Homeಅಂಕಣಗಳುಥೂತ್ತೇರಿ | ಯಾಹೂಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ

ಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

“ಜುಮ್ಮಿ ಮನೆಗೆ ಬಂದ ವಾಟಿಸ್ಸೆ.”
“ಇದೆನಕ್ಕ ರಂಗೋಲೆಲಿ ಗಾಡಿ ಚಕ್ರನೆ ಬರೆದಿದ್ದಿ” ಎಂದ.
“ಇಲ್ಲಿಗಂಟ ಬರಬ್ಯಾಡ ಅದರ್ವಳಗೆ ಕುತಗಂಡು ಮಾತಾಡು. ಅದ್ಕು ಮದ್ಲು ಅಲ್ಲಿ ಮಡಗಿರೊ ನೀರಲ್ಲಿ ಕೈ ಕಾಲು ತ್ವಳಕಂಡು ಬಾ. ಅಮ್ಯಾಲೆ ಆ ಬಾಯಿಕಟ್ಟ ಸರಿಯಾಗಾಯ್ಕೊ ಕೆಮ್ಮು ಬಂದ್ರೆ ಸೀನಿದ್ರೆ ಮುಸುರಿ ಮುಚಗಂಡು ಅಮ್ಯಾಲೆ ಕೈಯುಜ್ಜಕೊ” ಎಂದು ಜುಮ್ಮಿ ಹೇಳುತ್ತಿರುವಾಗ.
“ಭೇಷ್ ಕಣಕ್ಕ. ಎಷ್ಟೇ ಆಗ್ಲಿ ಜನಪತಿನಿಧಿ ನೀನು. ನಮ್ಮೂರ ಪಿಣರಾಯಿ ಕಣಕ್ಕ” ಎಂದ.
“ಪಿಣತೆರಾಯ ಅಂದ್ರೇನ್ಲ.”
“ಅವುನು ಕೇರಳದ ಚಿಪ್ ಮಿನಿಷ್ಟ್ರು ಕಣಕ್ಕ. ಕೊರೋನ ಯಂಗೆ ಕಂಟ್ರೊಲ್ ಮಾಡ್ಯವುನೆ ಅಂದ್ರೇ ಥೇಟ್ ನಿನ್ನ ತರನೆ ಮಾಡ್ಯವುನೆ ಕಣಕ್ಕ.”
“ಎಜ್ಜಾಟ್ಳಿ ಕರಟ್ ಕಣೊ ಉಗ್ರಿ. ಎಜುಕೇಟೆಡ್ ಪರಸನ್ ಅಂದ್ರೆ ಅವುನು. ಅವುನೇನಾರ ಪ್ರಧಾನಿಯಾಗಿದ್ರೆ ದೀಪ ಹಚ್ಚಿ ಜಾಗಟೆ ಬಡಿರಿ ಅಂತಿರಲಿಲ್ಲ. ಕರೋನ ಕಡಿಮೆ ಮಾಡಕ್ಕೆ ಏನು ಮಾಡಬೇಕು ಅದ್ ಮಾಡಿ ಅನ್ನೊನು.”
“ಮೋದಿ ದೀಪ ಹಚ್ಚಿ ಅಂದ ಮ್ಯಾಲೆ ಕಡಿಮ್ಯಾಗಬೇಕಿತ್ತಲವೆ” ಎಂದಳು ಜುಮ್ಮಿ.
“ದೀಪ ಹಚ್ಚಿದ್ರೆ ಕರೋನ ಕಡಿಮೆಯಾಯ್ತದೆ ಅಂತ ಅವುನೆಲ್ಲ ಹೇಳಿದ್ನಕ್ಕ. ದೀಪ ಹಚ್ಚಿ ಅಂದ ಅಷ್ಟೆಯ ಅದ್ಕೆ ನಮ್ಮೂರ ಮೇಷ್ಟ್ರು ಐದು ದೀಪ ಹಚ್ಚಿದ್ನಂತೆ.”
“ಅವುನ್ಯಾಕೆ ಐದು ದೀಪ ಹಚ್ಚಿದಾ.”
“ಅದು ಮದ್ಲೆ ಕಪಿ ಮುಂಡೆದಲವಾ. ಮೋದಿ ಹೇಳಿದ್ದು ತಲಿಗೊಂದು ದೀಪ ಅಂತ ತಿಳಕಂಡು ಅವುನು ಅವುನೆಂಡ್ತಿ ಮೂರು ಹೆಣ್ ಮಕ್ಕಳು ಸೇರಿ ತಲಿಗೊಂದು ದೀಪ ಹಚ್ಚಿದನಂತೆ.”
“ಮಕ್ಕಳಿಗೆ ಪಾಟ ಹೇಳೊ ಮುಂಡೆ ಮಗನೆ ಹಿಂಗಾದ್ರೆ ಇನ್ನ ದೇಸದ ಜನಗಳ ಕತಿಯೇನೂ.”
“ಇಂಥೊರಿಂದ್ಲೆಯ ಹಿಂದೂಗಳು ಸಾಬರು ಅಂತ ಬ್ಯಾರೆ ಬ್ಯಾರೆ ಆಯ್ತಾಯಿರದು.”
“ಅದೇನ್ಲ ಸಾಬರು ಗಲಾಟೆ” ಎಂದಳು ಜುಮ್ಮಿ.
“ಸಾಬರ ಕತೆ ಮುಗಿತು ಮುಗಿತು ಬುಡಕ್ಕ” ಎಂದ ವಾಟಿಸ್ಸೆ.
“ಅದ್ಯಾಕ್ಲ ಅಂಗಂತಿ.”
“ಇನ್ನೆನಕ್ಕ ಕೊರೋನ ಆದೊರಿಗೆ ಅವುಸ್ಥಿಕೊಡಕೋದೊರಿಗೆ ವಡುದು ಕಲ್ಲು ಬಿರತವೆ ಅಂದ್ರೆ ಅವು ಕತಿಯೇನೂ.”
“ಅವುಕೇನು ಮಲ್ಲಾಗ್ರು ಬಂದದ್ಲ.”
“ಬುದ್ದಿ ಕಡಿವೆಯಿದ್ದೊರಿಗೆ ಅಲವೆ ಮಲ್ಲಾಗ್ರು ಬರದು.”
“ಅದೇನಾರ ಆಗ್ಲಿ ಆ ಬಿಜೆಪಿಗಳಾಡದ್ಕೂ ಇವು ಮಾಡದ್ಕೂ ಸರಿಯಾಗ್ಯದೆ.”
“ನಿಜ ಕಣೊ ಉಗ್ರಿ ಈಗಾಗ್ಲೆ ಡೆಲ್ಲಿ ಮಸೀದಿ ವಳಗಿಂದ ತಂದು ಕರೋನ ಹರಡತ ಅವುರೆ ಸಾಬ್ರು ಊರಿಗೆ ಸೇರಸಬ್ಯಾಡಿ ಅಂತ ಬಿಜೆಪಿ ಬಡ್ಡೆತ್ತವು ಹೇಳಿಕೊಂಡು ತಿರುಗ್ತಾ ಅವೆ. ಅವುರಂಗೇಳಕ್ಕೂ ಇವುರಿಂಗೆ ಮಾಡಕ್ಕೂ ಸರಿಯಾಗ್ಯದೆ ಬುಡು.”
“ಮುಂದೆ ಕತಿಯೇನಯ್ಯಾ.”
“ಮುಂದೇನು ಅವುರ ಅಂಗೆಯ ಈ ಸಾಬರು ಅಂಗೆಯ ಅನ್ನಂಗಾಗಿ ಸಾಬರ ಪರ ಮಾತಡಕ್ಕೆ ಯಾರು ಇಲ್ದಂಗಾಯ್ತದೆ.”
“ನಾವು ಮಮನುಸರಾಗಿರತಿವಿ ಸಾಬರು ಮಾತ್ರ ಸಾಬರಾಗೆ ಇರತರೆ. ಅವನೋಡಂಗೆಯ, ಹೆಂಗಸರ್ಯಲ್ಲ ಬುರುಖಾ ಹಾಯ್ಕಂಡು. ಗಂಡಸರ್ಯಲ್ಲ ಗಡ್ಡ ಬುಟಗಂಡು ಕಣಕಾಲಗಾಟ ಪೈಜಾಮಕಂಡು ಟೋಪಿ ಹಾಯ್ಕಂಡು ನೋಡಿದೇಟಿಗೆ ಪಕ್ಕಾ ಸಾಬಿ ಅನ್ನಂಗೆ ಕಾಣ್ತರಪ್ಪ.”
“ಮದ್ಲಂಗಿರಲಿಲ್ಲ ಅಲವೆ.”
“ಊಕಣಕ್ಕ ಬಾಬ್ರಿ ಮಸೀದಿ ಬಿದ್ದಮ್ಯಾಲೆ ವಳಗಿರೊ ಮೌಲವಿಗಳು ಸಾಬರ ಕೈಗೆ ತಗಂಡು ಅಂಗೆ ಮಾಡ್ಯವುರೆ. ನೀವ್ಯಲ್ಲ ಧರಮ ಪಾಲಿಸಿಯಲ್ಲಿ ವಗ್ಗಟ್ಟಾಗಿರಿ. ಧರಮ ಅಂತ ಹೇಳಿ ಕಳುಸ್ತನೆ. ಇವು ಬಂದು ಕಲ್ಲು ಬೀರ್ತವೆ. ಅಂತೂ ಈ ಸಾಬ್ರು ಆರೆಸ್ಸೆಸ್‍ಗಳಿಂದ ನಮಗೆ ನೆಮ್ಮದಿಯಿವಲ್ಲ ಹೇಳು.”
“ಹಿಂಗಾದ್ರೆ ಸಾಬ್ರು ಕತೆ ಮುಗಿತು ಬುಡು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...