Homeಎಕಾನಮಿನೂರಾರು ಕಂಪನಿಗಳಲ್ಲಿ ಸಾವಿರಾರು ಕೋಟಿ ಹೂಡಿರುವ ಎಲ್.ಐ.ಸಿ : ಆಗಿದ್ದರೂ ಮಾರುತ್ತಿರುವುದೇಕೆ?

ನೂರಾರು ಕಂಪನಿಗಳಲ್ಲಿ ಸಾವಿರಾರು ಕೋಟಿ ಹೂಡಿರುವ ಎಲ್.ಐ.ಸಿ : ಆಗಿದ್ದರೂ ಮಾರುತ್ತಿರುವುದೇಕೆ?

ಬ್ಯಾಂಕಿಂಗ್, ಐಟಿ, ಆಟೋ ಮೊಬೈಲ್, ಸಿಮೆಂಟ್‌, ವಿದ್ಯುತ್‌ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಎಲ್‌.ಐ.ಸಿಯ ಕೋಟ್ಯಾಂತರ ಬೆಲೆ ಬಾಳುವ ಷೇರುಗಳನ್ನು ಹೊಂದಿದೆ. ಆದರೂ ಸರ್ಕಾರ ಇದನ್ನೇ ಮಾರಲು ಹೊರಟಿದೆ..

- Advertisement -
- Advertisement -

ದೇಶದ ಸಾರ್ವಜನಿಕ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ ದೇಶ-ವಿದೇಶಗಳ 65ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಲ್ಲಿ ನೂರಾರು ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದೆ. ಹೀಗೆ ಹೂಡಿಕೆ ಮಾಡಿರುವ ಶೇರುಗಳ ಡಿವಿಡೆಂಡ್ ಒಂದರಿಂದಲೇ ವಾರ್ಷಿಕ  1 ಲಕ್ಷ 76 ಸಾವಿರ ಕೋಟಿ ರೂಪಾಯಿ ಲಾಭಾಂಶ ಪಡೆದಿರುವ ಸಂಸ್ಥೆ ದೇಶಕ್ಕೆ ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡುತ್ತಲೇ ಬರುತ್ತಿದೆ. ಲಾಭದ-ಪೈಪೋಟಿ ಜೊತೆಗೆ ಜನರ ವಿಶ್ವಾಸ ಗಳಿಸುತ್ತ ಸರ್ಕಾರಕ್ಕೂ ಲಾಭದ ಪಾಲು ಕೊಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.

ಜೀವ ವಿಮಾ ನಿಗಮ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಹೂಡಿಕೆ ಮಾಡಿದೆ. ಸರ್ಕಾರಿ ಮತ್ತು ಖಾಸಗೀ ಸೇರಿಂದತೆ 21 ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂಪಾಯಿ ಶೇರುಗಳನ್ನು ಹೊಂದಿದೆ. ಐಡಿಬಿಐಯಲ್ಲಿ ಶೇ.51ರಷ್ಟು ಶೇರುಗಳನ್ನು ತೊಡಗಿಸಿದೆ.  ಆಕ್ಸಿಸ್ ಬ್ಯಾಂಕ್ ನಲ್ಲಿ ಶೇ.10.37ರಷ್ಟು, ಐಸಿಐಸಿಐ ಬ್ಯಾಂಕ್ ನಲ್ಲಿ ಶೆ.10.37ರಷ್ಟು, ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 9.25ರಷ್ಟು, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ 7.4ರಷ್ಟು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 7.3ರಷ್ಟು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇ.6.4ರಷ್ಟು, ಕರ್ನಾಟಕ ಬ್ಯಾಂಕ್ ನಲ್ಲಿ ಶೇ.4.97ರಷ್ಟು ಹೂಡಿಕೆ ಮಾಡಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ 5 ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲೂ ಎಲ್.ಐ.ಸಿ ಶೇರುಗಳನ್ನು ಹೂಡಿಕೆ ಮಾಡಿದೆ. ವಿಶ್ವದ ಐಟಿ ದಿಗ್ಗಜ ಇನ್ಫೋಸಿಸ್ ನಲ್ಲಿ ಶೇ.5.85ರಷ್ಟು ಶೇರುಗಳನ್ನು ತೊಡಗಿಸಿದೆ. ವಿಪ್ರೋದಲ್ಲಿ ಶೇ.4.81ರಷ್ಟು, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನಲ್ಲಿ ಶೇ.3.98 ಹಾಗೂ ಒರೆಕಲ್ ಪಿಸ್‌ನಲ್ಲಿ 2.12ರಷ್ಟು ಶೇರುಗಳನ್ನು ಹಾಕಿದೆ.

ಕನಿಷ್ಟ 5 ಯುಟಿಲಿಟಿ ಕಂಪನಿಗಳಲ್ಲೂ ಹೂಡಿಕೆ ಮಾಡಿರುವ ಎಲ್ಐಸಿ ಅಲ್ಲಿಂದಲೂ ಲಾಂಭಾಂಶ ಪಡೆಯುತ್ತಿದೆ. ಬಾಟ ಕಂಪನಿಯಲ್ಲಿ ಶೇ.3.05ರಷ್ಟು, ಪೆಡಿಲೈಟ್ ಇಂಡಸ್ಟ್ರೀಯಲ್ಲಿ 1.56ರಷ್ಟು, ವಿಡಿಯೋ ಕಾನ್ ಕಂಪನಿಯಲ್ಲಿ 4.56ರಷ್ಟು ಶೇರುಗಳನ್ನು ತೊಡಗಿಸಿದೆ. ಔಷಧಿ ಕಂಪನಿಗಳಲ್ಲೂ ಎಲ್ಐಸಿ ತನ್ನ ಪಾರುಪತ್ಯವನ್ನು ಮೆರೆದಿದೆ. ಐದು ಪ್ರತಿಷ್ಠಿತ ಕಂಪನಿಗಳಾದ ಸನ್ ಫಾರ್ಮ, ಡಾ.ರೆಡ್ಡಿ ಲ್ಯಾಬರೋಟರಿ, ಕೆಡಿಲಾ ಹೆಲ್ತ್ ಕೇರ್ ಕಂಪನಿಗಳಲ್ಲಿ  ಶೇ. 14ರಷ್ಟು ಹಣವನ್ನು ಹೂಡಿಕೆ ಮಾಡಿದೆ.

ಅಖಿಲ ಭಾರತ ವಿಮಾ ನೌಕರರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಹೇಳುವಂತೆ, ವಿಮಾ ನಿಗಮದಲ್ಲಿ ಹೂಡಿಕೆ ವಿಭಾಗವಿದೆ. ಅದು ಯಾವ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ವರುತ್ತದೆ ಎಂಬ ಬಗ್ಗೆ ಆಲೋಚಿಸಿ ಹಣವನ್ನು ತೊಡಗಿಸುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಐಸಿ ಕೂಡ ಮಾರುಕಟ್ಟೆಯಲ್ಲಿ ಇರಲೇಬೇಕು. ಹಾಗಾಗಿ ಹೂಡಿಕೆ ವಿಭಾಗ ಬ್ಲೂಚಿಪ್ ಕಂಪನಿಗಳಲ್ಲಿ ಹೂಡಿಕೆಗೆ ತೊಡಗುತ್ತದೆ. ಅತ್ಯಂತ ವಿಶ್ವಾಸಾರ್ಹ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಹೂಡುವುದರಿಂದ ಲಾಭವೂ ಬರುತ್ತದೆ. ಪೈಪೋಟಿಯನ್ನೂ ನೀಡಿದಂತಾಗುತ್ತದೆ. ಪಾಲಿಸಿದಾರರು ಮತ್ತು ಸರ್ಕಾರಕ್ಕೆ ಲಾಭವನ್ನು ನೀಡಲು ಅನುಕೂಲವಾಗುತ್ತದೆ ಎನ್ನುತ್ತಾರೆ.

ದೇಶದ 5 ಪ್ರಮುಖ ಆಟೋ ಮೊಬೈಲ್ ಕಂಪನಿಗಳಲ್ಲು ಎಲ್ಐಸಿ ಕೋಟ್ಯಂತರ ರೂಪಾಯಿ ಹೂಡಿದೆ. ಈ ಕಂಪನಿಗಳ ಪೈಕಿ ಟಿವಿಎಸ್ ನಲ್ಲಿ 1.7ರಷ್ಟು ಹೂಡಿಕೆ ಮಾಡಿದ್ದರೆ ಬಜಾಜ್ ಕಂಪನಿಯಲ್ಲಿ 4.6ರಷ್ಟು ಹಾಗೂ ಹಿರೋ ಹೋಂಡಾ ಕಂಪನಿಯಲ್ಲಿ ಶೇ.5.54ರಷ್ಟು ಮತ್ತು ಅಶೋಕ ಲೈಲ್ಯಾಂಡ್ ನಲ್ಲಿ 1.36ರಷ್ಟು ಶೇರುಗಳನ್ನು ತೊಡಗಿಸಲಾಗಿದೆ. ಜೊತೆಗೆ ಒಎಂಸಿ ಕಂಪನಿಗಳಲ್ಲೂ ಹಣ ತೊಡಗಿಸಲಾಗಿದೆ. ಕ್ಯಾಸ್ಟ್ರೋಲ್ ಕಂಪನಿಯಲ್ಲಿ 10.32ರಷ್ಟು, ಓಎನ್.ಜಿ.ಸಿಯಲ್ಲಿ 9.48ರಷ್ಟು ಐಓಸಿಎಲ್ ನಲ್ಲಿ 6.51 ಮತ್ತು ಬಿಪಿಸಿಲ್ ನಲ್ಲಿ 5.88ರಷ್ಟು ಶೇರುಗಳನ್ನು ಹೂಡಿಕೆ ಮಾಡಲಾಗಿದೆ.

ವಿದ್ಯುತ್ ವಲಯದ 5 ಕಂಪನಿಗಳಾದ ಪವರ್ ಗ್ರೀಡ್ ನಲ್ಲಿ 4.89 ರಷ್ಟು ಕೆಇಸಿ ಇನ್  ನಲ್ಲಿ ಶೇ.1.7ರಷ್ಟು, ಜೆ.ಇ. ಪವರ್ ಕಂಪನಿಯಲ್ಲಿ 1.63ರಷ್ಟು ಶೇರುಗಳು ಇವೆ. ದೇಶದಲ್ಲಿ ಹೆಸರು ಮಾಡಿರುವ ಸಿಮೆಂಟ್ ಕಂಪನಿಗಳಲ್ಲೂ ಹಣ ಹೂಡಿಕೆ ಮಾಡಲಾಗಿದೆ. ಎಸಿಸಿ-6.5ರಷ್ಟು, ಅಂಬುಜ ಸಿಮೆಂಟ್ ಕಂಪನಿಯಲ್ಲಿ 4.80ರಷ್ಟು, ಲಕ್ಷ್ಮಿ ಸಿಮೆಂಟ್ ನಲ್ಲಿ 2.46ರಷ್ಟು ಆಲ್ಟ್ರಾಟೆಕ್ ನಲ್ಲಿ ಶೇ.4.06ರಷ್ಟು ಹೂಡಿಕೆಯಾಗಿದೆ. ಅಂದರೆ ನಾಲ್ಕು ಸಿಮೆಂಟ್ ಕಂಪನಿಗಳಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದು ಅಲ್ಲಿಂದಲೂ ಲಾಭದ ಹಣವನ್ನು ಎಲ್ಐಸಿ ಪಡೆದುಕೊಳ್ಳುತ್ತಿದೆ.

ಉಕ್ಕು ತಯಾರಿಕೆ ಕಂಪನಿಗಳಾದ ಎಸ್ಎಐಎಲ್ ನಲ್ಲಿ 9.6ರಷ್ಟು, ಟಾಟಾ ಸ್ಟೀಲ್ ಕಂಪನಿಯಲ್ಲಿ 9ರಷ್ಟು ವೇದಾಂತ ಕಂಪನಿಯಲ್ಲಿ 6.39ರಷ್ಟು, ನಾಲ್ಕೋದಲ್ಲಿ 5.27ರಷ್ಟು ಹೂಡಕೆಯಾಗಿದೆ. ಎರಡು ಖಾಸಗಿ ವಿಮಾ ಸಂಸ್ಥೆಗಳಲ್ಲೂ ಭಾರತೀಯ ಜೀವ ವಿಮಾ ನಿಗಮದಿಂದ ಹೂಡಿಕೆ ಮಾಡಿದ್ದು ಅಂತಾರಾಷ್ಟ್ರೀಯ ಮಟ್ಟದ ಐಟಿಸಿ 16.32ರಷ್ಟು ಎಲ್ ಅಂಡ್ ಟಿ ಕಂಪನಿಯಲ್ಲಿ 16.9ರಷ್ಟು ಶೇರುಗಳನ್ನು ತೊಡಗಿಸಿ ಪ್ರತಿಯೊಂದು ಕ್ಷೇತ್ರದಿಂದಲೂ ಲಾಭ ಮಾಡುತ್ತಿದೆ. 2017ರಲ್ಲಿ  ಶೇರುಗಳ ಡಿವಿಡೆಂಡ್ ನಿಂದ 1.59 ಲಕ್ಷ ಕೋಟಿ ರೂಪಾಯಿ ಲಾಭ ಬಂದಿದೆ. ಅದು 2018ನೇ ಸಾಲಿನಲ್ಲಿ ಲಾಭಾಂಶದಲ್ಲಿ ಶೇ. 0.17ರಷ್ಟು ಹೆಚ್ಚಳವಾಗಿರುವುದು ಕಂಡು ಬಂದಿದೆ. ಅಂದರೆ 1.76 ಲಕ್ಷ ಕೋಟಿ ರೂಪಾಯಿ ಹಣ ಎಲ್ಐಸಿಗೆ ಬಂದಿದೆ.

ಎಲ್ಲಾ ವಲಯದಲ್ಲೂ ಹಣ ತೊಡಗಿಸಿ ಪೈಪೋಟಿ ನೀಡುತ್ತಿರುವ, ಲಾಭ ಗಳಿಸುತ್ತಿರುವ ಭಾರತೀಯ ಜೀವ ವಿಮಾ ನಿಗಮದ ಶೇರುಗಳನ್ನು ಸರ್ಕಾರ ಮಾರಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಯಾವುದೇ ಕಾರಣಕ್ಕೂ ಭಾರತ ಸರ್ಕಾರ ಇಂತಹ ಜನವಿರೋಧಿ ಕೃತ್ಯಕ್ಕೆ ಕೈಹಾಕದೆ ಸಾರ್ವಜನಿಕ ಉದ್ಯಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ಜನರಿಗೆ ಉದ್ಯೋಗ ನೀಡಬೇಕು. ಪಾಲಿಸಿದಾರರು ನೌಕರರ ಹಿತಕಾಯಲು ಮುಂದಾಗಬೇಕಾದ ಜರೂರತ್ತು ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...