Homeಕರ್ನಾಟಕಲಂಕೇಶ್ ಮೋಹಕ ರೂಪಕಗಳು ಕಟ್ಟಿಕೊಡುವ ವ್ಯಕ್ತಿಚಿತ್ರಣಗಳು...

ಲಂಕೇಶ್ ಮೋಹಕ ರೂಪಕಗಳು ಕಟ್ಟಿಕೊಡುವ ವ್ಯಕ್ತಿಚಿತ್ರಣಗಳು…

- Advertisement -
- Advertisement -

| ಕುಮಾರ ರೈತ |

ಪಿ. ಲಂಕೇಶ್ ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ, ಪತ್ರಿಕಾರಂಗವನ್ನು ಪ್ರಭಾವಿಸಿದವರು. ಇವರ ವರ್ತುಲದಲ್ಲಿದ್ದವರು ತಾವು ಕಂಡ ಲಂಕೇಶ್ ಅವರನ್ನು ಚಿತ್ರಿಸಿದ್ದಾರೆ. ಆದರೆ ಆ ಕೃತಿಗಳಲ್ಲಿ ಲಂಕೇಶರು ಚೆದುರಿದ ಚಿತ್ರಗಳು ಎನ್ನುವ ಹಾಗೆ ಕಾಣಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿಯೇ ಅವರ ವಿದ್ಯಾರ್ಥಿ, ಅನುಗಾಲದ ಗೆಳೆಯ ಶೂದ್ರ ಶ್ರೀನಿವಾಸ್ ಅವರು “ಲಂಕೇಶ್ ಮೋಹಕ ರೂಪಗಳ ನಡುವೆ” ಕೃತಿ ಬರೆದಿದ್ದಾರೆ.

ಕೃತಿಯ ಆರಂಭದಲ್ಲಿ ಶೂದ್ರ ಶ್ರೀನಿವಾಸ್ ಹೀಗೆ ಹೇಳುತ್ತಾರೆ “ಡಾ. ಜಾನ್ಸನ್ ಮತ್ತು ಬಾಸ್ ವೆಲ್ ಎಂಬ ಎರಡು ದೀಪಸ್ತಂಭಗಳನ್ನು ರೂಪಕವಾಗಿಟ್ಟುಕೊಂಡು ‘ಲಂಕೇಶ್; ಮೋಹಕ ರೂಪಗಳ ನಡುವೆ’ ಕೃತಿಯನ್ನು ನೋಡಲು ಪ್ರಯತ್ನಿಸಿರುವೆ. ಇಲ್ಲಿ ನನಗೆ ಲಂಕೇಶ್ ಅವರ ವ್ಯಕ್ತಿತ್ವವೇ ಪ್ರಧಾನ” ಲೇಖಕರ ಇರಾದೆ ಹೀಗಿದ್ದರೂ ಅದು ಅವರು ಅಂದುಕೊಂಡ ಚೌಕಟ್ಟನ್ನೂ ಮೀರಿ ಬೆಳೆದು, ಚಿತ್ರಪಟಗಳಂತೆ ಸರಿದು ಹೋಗುವ ವ್ಯಕ್ತಿಚಿತ್ರಗಳಾಗಿವೆ.

ಲಂಕೇಶ್ ಅವರ ಒಡನಾಟದಲ್ಲಿ, ಸಾಂಗತ್ಯದಲ್ಲಿ, ಪರಿಧಿಯಲ್ಲಿ ಕರ್ನಾಟಕ ಸಾಂಸ್ಕೃತಿಕ-ರಾಜಕೀಯ ಲೋಕದ ಗಣ್ಯರುಗಳು ಬಂದು ಹೋಗಿದ್ದಾರೆ. ಲಂಕೇಶರ ವ್ಯಕ್ತಿತ್ವವನ್ನು ಇಡಿಯಾಗಿ ಹಿಡಿಯ ಹೊರಟ ಶೂದ್ರ ಶ್ರೀನಿವಾಸರು ಇಂಥ ಬಹುತೇಕರ ವ್ಯಕ್ತಿಚಿತ್ರಣವನ್ನೂ ಕಟ್ಟಿಕೊಡುತ್ತಾರೆ. ಅದೇ ಕಾಲದಲ್ಲಿ ಆ ವ್ಯಕ್ತಿಗಳ ಕಣ್ಣುಗಳಲ್ಲಿ ಲಂಕೇಶ್ ಚಿತ್ರಿತವಾದ ರೀತಿಯೂ ಇಲ್ಲಿ ಅನಾವರಣಗೊಂಡಿದ್ದೆ. ಇದು ‘ಲಂಕೇಶ್; ಮೋಹಕ ರೂಪಗಳ ನಡುವೆ’ ಕೃತಿಯ ಬಹುಮುಖ್ಯ ವೈಶಿಷ್ಟ್ಯ.

ಶೂದ್ರ ಶ್ರೀನಿವಾಸ್ ಈ ಕೃತಿಯನ್ನು ಏಕೆ ಬರೆದರು ಎಂಬುದೂ ಪ್ರಶ್ನೆ. ತಮಗೆ ಪಾಠ ಮಾಡಿದ, ಪ್ರಭಾವಿಸಿದ, ಸಾಮಿಪ್ಯದಿಂದ ರೇಗಿಸಿದ, ನೋಯಿಸಿದ ಲಂಕೇಶರು ಇಲ್ಲವಾದ ನಂತರವೂ ಮನೋಭಿತ್ತಿಯಲ್ಲಿ ಅನುಗಾಲವೂ ಕಾಡುತ್ತಿರುವುದರಿಂದ ಬಿಡುಗಡೆ ಪಡೆದು ನಿರಾಳವಾಗುವ ಹಿನ್ನೆಲೆಯಲ್ಲಿ ಬರೆದಿದ್ದಾರೆ ಎಂಬುದು ಇದನ್ನೋದುವಾಗ ಗಮನಕ್ಕೆ ಬರುತ್ತದೆ. ಆದ್ದರಿಂದಲೇ ತಮ್ಮ ಆರಂಭದ ಮಾತುಗಳಿಗೆ ಅವರಿಟ್ಟ ಹೆಸರು “ನಿರಾಳವಾಗುವುದೆಂದರೆ”.

ಲಂಕೇಶರನ್ನು ಹತ್ತಿರದಿಂದ ಕಾಣದೇ ಅವರ ಕೃತಿಗಳ ಮೂಲಕವೇ ಪರಿಚಯಿಸಿಕೊಂಡವರು ಅನೇಕ. ಅವರ ವ್ಯಕ್ತಿ ಚಿತ್ರಣ ನೀಡುವ ಪುಸ್ತಕಗಳಿಂದ, ಗೊತ್ತಿದ್ದವರು, ಗೊತ್ತಿಲ್ಲದವರು ಹೇಳುವ ವರ್ಣರಂಜಿತ ಹೇಳಿಕೆಗಳಿಂದ ಅಸ್ಪಷ್ಟ ವ್ಯಕ್ತಿಚಿತ್ರಣವನ್ನೂ ಕಟ್ಟಿಕೊಂಡಿರುತ್ತಾರೆ. ಆದರೆ ಈ ಕೃತಿ ಅವರ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕಟ್ಟಿಕೊಡಲು ಯತ್ನಿಸುತ್ತದೆ. ಇದಿಷ್ಟೇ ಅಲ್ಲ; ಈ ಕೃತಿಯಿಂದ 50 ವರ್ಷಗಳ ಕರ್ನಾಟಕದ ರಾಜಕೀಯ – ಸಾಂಸ್ಕೃತಿಕ – ರಾಜಕೀಯ ದಿನಗಳ ಪರಿಚಯವೂ ಆಗುತ್ತದೆ.

ಸಾಹಿತಿ ರಾಜೇಂದ್ರ ಚೆನ್ನಿ ಅವರ ಮುನ್ನಡಿಯಲ್ಲಿ “ಲಂಕೇಶರ ಬಗ್ಗೆಗಿನ ಕೃತಿಯನ್ನು ಓದುವುದು, ಕೆಲವು ದಶಕಗಳ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ ಓದಿದಂತೆ. ಕೊನೇಪಕ್ಷ ಎರಡು ತಲೆಮಾರುಗಳ ಪ್ರಜ್ಞೆಯನ್ನು ರೂಪಿಸಿದ ಎಲ್ಲ ಸಾಂಸ್ಕೃತಿಕ ಘಟನೆಗಳ ಹಿಂದೆ ಲಂಕೇಶ್ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಇದ್ದಾರೆ. ಲಂಕೇಶ್ ಪತ್ರಿಕೆ ಸೆಕ್ಯುಲರ್ ಸಂವೇದನೆ ಕಾಪಾಡಿ ಬೆಳೆಸಿದೆ. ರಾಜಕೀಯ ಹಾಗೂ ಇತರ ಅಧಿಕಾರ ಕೇಂದ್ರಗಳನ್ನು ಆದಷ್ಟು ಮಟ್ಟಿಗೆ ಎಚ್ಚರವಾಗಿಸಿದೆ. ಶೂದ್ರರ ನಿರೂಪಣೆಯಲ್ಲಿ ಆ ಕಾಲದ ಎಲ್ಲ ಮುಖ್ಯಘಟನೆಗಳೂ ಬಂದು ಹೋಗುತ್ತವೆ” ಎಂದಿದ್ದಾರೆ.

ಲಂಕೇಶರ ಯೌವ್ವನ, ಗರ್ವ, ಆರ್ಥಿಕ ಅಸಹಾಯಕತೆ, ಶ್ರೀಮಂತಿಕೆ, ಜನಪ್ರಿಯತೆ ಎಲ್ಲವನ್ನೂ ಕಂಡ ಲೇಖಕರು ಅವರು ಸಾಯುವ ಕೆಲವು ದಿನಗಳ ಮುಂಚೆ ಭೇಟಿ ಮಾಡುತ್ತಾರೆ. ಆಗ ಲಂಕೇಶರು ಹೇಳುವ ಮಾತುಗಳು ಓದುಗರನ್ನು ಆರ್ದ್ರಗೊಳಿಸುತ್ತವೆ. ಮನುಷ್ಯನ ಅಸಹಾಯಕ ಘಳಿಗೆಗಳು ದಿಗಿಲು ಮೂಡಿಸುವಂತೆ, ನಮ್ಮೊಳಗನ್ನು ನಾವೇ ನೋಡಿಕೊಳ್ಳುವಂತೆ ಮಾಡುತ್ತವೆ…

ಕೃತಿ: ಲಂಕೇಶ್ ಮೋಹಕ ರೂಪಗಳ ನಡುವೆ

ಲೇಖಕ: ಶೂದ್ರ ಶ‍್ರೀನಿವಾಸ್

ಪ್ರಕಾಶನ: ಪಲ್ಲವ ಪ್ರಕಾಶನ, ಬಳ್ಳಾರಿ, ಸಂಪರ್ಕ ಸಂಖ್ಯೆ: 94803 53507

ಪುಟಗಳು: 282, ಬೆಲೆ: 250 ರೂ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...