನಿಂದ ಎದ್ದುಬರುವ ಫೀನಿಕ್ಸ್ ಪಕ್ಷಿಯಂತೆ ಪ್ರತಿಬಾರಿ ಜೆಎನ್‌ಯು ವಿದ್ಯಾರ್ಥಿ ಹೋರಾಟವೂ ಎದ್ದು ಬರುತ್ತಿದೆ..

- Advertisement -
- Advertisement -

ಬ್ರಾಹ್ಮಣ ಸಮುದಾಯಕ್ಕೆ ಹೊರತುಪಡಿಸಿ ಇತರೆ ಸಮುದಾಯಗಳಿಗೆ ಬಹುತೇಕ ನಾಗರಿಕ ಹಕ್ಕುಗಳು ಸಹಸ್ರಾರು ವರ್ಷಗಳ ಕಾಲ ನಿರಾಕರಣೆ ಆಗಿದ್ದ ದೇಶದಲ್ಲಿ ಅದರಲ್ಲೂ ಶಿಕ್ಷಣದ ಹತ್ತಿರಕ್ಕೂ ಬಿಟ್ಟುಕೊಳ್ಳದೇ ಜಾತಿ ಪದ್ಧತಿಯನ್ನು ಆಳವಾಗಿ ಬೇರುಬಿಟ್ಟುಕೊಂಡಿರುವ ದೇಶವೊಂದರಲ್ಲಿ ಜೆಎನ್‌ಯು ಅಂಥ ವಿಶ್ವವಿದ್ಯಾಲಯವು ವಿಶೇಷವಾಗಿ ನಿಲ್ಲುತ್ತದೆ. ಸ್ವಾತಂತ್ರ್ಯ ದ 70 ವರ್ಷಗಳ ನಂತರವೂ ಸಾಕ್ಷರತೆಯನ್ನೂ ಗುಣಾತ್ಮಕವಾಗಿ ಸಾಧಿಸಲೂ ಈವರೆಗೂ ಸಾಧ್ಯವಿಲ್ಲದಿರುವಾಗ ದಲಿತರು, ಅಲ್ಪ ಸಂಖ್ಯಾತರು, ಆದಿವಾಸಿ, ಮಹಿಳೆಯರು, ಆರ್ಥಿಕವಾಗಿ ಹಿಂದುಳಿದ ಸಮುದಾಯವದರು ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಲು ಸಾಧ್ಯ ಮಾಡಿದ್ದು ಜೆಎನ್‌ಯು ಆಗಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರಾತಿನಿಧ್ಯವೂ ಇದೆ. ಅಲ್ಲದೆ ಇಲ್ಲಿ ಶಿಕ್ಷಣ ಪಡೆದ ಅನೇಕ ತಳಸಮುದಾಯದ ಯುವತಿಯುವಕರು ಹೊರದೇಶಗಳಲ್ಲಿ, ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರುಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಆಳುವ ಮನುವಾದಿ ಸರ್ಕಾರಗಳಿಗೆ ಹಾಗೂ ಮೇಲ್ವರ್ಗದ ಜನರಿಗೆ ಜೆಎನ್‌ಯು ಎಂದರೆ ‘ಸಹಜವಾಗಿ’ ಅಸಹನೆ ಇದ್ದೇಯಿದೆ!

ಜೆಎನ್ಯು ಮೇಲೆ ಸರ್ಕಾರಕ್ಕೆ ದ್ವೇಷ ಯಾಕೆ?

ಹೈದರಾಬಾದ್‌ನ ಹೆಚ್‌ಸಿಯುನ ಪ್ರತಿಭಾವಂತ ವಿದ್ಯಾರ್ಥಿ ರೋಹಿತ್ ವೇಮುಲನ ಸಾಂಸ್ಥಿಕ ಕೊಲೆಯ ನಂತರದಲ್ಲಿ ದೇಶದಾದ್ಯಂತ ನಡೆದ ವಿದ್ಯಾರ್ಥಿ ಯುವಜನರ ಹೋರಾಟದಲ್ಲಿ ಜೆಎನ್‌ಯು ಕೇಂದ್ರ ಸರ್ಕಾರದ ವೈಫಲ್ಯವನ್ನು ಗಮನ ಸೆಳೆಯುವಂತೆ ಎತ್ತಿಹಿಡಿದಿತ್ತು. ಇತ್ತೀಚೆಗಷ್ಟೆ ವಿಶ್ವವಿದ್ಯಾನಿಲಯದ ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳು ‘ಒಂದಿಂಚೂ ಹಿಂದೆ ಸರಿಯುವುದಿಲ್ಲ’ ಎನ್ನುವ ಘೋಷಣೆಯೊಂದಿಗೆ ಧೀರೋದ್ಧಾತ ಪ್ರತಿಭಟನೆಗಳನ್ನು ನಡೆಸಿದ್ದರು. ಇದನ್ನು ಕೇಂದ್ರ ನಿರೀಕ್ಷೆ ಮಾಡಿರಲಿಲ್ಲ.

ಇನ್ನು ಸಿಎಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯು ಕೇಂದ್ರ ಸರ್ಕಾರಕ್ಕೆ ದಂಗು ಬಡಿದಂತಾಗಿತ್ತು. ತಮ್ಮ ಬಹುಮತದಿಂದ ಏನು ಬೇಕಾದರೂ ಮಾಡಬಹುದು ಎಂದು ಅಂದುಕೊಂಡಿದ್ದ ಬಿಜೆಪಿಗೆ ದೇಶದ ವಿದ್ಯಾರ್ಥಿ ಯುವಜನರು ದೊಡ್ಡ ಶಾಕ್ ನೀಡಿದ್ದರು. ಅದರಲ್ಲೂ ಜೆಎನ್‌ಯು ವಿದ್ಯಾರ್ಥಿಗಳು ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಅಲ್ಲದೆ ನಿರಂತರವಾಗಿ ಬರುತ್ತಿದ್ದ ಜನವಿರೋಧಿ ನೀತಿಗಳು, ಆರ್ಥಿಕ ಕುಸಿತ, ನಿರುದ್ಯೋಗ ಏರಿಕೆ ಇತ್ಯಾದಿ ಸೇರಿ ಹತ್ತಾರು ಜನರ ನಿಜವಾದ ವಿಚಾರಗಳು ಮುನ್ನಲೆಗೆ ಬರುವಂತೆ ಕಾರ್ಯಕ್ರಮಗಳು, ಪ್ರತಿಭಟನೆಗಳನ್ನು ಜೆಎನ್‌ಯು ವಿದ್ಯಾರ್ಥಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಕೇಂದ್ರ ಉತ್ತರ ಕೊಡಲಾಗದ ಪ್ರಶ್ನೆಗಳನ್ನು ಎತ್ತಿದ್ದಾರೆ. ತಳ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣದ ಜ್ಞಾನ ಪಡೆದಾಗ ಜನಪರವಾದ ಪ್ರಶ್ನೆಗಳು ಕೇಳುವುದು ಸಾಮಾನ್ಯವಾಗಿ ಬರುವ ಗುಣವಾಗಿದೆ. ಮೇಲಿನ ಈ ಎಲ್ಲಾ ಕಾರಣಗಳಿಗಾಗಿ ತಮ್ಮ ವೈಫಲ್ಯವನ್ನು ಸರಿಮಾಡಿಕೊಳ್ಳುವ ಬದಲಾಗಿ ಸರ್ಕಾರವು ದ್ವೇಷವನ್ನು ಬೆಳೆಸಿಕೊಂಡಿದೆ.

ಜೆಎನ್‌ಯು ಕೇವಲ ಎಡಪಕ್ಷದ ಪರವಿರುವ ವಿದ್ಯಾರ್ಥಿಗಳು, ಕೇವಲ ಬಿಜೆಪಿ ವಿರುದ್ಧ ಕೆಲಸ ಮಾಡುವವರು ಎಂದು ಅಪಪ್ರಚಾರವನ್ನು ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಆಳ್ವಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ನಂದಿಗ್ರಾಮ ಇತ್ಯಾದಿ ಜಾಗದಲ್ಲಿ ನಡೆದ ಹಿಂಸೆಯ ವಿರುದ್ಧವೂ ಜೆಎನ್‌ಯು ದನಿ ಎತ್ತಿತ್ತು. 1996ರಲ್ಲಿ ಜನಪರವಾದ ಪಕ್ಷದ ಪರ ಬಿಹಾರದಲ್ಲಿ ಪ್ರಚಾರ ಮಾಡಿದ್ದರು ಅನ್ನುವ ಕಾರಣಕ್ಕೆ ಜೆಎನ್‌ಯು ವಿದ್ಯಾರ್ಥಿ ಮುಖಂಡರನ್ನು ಕೊಲೆ ಮಾಡಲಾಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಅವಧಿಯ ನಿರ್ಭಯ ಅತ್ಯಾಚಾರ ಸಂದರ್ಭದಲ್ಲಿ ನಿರಂತರವಾಗಿ ವಿದ್ಯಾರ್ಥಿ ಹೋರಾಟದ ಕಾವನ್ನು ಕಾಪಿಟ್ಟುಕೊಂಡಿದ್ದು ಜೆಎನ್‌ಯು. ಕಾಶ್ಮೀರದ 370 ರದ್ಧತಿ ಸಂದರ್ಭದಲ್ಲಿ, ಹೊಸ ಶಿಕ್ಷಣ ನೀತಿ ಕರಡು ಬಂದ ಸಮಯದಲ್ಲಿ ಮತ್ತು ಹಲವಾರು ಇತರ ಜನವಿರೋಧಿ ನೀತಿಗಳು ಬಂದಾಗ ದೇಶದಲ್ಲಿ ದೊಡ್ಡ ಮಟ್ಟದ ಪ್ರತಿರೋಧಗಳು ಬರದೇ ಇದ್ದಾಗ ಜೆಎನ್‌ಯು ಮಾತ್ರ ಪ್ರತಿರೋಧವನ್ನು ಒಡ್ಡುತ್ತಲಿತ್ತು. ಹೀಗೆ ಬಹು ಕಾಲದಿಂದ ಜನಪರವಾಗಿ ವಿದ್ಯಾರ್ಥಿ ಹೋರಾಟದ ಬದ್ಧತೆಯನ್ನು ಜೆಎನ್‌ಯು ಕಾಪಾಡಿಕೊಂಡಿದೆ. ಈ ಬದ್ಧತೆಯನ್ನು ಮುರಿಯುವ ಕೆಲಸವನ್ನು ಎಲ್ಲಾ ಸರ್ಕಾರಗಳು ಮಾಡುತ್ತಾ ಬರುತ್ತಿವೆ. ಆದರೆ ಈ ಕಾಲದ ಕೇಂದ್ರ ಸರ್ಕಾರ ಕ್ರೂರವಾಗಿ ಮತ್ತಷ್ಟು ಆಕ್ರಮಣಕಾರಿಯಾಗಿ ದಾಳಿ ನಡೆಸುತ್ತಿದೆ.

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದಾಳಿ ಏಕಾಯಿತು?

ಸಿಎಎ, ಎನ್‌ಆರ್‌ಸಿ ವಿರುದ್ಧದ ದೇಶದಾದ್ಯಂತ ಬಂದ ಪ್ರತಿರೋಧವನ್ನು ಕೇಂದ್ರ ಸುಧಾರಿಸಿಕೊಳ್ಳದಾಯಿತು. ಅದರಲ್ಲೂ ವಿದ್ಯಾರ್ಥಿ ಯುವಜನರ ಪಾತ್ರ ಅವರಿಗೆ ದಿಗಿಲು ಬಡಿಸಿತ್ತು. ಈ ಹೊತ್ತಿಗಾಗಲೇ ದೇಶದ್ರೋಹದಂತಹ ನೂರಾರು ಸುಳ್ಳು ಕೇಸು, ಜೈಲು ಎಲ್ಲವನ್ನೂ ನೋಡಿ ಬಂದಂತಹ ಜೆಎನ್‌ಯು ವಿದ್ಯಾರ್ಥಿಗಳನ್ನು ಯಾವುದರಿಂದಲೂ ಹೆದರಿಸಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಕೇಂದ್ರ ಬಂದಿತ್ತಾದರೂ ಎಬಿವಿಪಿ ಗೂಂಡಾಗಳನ್ನು ಬಳಸಿಕೊಂಡು, ವಿಸಿ ಹಾಗೂ ಪೊಲೀಸರ ಸಹಾಯದಿಂದಲೂ ದಾಳಿ ನಡೆಸಿದೆ.

ಜೆಎನ್‌ಯು ವಿದ್ಯಾರ್ಥಿ ಹಾಗೂ ಪ್ರೊಫೆಸರ್‌ಗಳು ಹೇಳುವಂತೆ ಮೌಖಿಕವಾಗಿ ಪೋಲಿಸರಿಗೆ ಎರಡು ಗಂಟೆಗಳ ಕಾಲ ಸುಮ್ಮನಿದ್ದು ದಾಳಿಕೋರರಿಗೆ ಅವಕಾಶ ನೀಡಬೇಕು ಎನ್ನುವ ಆದೇಶವಿತ್ತು ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾದ ವಿಡಿಯೋಗಳು, ವಾಟ್ಸಾಪ್ ಗ್ರೂಪಿನ ಸಂದೇಶದ ಸ್ಕ್ರೀನ್ ಶಾಟ್‌ಗಳು ಈಗ ಬಹಿರಂಗವಾಗಿವೆ. ಶುಲ್ಕ ಹೆಚ್ಚಳದಿಂದ ಶುರುವಾಗಿ ಸಿಎಎ ವಿರುದ್ಧದ ಪ್ರತಿರೋಧದವರೆಗೂ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದು ಶಾಂತಿಯುತವಾಗಿ ನಡೆಯುತ್ತಿರುವುದು ಕೇಂದ್ರಕ್ಕೆ ಮತ್ತೊಂದು ನುಂಗಲಾರದ ತುತ್ತಾಗಿದೆ. ಇದರ ಮಹತ್ವ ಕುಗ್ಗಿಸಲು ಶಾಂತಿ ಕದಡಲು ವಿದ್ಯಾರ್ಥಿಗಳ ಮಧ್ಯ ಗಲಾಟೆ ನಡೆಯುತ್ತಿದೆ ಎಂದು ಬಿಂಬಿಸಲು ಈ ಪೂರ್ವನಿಯೋಜಿತ ದಾಳಿ ನಡೆಸಿದ್ದಾರೆ. ಈ ದಾಳಿಯ ನಂತರ ‘ಶಟ್‌ಡೌನ್ ಜೆಎನ್‌ಯು’ ಎಂದು ಟ್ರೆಂಡ್ ಮಾಡುತ್ತಿರುವುದೇ ಇವರ ಉದ್ದೇಶ ತಿಳಿಯುತ್ತಿದೆ. ಇದರಿಂದಾಗಿ ಒಂದು ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನದಲ್ಲಿ ಕೇಂದ್ರ ಇದ್ದಂತಿದೆ. ಒಂದು ನಿರಂತರವಾಗಿರುವ ಜೆಎನ್‌ಯು ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವುದು ಮತ್ತೊಂದು ತಳ ಸಮುದಾಯದ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದು.

ಇದೆಲ್ಲದರ ದಮನದ ನಂತರವೂ ಧೂಳಿನಿಂದ ಎದ್ದುಬರುವ ಫೀನಿಕ್ಸ್ ಪಕ್ಷಿಯಂತೆ ಪ್ರತಿಬಾರಿ ಜೆಎನ್‌ಯು ವಿದ್ಯಾರ್ಥಿ ಹೋರಾಟವೂ ಎದ್ದು ಬರುತ್ತಿದೆ. ಪ್ರಜಾತಂತ್ರವನ್ನು ಕಾಪಾಡಲು ದೇಶದಾದ್ಯಂತ ವಿದ್ಯಾರ್ಥಿಯುವಜನರು ಹೋರಾಟದ ಸಾಗರಕ್ಕೆ ಸೇರುತ್ತಿರುವುದು ಆಶಾದಾಯಕವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸೌಂದರ್ಯವಲ್ಲ; ಪ್ರಜಾಪ್ರಭುತ್ವದ ಜೀವ ಮತ್ತು ಆತ್ಮದ ಮೇಲಿನ ದಾಳಿ!

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...