Homeಮುಖಪುಟಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ವಿಲೀನಗೊಂಡರೆ ನಮ್ಮ ಸ್ವಾಗತವಿದೆ: ಕಾಂಗ್ರೆಸ್ ಸಚಿವ

ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ವಿಲೀನಗೊಂಡರೆ ನಮ್ಮ ಸ್ವಾಗತವಿದೆ: ಕಾಂಗ್ರೆಸ್ ಸಚಿವ

ಈ ಮೂರು ದೇಶಗಳನ್ನು ವಿಲೀನಗೊಳಿಸಿ ಒಂದೇ ದೇಶವನ್ನಾಗಿ ಮಾಡಲು ಬಿಜೆಪಿ ಬಯಸಿದರೆ, ನಾವು ಅದನ್ನು ಖಂಡಿತವಾಗಿ ಸ್ವಾಗತಿಸುತ್ತೇವೆ ಎಂದು ನವಾಬ್ ಮಲಿಕ್ ಹೇಳಿದ್ದಾರೆ.

- Advertisement -
- Advertisement -

‘ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ವಿಲೀನಗೊಳಿಸಿ ಒಂದು ದೇಶವನ್ನು ಸೃಷ್ಟಿಸಿದರೆ’ ಬಿಜೆಪಿಯ ಈ ಕ್ರಮವನ್ನು ತಮ್ಮ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಸ್ವಾಗತಿಸುತ್ತದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಭಾನುವಾರ ಹೇಳಿದ್ದಾರೆ.

ದೇವೇಂದ್ರ ಫಡ್ನವೀಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, “ಸಮಯ ಬರುತ್ತದೆ ಎಂದು ದೇವೇಂದ್ರ ಜಿ ಹೇಳಿರುವಂತೆ, ಕರಾಚಿ ಭಾರತದ ಭಾಗವಾಗಲಿದೆ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ವಿಲೀನಗೊಳಿಸಬೇಕು ಎಂದು ನಾವು ಹೇಳುತ್ತಿದ್ದೇವೆ. ಬರ್ಲಿನ್ ಗೋಡೆಯನ್ನು ನೆಲಸಮ ಮಾಡಲು ಸಾಧ್ಯವಾದರೆ, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿಲೀನಗೊಳ್ಳಲು ಏಕೆ ಸಾಧ್ಯವಿಲ್ಲ? ಈ ಮೂರು ದೇಶಗಳನ್ನು ವಿಲೀನಗೊಳಿಸಿ ಒಂದೇ ದೇಶವನ್ನಾಗಿ ಮಾಡಲು ಬಿಜೆಪಿ ಬಯಸಿದರೆ, ನಾವು ಅದನ್ನು ಖಂಡಿತವಾಗಿ ಸ್ವಾಗತಿಸುತ್ತೇವೆ” ಎಂದು ನವಾಬ್ ಮಲಿಕ್ ತಿಳಿಸಿದರು.

ಇದನ್ನೂ ಓದಿ: ಬ್ರೇಕಿಂಗ್ ಸುದ್ದಿ: ಮಾಜಿ ಕಾಂಗ್ರೆಸ್ ಸಚಿವ ರೋಷನ್ ಬೇಗ್ ಅವರನ್ನು ಬಂಧಿಸಿದ ಸಿಬಿಐ!

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಸರ್ಕಾರದ ಭಾಗವಾಗಿರುವ ಶಿವಸೇನೆ, ಕಾಂಗ್ರೆಸ್ ಒಟ್ಟಾಗಿ ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದೆ ಎಂದು ಮಲಿಕ್ ಈ ವೇಳೆ ಹೇಳಿದ್ದಾರೆ.

“ಬಿಎಂಸಿ ಚುನಾವಣೆಗೆ ಇನ್ನೂ 15 ತಿಂಗಳುಗಳು ಬಾಕಿ ಉಳಿದಿವೆ. ಪ್ರತಿಯೊಂದು ಪಕ್ಷಕ್ಕೂ ತಮ್ಮ ಪಕ್ಷಕ್ಕಾಗಿ ಕೆಲಸ ಮಾಡುವ ಹಕ್ಕಿದೆ, ಪ್ರತಿ ಪಕ್ಷವೂ ಹಾಗೇ ಮಾಡುತ್ತಿದೆ. ನಾವು ಕೂಡ ನಮ್ಮ ಪಕ್ಷವನ್ನು ಬಲಪಡಿಸುತ್ತಿದ್ದೇವೆ” ಎಂದು ಅವರು ಹೇಳಿದರು.


ಇದನ್ನೂ ಓದಿ: ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಒತ್ತಾಯ: ದಲಿತರ ಗುಡಿಸಲು ಸುಟ್ಟ ಮೇಲ್ಜಾತಿಯವರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...