Homeಆರೋಗ್ಯಬಿಹಾರದಲ್ಲಿನ ನೂರಾರು ಮಕ್ಕಳ ಸಾವಿಗೆ ಅಪೌಷ್ಟಿಕತೆ ಮತ್ತು ಸರಕಾರಿ ನಿರ್ಲಕ್ಷವೇ ಕಾರಣ

ಬಿಹಾರದಲ್ಲಿನ ನೂರಾರು ಮಕ್ಕಳ ಸಾವಿಗೆ ಅಪೌಷ್ಟಿಕತೆ ಮತ್ತು ಸರಕಾರಿ ನಿರ್ಲಕ್ಷವೇ ಕಾರಣ

- Advertisement -
- Advertisement -

| ಡಾ. ಸ್ವಾತಿ ಶುಕ್ಲಾ |

ಅನುವಾದ: | ನಿಖಿಲ್ ಕೋಲ್ಪೆ |

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಎಕ್ಯೂಟ್ ಎನ್ಸಿಫಲೈಟಿಸ್ ಸಿಂಡ್ರೋಮ್ ಎಂಬ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 113ಕ್ಕೂ ಹೆಚ್ಚಾಗಿದೆ. ಈ ಕಾರಣದಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬಿಹಾರಕ್ಕೆ ಈ ರೋಗವು ಹೊಸದಲ್ಲ. ಲಿಚಿ ಹಣ್ಣಿನ ತೋಟಗಳು ಸಾಮಾನ್ಯವಾಗಿರುವ ಮುಜಾಫರ್‌ಪುರ ಮತ್ತು ನೆರೆಯ ಪ್ರದೇಶಗಳಲ್ಲಿ 1995ರಿಂದಲೇ ಎನ್ಸಿಫಲೈಟಿಸ್ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಈಗಿನ ಪರಿಸ್ಥಿತಿಗೆ ಅಪೌಷ್ಟಿಕತೆಯಿಂದ ಹಿಡಿದು, ಸೆಖೆ, ದುರ್ಬಲ ರೋಗ ನಿರೋಧಕತೆಯ ತನಕ ಹಲವು ಅಂಶಗಳು ಕಾರಣವಾಗಿದ್ದು, ಲಿಚಿಯಲ್ಲಿ ಇರುವ ಕೆಲವು ನಿರ್ದಿಷ್ಟ ರಾಸಾಯನಿಕಗಳು ಇದನ್ನು ಉಲ್ಭಣಿಸುವಂತೆ ಮಾಡಿವೆ.

What is AES? ಎಇಎಸ್ ಎಂದರೇನು?

ಎಕ್ಯೂಯೂ ಎಂಸೆಫಲೈಟಿಸ್ ಸಿಂಡ್ರೋಮ್ ಎಂದು ಮೆದುಳಿಗೆ ಸಂಬಂಧಿಸಿದ ರೋಗವಾಗಿದ್ದು, ಬ್ಯಾಕ್ಟೀರಿಯಾ, ವೈರಸ್, ಪರೋಪಜೀವಿಗಳು, ಶಿಲೀಂದ್ರಗಳು, ರಾಸಾಯನಿಕಗಳು, ಕೆಲವು ರೀತಿಯ ವಿಷವಸ್ತುಗಳು ಇದನ್ನು ಉಂಟುಮಾಡುತ್ತವೆ. ರೋಗ ಲಕ್ಷಣಗಳು ಜ್ವರ, ತಲೆನೋವು, ಅಪಸ್ಮಾರದ ಲಕ್ಷಣಗಳನ್ನು ಒಳಗೊಂಡಿರಬಹುದು. ಈ ರೋಗವು ಮಾನ್ಸೂನ್ ವೇಳೆ ಮತ್ತು ಅದರ ನಂತಥದ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು. ಅದು ಹೆಚ್ಚಾಗಿ ಬರುವುದು 15ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ. ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮುಂತಾದ ಗಂಗಾ ನದಿಬಯಲಿನ ಪ್ರದೇಶಗಳಲ್ಲಿ, ಅಸ್ಸಾಂ, ತಮಿಳುನಾಡಿನ ಕೆಲವು ಬಯಲುಗಳು ಈ ರೋಗಕ್ಕೆ ಸೂಕ್ತ ವಾತಾವರಣ ಒದಗಿಸುತ್ತವೆ. ತಕ್ಷಣ ಆಸ್ಪತ್ರೆಗೆ ಸೇರಿಸುವುದು ಮತ್ತು ಸೂಕ್ತ ಔಷದೋಪಚಾರದಿಂದ ಇದು ಗುಣವಾಗುವುದು.

ಹೆಚ್ಚಿನ ಪ್ರಕರಣಗಳು ಮಕ್ಕಳು ಹೊಟ್ಟೆಗೆ ಏನೂ ತಿನ್ನದೇ, ಬರಿಹೊಟ್ಟೆಯಲ್ಲಿ ಕಾಯಿ ಲೀಚಿ ತಿಂದಿದ್ದ ಪ್ರದೇಶದಲ್ಲಿಯೇ ವರದಿಯಾಗಿವೆ. ಕಾಯಿ ಲೀಚಿಯಲ್ಲಿ ವಿಷಕಾರಿಗಳಾದ ಹೈಪೋಗ್ಲೈಸಿನ್ ಎ ಮತ್ತು, ಮಿಥೈಲ್‌ ನ್ಸೈಕ್ಲೋಪ್ರೊಪೈಲ್‌ಗೈಸಿನ್ (ಎಂಸಿಪಿಜಿ) ಎಂಬ ಉದ್ದವಾದ ಮತ್ತು ಹೇಳಲು ಕಷ್ಟವಾಗುವ, ಹೆಸರುಗಳನ್ನು ಹೊಂದಿರುವ ರಾಸಾಯನಿಕಗಳನ್ನು ಹೊಂದಿದೆ. ಇವುಗಳಲ್ಲಿ ಹೈಪೋಗ್ಲೈಸಿನ್ ಎ ಎಂಬುದು ನೈಸರ್ಗಿಕವಾಗಿ ಉತ್ಪತ್ತಿಯಾಗುವ ಎಮಿನೋ ಅಮ್ಲವಾಗಿದ್ದು, ಎರಡನೆಯದಾದ ಎಂಸಿಪಿಜಿ ಎಂಬ ಸಂಯುಕ್ತ ರಾಸಾಯನಿಕವು ತೀವ್ರವಾದ ವಾಂತಿಯನ್ನು, ಅಂದರೆ, (ಜಮೈಕನ್ ವಾಮಿಟಿಂಗ್ ಡಿಸೀಸ್) ಎಂಬ ರೋಗ ಲಕ್ಷಣಗಳನ್ನು ಉಂಟುಮಾಡುತ್ತದೆ. ಇವುಗಳಲ್ಲಿ ಎಂಸಿಪಿಜಿ ಎಂಬುದು ಹಸಿ ಬೀಜಗಳಲ್ಲಿ ಇರುವ ರಕ್ತದಲ್ಲಿ ಸಕ್ಕರೆ ಅಂತ ಕಡಿಮೆ ಮಾಡುವುದು, ವಿಷಕಾರಿ ರಾಸಾಯನಿಕ ಸಂಯುಕ್ತವಾಗಿದ್ದು, ಏಕಾಏಕಿ ರಕ್ಕದೊಟ್ಟಡದ ಕುಸಿತ, ವಾಂತಿ, ಮಾನಸಿಕ ಸ್ಥಿತಿಯ ಬದಲಾವಣೆ- ಇದು ಸೋಮಾರಿತನದಲ್ಲಿ ಕಾಣಬಹುದು. ಈ ರಾಸಾಯನಿಕಗಳು ಹಸಿ ಲೀಚಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇವೆ ಎಂಬುದು ಅತ್ಯಂತ ಗಮನಾರ್ಹ. (ಲಿಚಿ ಎಂಬುದು ಒಂದು ಹಳ್ಳಿ ಮಕ್ಕಳು ತಿನ್ನುವ ವಿದೇಶಿ ಕಾಡು ಹಣ್ಣಾಗಿದ್ದು, ಇಂದು ಸಿರಿವಂತರ ನೆಚ್ಚಿನ ಗ್ಲಾಮರ್ ಹಣ್ಣಾಗಿದೆ-ಅನುವಾದಕ)

ಭಾರತೀಯ ರೋಗ ನಿಯಂತ್ರಣ ಸಂಸ್ಥೆಯ ಪ್ರಕಾರ ಮತ್ತು ಇತರ ಸಂಸ್ಥೆಗಳ ಪ್ರಕಾರ ಲಿಚಿ ಈ ರೋಗಕ್ಕೆ ಮುಖ್ಯ ಕಾರಣವಲ್ಲ. ಈಗಾಗಲೇ ಹೊಟ್ಟೆಗಿಲ್ಲದ ಮಕ್ಕಳು ಬೆಳಿಗ್ಗೆ ಎದ್ದ ಕೂಡಲೇ ಹಸಿವಿನಿಂದ ಕಾಯಿ ಲಿಚಿ ತಿನ್ನುವುದೇ ಆಗಿದೆ. ಅಪೌಷ್ಟಿಕತೆಯ ಕಾರಣದಿಂದ ಮೊದಲೇ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವ ಮಕ್ಕಳು ಇದನ್ನು ತಿನ್ನುವುದರಿಂದ ಸಕ್ಕರೆ, ಅಂದರೆ ಗ್ಲೂಕೋಸ್ ಇನ್ನೂ ಕಡಿಮೆಯಾಗಿ, ತೀವ್ರ ಪ್ರಕರಣಗಳಲ್ಲಿ ತಲೆ ಸುತ್ತುವಿಕೆ, ಕೊನೆಗೆ ಸಾವಿಗೂ ಕಾಣವಾಗಬಹುದು.

ಈ ಸಾವುಗಳನ್ನು ತಪ್ಪಿಸಬಹುದುದೇ? ಖಂಡಿತಾ!

ಹಿಂದೆಯೇ ಬರೆದಿರುವುದನ್ನು ಓದಿ. ಇಲ್ಲಿ ಇದು ಸಾಮಾನ್ಯ. 2012ರಲ್ಲಿ ಇಲ್ಲಿ 122 ಮಕ್ಕಳ ಸಾವುಗಳು ಸಂಭವಿಸಿವೆ. ಇಲ್ಲಿನ ಆರೋಗ್ಯ ಇಲಾಖೆ ಸ್ಟ್ಯಾಂಡರ್ಡ್ ಅಪರೇಟಿಂಗ್ ಪ್ರೊಸಿಜರ್ಸ್ (ಎಸ್ಓಪಿ)) ಎಂಬ ಒಂದು ವ್ಯವಸ್ಥೆಯನ್ನು ಜಾರಿಗೊಳಿಸಿತು. ಅದು ರೋಗ ಲಕ್ಷಣಗಳ ಆಧಾರದಲ್ಲಿ ಅದನ್ನು ನಿಯಂತ್ರಿಸುವ ಕುರಿತಾಗಿತ್ತು. ಸರಿ, ಈ ವ್ಯವಸ್ಥೆಯು ಆಶಾ ಕಾರ್ಯಕರ್ತೆಯರು, ಪಂಚಾಯತ್, ರಾಜ್ಯಾಡಳಿತ, ಮಾಧ್ಯಮ, ಸರ್ಕಾರೇತರ ಸಂಸ್ಥೆಗಳು, ಪ್ರಚಾರ ಅಭಿಯಾನಗಳು, ಇತ್ಯಾದಿಗಳನ್ನು ಒಳಗೊಂಡಿತ್ತು. ಇದು ರೋಗ ನಿಯಂತ್ರಣದಲ್ಲಿ ಬಹಳಷ್ಟು ಪರಿಣಾಮಕಾರಿಯಾಯಿತು. ಆ ಕಾಲದಲ್ಲಿ ಮುಜಾಫರ್‌ಪುರ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ, ವೈದ್ಯರು, ದಾದಿಗಳ ಹತ್ತಿರ ಗ್ಲೂಕೋಸ್ ಕಿಟ್ ಲಭ್ಯವಿತ್ತು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ದಿನ ರಾತ್ರಿ ತಪಾಸಣೆ ನಡೆಸುತ್ತಿದ್ದರು. ಕಾರಣ ಇಷ್ಟೇ. ಮಕ್ಕಳು ಬರೇ ಹೊಟ್ಟೆಯಲ್ಲಿ ಮಲಗುತ್ತಿದ್ದರೋ ಎಂದು ನೋಡಲು.

ಹಾಗಾಗಿ ಸರ್ಕಾರ ಈ ಕೂಡಲೇ ಬಡವರಿಗೆ ಸಹಾಯ ಹಸ್ತ ಚಾಚಬೇಕು. ಹಸಿದು ಮಲಗುವುದನ್ನು ತಪ್ಪಿಸಬೇಕು. ಆರೋಗ್ಯ ಸೇವೆಯನ್ನು ಉಚಿತಗೊಳಿಸಬೇಕು. ಉದ್ಯೋಗ ನೀಡುವುದಕ್ಕೆ ಮುಂದಾಗಬೇಕು. ಆಗ ಈ ರೋಗ ಬರದಂತೆ ತಡೆಯಬಹುದಾಗಿದೆ.

2019ರಲ್ಲಿ ತಪ್ಪೇನು?

ಸರಳವಾಗಿ ಹೇಳುವುದಾದರೆ, ಮೇಲೆ ಹೇಳಿದ ಎಸ್ಓಪಿ ನಿರ್ಲಕ್ಷ್ಯ, ತೀವ್ರ ಅಪೌಷ್ಟಿಕತೆ, ಬಿಸಿ ಗಾಳಿಯಿಂದ ಉಂಟಾದ ತೀವ್ರ ಸೆಖೆ, ಶುದ್ಧ ನೀರಿನ ಕೊರತೆ ಬಿಹಾರದಲ್ಲಿ ಈಗಿನ ಬಿಕ್ಕಟ್ಟಿಗೆ ಕಾರಣ.

ಬಿಹಾರದಲ್ಲಿ 44 ಶೇಕಡಾ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.  ಈ ಅಪೌಷ್ಟಿಕತೆಯು ಅವರ ರೋಗ ನಿರೋಧಕ ಶಕ್ತಿಯನ್ನು ಕುಗ್ಗುತ್ತದೆ.  ಈಗ ಸಾವಿಗೀಡಾದ ಮಕ್ಕಳಲ್ಲಿ ಬಹುತೇಕರು ತೀರಾ ಬಡ ಕುಟುಂಬದವರಾರಾಗಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ‘ಡೌನ್ ಟು ಅರ್ಥ್’ ಪತ್ರಿಕೆಯ ಒಂದು ವರದಿಯಲ್ಲಿ ಹೇಳಿರುವಂತೆ ಸಾಯುತ್ತಿರುವ ಮಕ್ಕಳಲ್ಲಿ 70 ಶೇಕಡಾ ಹೆಣ್ಣು ಮಕ್ಕಳು. ಅದರಲ್ಲೂ ಮುಖ್ಯವಾಗಿ ಅತ್ಯಂತ ದಲಿತರಾಗಿರುವ ಜಾತಿಗಳಿಗೆ ಸೇರಿದವರು. ಈ ತಡೆದುಯಬಹುದಾದ ಸಾವುಗಳಿಗೆ ಮುಖ್ಯ ಕಾರಣವೆಂದರೆ, ದಲಿತ ವರ್ಗಗಳ, ಅದಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳ ಕುರಿತು ಇರುವ ಅಸಡ್ಡೆ.

ಜೂನ್ 10ರಂದು ಒಂದೇ ದಿನ 20 ಮಕ್ಕಳು ಸತ್ತ ವರದಿ ಬಂದ ನಂತರವೇ ರಾಜ್ಯ ಘನಘೋರ ನಿದ್ದೆಯಿಂದ ಎಚ್ಚೆತ್ತುಕೊಂಡಿತು. ಆರೋಗ್ಯ ರಾಜ್ಯ ಮಂತ್ರಿ ಅಶ್ವಿನಿ ಚೌಧರಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾವುದೇ ಎಗ್ಗಿಲ್ಲದೇ ಚುನಾವಣಾ ಕಾರಣದಿಂದ ಈ ಬಾರಿ ಅರೋಗ್ಯ ಜಾಗೃತಿ ಕಾರ್ಯಕ್ರಮಗಳು ಸರಿಯಾಗಿ ನಡೆಯಲಿಲ್ಲ ಎಂದು ‘ಪ್ರಾಮಾಣಿಕ’ವಾಗಿಯೇ ಹೇಳಿಬಿಟ್ಟಿದ್ದಾರೆ. ಈ ಜಾಗೃತಿ ಕಾರ್ಯಕ್ರಮಗಳು ಎನ್ಓಪಿಯ ಮುಖ್ಯ ಭಾಗವಾಗಿದ್ದು, ಇದು ರಾಷ್ಟ್ರೀಯ ಸುದ್ದಿ ಆದ ಬಳಿಕವೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದಾರೆ.

ಉತ್ತರದಾಯಿತ್ವ ಎಲ್ಲಿದೆ? ಜನರಿಗೆ ನೀಡಬೇಕಾಗಿದ್ದ ಜನಶಕ್ತಿ ಮತ್ತು ಸಂಪನ್ಮೂಲಗಳನ್ನು ಚುನಾವಣೆ ಕಡೆಗೆ ತಿರುಗಿಸಲಾಗಿತ್ತು. ಇದರ ಸಂಪೂರ್ಣ ಜವಾಬ್ದಾರಿಯನ್ನು ಮುಂದಿನ ಐದು ವರ್ಷಗಳ ರಾಜ್ಯಭಾರಕ್ಕಾಗಿ ಚುನಾವಣಾ ಸಭೆಗಳಲ್ಲಿ ವ್ಯಸ್ತವಾಗಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಹಿಸಿಕೊಳ್ಳಬೇಡವೆ? ರಾಜ್ಯ ಸರಕಾರವು ಈ ಎಳೆಯ ಮಕ್ಕಳ ಅಪೌಷ್ಟಿಕತೆಯ ಪರಿಸ್ಥಿತಿಯನ್ನೂ ಬದಲಿಸುವಲ್ಲಿ ವಿಫಲವಾಗಿರುವುದನ್ನೂ ಒಪ್ಪಿಕೊಳ್ಳಬೇಡವೆ?

ಹೊಟ್ಟೆಗಿಲ್ಲದ ಮಕ್ಕಳು ಯಾವುದೇ ಹಣ್ಣು ತಿಂದರೆಂದು ಅವರನ್ನಾಗಲೀ, ಅವರ ಹೆತ್ತವರನ್ನಾಗಲೀ ಯಾರು ದೂರಲು ಸಾಧ್ಯವಿದೆಯೇ? ಯವುದೇ ಮಗು ಹೊಟ್ಟೆಗಿಲ್ಲದೇ ಮಲಗಲು ಬಿಡಬಾರದು ಎಂಬುದು ನಮ್ಮ ಜವಾಬ್ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...