HomeUncategorizedಲಾಕ್‌ಡೌನ್‌ನಿಂದ ರೈತರಿಗೆ ಸಮಸ್ಯೆ: ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ರೈತ ಹೋರಾಟಗಾರರು & ಕೃಷಿ ತಜ್ಞರು

ಲಾಕ್‌ಡೌನ್‌ನಿಂದ ರೈತರಿಗೆ ಸಮಸ್ಯೆ: ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ರೈತ ಹೋರಾಟಗಾರರು & ಕೃಷಿ ತಜ್ಞರು

ಸಭೆ ನಡೆಸಿ ಯಡಿಯೂರಪ್ಪನವರು ಮುಂದಿಟ್ಟ ಪರಿಹಾರ ಕ್ರಮಗಳ ಬಗ್ಗೆ ಯಾರಿಗೂ ಸಹಮತವಿದ್ದಂತಿಲ್ಲ. ಇದ್ದುದರಲ್ಲಿ ಹಾಲಿನ ವಿಚಾರಕ್ಕೆ ಒಳ್ಳೆಯ ಕ್ರಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದನ್ನು ಬಿಟ್ಟರೆ ರೈಲೇ ಓಡದಿದ್ದಾಗ, ರೈಲಿನಲ್ಲಿ ಸಾಗಿಸುತ್ತೇವೆ ಎನ್ನುವುದು ಹಾಸ್ಯಾಸ್ಪದ ಎನ್ನುವುದು ಕೇಳಿ ಬಂದಿದೆ.

- Advertisement -
- Advertisement -

ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ರಾಜ್ಯದ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪನವರು ಸರ್ಕಾರ ರೈತರ ನೆರವಿಗಿದೆ ಎಂದು ಹೇಳಿ ಹಲವು ಅಂಶಗಳ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಹಲವು ಕೃಷಿ ಕ್ಷೇತ್ರದ ತಜ್ಙರು ಹಾಗೂ ಗಣ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್‌ನಿಂದ ಆದ ರೈತರ ಸಮಸ್ಯೆಗಳಿಗೆ ಸರಕಾರ ನೆರವಾಗುತ್ತೇವೆ- ಯಡಿಯೂರಪ್ಪ

ಕರ್ನಾಟಕ ಪ್ರಾಂತ ರೈತ ಸಂಘದ ಬಯ್ಯಾರೆಡ್ಡಿ ಅವರು ಪ್ರತಿಕ್ರಿಯಿಸಿದ್ದು “ಇವೆಲ್ಲವು ಕಾಗದದಲ್ಲೇ ಉಳಿಯುತ್ತವೆ, ಪ್ರಾಕ್ಟಿಕಲ್ಲಾಗಿ ಜಾರಿಯಾಗುವ ಬಗ್ಗೆ ಸಿಕ್ಕಾಪಟ್ಟೆ ಸಮಸ್ಯೆಗಳಿವೆ. ವಾಸ್ತವವಾಗಿ ನಮ್ಮ ಸರ್ಕಾರ ರೈತರಿಂದಲೇ ನೇರವಾಗಿ ಖರೀದಿ ಮಾಡಿದ್ದರೆ ರೈತರಿಗೂ ಸ್ವಲ್ಪ ಅನುಕೂಲವಾಗುತ್ತಿತ್ತು. ಈಗಾಗಲೇ ನಾವು ಅದನ್ನು ಪ್ರಾರಂಭಿಸಿದ್ದೇವೆ ಎಂದು ಹೇಳುತ್ತಿದ್ದರೂ ಕಾರ್ಯರೂಪಕ್ಕೆ ಬರಲು ಸಾಕಷ್ಟು ಸಮಸ್ಯೆಗಳಿವೆ. ಹೇಗೆಂದರೆ ಉದಾಹರಣೆಗೆ ಕೋಲಾರದ ರೈತರ ಬೆಳೆಗಳು ಮಾರಾಟವಾಗಬೇಕಾದರೆ ಆಂಧ್ರಪ್ರದೇಶದಿಂದ ಹಾಗು ತಮಿಳುನಾಡಿನಿಂದ ವ್ಯಾಪಾರಿಗಳು ಬರಬೇಕಾಗುತ್ತದೆ, ಆದರೆ ಲಾಕ್‌ಡೌನ್‌ನಿಂದ ಅವರು ವ್ಯಾಪಾರಕ್ಕೆ ಬರುತ್ತಿಲ್ಲ. ಆದರೆ ಇಲ್ಲಿಂದ ಅಲ್ಲಿಗೆ ಸಾಗಿಸಲು ಗಡಿಗಳು ತೆರೆದಿದೆಯೆ ಇಲ್ಲವೆ ಎಂಬ ಅನಿಶ್ಚಿತತೆ ಇದೆ. ಆದ್ದರಿಂದ ಸರ್ಕಾರ ಇಲಾಖೆಗಳ ಮೂಲಕ ಏನಾದರು ಮಾಡಿರುತ್ತಿದ್ದರೆ ರೈತರಿಗೆ ಉಪಯೋಗ ಆಗುತ್ತಿತ್ತು” ಎಂದು ಹೇಳಿದ್ದಾರೆ.

“ಹಾಲಿಗೆ ಸಂಬಂಧಿಸಿದಂತೆ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಇಲಾಖೆಗಳಲ್ಲೇ ಈಗ ಸುಮ್ಮನೆ ಬಿದ್ದಿರುವ ವಾಹನಗಳನ್ನೇ ಬಳಸಿ ರೈತರ ಬೆಳೆಗಳನ್ನು ಸಾಗಿಸಬಹುದಿತ್ತು. ಉತ್ತರ ಕರ್ನಾಟಕದ ಕಡೆ ಆಂಧ್ರದಿಂದ ಕಟಾವು ಯಂತ್ರಗಳು ಬರದೆ ಬೆಳೆಗಳು ಹಾಗೆ ಇದೆ, ಈ ಸಮಸ್ಯೆ ಹೋಗಲಾಡಿಸಲು ಹಳ್ಳಿಗಳಲ್ಲಿ ನಿರುದ್ಯೋಗದಿಂದ ಇರುವ ಕೂಲಿ ಕಾರ್ಮಿಕರನ್ನು ಬಳಸಿ ಕಟಾವು ಆಗದಿರುವ ಬೆಳೆಗಳನ್ನು ಕಟಾವು ಮಾಡಿಸಿ, ಉದ್ಯೋಗ ಖಾತರಿ ಯೋಜನೆಯನ್ನುಇದಕ್ಕೂ ವಿಸ್ತರಿಸಿ ಕಾರ್ಮಿಕರಿಗೂ ಉದ್ಯೋಗವನ್ನು ಕೊಡಬಹುದಿತ್ತು. ಆದ್ದರಿಂದ ಈಗಾಗಲೆ ಸರ್ಕಾರ ಹೇಳಿರುವ ಈ ಯಾವುದೇ ಅಂಶಗಳು ಕಾರ್ಯಸಾಧುವಲ್ಲ” ಎಂದು ಬಯ್ಯಾರೆಡ್ಡಿ ಹೇಳಿದ್ದಾರೆ.

ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ತಜ್ಞ ಕೆ.ಪಿ. ಸುರೇಶ್ “ಸರ್ಕಾರ ಹೀಗೆ ಹೇಳಿದ ಮಾತ್ರಕ್ಕೆ ಕುಸಿದ ಮಾರುಕಟ್ಟೆಗಳೇನು ಎದ್ದು ನಿಲ್ಲುವುದಿಲ್ಲ. ಯಾಕೆಂದರೆ ಸಾಗಣೆ ಮತ್ತು ಪೂರೈಕೆಯಿಲ್ಲದೆ ಸಂಪೂರ್ಣ ಕುಸಿದು ಬಿದ್ದಿರುವ ಮಾರುಕಟ್ಟೆಯಲ್ಲಿ ಸರಕುಗಳನ್ನು ಖರೀದಿಸಿ, ದಾಸ್ತಾನು ಇಟ್ಟು ವಿಲೇವಾರಿ ಮಾಡುವ ಕಷ್ಟದ ಪ್ರಯತ್ನ ಯಾರೂ ಮಾಡುವುದಿಲ್ಲ. ಈ ಸತ್ಯ ಸರ್ಕಾರಕ್ಕೆ ಗೊತ್ತಿದೆ ಆದರೂ ಸರ್ಕಾರ ಸುಳ್ಳು ಹೇಳುತ್ತಿದೆ. ರೈಲುಗಳ ಮೂಲಕ ಕಳುಹಿಸುತ್ತೇನೆ ಎನ್ನುವ ಸರಕಾರ ರೈಲುಗಳು ಸಂಪೂರ್ಣವಾಗಿ ಬಂದ್‌ ಆಗಿರುವಾಗ ಎಲ್ಲಿಗೆ ಕಳುಹಿಸುತ್ತಾರೆ? ಬೇರೆ ರಾಜ್ಯಗಳಲ್ಲಿ ಇದಕ್ಕಿಂತಲೂ ಕಷ್ಟಕರವಾದ ಪರಿಸ್ಥಿತಿಯಿದೆ” ಎಂದು ಹೇಳಿದರು.

“ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಬೆಳೆಗಳನ್ನು ಕೊಂಡುಕೊಳ್ಳಬೇಕಾಗಿದೆ, ಇದಕ್ಕೆ ರೈತರ ಬಳಿಯಿರುವ ಸ್ಮಾರ್ಟ್‌ಫೋನುಗಳನ್ನು ಬಳಸಿಕೊಂಡು ತೋಟಗಾರಿಕಾ ಕೃಷಿ ಮತ್ತು ಕೃಷಿ ಮಾರುಕಟ್ಟೆ ಇಲಾಖೆಯ ಮೂಲಕ ಮಾರುಕಟ್ಟೆ ಮಧ್ಯಪ್ರವೇಶ ನೀತಿಯ ಅನ್ವಯ, ರೈತ ತನ್ನ ಬೆಳೆಯ ಬಗ್ಗೆ ಇಲಾಖೆಗೆ ಮಾಹಿತಿ ಕೊಟ್ಟರೆ, ಇಲಾಖೆ ವಾಟ್ಸಪ್ ಮೂಲಕ ಲೊಕೇಶನ್ ಕಳುಹಿಸಬೇಕು. ಅಲ್ಲಿಗೆ ರೈತ ತಲುಪಿಸಿದರೆ ಅದನ್ನು ಕೊಳ್ಳುವ ವ್ಯವಸ್ಥೆ ಇಲಾಖೆ ಮಾಡಬೇಕಾಗುತ್ತದೆ. ಸರಕಾರ ಹಾಲಿನ ಬಗ್ಗೆ ತೆಗೆದುಕೊಂಡ ನೀತಿಯಂತೆ ಹಾಳಾಗಿ ಹೋಗುತ್ತಿರುವ ಹಣ್ಣುಗಳನ್ನು ಇದೇ ರೀತಿ ಬಡವರಿಗೆ ಹಂಚಬಹುದು. ಕಟಾವು ಮಾಡುವ ಮೊದಲು ರೈತ ಸರಕಾರಕ್ಕೆ ತಿಳಿಸಿದರೆ ಸರ್ಕಾರ ಹೇಳುವ ಕಡೆಗೆ ರೈತನೇ ತಂದು ಕೊಡುವಂತೆ ನೀತಿಗಳನ್ನು ಕೈಗೊಳ್ಳಬೇಕು. ಇದನ್ನು ನಡೆಸಲು ಸರಕಾರ ಮಧ್ಯಪ್ರವೇಶ ಮಾಡಬೇಕು” ಎಂದು ಕೆ.ಪಿ.ಸುರೇಶ್ ಹೇಳಿದ್ದಾರೆ.

ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ಅವರು “ಈಗಾಗಲೇ ರೈತರು ತಾವು ಬೆಳೆಗಳನ್ನು ಬೆಳೆದು ಒದ್ದಾಡುತ್ತಿದ್ದಾರೆ. ರೈತರಿಗೆ ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಈ ಹಿಂದೆಯೆ ಸಮಸ್ಯೆಗಳಿದ್ದವು ಈಗ ಇನ್ನೂ ಸಮಸ್ಯೆಗಳು ಜಾಸ್ತಿಯಾಗಿವೆ. ಈ ನಿಷೇಧಗಳು ತೆಗೆದ ತಕ್ಷಣ ಸಮಸ್ಯೆಗಳು ಬಗೆಹರಿಯುವುದಿಲ್ಲ” ಎಂದು ಹೇಳಿದ್ದಾರೆ.

’ಈಗ ಸರ್ಕಾರ ಮಾಡಬೇಕಾಗಿರುವುದೇನೆಂದರೆ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತರತಕ್ಕಂತಹ ಸಾಗಾಣಿಕೆಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು, ಯಾಕೆಂದರೆ ದೇಶಕ್ಕೆ ಅನ್ನ ಹಾಕುವುದು ಸರ್ಕಾರದ ಜವಾಬ್ದಾರಿ. ಇದಕ್ಕೆಲ್ಲ ಹೆಚ್ಚೆಂದರೆ ಸರ್ಕಾರಕ್ಕೆ 200 ಕೋಟಿಯಷ್ಟು ಖರ್ಚಾಗುತ್ತದೆ. ಹಳ್ಳಿಗಳಲ್ಲಿ ಇರುವ ಎಲ್ಲಾ ವಾಹನಗಳನ್ನು ಇದಕ್ಕೆ ಬಳಸಬಹುದು, ಇದರಿಂದ ಅವರಿಗೂ ಆದಾಯವಾಗುತ್ತದೆ. ಬೆಂಬಲ ಬೆಲೆ ಇಲ್ಲದ ಹಣ್ಣು-ತರಕಾರಿಗಳಿಗೆ ಅವುಗಳನ್ನು ಬೆಳೆಯಲು ಖರ್ಚಾದ ಹಣವನ್ನಾದರು ನೀಡುವಂತಿರಬೇಕು. ಎಪಿಎಂಸಿಗಳಲ್ಲಿ ಶೀತಲಿಕರಣದ ವ್ಯವಸ್ಥೆ ಸರ್ಕಾರ ಮಾಡಬೇಕು. ಅಲ್ಲದೆ ಅಡಮಾನ ಸಾಲಗಳನ್ನು ಬಡ್ಡಿರಹಿತವಾಗಿ ನೀಡಬೇಕು. ಇದರಿದಾಗಿ ರೈತರಿಗೆ ಉಪಕಾರವಾಗುತ್ತದೆ” ಎಂದು ಪ್ರಕಾಶ್ ಕಮ್ಮರಡಿ ಅಭಿಪ್ರಾಯ ಪಟ್ಟರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಇವರು ಮಾತನಾಡಿ “ಒಂದು ಕಡೆ ಲಾಕ್‌ಡೌನಾಗಿ ಜನರು ಕಷ್ಟ ಪಡುತ್ತಿದ್ದಾರೆ. ಈಗ ಹಣ್ಣು ತರಕಾರಿ ನೇರ ಮಾರುಕಟ್ಟೆಗೆ ದಾಸ್ತಾನು ಮಾಡುವಂತೆ ಕೇಳಿಕೊಂಡಿದ್ದೇವೆ. ಇದನ್ನು ಸರ್ಕಾರ ಮಾಡಬಹುದಾಗಿದೆ. ಈ ತಾತ್ಕಾಲಿಕ ಸಮಸ್ಯೆಗಳನ್ನು ಬಗೆಹರಿಸಲು ಅದದೇ ಸ್ಥಳಗಳಲ್ಲಿ ಬೆಳೆಗಳನ್ನು ನೇರವಾಗಿ ಖರೀದಿ ಮಾಡಿ ಸರ್ಕಾರವೇ ಬೇಕಾದ ಕಡೆಗೆ ಸಾಗಿಸಬೇಕು. ಇರುವಂತಹ ಸಂಪನ್ಮೂಲವನ್ನು ಕ್ರೋಢೀಕರಿಸಿ ಅದನ್ನು ತಲುಪಿಸಬೇಕು. ಈಗ ಹೇಳಿರುವ ವಿಷಯಗಳೆಲ್ಲವೂ ಯಥಾಸ್ಥಿತಿವಾದವಾಗಿದೆ. ಇವೆಲ್ಲ ಪರಿಣಾಮಕಾರಿಯಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಗಡಿಗಳೆಲ್ಲಾ ಮುಚ್ಚಲ್ಪಟ್ಟಿರುವುದರಿಂದ ತುಂಬಾ ಸಮಸ್ಯೆಗಳಾಗಿವೆ. ಕೇರಳ ಸರ್ಕಾರದ ಮಾದರಿಯಲ್ಲಿ ನಮ್ಮ ಸರ್ಕಾರವು ಕೆಲಸ ಮಾಡಬೇಕು. ಮುಖ್ಯಮಂತ್ರಿಗಳು ಕಾಳಜಿಯಿಂದ ಕೆಲಸ ಮಾಡಿದ್ದಾರೆ ಎಂದು ಕಾಣುತ್ತದೆ. ಆದರೆ ಸಮಸ್ಯೆಗಳು ಹಾಗೆಯೇ ಉಳಿಯುತ್ತದೆ” ಎಂದು ಹೇಳಿದ್ದಾರೆ.

ಮಾಜಿ ಶಾಸಕರಾದ ಬಿ.ಆರ್‌.ಪಾಟಿಲ್ ಅವರು “ಸರ್ಕಾರ ಒಂದು ಕಡೆ ಹಣ್ಣು ತರಕಾರಿಗೆ ಬೇಡಿಕೆ ಕುಸಿದಿದೆ ಎಂದು ಹೇಳುತ್ತಿದೆ, ಆದರೆ ಸರಿಪಡಿಸಲು ಏನೂ ಮಾಡುತ್ತಿಲ್ಲ. ಅವರಿಗೆ ಬೆಂಬಲ ಬೆಲೆ ಕೊಟ್ಟು ಖರೀದಿಸುವ ಬಗ್ಗೆ ಎಲ್ಲಿಯು ಹೇಳುತ್ತಿಲ್ಲ. ರೈತರ ಬೆಳೆಗಳನ್ನು ರೈಲುಗಳಲ್ಲಿ ಕಳುಹಿಸುವ ಬಗ್ಗೆ ಸರ್ಕಾರ ಹೇಳುತ್ತಿದೆ ಆದರೆ ಈಗ ರೈಲು ಸಂಚಾರವೆ ಇಲ್ಲ. ಅಲ್ಲದೆ ದೊಡ್ಡ ಮಟ್ಟದಲ್ಲಿ ಖರೀದಿ ಮಾಡಿದರೆ, ಶೀತಲೀಕರಣ ಮಾಡುವ ವ್ಯವಸ್ಥೆ ಕೂಡಾ ಇಲ್ಲ. ಸರ್ಕಾರ ಹೇಳುವ ಯಾವುದೇ ವಿಷಯ ಕಾರ್ಯಸಾಧುವಲ್ಲ. ಟೊಮೆಟೊ ಸಂಸ್ಕರಣೆ ಬಗ್ಗೆ ಹೇಳಿದ್ದಾರೆ ಆದರೆ ಅದು ಒಂದು ಉದ್ದಿಮೆ, ಅದನ್ನು ಮಾಡುವವರು ಮಾಡೆ ಮಾಡುತ್ತಾರೆ. ಹಾಪ್‌ಕಾಮ್ಸ್ ಖರೀದಿ ಮಾಡುವ ಬಗ್ಗೆ ಹೇಳುತ್ತಾರೆ. ಆದರೆ ಹಾಪ್‌ಕಾಮ್ಸ್ ಹಳೆ ಮೈಸೂರು ಪ್ರದೇಶದಲ್ಲಿ ಮಾತ್ರ ಜಾಸ್ತಿ ಹಿಡಿತ ಹೊಂದಿದೆ ಮತ್ತು ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿ ಹಾಪ್‌ಕಾಮ್ಸ್‌ ಇಲ್ಲ. ಆದರೆ ಇದರ ಬಗ್ಗೆ ಸರ್ಕಾರ ಮಾತನಾಡುವುದಿಲ್ಲ” ಎಂದು ಹೇಳಿದ್ದಾರೆ.

”ದಿನಸಿ ಅಂಗಡಿಗಳಲ್ಲಿ ಈಗಾಗಲೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ, ಆದರೆ ಅದರ ವಿರುದ್ದ ಇಲ್ಲಿವರೆಗು ಎಲ್ಲಿಯು ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಮುಖ್ಯವಾಗಿ ಸರ್ಕಾರ ಯಾವುದೆ ಹಣಕಾಸಿನ ತೊಂದರೆಯನ್ನು ತೆಗೆದುಕೊಂಡಿಲ್ಲ. ಬಿತ್ತನೆ ಬೀಜ,ರಸಗೊಬ್ಬರಗಳ ಬಗ್ಗೆ ಹೇಳಿದೆಯಾದರು ಅವೆಲ್ಲ ಪ್ರತೀ ವರ್ಷ ಇರುವಂತಹದ್ದು. ರೈಸ್ ಮಿಲ್ಲುಗಳನ್ನು ನಡೆಸುವಂತೆ ಸರ್ಕಾರ ಹೇಳಿದೆ. ಆದರೆ ಬೇಡಿಕೆ ಇದ್ದರೆ ಮಿಲ್ಲುಗಳು ಅದಾಗಿಯೆ ನಡೆಯುತ್ತವೆ. ಬೇಡಿಕೆ ಇಲ್ಲವೆಂದರೂ ಮಿಲ್ಲುಗಳನ್ನು ನಡೆಸಿ ನಾವು ಇದ್ದೇವೆ ಎಂದು ಸರ್ಕಾರ ಹೇಳುವುದಿಲ್ಲ. ಈಗಾಗಲೇ ಗುಲ್ಬರ್ಗಾದಲ್ಲಿ ಮುನ್ನೂರು ತೊಗರಿಬೇಳೆ ಮಿಲ್ಲುಗಳು ಬಂದ್ ಆಗಿವೆ, ಈ ಮಿಲ್ಲುಗಳ ಅಸೋಸಿಯೆಶನ್‌ಗಳು ಸರ್ಕಾರಕ್ಕೆ ಬೇಡಿಕೆಗೆ ಸಲ್ಲಿಸಿದ್ದರೂ ಸರ್ಕಾಕ್ಕೆ ಅದರ ಬಗ್ಗೆ ಕಾಳಜಿ ಇಲ್ಲ. ಸರ್ಕಾರ ಇಲ್ಲಿಯೆ ಖರೀದಿ ಮಾಡಿ ಪಡಿತರ ಮೂಲಕ ಎರಡೆರಡು ಕೇಜಿ ಕೊಟ್ಟರೂ ಸಮಸ್ಯೆ ಪರಿಹಾರವಾಗುತ್ತದೆ. ಸರ್ಕಾರದ ಈ ನಿಲುವುಗಳಲ್ಲಿ ಯಾವುದೇ ವಿಶೇಷತೆ ಇಲ್ಲ” ಎಂದು ಬಿ.ಆರ್‌.ಪಾಟಿಲ್ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...