Homeಮುಖಪುಟಆಸ್ಪತ್ರೆಯ ಎದುರಲ್ಲೇ ಕುಸಿದು ಬಿದ್ದರೂ 25 ನಿಮಿಷಗಳವರೆಗೂ ಬಿಸಿಲಲ್ಲಿ ಬಳಲಿದ ಆರೋಗ್ಯ ಕಾರ್ಯಕರ್ತ

ಆಸ್ಪತ್ರೆಯ ಎದುರಲ್ಲೇ ಕುಸಿದು ಬಿದ್ದರೂ 25 ನಿಮಿಷಗಳವರೆಗೂ ಬಿಸಿಲಲ್ಲಿ ಬಳಲಿದ ಆರೋಗ್ಯ ಕಾರ್ಯಕರ್ತ

- Advertisement -
- Advertisement -

ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಕೊರೊನಾ ರೋಗಿಗಳಿಗೆ ಸಹಾಯ ಮಾಡುವ ಆರೋಗ್ಯ ಕಾರ್ಯಕರ್ತರೊಬ್ಬರು ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆದರೆ 25 ನಿಮಿಷಗಳ ಕಾಲ 44 ಡಿಗ್ರಿ ಸೆಲ್ಸಿಯಸ್ ಶಾಖದ ಬಿಸಿಲಿನಲ್ಲಿ ರಸ್ತೆಯಲ್ಲೇ ಅವರು ಬಿದ್ದದ್ದರೂ ಯಾರು ಸಹಾಯಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.

ತುರ್ತು ಸೇವೆಯಾದ 108 ಆಂಬ್ಯುಲೆನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಕಾರ್ಯಕರ್ತ ಹಿರಾಲಾಲ್ ಪ್ರಜಾಪತಿ, ಟಿಬಿ ಆಸ್ಪತ್ರೆಯಿಂದ ಬುಂಡೇಲ್‌ಖಂಡ್ ವೈದ್ಯಕೀಯ ಕಾಲೇಜಿಗೆ (ಬಿಎಂಸಿ) ಕೊರೊನಾ ವೈರಸ್ ಪಾಸಿಟಿವ್ ಆಗಿರುವ ಜನರನ್ನು ಸಾಗಿಸಿದ ನಂತರ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕುಸಿದು ಬಿದ್ದರು ಎನ್ನಲಾಗಿದೆ.

ಸ್ಥಳೀಯ ವರದಿಗಳ ಪ್ರಕಾರ, ದೇಹದ ಪೂರ್ತಿ ಪಿಪಿಇ (ವೈಯಕ್ತಿಕ ರಕ್ಷಣಾ ಸಾಧನಗಳು) ಧರಿಸಿದ್ದ ಪ್ರಜಾಪತಿ ಶಾಖದಿಂದ ಕುದಿಯುತ್ತಿದ್ದು, ಬಿಎಂಸಿ ಬಳಿ ಕುಸಿದುಬಿದ್ದರು. ಆದರೆ ಅವರ ಸಹೋದ್ಯೋಗಿಯಾಗಿರುವ ಆಂಬ್ಯುಲೆನ್ಸ್ ಚಾಲಕ ಅವರನ್ನು ಬಿಎಂಸಿಗೆ ದಾಖಲಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು ಆದರೆ ಅಧಿಕಾರಿಗಳು ನಿರಾಕರಿಸಿದರಿಂದ ಸುಮಾರು ಅರ್ಧ ಘಂಟೆಯವರೆಗೆ ನೆಲದ ಮೇಲೆ ಬಿದ್ದಿದ್ದರು.

ಅಂತಿಮವಾಗಿ, ಅವರನ್ನು ಇತರ ಅರೆವೈದ್ಯಕೀಯ ಸಿಬ್ಬಂದಿಗಳು ತಮ್ಮ ಆಂಬ್ಯುಲೆನ್ಸ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಪ್ರಸ್ತುತ ಪ್ರಜಾಪತಿ ಚೇತರಿಸಿಕೊಂಡಿದ್ದಾರೆ ಹಾಗೂ ಸ್ಥಿರವಾಗಿದ್ದಾರೆ ಎನ್ನಲಾಗಿದೆ.

ಮಧ್ಯಪ್ರದೇಶದಲ್ಲಿ ಇದುವರೆಗೆ 7,000 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 313 ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ರಾಜ್ಯದ ಇಂದೋರ್ ನಗರವು ಕೊರೊನಾ ಭಾದಿತ ನಗರಗಳಲ್ಲೇ ದೇಶದ ಅತ್ಯಂತ ಕೆಟ್ಟ ಪ್ರದೇಶಗಳಲ್ಲಿ ಒಂದಾಗಿದೆ. ಅಲ್ಲಿ 3,000 ಪ್ರಕರಣಗಳು ವರದಿಯಾಗಿದ್ದು; 78 ಹೊಸ ಪ್ರಕರಣಗಳು ಬುಧವಾರ ಪತ್ತೆಯಾಗಿವೆ ಎಂದು ಮುಖ್ಯ ವೈದ್ಯಾಧಿಕಾರಿ ಪ್ರವೀಣ್ ಜಾಡಿಯಾ ತಿಳಿಸಿದ್ದಾರೆ.

ನಿನ್ನೆ ಹೊರಡಿಸಿದ ಆದೇಶದಲ್ಲಿ, ಮನೆ ಸಂಪರ್ಕತಡೆಯನ್ನು ಉಲ್ಲಂಘಿಸುವವರಿಗೆ 2 ಸಾವಿರ ರೂ.ಗಳ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ. ಎರಡನೇ ಬಾರಿಗೆ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಲ್ಲಿ ಅವರನ್ನು ಸಾಂಸ್ಥಿಕ ಸಂಪರ್ಕತಡೆಗೆ ಹಾಕಲಾಗುತ್ತದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಇದರ ಮಧ್ಯೆ ಮಧ್ಯಪ್ರದೇಶ ಆಡಳಿತವು ಬೆಳೆಗಳ ಮೇಲೆ ದಾಳಿ ಮಾಡುತ್ತಿರುವ ಮಿಡತೆಗಳ ಬೆದರಿಕೆಯನ್ನು ಎದುರಿಸುತ್ತಿದೆ. ಸೆಹೋರ್ ಜಿಲ್ಲೆಯ ಬುಡ್ನಿ ಮತ್ತು ನಸ್ರುಲ್ಲಗಂಜ್ ಪ್ರದೇಶಗಳಲ್ಲಿನ ರೈತರು ಮಿಡತೆಗಳನ್ನು ಓಡಿಸಲು ಕೃಷಿ ಇಲಾಖೆಯ ಸಲಹೆಯಂತೆ ಪಾತ್ರೆಗಳನ್ನು ಹೊಡೆಯುತ್ತಿರುವುದು ಕಂಡುಬಂದಿಂದೆ.

ಕಳೆದ ವಾರ ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಕ್ಕೆ ಮಿಡತೆಗಳ ದೊಡ್ಡ ಗುಂಪು ಪ್ರವೇಶಿಸಿದೆ. ಇವುಗಳನ್ನು ಶೀಘ್ರದಲ್ಲೇ ನಿಯಂತ್ರಿಸದಿದ್ದರೆ, ಸುಮಾರು 8,000 ಕೋಟಿ ಮೌಲ್ಯದ ಏಕದಳ ಬೆಳೆಗಳನ್ನು ನಾಶಪಡಿಸಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


ಓದಿ: ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿಗೆ ಏಳು ವರ್ಷಗಳ ಜೈಲು ಶಿಕ್ಷೆ: ಕೇಂದ್ರ ಸರ್ಕಾರ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...