ದೇಶಭಕ್ತ ಲಡಾಖ್ ಜನರು ಚೀನಾದ ಒಳನುಸುಳುವಿಕೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ, ಅವರ ಎಚ್ಚರಿಕೆಯನ್ನು ನಿರ್ಲಕ್ಷಿಸುವುದರಿಂದ ಭಾರತಕ್ಕೆ ಬಹಳ ನಷ್ಟವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಲಡಾಖ್ನಲ್ಲಿ ಚೀನಿಯರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಕೆಲವು ಲಡಾಖ್ ಜನರು ಆರೋಪಿಸಿರುವ ಮಾಧ್ಯಮ ವರದಿಯನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.
“ದೇಶಭಕ್ತ ಲಡಾಖಿಗಳು ಚೀನಾದ ಒಳನುಗ್ಗುವಿಕೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅವರು ಎಚ್ಚರಿಕೆ ನೀಡುತ್ತಿದ್ದಾರೆ. ಅವರ ಎಚ್ಚರಿಕೆಯನ್ನು ನಿರ್ಲಕ್ಷಿಸಿದರೆ ಭಾರತ ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
Patriotic Ladakhis are raising their voice against Chinese intrusion. They are screaming a warning.
Ignoring their warning will cost India dearly.
For India’s sake, please listen to them. pic.twitter.com/kjxQ9QNpd2
— Rahul Gandhi (@RahulGandhi) July 4, 2020
“ಭಾರತದ ಸಲುವಾಗಿ, ದಯವಿಟ್ಟು ಅವರ ಮಾತುಗಳನ್ನು ಕೇಳಿ” ಎಂದು ಅವರು ಹೇಳಿದರು.
Ladakhis say:
China took our land.PM says:
Nobody took our land.Obviously, someone is lying. pic.twitter.com/kWNQQhjlY7
— Rahul Gandhi (@RahulGandhi) July 3, 2020
“ತಮ್ಮ ತಾಯಿನಾಡನ್ನು ಪ್ರೀತಿಸುವ ಲಡಾಖ್ನ ಅಸಂಖ್ಯಾತ ನಿವಾಸಿಗಳು ಚೀನಾ ತಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಮಾತೃಭೂಮಿಯನ್ನು ರಕ್ಷಿಸುವ ಸಲುವಾಗಿ ಸರ್ಕಾರವು ಲಡಾಕ್ ಮತ್ತು ಇಡೀ ಭಾರತದ ಜನರ ಭಾವನೆಗಳನ್ನು ಆಲಿಸುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಚೀನಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು ಕಳೆದ ಎರಡು ತಿಂಗಳಲ್ಲಿ ಇದು ಹೆಚ್ಚಾಗಿದೆ ಎಂದು ಲಡಾಖ್ನ ವ್ಯಕ್ತಿಯೊಬ್ಬರ ವಿಡಿಯೋವನ್ನೂ ಅವರು ಟ್ಯಾಗ್ ಮಾಡಿದ್ದಾರೆ.
अपनी मातृभूमि से प्यार करने वाले लद्दाख के अनगिनत निवासी कह रहे हैं कि चीन हमारी जमीन पर कब्जा कर रहा है।
आशा है कि मातृभूमि की रक्षा के लिए सरकार लद्दाख के लोगों के साथ पूरे हिंदुस्तान की भावना सुनेगी और ऐक्ट करेगी।#PMMustAnswer pic.twitter.com/6KEoUcpKYD
— Priyanka Gandhi Vadra (@priyankagandhi) July 4, 2020
ಪೂರ್ವ ಲಡಾಕ್ನಲ್ಲಿನ ಚೀನಾ-ಭಾರತ ಗಡಿ ವಿವಾದದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವೂ ಕೇಂದ್ರ ಸರ್ಕಾರದ ಮೇಲೆ ತೀವ್ರವಾಗಿ ದಾಳಿ ನಡೆಸುತ್ತಿದೆ.
ನಿನ್ನೆ ಹಿಂಸಾಚಾರ ನಡೆದ ಪ್ಯಾಂಗೋಗ್ ಸರೋವರಕ್ಕಿಂತ 200 ಕಿ.ಮಿ ದೂರದ ಲೇಹ್ಲ್ಲಿ ಚೀನಾವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “ವಿಸ್ತರಣೆಯ ಯುಗ ಮುಗಿದಿದೆ” ಎಂದು ಹೇಳಿದ್ದಾರೆ.
ಓದಿ: ವಿಸ್ತರಣಾವಾದಿಗಳ ಕಾಲ ಮುಗಿದಿದೆ, ಇದು ಪ್ರಗತಿಯ ಯುಗ: ನರೇಂದ್ರ ಮೋದಿ