ರಾಷ್ಟ್ರೀಯ ನಾಟಕ ಶಾಲೆ (National School of Drama) ಯ ಅಂತರಾಷ್ಟ್ರೀಯ ನಾಟಕೋತ್ಸವಕ್ಕೆ ರಾಜ್ಯದಿಂದ ಆಯ್ಕೆಯಾಗಿರುವ ‘ಕೆಂಡೋನಿಯನ್ಸ್’ ನಾಟಕವು ಬೆಂಗಳೂರಿನ ಜೆ.ಪಿ. ನಗರದಲ್ಲಿ ಇರುವ ರಂಗಶಂಕರದಲ್ಲಿ ಮೊದಲ ಬಾರಿಗೆ ನವೆಂಬರ್ 11ರ ಶುಕ್ರವಾರ ಸಂಜೆ 07:30 ಕ್ಕೆ ಪ್ರದರ್ಶನಗೊಳ್ಳಲಿದೆ.
ಮಂಗಳೂರಿನ ಅಸ್ತಿತ್ವ ತಂಡವೂ ನಾಟಕದಲ್ಲಿ ಅಭಿನಯಿಸುತ್ತಿದ್ದು, META ಅತ್ಯತ್ತಮ ನಿರ್ದೇಶಕ ಪ್ರಶಸ್ತಿ ವಿಜೇತ ‘ಅರುಣ್ ಲಾಲ್’ ನಿರ್ದೇಶಿಸಿದ್ದಾರೆ. ಕಥೆಯನ್ನು ಎಂ.ಪಿ. ರಾಜೇಶ್ ರಚಿಸಿದ್ದು, ಕ್ರಿಸ್ಟಿ ನಿನಾಸಂ ನಿರ್ವಹಣೆ ಮಾಡುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕ್ರಿಸ್ಟಿ ನಿನಾಸಂ, “ಎಲ್ಲಾ ಭಾಷೆಯ ರಂಗಭೂಮಿಗೂ ಅದರದ್ದೇ ಆದ ಒಂದೊಂದು ಭಾಷೆ ಇರುತ್ತದೆ. ಆದರೆ ಈ ನಾಟಕ ಕನ್ನಡ ರಂಗಭೂಮಿಯ ಭಾಷೆಯನ್ನು ಬಿಟ್ಟು ಕಟ್ಟಿದ ನಾಟಕವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಹೆಡ್ಬುಷ್’ ವೀರಗಾಸೆ ವಿವಾದ: ವೈರಲ್ ಆಗುತ್ತಿವೆ ಹಳೆಯ ಸಿನಿಮಾ ದೃಶ್ಯಗಳು
“ನಿರ್ದೇಶಕರು ಕೇರಳದವರಾಗಿರುವುದು ಕೂಡಾ ನಾಟಕದ ವಿಶಿಷ್ಠತೆಗೆ ಕಾರಣ ಇರಬಹುದು. ಹಾಗಾಗಿಯೆ ಈ ನಾಟಕ ಕನ್ನಡದ ಇತರ ನಾಟಕಕ್ಕಿಂತ ವಿಭಿನ್ನವಾಗಿ ನಿಲ್ಲುತ್ತದೆ. ನಾಟಕದಲ್ಲಿ ವಿಶಿಷ್ಠವಾದ ಜಾನರ್ ಅನ್ನು ಅಳವಡಿಸಿಕೊಂಡಿದ್ದು, ಆದ್ದರಿಂದ ಪ್ರಯೋಗವನ್ನು ಎಲ್ಲರೂ ನೋಡಬೇಕಿದೆ” ಎಂದು ತಿಳಿಸಿದರು.
‘ಕೆಂಡೋನಿನ್ಸ್’ ಪ್ರಶಸ್ತಿ ವಿಜೇತ ಕನ್ನಡ ನಾಟಕವಾಗಿದ್ದು, ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸುವ ಈ ವರ್ಷದ ಅಂತರಾಷ್ಟ್ರೀಯ ನಾಟಕೋತ್ಸವ ‘ಭಾರಂಗಂ-2022’ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದೆ.
ಬುಕ್ಮೈ ಶೋದಲ್ಲಿ ಟಿಕೇಟುಗಳನ್ನು ಕಾದಿರಿಸಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ಗೆ ‘ನೋಬೆಲ್ ಸಾಹಿತ್ಯ ಪ್ರಶಸ್ತಿ-2022’