ಸಂಸತ್ತಿನ ಮೇಲೆ ದಾಳಿ ನಡೆದು ಇಂದಿಗೆ 22ನೇ ವರ್ಷ ಪೂರೈಸಿದ್ದು, ನೂತನ ಸಂಸತ್ ಭವನದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಭಾರೀ ಭದ್ರತಾ ವೈಪಲ್ಯ ಸಂಭವಿಸಿದೆ. ಇಬ್ಬರು ಆಗಂತುಕರು ಟಿಯರ್ ಗ್ಯಾಸ್ ಹಿಡಿದು, ಸಂದರ್ಶಕರ ಗ್ಯಾಲರಿ ಮೂಲಕ ಸದನಕ್ಕೆ ಜಿಗಿದು ಆತಂಕ ಸೃಷ್ಟಿಸಿದ್ದಾರೆ.
ಘಟನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಂಸದ ಡ್ಯಾನಿಶ್ ಅಲಿ, ‘ದಾಳಿ ನಡೆಸಿದ ಯುವಕರ ಪೈಕಿ ಓರ್ವ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದಾನೆ’ ಎಂದು ಆರೋಪಿಸಿದ್ದಾರೆ. ಆದರೆ, ಈವರೆಗೆ ಪ್ರತಾಪ್ ಸಿಂಹ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಘಟನೆ ಸಂಬಂಧ ಈಗಾಗಲೇ ಉತ್ತರ ಪ್ರದೇಶದ ಲಕ್ನೋ ನಿವಾಸಿ ಸಾಗರ್ ಶರ್ಮಾ ಹಾಗೂ ನೀಲಂ ಕೌರ್ ಎಂಬಾಕೆಯನ್ನು ಬಂಧಿಸಲಾಗಿದೆ. ಇಬ್ಬರು ಲೋಕಸಭೆಯ ಒಳಗೆ ನುಗ್ಗಿದರೆ, ಇನ್ನಿಬ್ಬರು ಲೋಕಸಭೆಯ ಹೊರಗೆ, ‘ನಹೀ ಚಲೇಗಿ ನಹೀ ಚಲೇಗಿ, ತಾನಾಶಾಹಿ ನಹೀ ಚಲೇಗಿ’ ಎಂದು ಘೋಷಣೆ ಕೂಗುತ್ತಿದ್ದರು. ಬಂಧಿತರೆಲ್ಲರೂ ತಮ್ಮನ್ನು ತಾವು ವಿದ್ಯಾರ್ಥಿಗಳು ಎಂದು ಹೇಳಿಕೊಂಡಿದ್ದು, ನಾವು ಯಾವುದೇ ಸಂಘಟನೆಗೆ ಸೇರಿಲ್ಲ ಎಂದು ಹೇಳಿದ್ದಾರೆ.
VIDEO | "Two people jumped from the public gallery and there was smoke. There was chaos all around. Both of them were overpowered by security officials," says MP Danish Ali on reported security breach in Lok Sabha. #Parliament pic.twitter.com/fJIFOnkgdb
— Press Trust of India (@PTI_News) December 13, 2023
ಈ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ‘ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದು, ಅನಿಲ ಹೊರಸೂಸುವಿಕೆಯಾಗುವ ಏನನ್ನೋ ಎಸೆದರು. ಅವರನ್ನು ನಮ್ಮ ಸಹೋದ್ಯೋಗಿಗಳೆಲ್ಲಾ ಹಿಡಿದರು. ಆನಂತರ ಭದ್ರತಾ ಸಿಬ್ಬಂದಿಗಳು ಅವರನ್ನು ಹಿಡಿದು ಹೊರಗೆ ಕರೆತಂದರು. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ. ಇದು ಖಂಡಿತವಾಗಿಯೂ ಭದ್ರತಾ ಲೋಪ’ ಎಂದು ಹೇಳಿದರು.
ಮತ್ತೋರ್ವ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮಾತನಾಡಿ, ‘ಇಬ್ಬರು ಯುವಕರು ಇದ್ದಕ್ಕಿದ್ದಂತೆ ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದರು. ಅವರ ಕೈನಲ್ಲಿ ಯಾವುದೋ ಡಬ್ಬಿಗಳನ್ನು ಹಿಡಿದಿದ್ದರು. ಈ ಅವುಗಳು ಹಳದಿ ಬಣ್ಣದ ಹೊಗೆ ಹೊರಸೂಸುತ್ತಿದ್ದವು. ಅವರಲ್ಲಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸುತ್ತಿದ್ದರು. ಕೆಲವು ಘೋಷಣೆಗಳನ್ನು ಕೂಗಿದರು. ಹೊಗೆಯು ವಿಷಕಾರಿಯಾಗಿರಬಹುದು. ಸಂಸತ್ತಿನ ಮೇಲೆ ದಾಳಿಯಾದ ದಿನದಂದೇ ಲೋಕಸಭೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ಗಂಭೀರವಾದ ಭದ್ರತಾ ಉಲ್ಲಂಘನೆಯಾಗಿದೆ’ ಎಂದರು.
दो लोग संसद में घुस गए। दो बाहर प्रदर्शन कर रहे थे जिनमें एक लड़की नीलम भी है।
नीलम को सुना जाए। #SecurityBreach #LokSabha pic.twitter.com/HIh44YAB8N
— Krishna Kant (@kkjourno) December 13, 2023
ಇದನ್ನೂ ಓದಿ; ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸದರತ್ತ ನುಗ್ಗಿ ಅಶ್ರುವಾಯು ಸಿಡಿಸಿದ ಅಪರಿಚಿತರು