Homeಮುಖಪುಟಬೆಂಗಳೂರು ಲ್ಯಾಂಡ್‌ಮಾರ್ಕ್ಸ್; ಓರೆಕೋರೆಗಳ ಕಲರವಕ್ಕೆ ವ್ಯಂಗ್ಯ ಚಿತ್ರಗಳ ಚಾವಡಿ

ಬೆಂಗಳೂರು ಲ್ಯಾಂಡ್‌ಮಾರ್ಕ್ಸ್; ಓರೆಕೋರೆಗಳ ಕಲರವಕ್ಕೆ ವ್ಯಂಗ್ಯ ಚಿತ್ರಗಳ ಚಾವಡಿ

- Advertisement -
- Advertisement -

“ಚಿತ್ರ ಕಲಾವಿದರಿಗೆ ಲಲಿತಕಲಾ ಅಕಾಡೆಮಿಯಿದೆ, ಬರಹಗಾರ-ಲೇಖಕರಿಗೆ ಸಾಹಿತ್ಯ ಅಕಾಡೆಮಿ ಇದೆ, ಹಾಗಾದರೆ, ಕಾರ್ಟೂನಿಸ್ಟ್‌ಗಳಿಗೆ ಯಾಕೆ ಅಂತದ್ದೇ ಒಂದು ಸಂಸ್ಥೆ ಇರಬಾರದು” ಎನ್ನುತ್ತಾರೆ ಖ್ಯಾತ ವ್ಯಂಗ್ಯಚಿತ್ರಕಾರರಾದ ವಿ.ಜಿ. ನರೇಂದ್ರ ಅವರು. ತಮ್ಮ ಈ ಕನಸನ್ನು ಬೆನ್ನುಬಿಡದೆ, ’ಇಂಡಿಯನ್
ಇನ್‌ಸ್ವಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್’ ಎಂಬ ಸಂಸ್ಥೆಯ ಮೂಲಕ ’ಇಂಡಿಯನ್ ಕಾರ್ಟೂನ್ ಗ್ಯಾಲರಿ’ಯನ್ನು ಪ್ರಾರಂಭಿಸಿ ಅದರ ಮೇಲ್ವಿಚಾರಕರಾಗಿ ಮುನ್ನಡೆಸುತ್ತಿದ್ದಾರೆ.

ಬೆಂಗಳೂರಿನ ಎಂ.ಜಿ.ರೋಡ್‌ನ ಟ್ರಿನಿಟಿ ಸರ್ಕಲ್‌ಗೆ ಲಂಬದಲ್ಲಿರುವ ಮಿಡ್‌ಫೋರ್ಡ್ ಗಾರ್ಡನ್ ರಸ್ತೆಯಲ್ಲಿರುವ ಮಿಡ್‌ಫೋರ್ಡ್ ಹೌಸ್‌ನ ನೆಲಮಾಳಿಗೆಯಲ್ಲಿರುವ ’ಇಂಡಿಯನ್ ಕಾರ್ಟೂನ್ ಗ್ಯಾಲರಿ’ ದೇಶದ ಮೊದಲ ಕಾರ್ಟೂನ್ ಗ್ಯಾಲರಿ. ಇದೀಗ ಈ ಕಾರ್ಟೂನ್ ಗ್ಯಾಲರಿಗೆ 15ನೇ ವರ್ಷದ ಸಂಭ್ರಮ. 2007ರ ಆಗಸ್ಟ್ 16ರಂದು ಇದನ್ನು ರಾಜ್ಯದ ರಾಜ್ಯಪಾಲರಾಗಿದ್ದ ಟಿ.ಎನ್ ಚತುರ್ವೇದಿ ಅವರು ಉದ್ಘಾಟಿಸಿದ್ದರು. ಆ ವೇಳೆ ರಾಜ್ಯದ ಖ್ಯಾತ ವ್ಯಂಗ್ಯಚಿತ್ರಕಾರರಾದ ಬಿ.ವಿ. ರಾಮಮೂರ್ತಿ, ವಿ.ಜಿ. ನರೇಂದ್ರ ಮತ್ತು ಬಿ.ಜಿ. ಗುಜ್ಜಾರಪ್ಪ ಅವರ ವ್ಯಂಗ್ಯಚಿತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು.

ಅದರ ನಂತರವೂ ಗ್ಯಾಲರಿಯಲ್ಲಿ ನಿರಂತರವಾಗಿ ಪ್ರದರ್ಶನಗಳನ್ನು ನಡೆಸುತ್ತಲೇ ಬರಲಾಗುತ್ತಿದೆ. ತಿಂಗಳಿಗೆ ಒಂದು ಪ್ರದರ್ಶನದಂತೆ ಇದುವರೆಗೂ ಸುಮಾರು 180ಕ್ಕಿಂತಲೂ ಹೆಚ್ಚಿನ ವ್ಯಂಗ್ಯ ಪ್ರದರ್ಶನಗಳನ್ನು ನಡೆಸಲಾಗಿದೆ. “ಇದೀಗ 181ನೇ ವ್ಯಂಗ್ಯಚಿತ್ರ ಪ್ರದರ್ಶನ ಪ್ರಾರಂಭವಾಗಿದ್ದು, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಪ್ರಧಾನ ವ್ಯಂಗ್ಯಚಿತ್ರಕಾರ ಇ.ಪಿ. ಉನ್ನಿ ಅವರ ವ್ಯಂಗ್ಯಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ” ಎಂದು ವಿ.ಜಿ. ನರೇಂದ್ರ ಅವರು ಹೇಳುತ್ತಾರೆ. “ಉನ್ನಿ ಅವರು ಈ ಪ್ರದರ್ಶನಕ್ಕೆಂದೇ ಬೆಂಗಳೂರಿನ ವಿಶೇಷ ಸ್ಥಳಗಳ ಸುಮಾರು 12 ಚಿತ್ರಗಳನ್ನು ರಚಿಸಿದ್ದು, ಆ ಚಿತ್ರಗಳನ್ನೂ ಈ ಪ್ರದರ್ಶನಕ್ಕೆ ಇಟ್ಟಿದ್ದೇವೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಮುಂಬರುವ ಆಗಸ್ಟ್ ತಿಂಗಳಲ್ಲಿ ’ಇಂಡಿಯನ್ ಕಾರ್ಟೂನ್’ ಗ್ಯಾಲರಿ ತನ್ನ ಯಶಸ್ವಿ ಹದಿನೈದನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ. ಈ ವೇಳೆ ಭಾರತದ ಎಲ್ಲಾ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ.

ತನ್ನ ಹೆಸರು ’ಇಂಡಿಯನ್ ಕಾರ್ಟೂನ್ ಗ್ಯಾಲರಿ’ ಎಂದಿದ್ದರೂ ಇದು ಕೇವಲ ಭಾರತೀಯ ವ್ಯಂಗ್ಯ ಚಿತ್ರಕಾರರಿಗೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕ, ಇಂಗ್ಲೆಂಡ್, ಚೀನಾ ಸೇರಿದಂತೆ ವಿದೇಶಿ ವ್ಯಂಗ್ಯಚಿತ್ರಕಾರರ ಪ್ರದರ್ಶನಗಳನ್ನೂ ನಡೆಸುತ್ತಿದೆ. ಗ್ಯಾಲರಿಗೆ ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ವಿದೇಶಗಳಿಂದಲೂ ವ್ಯಂಗ್ಯಚಿತ್ರ ಪ್ರಿಯರು ಭೇಟಿ ನೀಡುತ್ತಾರೆ ಎನ್ನುತ್ತಾರೆ ವಿ.ಜಿ. ನರೇಂದ್ರ.

ಗ್ಯಾಲರಿಯಲ್ಲಿ ಕೇವಲ ವ್ಯಂಗ್ಯಚಿತ್ರ ಪ್ರದರ್ಶನ ಮಾಡುವುದಲ್ಲದೆ ವ್ಯಂಗ್ಯಚಿತ್ರಕಾರ್ತಿ ಮಾಯಾ ಕಾಮತ್ ಅವರ ನೆನಪಿನಲ್ಲಿ ಪ್ರತಿವರ್ಷ ’ಅಂತಾರಾಷ್ಟ್ರೀಯ ಕಾರ್ಟೂನ್ ಸ್ಪರ್ಧೆ’ಯನ್ನೂ ನಡೆಸಲಾಗುತ್ತಿದೆ. ಈ ಸ್ಪರ್ಧಾರ್ಥಿಗಳಿಗೆ ಒಟ್ಟು ಒಂದು ಲಕ್ಷ ರೂಪಾಯಿ ಬಹುಮಾನಗಳನ್ನು ವಿತರಿಸಲಾಗುತ್ತದೆ. ಇದನ್ನು ಕಳೆದ 14 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ವೇಳೆ ಆಯಾ ವರ್ಷದ ಉದಯೋನ್ಮುಖ ವ್ಯಂಗ್ಯಚಿತ್ರಕಾರರನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ವಿ.ಜಿ. ನರೇಂದ್ರ ಹೇಳುತ್ತಾರೆ.

ಇಷ್ಟೇ ಅಲ್ಲದೆ ಗ್ಯಾಲರಿಯಲ್ಲಿ ಕಾರ್ಟೂನ್ ರಚಿಸುವ ಕಾರ್ಯಾಗಾರಗಳನ್ನು ಕೂಡಾ ನಡೆಸಲಾಗುತ್ತದೆ. ಈವರೆಗೆ ಇಲ್ಲಿ ಸುಮಾರು 30 ಯಶಸ್ವಿ ಕಾರ್ಯಾಗಾರಗಳು ನಡೆದಿದ್ದು, ಅದರಲ್ಲಿ ದೇಶದ ಎಲ್ಲಾ ರಾಜ್ಯಗಳ ಜನರು ಭಾಗವಹಿಸಿದ್ದಾರೆ. ಕಾರ್ಯಾಗಾರಗಳ ಬಗ್ಗೆ ಮಾತನಾಡುವ ವಿ.ಜಿ.ನರೇಂದ್ರ, “ವ್ಯಂಗ್ಯಚಿತ್ರ ಜಗತ್ತಿನಲ್ಲಿ ಮಹಿಳಾ ಕಾರ್ಟೂನಿಸ್ಟ್‌ಗಳು ಕಡಿಮೆ ಇದ್ದಾರೆ ಎಂಬ ಅಪವಾದವಿದೆ. ಇದು ನಿಜ ಕೂಡಾ ಆಗಿದೆ. ಆದರೆ ನಮ್ಮ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಲ್ಲಿ ಅರ್ಧಕ್ಕರ್ಧ ಜನರು ಮಹಿಳೆಯರಾಗಿದ್ದರು. ಇದು ತುಂಬಾ ಆಶಾದಾಯಕ ಬೆಳವಣಿಗೆಯಾಗಿದೆ” ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಇಂಡಿಯನ್ ಕಾರ್ಟೂನ್ ಗ್ಯಾಲರಿ ಕೇವಲ ವ್ಯಂಗ್ಯಚಿತ್ರಗಳ ಪ್ರದರ್ಶನ ಮಾತ್ರ ಮಾಡುವುದಲ್ಲದೆ, ವ್ಯಂಗ್ಯಚಿತ್ರಗಳ ಬಗೆಗಿನ ಸುಮಾರು 3 ಸಾವಿರ ಅತೀ ಅಪರೂಪದ ಪುಸ್ತಕಗಳ ಗ್ರಂಥಾಲಯವನ್ನೂ ಹೊಂದಿದೆ. “ಇಲ್ಲಿರುವ ಪುಸ್ತಕಗಳು ಭಾರತದ ಬೇರೆಲ್ಲೂ ಸಿಗದಿರುವಷ್ಟು ಅಪರೂಪದ್ದಾಗಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ದೇಶದ ಅನೇಕ ವಿಶ್ವವಿದ್ಯಾಲಯಗಳಿಂದ ವ್ಯಂಗ್ಯಚಿತ್ರಗಳ ಬಗ್ಗೆ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಗ್ಯಾಲರಿಗೆ ಭೇಟಿ ನೀಡುತ್ತಾರೆ” ಎಂದು ನರೇಂದ್ರ ಹೇಳುತ್ತಾರೆ. ಗ್ರಂಥಾಲಯಗಳ ಜೊತೆಗೆ ವ್ಯಂಗ್ಯಚಿತ್ರ ಪುಸ್ತಕಗಳ ಮಾರಾಟವನ್ನೂ ಗ್ಯಾಲರಿ ಮಾಡುತ್ತಿದೆ.

“ಗ್ಯಾಲರಿಗೆ ಎಲ್ಲರಿಗೂ ಉಚಿತ ಪ್ರವೇಶವಿದ್ದು, ಗ್ಯಾಲರಿಯ ಸದಸ್ಯತನವನ್ನೂ ಪಡೆದುಕೊಳ್ಳಬಹುದಾಗಿದೆ. ತಿಂಗಳಿಗೆ ಸುಮಾರು 2 ಸಾವಿರಕ್ಕಿಂತಲೂ ಹೆಚ್ಚಿನ ಜನರು ಗ್ಯಾಲರಿಗೆ ಭೇಟಿ ನೀಡುತ್ತಿದ್ದು ಅದರಲ್ಲೂ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದುಹೋಗುತ್ತಾರೆ” ಎನ್ನುತ್ತಾರೆ ನರೇಂದ್ರ ಅವರು. “ಕೊರೊನಾ ಸಮಯದಲ್ಲಿ ಗ್ಯಾಲರಿಯಲ್ಲಿ ಜನರ ಓಡಾಟ ಇದ್ದಿರಲಿಲ್ಲ ಎನ್ನುವುದನ್ನು ಬಿಟ್ಟರೆ, ಉಳಿದ ಎಲ್ಲಾ ಸಮಯದಲ್ಲೂ ಗ್ಯಾಲರಿಗೆ ವ್ಯಂಗ್ಯಚಿತ್ರ ಪ್ರಿಯರು ಭೇಟಿ ನೀಡುತ್ತಲೇ ಇದ್ದಾರೆ” ಎಂದು ಖುಷಿ ವ್ಯಕ್ತಪಡಿಸುತ್ತಾರೆ ಅವರು.

ನೈಸ್ ಕಂಪೆನಿಯ ಮುಖ್ಯಸ್ಥರಾದ ಅಶೋಕ್ ಖೇಣಿ ಇಂಡಿಯನ್ ಕಾರ್ಟೂನ್ ಗ್ಯಾಲರಿಗೆ ಜಾಗವನ್ನು ನೀಡಿ ನೆರವಾಗಿದ್ದಾರೆ ಎಂದು ನರೇಂದ್ರ ಅವರು ನೆನಪಿಸಿಕೊಳ್ಳತ್ತಾರೆ. ”ಅಶೋಕ್ ಅವರಿಗೆ ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಕಾರ್ಟೂನಿಸ್ಟ್ ತುಂಬಾ ಋಣಿಯಾಗಿದೆ. ಈ ಕಲೆಯನ್ನು ಬೆಳೆಸಲು ಅವರು ನೀಡಿರುವ ಕೊಡುಗೆ ಶ್ಲಾಘನೀಯ” ಎಂದು ಅವರು ಹೇಳುತ್ತಾರೆ.

ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಮಾತನಾಡುವ ನರೇಂದ್ರ ಅವರು, “ವ್ಯಂಗ್ಯಚಿತ್ರ ಕಲೆ ಎನ್ನುವುದು ಆಂಟಿ ಎಸ್ಟಾಬ್ಲಿಷ್‌ಮೆಂಟ್ ಆದದ್ದು. ವ್ಯಂಗ್ಯಚಿತ್ರಕಾರರ ಪ್ರಮುಖ ಕೆಲಸವೇ ಅಧಿಕಾರದಲ್ಲಿ ಇರುವವರನ್ನು ಪ್ರಶ್ನೆ ಮಾಡುವುದು. ಆಡಳಿತಕ್ಕೆ ಚಾಟಿ ಬೀಸಿ ಅವರನ್ನು ಮತ್ತು ಜನರನ್ನು ಎಚ್ಚರಿಸುವುದು. ಇದೇ ಕಾರ್ಟೂನಿಸ್ಟ್‌ಗಳ ಕರ್ತವ್ಯ. ಕೇವಲ ಅಧಿಕಾರದಲ್ಲಿ ಇರುವವರು ಮಾತ್ರವಲ್ಲ, ವಿರೋಧ ಪಕ್ಷಗಳನ್ನೂ ನಾವು ಟೀಕಿಸುತ್ತೇವೆ. ಹಿಂದಿನಿಂದಲೂ ಅದು ನಡೆದುಕೊಂಡು ಬಂದಿದೆ” ಎಂದು ಹೇಳುತ್ತಾರೆ.

“ಸರ್ಕಾರದ ವಿರುದ್ಧ ಕಾರ್ಟೂನ್ ಬರೆದಾಗ ಅದರ ಅಭಿಮಾನಿಗಳು ಕಾರ್ಟೂನಿಸ್ಟ್‌ಗಳ ಮೇಲೆ ಮುಗಿಬೀಳುತ್ತಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದು ಹೆಚ್ಚಾಗಿದೆ. ಅದಾಗಿಯೂ ಕಾರ್ಟೂನಿಸ್ಟ್‌ಗಳು ತಮ್ಮ ಕೆಲಸವನ್ನು ಮಾಡುತ್ತಾ, ಕಾರ್ಟೂನ್‌ಗಳನ್ನು ಬರೆಯುತ್ತಾ, ಚಾಟಿ ಬೀಸುತ್ತಲೇ ಇದ್ದಾರೆ. ಪತ್ರಿಕೆಗಳನ್ನು ಬೇಕಾದರೆ ಪ್ರಭುತ್ವಕ್ಕೆ ಬಗ್ಗು ಬಡಿಯಬಹುದು, ಆದರೆ ವ್ಯಂಗ್ಯಚಿತ್ರಕಾರರನ್ನು ಬಗ್ಗುಬಡಿಯಲು ಆಗುವುದಿಲ್ಲ, ವ್ಯಂಗ್ಯಚಿತ್ರಗಳ ಹಿರಿಮೆ ಇದು” ಎಂದು ವಿ.ಜಿ. ನರೇಂದ್ರ ಅವರು ಹೆಮ್ಮೆಯಿಂದ ಹೇಳುತ್ತಾರೆ.

ನಗರದ ಮಧ್ಯಭಾಗದಲ್ಲಿರುವ ’ಇಂಡಿಯನ್ ಕಾರ್ಟೂನ್ ಗ್ಯಾಲರಿ’ಗೆ ನೀವೂ ಬೇಟಿ ಕೊಡಿ.


ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...