Homeಮುಖಪುಟಎಕ್ಸಿಟ್‌ ಪೋಲ್‌ ನಂತರ ದೆಹಲಿ ಮತದಾರರನ್ನು ಬೇಕಾಬಿಟ್ಟಿ ಬೈದುಬಿಟ್ಟ ಟಿವಿ ನಿರೂಪಕ ಸುಧೀರ್ ಚೌಧರಿ!

ಎಕ್ಸಿಟ್‌ ಪೋಲ್‌ ನಂತರ ದೆಹಲಿ ಮತದಾರರನ್ನು ಬೇಕಾಬಿಟ್ಟಿ ಬೈದುಬಿಟ್ಟ ಟಿವಿ ನಿರೂಪಕ ಸುಧೀರ್ ಚೌಧರಿ!

‘ಬಾಲಕೋಟ್ ವೈಮಾನಿಕ ದಾಳಿ, 370 ರದ್ದು, ರಾಮ್ ಮಂದಿರ ನಿರ್ಮಾಣದ ಬಗ್ಗೆ ದೆಹಲಿಯ ಜನತೆ ತಲೆಕೆಡಿಸಿಕೊಂಡಿಲ್ಲ ಎಂಬುದು ಅವಮಾನಕಾರ ಸಂಗತಿ’ ಎಂದು ಎಂದು ಬಿಜೆಪಿ ಪರ ನಿರೂಪಕ ಚೌಧರಿ ಕಿಡಿಕಾರಿದ್ದಾರೆ.

- Advertisement -
- Advertisement -

ಎಕ್ಸಿಟ್‌ ಪೋಲ್‌ ಸಮೀಕ್ಷೆಗಳು ಎಎಪಿ ಗೆಲುವಿನ ಮುನ್ಸೂಚನೆ ನೀಡಿದ ನಂತರ ಟಿವಿ ನಿರೂಪಕ ಸುಧೀರ್ ಚೌಧರಿ ದೆಹಲಿ ಮತದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಝೀ Newsನ ಬಿಜೆಪಿ ಪರ ನಿರೂಪಕ, ಸುಧೀರ್ ಚೌಧರಿ, ಶನಿವಾರ ಸಂಜೆ ವಿಧಾನಸಭಾ ಚುನಾವಣೆಯ ಎಕ್ಸಿಟ್‌ ಪೋಲ್‌ ಫಲಿತಾಂಶಗಳನ್ನು ಘೋಷಿಸಿದ ನಂತರ ದೆಹಲಿಯ ಮತದಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಬಾಲಕೋಟ್ ವೈಮಾನಿಕ ದಾಳಿ, 370 ರದ್ದು, ರಾಮ್ ಮಂದಿರ ನಿರ್ಮಾಣದ ಬಗ್ಗೆ ದೆಹಲಿಯ ಜನತೆ ತಲೆಕೆಡಿಸಿಕೊಂಡಿಲ್ಲ ಎಂಬುದು ಅವಮಾನಕಾರ ಸಂಗತಿ’ ಎಂದು ಎಂದು ಬಿಜೆಪಿ ಪರ ನಿರೂಪಕ ಚೌಧರಿ ಕಿಡಿಕಾರಿದ್ದಾರೆ. “ದೇಶವು ತುಂಡು ತುಂಡುಗಳಾಗಿ ವಿಭಜನೆಯಾಗುವುದರ” ಬಗ್ಗೆಯೂ ಅವರು ಕಾಳಜಿ ವಹಿಸುವುದಿಲ್ಲ. ಅವರು ತಮ್ಮ ಸ್ಥಳೀಯ ಹೋರಾಟಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಹೊರತು ರಾಷ್ಟ್ರೀಯ ಪ್ರಾಮುಖ್ಯತೆಯ ದೊಡ್ಡ ವಿಷಯಗಳ ಬಗ್ಗೆ ಅಲ್ಲ ಎಂದು ಅವರು ಹೇಳಿದ್ದಾರೆ.

“ದೆಹಲಿಯ ಜನರು ಸೋಮಾರಿಯಾಗಿದ್ದಾರೆ. ಅವರು ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾತ್ರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ. ಆದರೆ ಮತ ಚಲಾಯಿಸಲು ಹೊರಬರುವುದಿಲ್ಲ” ಎಂದು ಮತ ಹಾಕದವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೌಧರಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಅನೇಕ ಟ್ವಿಟರ್ ಬಳಕೆದಾರರನ್ನು ಹಾಸ್ಯಮಯ ಮತ್ತು ಟ್ರೋಲ್‌ ಮೇಮ್‌ಗಳನ್ನು ಪೋಸ್ಟ್ ಮಾಡಲು ಪ್ರೇರೇಪಿಸಿದೆ. ಅಂತಹ ಕೆಲವು ಇಲ್ಲಿವೆ ನೋಡಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...