Homeಮುಖಪುಟಕನಕಪುರ, ವರುಣ ಕ್ಷೇತ್ರಗಳಲ್ಲಿ ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಷಿ ಕಣಕ್ಕಿಳಿಯಲಿ: ಕಾಂಗ್ರೆಸ್ ಪಂಥಾಹ್ವಾನ

ಕನಕಪುರ, ವರುಣ ಕ್ಷೇತ್ರಗಳಲ್ಲಿ ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಷಿ ಕಣಕ್ಕಿಳಿಯಲಿ: ಕಾಂಗ್ರೆಸ್ ಪಂಥಾಹ್ವಾನ

- Advertisement -
- Advertisement -

ಕನಕಪುರ, ವರುಣ ಕ್ಷೇತ್ರಗಳಲ್ಲಿ ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಷಿ ಸ್ಪರ್ಧೆ ಮಾಡಲು ಆಹ್ವಾನಿಸುತ್ತೇವೆ. ಈ ಪಂಥಾಹ್ವಾನವನ್ನು ಸ್ವೀಕಾರ ಮಾಡುವರೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಾಂಗ್ರೆಸ್‌ನ ಶೂದ್ರ ನಾಯಕರ ವಿರುದ್ಧ ಬಿಜೆಪಿಯ ಶೂದ್ರ ನಾಯಕರನ್ನು ಛೂ ಬಿಡುವುದು ಏಕೆ? ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ಬಂದು ಸ್ಪರ್ಧೆ ಮಾಡಿ ನೋಡಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಇದುವರೆಗೂ ವಿ.ಸೋಮಣ್ಣನವರು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಈ ಬಾರಿ ಅವರನ್ನು ಸಿದ್ದರಾಮಯ್ಯನವರನ್ನು ಎದುರಿಸಲು ಬಿಜೆಪಿ ಕಳುಹಿಸಿದೆ. ಆದರೆ ವರುಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಎದುರು ಗೆಲುವು ಸುಲಭವಲ್ಲ ಎಂದು ಅರಿತು ಚಾಮರಾಜನಗರದಲ್ಲಿಯೂ ಕಣಕ್ಕಿಳಿಸಲು ಬಿಜೆಪಿ ಚಿಂತಿಸಿದೆ.

ಅದೇ ರೀತಿ ಆರ್ ಅಶೋಕ್‌ರವರು ಕನಕಪುರದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಕನಕಪುರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರು ಪ್ರತಿನಿಧಿಸುವ ಕ್ಷೇತ್ರವಾಗಿದೆ. ಅಲ್ಲಿ ಗೆಲುವು ಸುಲಭವಲ್ಲ ಎಂದು ತಿಳಿದು ಪದ್ಮನಾಭನಗರದಲ್ಲಿ ಅಶೋಕ್‌ರವರಿಗೆ ಟಿಕೆಟ್ ನೀಡಲಾಗಿದೆ.

ಈ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್, “ನಾಗಪುರದ ವಂಶದವರು ಇತರರನ್ನ ಹೊಂಡಕ್ಕೆ ತಳ್ಳಿ ಆಳ ನೋಡುವ ಬದಲು ತಾವೇ ಮುಂದೆ ನಿಂತು ಸಾಮರ್ಥ್ಯ ತೋರಲಿ. ಬಿ.ಎಲ್ ಸಂತೋಷ್ ತೆರೆಮರೆಯಿಂದ ಹೊರಬಂದು ಚುನಾವಣೆಗೆ ಸ್ಪರ್ಧಿಸಿ ಸಾಮರ್ಥ್ಯ ನಿರೂಪಿಸಲಿ” ಎಂದು ಸವಾಲು ಹಾಕಿದೆ.

ಇನ್ನು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆ ಜೋರಾಗಿದೆ. ಬಿಜೆಪಿಗೆ ಕೌಂಟರ್ ಆಗಿ ಡಿ.ಕೆ ಸುರೇಶ್ ಪದ್ಮನಾಭನಗರದಲ್ಲಿ, ಯತೀಂದ್ರ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಸ್ಪರ್ಧಿಸಲೇಬೇಕು ಎಂದು ಕೆಲವರು ಆಗ್ರಹಿಸುತ್ತಿದ್ದಾರೆ.

ಸಿದ್ದರಾಮಯ್ಯ, ರಾಹುಲ್ ಗಾಂಧಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಅದಕ್ಕೆ ಸೋಲಿನ ಭಯ ಕಾರಣ. ಅದೇ ನರೇಂದ್ರ ಮೋದಿ, ಆಶೋಕ, ಸೋಮಣ್ಣ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಅದಕ್ಕೆ ದೇಶಭಕ್ತಿ ಕಾರಣ. ನಮ್ಮಲ್ಲಿ standard ಅನ್ವಯವಾಗುವುದು ಕಾಂಗ್ರೇಸಿಗೆ ಮಾತ್ರ. ಬಿಜೆಪಿಗೆ ಯಾವುದೇ standard ಇಲ್ಲ, ಅಲ್ವಾ? ಎಂದು ಅಲ್ಮೇಡ ಗ್ಲಾಡ್‌ಸನ್ ಪ್ರಶ್ನಿಸಿದ್ದಾರೆ.

ನಂದು ಈಗಲೂ ಅದೇ ಮಾತು. ದಮ್ಮು, ತಾಕತ್ತು ಇದ್ದಿದ್ದರೆ ಸಿದ್ಧರಾಮಯ್ಯ ವಿರುದ್ಧ ಸಂತೋಷನನ್ನೂ, ಡಿಕೆಶಿ ವಿರುದ್ಧ ತೇಜಸ್ವಿಯನ್ನೂ ನಿಲ್ಲಿಸಬೇಕಿತ್ತು ಎಂದು ದಿನೇಶ್ ಕುಮಾರ್ ದಿನೂ ಸವಾಲು ಹಾಕಿದ್ದರು.

“ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಆಯ್ಕೆಯಾದರೂ ಸಹ ವಿ. ಸೋಮಣ್ಣವರ ಸ್ಥಿತಿ ದಯನೀಯವಾಗಿದೆ.
ಈ ರೀತಿ ಕೊಡುವುದಕ್ಕಿಂತ ಟಿಕೆಟ್ ಕೊಡದಿದ್ದರೂ ಪರವಾಗಿಲ್ಲ ಎಂದು ಜಗದೀಶ್ ಶೆಟ್ಟರ್ ನಿಟ್ಟುಸಿರು ಬಿಡುತ್ತಿರಬಹುದು. ಹಾಲಿ ಶಾಸಕರಾಗಿದ್ದ ಅವರನ್ನು ಗೋವಿಂದರಾಜ ನಗರದಿಂದ ಕಿತ್ತು ಚಾಮರಾಜನಗರಕ್ಕೆ ತಂದು ಕೂಡಿಸಿ ಗೋಳಾಡಿಸಿದ್ದನ್ನು ಹೇಗೋ ನುಂಗಿಕೊಳ್ಳಬಹುದು. ಆದರೆ ‘ಬೇಡ್ರೋ ಬೇಡ್ರಪ್ಪ’ ಅಂತ ಕೇಳಿಕೊಂಡರೂ ವರುಣಾದಲ್ಲಿ ತಳ್ಳಿ ಆಟವಾಡುತ್ತಿರುವುದು ನೋಡಿದರೆ ಬೆಕ್ಕಿಗೆ ಚೆಲ್ಲಾಟ… ಎಂಬಂತಾಗಿದೆ ಸೋಮಣ್ಣವರ ಸ್ಥಿತಿ ಈ ನಗು ಇನ್ನೆಲ್ಲಿ? ಬ್ರಾಹ್ಮಣರಿಗೆಲ್ಲಾ ಸೇಫ್ ಕ್ಷೇತ್ರಗಳು… ಬ್ರಾಹ್ಮಣೇತರರಿಗೆ ರಿಸ್ಕ್ ಆಂಗಳ…. ಬಿಜೆಪಿಯ ಚಾತುರ್ವರ್ಣ ನೀತಿ….” ಎಂದು ಶ್ರೀಪಾದ್ ಭಟ್ ಅಭಿಪ್ರಾಯಪಟ್ಟಿದ್ದಾರೆ.

ವಿ.ಸೋಮಣ್ಣ ಮತ್ತು ಆರ್.ಅಶೋಕ್ ಸುರಕ್ಷಿತ ಕ್ಷೇತ್ರ ಉಳಿಸಿಕೊಂಡೇ ವರುಣಾ ಮತ್ತು ಕನಕಪುರ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ಒಂದು ಸ್ಪಷ್ಟ ಸಂದೇಶ ನೀಡುತ್ತಿದೆ: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿ. ನಿರಾಯಾಸ ಗೆಲುವು! ಎಂದು ಚಂದ್ರಕಾಂತ ವಡ್ಡುರವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ; ಕುಟುಂಬ ರಾಜಕಾರಣ ವಿರೋಧಿಸುವ ಬಿಜೆಪಿ: ಶಾಸಕರ ಮಕ್ಕಳು, ಪತ್ನಿಯರಿಗೆ ಟಿಕೆಟ್ ನೀಡಿದ್ದೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...