Homeಆರೋಗ್ಯಬಿಹಾರದಲ್ಲಿನ ನೂರಾರು ಮಕ್ಕಳ ಸಾವಿಗೆ ಅಪೌಷ್ಟಿಕತೆ ಮತ್ತು ಸರಕಾರಿ ನಿರ್ಲಕ್ಷವೇ ಕಾರಣ

ಬಿಹಾರದಲ್ಲಿನ ನೂರಾರು ಮಕ್ಕಳ ಸಾವಿಗೆ ಅಪೌಷ್ಟಿಕತೆ ಮತ್ತು ಸರಕಾರಿ ನಿರ್ಲಕ್ಷವೇ ಕಾರಣ

- Advertisement -
- Advertisement -

| ಡಾ. ಸ್ವಾತಿ ಶುಕ್ಲಾ |

ಅನುವಾದ: | ನಿಖಿಲ್ ಕೋಲ್ಪೆ |

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಎಕ್ಯೂಟ್ ಎನ್ಸಿಫಲೈಟಿಸ್ ಸಿಂಡ್ರೋಮ್ ಎಂಬ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 113ಕ್ಕೂ ಹೆಚ್ಚಾಗಿದೆ. ಈ ಕಾರಣದಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬಿಹಾರಕ್ಕೆ ಈ ರೋಗವು ಹೊಸದಲ್ಲ. ಲಿಚಿ ಹಣ್ಣಿನ ತೋಟಗಳು ಸಾಮಾನ್ಯವಾಗಿರುವ ಮುಜಾಫರ್‌ಪುರ ಮತ್ತು ನೆರೆಯ ಪ್ರದೇಶಗಳಲ್ಲಿ 1995ರಿಂದಲೇ ಎನ್ಸಿಫಲೈಟಿಸ್ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಈಗಿನ ಪರಿಸ್ಥಿತಿಗೆ ಅಪೌಷ್ಟಿಕತೆಯಿಂದ ಹಿಡಿದು, ಸೆಖೆ, ದುರ್ಬಲ ರೋಗ ನಿರೋಧಕತೆಯ ತನಕ ಹಲವು ಅಂಶಗಳು ಕಾರಣವಾಗಿದ್ದು, ಲಿಚಿಯಲ್ಲಿ ಇರುವ ಕೆಲವು ನಿರ್ದಿಷ್ಟ ರಾಸಾಯನಿಕಗಳು ಇದನ್ನು ಉಲ್ಭಣಿಸುವಂತೆ ಮಾಡಿವೆ.

What is AES? ಎಇಎಸ್ ಎಂದರೇನು?

ಎಕ್ಯೂಯೂ ಎಂಸೆಫಲೈಟಿಸ್ ಸಿಂಡ್ರೋಮ್ ಎಂದು ಮೆದುಳಿಗೆ ಸಂಬಂಧಿಸಿದ ರೋಗವಾಗಿದ್ದು, ಬ್ಯಾಕ್ಟೀರಿಯಾ, ವೈರಸ್, ಪರೋಪಜೀವಿಗಳು, ಶಿಲೀಂದ್ರಗಳು, ರಾಸಾಯನಿಕಗಳು, ಕೆಲವು ರೀತಿಯ ವಿಷವಸ್ತುಗಳು ಇದನ್ನು ಉಂಟುಮಾಡುತ್ತವೆ. ರೋಗ ಲಕ್ಷಣಗಳು ಜ್ವರ, ತಲೆನೋವು, ಅಪಸ್ಮಾರದ ಲಕ್ಷಣಗಳನ್ನು ಒಳಗೊಂಡಿರಬಹುದು. ಈ ರೋಗವು ಮಾನ್ಸೂನ್ ವೇಳೆ ಮತ್ತು ಅದರ ನಂತಥದ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು. ಅದು ಹೆಚ್ಚಾಗಿ ಬರುವುದು 15ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ. ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮುಂತಾದ ಗಂಗಾ ನದಿಬಯಲಿನ ಪ್ರದೇಶಗಳಲ್ಲಿ, ಅಸ್ಸಾಂ, ತಮಿಳುನಾಡಿನ ಕೆಲವು ಬಯಲುಗಳು ಈ ರೋಗಕ್ಕೆ ಸೂಕ್ತ ವಾತಾವರಣ ಒದಗಿಸುತ್ತವೆ. ತಕ್ಷಣ ಆಸ್ಪತ್ರೆಗೆ ಸೇರಿಸುವುದು ಮತ್ತು ಸೂಕ್ತ ಔಷದೋಪಚಾರದಿಂದ ಇದು ಗುಣವಾಗುವುದು.

ಹೆಚ್ಚಿನ ಪ್ರಕರಣಗಳು ಮಕ್ಕಳು ಹೊಟ್ಟೆಗೆ ಏನೂ ತಿನ್ನದೇ, ಬರಿಹೊಟ್ಟೆಯಲ್ಲಿ ಕಾಯಿ ಲೀಚಿ ತಿಂದಿದ್ದ ಪ್ರದೇಶದಲ್ಲಿಯೇ ವರದಿಯಾಗಿವೆ. ಕಾಯಿ ಲೀಚಿಯಲ್ಲಿ ವಿಷಕಾರಿಗಳಾದ ಹೈಪೋಗ್ಲೈಸಿನ್ ಎ ಮತ್ತು, ಮಿಥೈಲ್‌ ನ್ಸೈಕ್ಲೋಪ್ರೊಪೈಲ್‌ಗೈಸಿನ್ (ಎಂಸಿಪಿಜಿ) ಎಂಬ ಉದ್ದವಾದ ಮತ್ತು ಹೇಳಲು ಕಷ್ಟವಾಗುವ, ಹೆಸರುಗಳನ್ನು ಹೊಂದಿರುವ ರಾಸಾಯನಿಕಗಳನ್ನು ಹೊಂದಿದೆ. ಇವುಗಳಲ್ಲಿ ಹೈಪೋಗ್ಲೈಸಿನ್ ಎ ಎಂಬುದು ನೈಸರ್ಗಿಕವಾಗಿ ಉತ್ಪತ್ತಿಯಾಗುವ ಎಮಿನೋ ಅಮ್ಲವಾಗಿದ್ದು, ಎರಡನೆಯದಾದ ಎಂಸಿಪಿಜಿ ಎಂಬ ಸಂಯುಕ್ತ ರಾಸಾಯನಿಕವು ತೀವ್ರವಾದ ವಾಂತಿಯನ್ನು, ಅಂದರೆ, (ಜಮೈಕನ್ ವಾಮಿಟಿಂಗ್ ಡಿಸೀಸ್) ಎಂಬ ರೋಗ ಲಕ್ಷಣಗಳನ್ನು ಉಂಟುಮಾಡುತ್ತದೆ. ಇವುಗಳಲ್ಲಿ ಎಂಸಿಪಿಜಿ ಎಂಬುದು ಹಸಿ ಬೀಜಗಳಲ್ಲಿ ಇರುವ ರಕ್ತದಲ್ಲಿ ಸಕ್ಕರೆ ಅಂತ ಕಡಿಮೆ ಮಾಡುವುದು, ವಿಷಕಾರಿ ರಾಸಾಯನಿಕ ಸಂಯುಕ್ತವಾಗಿದ್ದು, ಏಕಾಏಕಿ ರಕ್ಕದೊಟ್ಟಡದ ಕುಸಿತ, ವಾಂತಿ, ಮಾನಸಿಕ ಸ್ಥಿತಿಯ ಬದಲಾವಣೆ- ಇದು ಸೋಮಾರಿತನದಲ್ಲಿ ಕಾಣಬಹುದು. ಈ ರಾಸಾಯನಿಕಗಳು ಹಸಿ ಲೀಚಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇವೆ ಎಂಬುದು ಅತ್ಯಂತ ಗಮನಾರ್ಹ. (ಲಿಚಿ ಎಂಬುದು ಒಂದು ಹಳ್ಳಿ ಮಕ್ಕಳು ತಿನ್ನುವ ವಿದೇಶಿ ಕಾಡು ಹಣ್ಣಾಗಿದ್ದು, ಇಂದು ಸಿರಿವಂತರ ನೆಚ್ಚಿನ ಗ್ಲಾಮರ್ ಹಣ್ಣಾಗಿದೆ-ಅನುವಾದಕ)

ಭಾರತೀಯ ರೋಗ ನಿಯಂತ್ರಣ ಸಂಸ್ಥೆಯ ಪ್ರಕಾರ ಮತ್ತು ಇತರ ಸಂಸ್ಥೆಗಳ ಪ್ರಕಾರ ಲಿಚಿ ಈ ರೋಗಕ್ಕೆ ಮುಖ್ಯ ಕಾರಣವಲ್ಲ. ಈಗಾಗಲೇ ಹೊಟ್ಟೆಗಿಲ್ಲದ ಮಕ್ಕಳು ಬೆಳಿಗ್ಗೆ ಎದ್ದ ಕೂಡಲೇ ಹಸಿವಿನಿಂದ ಕಾಯಿ ಲಿಚಿ ತಿನ್ನುವುದೇ ಆಗಿದೆ. ಅಪೌಷ್ಟಿಕತೆಯ ಕಾರಣದಿಂದ ಮೊದಲೇ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವ ಮಕ್ಕಳು ಇದನ್ನು ತಿನ್ನುವುದರಿಂದ ಸಕ್ಕರೆ, ಅಂದರೆ ಗ್ಲೂಕೋಸ್ ಇನ್ನೂ ಕಡಿಮೆಯಾಗಿ, ತೀವ್ರ ಪ್ರಕರಣಗಳಲ್ಲಿ ತಲೆ ಸುತ್ತುವಿಕೆ, ಕೊನೆಗೆ ಸಾವಿಗೂ ಕಾಣವಾಗಬಹುದು.

ಈ ಸಾವುಗಳನ್ನು ತಪ್ಪಿಸಬಹುದುದೇ? ಖಂಡಿತಾ!

ಹಿಂದೆಯೇ ಬರೆದಿರುವುದನ್ನು ಓದಿ. ಇಲ್ಲಿ ಇದು ಸಾಮಾನ್ಯ. 2012ರಲ್ಲಿ ಇಲ್ಲಿ 122 ಮಕ್ಕಳ ಸಾವುಗಳು ಸಂಭವಿಸಿವೆ. ಇಲ್ಲಿನ ಆರೋಗ್ಯ ಇಲಾಖೆ ಸ್ಟ್ಯಾಂಡರ್ಡ್ ಅಪರೇಟಿಂಗ್ ಪ್ರೊಸಿಜರ್ಸ್ (ಎಸ್ಓಪಿ)) ಎಂಬ ಒಂದು ವ್ಯವಸ್ಥೆಯನ್ನು ಜಾರಿಗೊಳಿಸಿತು. ಅದು ರೋಗ ಲಕ್ಷಣಗಳ ಆಧಾರದಲ್ಲಿ ಅದನ್ನು ನಿಯಂತ್ರಿಸುವ ಕುರಿತಾಗಿತ್ತು. ಸರಿ, ಈ ವ್ಯವಸ್ಥೆಯು ಆಶಾ ಕಾರ್ಯಕರ್ತೆಯರು, ಪಂಚಾಯತ್, ರಾಜ್ಯಾಡಳಿತ, ಮಾಧ್ಯಮ, ಸರ್ಕಾರೇತರ ಸಂಸ್ಥೆಗಳು, ಪ್ರಚಾರ ಅಭಿಯಾನಗಳು, ಇತ್ಯಾದಿಗಳನ್ನು ಒಳಗೊಂಡಿತ್ತು. ಇದು ರೋಗ ನಿಯಂತ್ರಣದಲ್ಲಿ ಬಹಳಷ್ಟು ಪರಿಣಾಮಕಾರಿಯಾಯಿತು. ಆ ಕಾಲದಲ್ಲಿ ಮುಜಾಫರ್‌ಪುರ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ, ವೈದ್ಯರು, ದಾದಿಗಳ ಹತ್ತಿರ ಗ್ಲೂಕೋಸ್ ಕಿಟ್ ಲಭ್ಯವಿತ್ತು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ದಿನ ರಾತ್ರಿ ತಪಾಸಣೆ ನಡೆಸುತ್ತಿದ್ದರು. ಕಾರಣ ಇಷ್ಟೇ. ಮಕ್ಕಳು ಬರೇ ಹೊಟ್ಟೆಯಲ್ಲಿ ಮಲಗುತ್ತಿದ್ದರೋ ಎಂದು ನೋಡಲು.

ಹಾಗಾಗಿ ಸರ್ಕಾರ ಈ ಕೂಡಲೇ ಬಡವರಿಗೆ ಸಹಾಯ ಹಸ್ತ ಚಾಚಬೇಕು. ಹಸಿದು ಮಲಗುವುದನ್ನು ತಪ್ಪಿಸಬೇಕು. ಆರೋಗ್ಯ ಸೇವೆಯನ್ನು ಉಚಿತಗೊಳಿಸಬೇಕು. ಉದ್ಯೋಗ ನೀಡುವುದಕ್ಕೆ ಮುಂದಾಗಬೇಕು. ಆಗ ಈ ರೋಗ ಬರದಂತೆ ತಡೆಯಬಹುದಾಗಿದೆ.

2019ರಲ್ಲಿ ತಪ್ಪೇನು?

ಸರಳವಾಗಿ ಹೇಳುವುದಾದರೆ, ಮೇಲೆ ಹೇಳಿದ ಎಸ್ಓಪಿ ನಿರ್ಲಕ್ಷ್ಯ, ತೀವ್ರ ಅಪೌಷ್ಟಿಕತೆ, ಬಿಸಿ ಗಾಳಿಯಿಂದ ಉಂಟಾದ ತೀವ್ರ ಸೆಖೆ, ಶುದ್ಧ ನೀರಿನ ಕೊರತೆ ಬಿಹಾರದಲ್ಲಿ ಈಗಿನ ಬಿಕ್ಕಟ್ಟಿಗೆ ಕಾರಣ.

ಬಿಹಾರದಲ್ಲಿ 44 ಶೇಕಡಾ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.  ಈ ಅಪೌಷ್ಟಿಕತೆಯು ಅವರ ರೋಗ ನಿರೋಧಕ ಶಕ್ತಿಯನ್ನು ಕುಗ್ಗುತ್ತದೆ.  ಈಗ ಸಾವಿಗೀಡಾದ ಮಕ್ಕಳಲ್ಲಿ ಬಹುತೇಕರು ತೀರಾ ಬಡ ಕುಟುಂಬದವರಾರಾಗಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ‘ಡೌನ್ ಟು ಅರ್ಥ್’ ಪತ್ರಿಕೆಯ ಒಂದು ವರದಿಯಲ್ಲಿ ಹೇಳಿರುವಂತೆ ಸಾಯುತ್ತಿರುವ ಮಕ್ಕಳಲ್ಲಿ 70 ಶೇಕಡಾ ಹೆಣ್ಣು ಮಕ್ಕಳು. ಅದರಲ್ಲೂ ಮುಖ್ಯವಾಗಿ ಅತ್ಯಂತ ದಲಿತರಾಗಿರುವ ಜಾತಿಗಳಿಗೆ ಸೇರಿದವರು. ಈ ತಡೆದುಯಬಹುದಾದ ಸಾವುಗಳಿಗೆ ಮುಖ್ಯ ಕಾರಣವೆಂದರೆ, ದಲಿತ ವರ್ಗಗಳ, ಅದಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳ ಕುರಿತು ಇರುವ ಅಸಡ್ಡೆ.

ಜೂನ್ 10ರಂದು ಒಂದೇ ದಿನ 20 ಮಕ್ಕಳು ಸತ್ತ ವರದಿ ಬಂದ ನಂತರವೇ ರಾಜ್ಯ ಘನಘೋರ ನಿದ್ದೆಯಿಂದ ಎಚ್ಚೆತ್ತುಕೊಂಡಿತು. ಆರೋಗ್ಯ ರಾಜ್ಯ ಮಂತ್ರಿ ಅಶ್ವಿನಿ ಚೌಧರಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾವುದೇ ಎಗ್ಗಿಲ್ಲದೇ ಚುನಾವಣಾ ಕಾರಣದಿಂದ ಈ ಬಾರಿ ಅರೋಗ್ಯ ಜಾಗೃತಿ ಕಾರ್ಯಕ್ರಮಗಳು ಸರಿಯಾಗಿ ನಡೆಯಲಿಲ್ಲ ಎಂದು ‘ಪ್ರಾಮಾಣಿಕ’ವಾಗಿಯೇ ಹೇಳಿಬಿಟ್ಟಿದ್ದಾರೆ. ಈ ಜಾಗೃತಿ ಕಾರ್ಯಕ್ರಮಗಳು ಎನ್ಓಪಿಯ ಮುಖ್ಯ ಭಾಗವಾಗಿದ್ದು, ಇದು ರಾಷ್ಟ್ರೀಯ ಸುದ್ದಿ ಆದ ಬಳಿಕವೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದಾರೆ.

ಉತ್ತರದಾಯಿತ್ವ ಎಲ್ಲಿದೆ? ಜನರಿಗೆ ನೀಡಬೇಕಾಗಿದ್ದ ಜನಶಕ್ತಿ ಮತ್ತು ಸಂಪನ್ಮೂಲಗಳನ್ನು ಚುನಾವಣೆ ಕಡೆಗೆ ತಿರುಗಿಸಲಾಗಿತ್ತು. ಇದರ ಸಂಪೂರ್ಣ ಜವಾಬ್ದಾರಿಯನ್ನು ಮುಂದಿನ ಐದು ವರ್ಷಗಳ ರಾಜ್ಯಭಾರಕ್ಕಾಗಿ ಚುನಾವಣಾ ಸಭೆಗಳಲ್ಲಿ ವ್ಯಸ್ತವಾಗಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಹಿಸಿಕೊಳ್ಳಬೇಡವೆ? ರಾಜ್ಯ ಸರಕಾರವು ಈ ಎಳೆಯ ಮಕ್ಕಳ ಅಪೌಷ್ಟಿಕತೆಯ ಪರಿಸ್ಥಿತಿಯನ್ನೂ ಬದಲಿಸುವಲ್ಲಿ ವಿಫಲವಾಗಿರುವುದನ್ನೂ ಒಪ್ಪಿಕೊಳ್ಳಬೇಡವೆ?

ಹೊಟ್ಟೆಗಿಲ್ಲದ ಮಕ್ಕಳು ಯಾವುದೇ ಹಣ್ಣು ತಿಂದರೆಂದು ಅವರನ್ನಾಗಲೀ, ಅವರ ಹೆತ್ತವರನ್ನಾಗಲೀ ಯಾರು ದೂರಲು ಸಾಧ್ಯವಿದೆಯೇ? ಯವುದೇ ಮಗು ಹೊಟ್ಟೆಗಿಲ್ಲದೇ ಮಲಗಲು ಬಿಡಬಾರದು ಎಂಬುದು ನಮ್ಮ ಜವಾಬ್ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....