ಜಾತಿ ಕಿರುಕುಳದಿಂದ ಬೇಸತ್ತು ದಲಿತ ವಿದ್ಯಾರ್ಥಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ನಡೆದಿದೆ. ತರಗತಿಯ ಶಿಕ್ಷಕ ಅಜಿತ್ ಪಾಂಡೆ ಜಾತಿ ತಾರತಮ್ಯ ಮಾಡುತ್ತಿದ್ದು, ನೀನು ಕೀಳು ಜಾತಿಯವನು, ನಿನಗೆ ಓದುವ ಹಕ್ಕಿಲ್ಲ ಎಂದು ತನ್ನ ಮಗನಿಗೆ ಕಿರುಕುಳ ನೀಡಿದ್ದಾರೆ ಎಂದು ಮೃತ ವಿದ್ಯಾರ್ಥಿಯ ತಂದೆ ಆರೋಪಿಸಿದ್ದಾರೆ.
ರಾಂಪುರ (ಸಾಕಿನ್) ಪೊಲೀಸ್ ಠಾಣೆ ವ್ಯಾಪ್ತಿಯ ಪಡ್ಖುರಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ನವೋದಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ ಅಮಿತ್ ಪ್ರಜಾಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನವೋದಯ ವಿದ್ಯಾಲಯದಲ್ಲಿ ಅಮಿತ್ ಅವರ ಕ್ಲಾಸ್ ಟೀಚರ್ ಅಜಿತ್ ಪಾಂಡೆ ಜಾತಿ ತಾರತಮ್ಯ ಮಾಡುತ್ತಿದ್ದರು. ನೀನು ಕೀಳು ಜಾತಿಯವನು, ನಿನಗೆ ಓದುವ ಹಕ್ಕಿಲ್ಲ ಎಂದು ಕಿರುಕುಳ ನೀಡಿದ್ದಾರೆ” ಎಂದು ಮೃತ ವಿದ್ಯಾರ್ಥಿಯ ತಂದೆ ಅಲ್ಹಾ ಪ್ರಜಾಪತಿ ಆರೋಪಿಸಿದ್ದಾರೆ.
“ನನ್ನ ಮಗ ಕರೆ ಮಾಡಿ, ನನಗೆ ಅನಾರೋಗ್ಯವಿದೆ, ನಾನು ಮನೆಗೆ ಬರಬೇಕು ಎಂದು ಹೇಳಿದ. ಮಗುವಿನ ತಾಯಿ ಮತ್ತು ಸಹೋದರ ಅವನನ್ನು ಕರೆದುಕೊಂಡು ಬರಲು ನವೋದಯ ಶಾಲೆಗೆ ಹೋದರು. ಆದರೆ ಮಗನನ್ನು ಕಳುಹಿಸಿರಲಿಲ್ಲ. ಶಾಲೆಯ ಅನುಮತಿ ಇಲ್ಲದೆಯೇ ಅಂದು ರಾತ್ರಿ 12 ಗಂಟೆಗೆ ಮಗ ಮನೆಗೆ ಬಂದಿದ್ದ” ಎಂದು ತಿಳಿಸಿದ್ದಾರೆ.
“ಮನೆಗೆ ಬಂದ ನಂತರ, ಅಜಿತ್ ಪಾಂಡೆ ಸರ್ ನನಗೆ ಚಿತ್ರಹಿಂಸೆ ನೀಡುತ್ತಾರೆ ಮತ್ತು ಅವಮಾನಿಸುತ್ತಾರೆ. ನಾನು ಶಾಲೆಗೆ ಹೋಗುವುದಿಲ್ಲ ಎಂದು ಹೇಳಿದ್ದಾನೆ. ಈ ಘಟನೆಯಿಂದ ಮನನೊಂದ ಬಾಲಕ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಅಮಿತ್ ತಂದೆ ವಿವರಿಸಿದ್ದಾರೆ.
ಜೀವ ಅಮೂಲ್ಯವಾಗಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಬಂದರೆ ನಿಮಗೆ ಭಾವನಾತ್ಮಕ ಬೆಂಬಲವನ್ನು ನೀಡಿ ಆತ್ಮಹತ್ಯೆ ತಡೆಗಟ್ಟುವ ಸಂಸ್ಥೆಗಳ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.
ಸಹಾಯ (24-ಗಂಟೆ): 080 65000111, 080 65000222
24×7 ಸಹಾಯವಾಣಿ: 98204667260
ಭಾರತದಾದ್ಯಂತ ಸಹಾಯವಾಣಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕೇಳ್ರಪ್ಪೋ ಕೇಳಿ!!!!?
ಧರ್ಮ ಧರ್ಮ ಅನ್ನುವ ರಾಜ್ಯದಲ್ಲಿ
ಯಾರ್ಯಾರೋ ಪುಣ್ಯಾತ್ಮರು ಹುಟ್ಟಿದ ( ಅವರೇ ಹೇಳಿದ್ದು ) ಆ ರಾಜ್ಯದಲ್ಲಿ
ವಿದ್ಯೆ ಕಲಿತ ಗುರುವು
ವಿದ್ಯೆ ಕಲಿಯುವ ಮಗುವಿಗೆ ಭವಿಷ್ಯ ರೂಪಿಸುವ ಕೆಲಸ ಮಾಡದೆ
ಆ ಮಗು ಆತ್ಮಹತ್ಯೆ ಅನ್ನುವ ಯೋಚ್ನೆ ಮಾಡಿ ತನ್ನ ಜೀವನವನ್ನೇ ಕೊನೆ ಮಾಡಿದ್ದಾನೆ… ಯಾವ್ ರಾಜಕೀಯ ವ್ಯಕ್ತಿ ಕೂಡ ಮಾತ್ ಆಡಲ್ಲ. ಯಾವ್ ಪಕ್ಷ ಧರ್ಮ ಕೂಡ ಧ್ವನಿ ಎತ್ತಿಲ್ಲ, ಆಗುತ್ತೆ ಒಂದೆರೆಡು ಸಂತಾಪದ ಮಾತು ಆಡಿ, ತಮ್ ಪಾಡಿಗೆ ತಾವು ಆಗ್ತಾರೆ , ಇತ್ತಗೆ ಹೆಣ್ಣಿಗೆ ರಕ್ಷಣೆ ಇಲ್ಲ ರೈತನಿಗೆ ಬೆಲೆ ಕೊಡ್ತಾ ಇಲ್ಲಾ ಜಾತಿಗೆ ಕೊನೆ ಇಲ್ಲ, ಮನುಷ್ಯತ್ವದ ಕಥೆ ಅದೋ ಗತಿ…
“ಮೇರಾ ಜಾತಿ ಭಾರತ್ ಮಹಾನ್ ಹೈ”, “ಹಿಂದೂ ನಾವೆಲ್ಲ ಒಂದು” ಎನ್ನುವ ಸನಾತನಿ ಶನಿ ಸಂತಾನಗಳು ಈ ದೇಶದ ವಿಷ ಬೇರುಗಳಾಗಿವೆ…, ಶೋಷಿತರೆಲ್ಲ ಜಾಗೃತರಾಗಿ, ಒಂದಾಗಿ ಬಾಬಾಸಾಹೇಬರ ಆಶಯದಂತೆ ಈ ವಿಷ ಬೇರುಗಳ ಬುಡಸಮೇತ ಕೀಳದಿದ್ದಲ್ಲಿ ಈ ದೇಶದಲ್ಲಿ ದಲಿತರಿಗೆ, ದೀನರಿಗೆ, ಶೋಷಿತರಿಗೆ ಬದುಕು ಮತ್ತು ಭವಿಷ್ಯ ಎಂದೂ ಇರದು. ಶಿಕ್ಷಣ, ಸಂಘಟನೆ, ಹೋರಾಟ ಅಷ್ಟೇ ಅಲ್ಲ, ಅಗತ್ಯವಾದಲ್ಲಿ ಬೀದಿ ಕಾಳಗ, ರಕ್ತ ಕ್ರಾಂತಿಗೂ ಸಿದ್ಧಾರಾಗಿರಬೇಕಾದ ಸೇನೆ ನಿರ್ಮಾಣವಾಗಬೇಕು. ಆದಷ್ಟೇ ಈ ಅಮಾನವೀಯ ಕ್ರೂರತೆ, ಅನ್ಯಾಯ, ದಬ್ಬಾಳಿಕೆ, ವಂಚನೆ ಮತ್ತು ಶೋಷಣೆಗೆ ಪರಿಹಾರ. ಯಾವ ಸರ್ಕಾರ, ನಾಯಕರು,ಕಾನೂನುಗಳು ನಮ್ಮ ನೆರವಿಗೆ ಸದಾ ಬಾರದು, ಇವುಗಳು ಕೂಡ ನಮ್ಮ ವಂಚನೆ ಮಾಡುತ್ತಿವೆ. ಎಲ್ಲಕಿಂತ ಮೊದಲು ಶೋಷಿತರು ತಕ್ಷಣದಲ್ಲಿ ಈ ಬದುಕಲ್ಲಿ ಸನಾತನಿ ಧರ್ಮಾಚಾರಣೆ, ಅನುಸರಣೆಗಳ ಧಿಕ್ಕರಿಸಿ ಮಾನವೀಯ ಆಚರಣೆಗಳಷ್ಟೇ ಪಾಲಿಸುವ ನಿರ್ಣಯ ಮಾಡಬೇಕು