Homeಆರೋಗ್ಯಬಿಹಾರದಲ್ಲಿನ ನೂರಾರು ಮಕ್ಕಳ ಸಾವಿಗೆ ಅಪೌಷ್ಟಿಕತೆ ಮತ್ತು ಸರಕಾರಿ ನಿರ್ಲಕ್ಷವೇ ಕಾರಣ

ಬಿಹಾರದಲ್ಲಿನ ನೂರಾರು ಮಕ್ಕಳ ಸಾವಿಗೆ ಅಪೌಷ್ಟಿಕತೆ ಮತ್ತು ಸರಕಾರಿ ನಿರ್ಲಕ್ಷವೇ ಕಾರಣ

- Advertisement -
- Advertisement -

| ಡಾ. ಸ್ವಾತಿ ಶುಕ್ಲಾ |

ಅನುವಾದ: | ನಿಖಿಲ್ ಕೋಲ್ಪೆ |

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಎಕ್ಯೂಟ್ ಎನ್ಸಿಫಲೈಟಿಸ್ ಸಿಂಡ್ರೋಮ್ ಎಂಬ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 113ಕ್ಕೂ ಹೆಚ್ಚಾಗಿದೆ. ಈ ಕಾರಣದಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬಿಹಾರಕ್ಕೆ ಈ ರೋಗವು ಹೊಸದಲ್ಲ. ಲಿಚಿ ಹಣ್ಣಿನ ತೋಟಗಳು ಸಾಮಾನ್ಯವಾಗಿರುವ ಮುಜಾಫರ್‌ಪುರ ಮತ್ತು ನೆರೆಯ ಪ್ರದೇಶಗಳಲ್ಲಿ 1995ರಿಂದಲೇ ಎನ್ಸಿಫಲೈಟಿಸ್ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಈಗಿನ ಪರಿಸ್ಥಿತಿಗೆ ಅಪೌಷ್ಟಿಕತೆಯಿಂದ ಹಿಡಿದು, ಸೆಖೆ, ದುರ್ಬಲ ರೋಗ ನಿರೋಧಕತೆಯ ತನಕ ಹಲವು ಅಂಶಗಳು ಕಾರಣವಾಗಿದ್ದು, ಲಿಚಿಯಲ್ಲಿ ಇರುವ ಕೆಲವು ನಿರ್ದಿಷ್ಟ ರಾಸಾಯನಿಕಗಳು ಇದನ್ನು ಉಲ್ಭಣಿಸುವಂತೆ ಮಾಡಿವೆ.

What is AES? ಎಇಎಸ್ ಎಂದರೇನು?

ಎಕ್ಯೂಯೂ ಎಂಸೆಫಲೈಟಿಸ್ ಸಿಂಡ್ರೋಮ್ ಎಂದು ಮೆದುಳಿಗೆ ಸಂಬಂಧಿಸಿದ ರೋಗವಾಗಿದ್ದು, ಬ್ಯಾಕ್ಟೀರಿಯಾ, ವೈರಸ್, ಪರೋಪಜೀವಿಗಳು, ಶಿಲೀಂದ್ರಗಳು, ರಾಸಾಯನಿಕಗಳು, ಕೆಲವು ರೀತಿಯ ವಿಷವಸ್ತುಗಳು ಇದನ್ನು ಉಂಟುಮಾಡುತ್ತವೆ. ರೋಗ ಲಕ್ಷಣಗಳು ಜ್ವರ, ತಲೆನೋವು, ಅಪಸ್ಮಾರದ ಲಕ್ಷಣಗಳನ್ನು ಒಳಗೊಂಡಿರಬಹುದು. ಈ ರೋಗವು ಮಾನ್ಸೂನ್ ವೇಳೆ ಮತ್ತು ಅದರ ನಂತಥದ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು. ಅದು ಹೆಚ್ಚಾಗಿ ಬರುವುದು 15ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ. ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮುಂತಾದ ಗಂಗಾ ನದಿಬಯಲಿನ ಪ್ರದೇಶಗಳಲ್ಲಿ, ಅಸ್ಸಾಂ, ತಮಿಳುನಾಡಿನ ಕೆಲವು ಬಯಲುಗಳು ಈ ರೋಗಕ್ಕೆ ಸೂಕ್ತ ವಾತಾವರಣ ಒದಗಿಸುತ್ತವೆ. ತಕ್ಷಣ ಆಸ್ಪತ್ರೆಗೆ ಸೇರಿಸುವುದು ಮತ್ತು ಸೂಕ್ತ ಔಷದೋಪಚಾರದಿಂದ ಇದು ಗುಣವಾಗುವುದು.

ಹೆಚ್ಚಿನ ಪ್ರಕರಣಗಳು ಮಕ್ಕಳು ಹೊಟ್ಟೆಗೆ ಏನೂ ತಿನ್ನದೇ, ಬರಿಹೊಟ್ಟೆಯಲ್ಲಿ ಕಾಯಿ ಲೀಚಿ ತಿಂದಿದ್ದ ಪ್ರದೇಶದಲ್ಲಿಯೇ ವರದಿಯಾಗಿವೆ. ಕಾಯಿ ಲೀಚಿಯಲ್ಲಿ ವಿಷಕಾರಿಗಳಾದ ಹೈಪೋಗ್ಲೈಸಿನ್ ಎ ಮತ್ತು, ಮಿಥೈಲ್‌ ನ್ಸೈಕ್ಲೋಪ್ರೊಪೈಲ್‌ಗೈಸಿನ್ (ಎಂಸಿಪಿಜಿ) ಎಂಬ ಉದ್ದವಾದ ಮತ್ತು ಹೇಳಲು ಕಷ್ಟವಾಗುವ, ಹೆಸರುಗಳನ್ನು ಹೊಂದಿರುವ ರಾಸಾಯನಿಕಗಳನ್ನು ಹೊಂದಿದೆ. ಇವುಗಳಲ್ಲಿ ಹೈಪೋಗ್ಲೈಸಿನ್ ಎ ಎಂಬುದು ನೈಸರ್ಗಿಕವಾಗಿ ಉತ್ಪತ್ತಿಯಾಗುವ ಎಮಿನೋ ಅಮ್ಲವಾಗಿದ್ದು, ಎರಡನೆಯದಾದ ಎಂಸಿಪಿಜಿ ಎಂಬ ಸಂಯುಕ್ತ ರಾಸಾಯನಿಕವು ತೀವ್ರವಾದ ವಾಂತಿಯನ್ನು, ಅಂದರೆ, (ಜಮೈಕನ್ ವಾಮಿಟಿಂಗ್ ಡಿಸೀಸ್) ಎಂಬ ರೋಗ ಲಕ್ಷಣಗಳನ್ನು ಉಂಟುಮಾಡುತ್ತದೆ. ಇವುಗಳಲ್ಲಿ ಎಂಸಿಪಿಜಿ ಎಂಬುದು ಹಸಿ ಬೀಜಗಳಲ್ಲಿ ಇರುವ ರಕ್ತದಲ್ಲಿ ಸಕ್ಕರೆ ಅಂತ ಕಡಿಮೆ ಮಾಡುವುದು, ವಿಷಕಾರಿ ರಾಸಾಯನಿಕ ಸಂಯುಕ್ತವಾಗಿದ್ದು, ಏಕಾಏಕಿ ರಕ್ಕದೊಟ್ಟಡದ ಕುಸಿತ, ವಾಂತಿ, ಮಾನಸಿಕ ಸ್ಥಿತಿಯ ಬದಲಾವಣೆ- ಇದು ಸೋಮಾರಿತನದಲ್ಲಿ ಕಾಣಬಹುದು. ಈ ರಾಸಾಯನಿಕಗಳು ಹಸಿ ಲೀಚಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇವೆ ಎಂಬುದು ಅತ್ಯಂತ ಗಮನಾರ್ಹ. (ಲಿಚಿ ಎಂಬುದು ಒಂದು ಹಳ್ಳಿ ಮಕ್ಕಳು ತಿನ್ನುವ ವಿದೇಶಿ ಕಾಡು ಹಣ್ಣಾಗಿದ್ದು, ಇಂದು ಸಿರಿವಂತರ ನೆಚ್ಚಿನ ಗ್ಲಾಮರ್ ಹಣ್ಣಾಗಿದೆ-ಅನುವಾದಕ)

ಭಾರತೀಯ ರೋಗ ನಿಯಂತ್ರಣ ಸಂಸ್ಥೆಯ ಪ್ರಕಾರ ಮತ್ತು ಇತರ ಸಂಸ್ಥೆಗಳ ಪ್ರಕಾರ ಲಿಚಿ ಈ ರೋಗಕ್ಕೆ ಮುಖ್ಯ ಕಾರಣವಲ್ಲ. ಈಗಾಗಲೇ ಹೊಟ್ಟೆಗಿಲ್ಲದ ಮಕ್ಕಳು ಬೆಳಿಗ್ಗೆ ಎದ್ದ ಕೂಡಲೇ ಹಸಿವಿನಿಂದ ಕಾಯಿ ಲಿಚಿ ತಿನ್ನುವುದೇ ಆಗಿದೆ. ಅಪೌಷ್ಟಿಕತೆಯ ಕಾರಣದಿಂದ ಮೊದಲೇ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವ ಮಕ್ಕಳು ಇದನ್ನು ತಿನ್ನುವುದರಿಂದ ಸಕ್ಕರೆ, ಅಂದರೆ ಗ್ಲೂಕೋಸ್ ಇನ್ನೂ ಕಡಿಮೆಯಾಗಿ, ತೀವ್ರ ಪ್ರಕರಣಗಳಲ್ಲಿ ತಲೆ ಸುತ್ತುವಿಕೆ, ಕೊನೆಗೆ ಸಾವಿಗೂ ಕಾಣವಾಗಬಹುದು.

ಈ ಸಾವುಗಳನ್ನು ತಪ್ಪಿಸಬಹುದುದೇ? ಖಂಡಿತಾ!

ಹಿಂದೆಯೇ ಬರೆದಿರುವುದನ್ನು ಓದಿ. ಇಲ್ಲಿ ಇದು ಸಾಮಾನ್ಯ. 2012ರಲ್ಲಿ ಇಲ್ಲಿ 122 ಮಕ್ಕಳ ಸಾವುಗಳು ಸಂಭವಿಸಿವೆ. ಇಲ್ಲಿನ ಆರೋಗ್ಯ ಇಲಾಖೆ ಸ್ಟ್ಯಾಂಡರ್ಡ್ ಅಪರೇಟಿಂಗ್ ಪ್ರೊಸಿಜರ್ಸ್ (ಎಸ್ಓಪಿ)) ಎಂಬ ಒಂದು ವ್ಯವಸ್ಥೆಯನ್ನು ಜಾರಿಗೊಳಿಸಿತು. ಅದು ರೋಗ ಲಕ್ಷಣಗಳ ಆಧಾರದಲ್ಲಿ ಅದನ್ನು ನಿಯಂತ್ರಿಸುವ ಕುರಿತಾಗಿತ್ತು. ಸರಿ, ಈ ವ್ಯವಸ್ಥೆಯು ಆಶಾ ಕಾರ್ಯಕರ್ತೆಯರು, ಪಂಚಾಯತ್, ರಾಜ್ಯಾಡಳಿತ, ಮಾಧ್ಯಮ, ಸರ್ಕಾರೇತರ ಸಂಸ್ಥೆಗಳು, ಪ್ರಚಾರ ಅಭಿಯಾನಗಳು, ಇತ್ಯಾದಿಗಳನ್ನು ಒಳಗೊಂಡಿತ್ತು. ಇದು ರೋಗ ನಿಯಂತ್ರಣದಲ್ಲಿ ಬಹಳಷ್ಟು ಪರಿಣಾಮಕಾರಿಯಾಯಿತು. ಆ ಕಾಲದಲ್ಲಿ ಮುಜಾಫರ್‌ಪುರ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ, ವೈದ್ಯರು, ದಾದಿಗಳ ಹತ್ತಿರ ಗ್ಲೂಕೋಸ್ ಕಿಟ್ ಲಭ್ಯವಿತ್ತು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ದಿನ ರಾತ್ರಿ ತಪಾಸಣೆ ನಡೆಸುತ್ತಿದ್ದರು. ಕಾರಣ ಇಷ್ಟೇ. ಮಕ್ಕಳು ಬರೇ ಹೊಟ್ಟೆಯಲ್ಲಿ ಮಲಗುತ್ತಿದ್ದರೋ ಎಂದು ನೋಡಲು.

ಹಾಗಾಗಿ ಸರ್ಕಾರ ಈ ಕೂಡಲೇ ಬಡವರಿಗೆ ಸಹಾಯ ಹಸ್ತ ಚಾಚಬೇಕು. ಹಸಿದು ಮಲಗುವುದನ್ನು ತಪ್ಪಿಸಬೇಕು. ಆರೋಗ್ಯ ಸೇವೆಯನ್ನು ಉಚಿತಗೊಳಿಸಬೇಕು. ಉದ್ಯೋಗ ನೀಡುವುದಕ್ಕೆ ಮುಂದಾಗಬೇಕು. ಆಗ ಈ ರೋಗ ಬರದಂತೆ ತಡೆಯಬಹುದಾಗಿದೆ.

2019ರಲ್ಲಿ ತಪ್ಪೇನು?

ಸರಳವಾಗಿ ಹೇಳುವುದಾದರೆ, ಮೇಲೆ ಹೇಳಿದ ಎಸ್ಓಪಿ ನಿರ್ಲಕ್ಷ್ಯ, ತೀವ್ರ ಅಪೌಷ್ಟಿಕತೆ, ಬಿಸಿ ಗಾಳಿಯಿಂದ ಉಂಟಾದ ತೀವ್ರ ಸೆಖೆ, ಶುದ್ಧ ನೀರಿನ ಕೊರತೆ ಬಿಹಾರದಲ್ಲಿ ಈಗಿನ ಬಿಕ್ಕಟ್ಟಿಗೆ ಕಾರಣ.

ಬಿಹಾರದಲ್ಲಿ 44 ಶೇಕಡಾ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.  ಈ ಅಪೌಷ್ಟಿಕತೆಯು ಅವರ ರೋಗ ನಿರೋಧಕ ಶಕ್ತಿಯನ್ನು ಕುಗ್ಗುತ್ತದೆ.  ಈಗ ಸಾವಿಗೀಡಾದ ಮಕ್ಕಳಲ್ಲಿ ಬಹುತೇಕರು ತೀರಾ ಬಡ ಕುಟುಂಬದವರಾರಾಗಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ‘ಡೌನ್ ಟು ಅರ್ಥ್’ ಪತ್ರಿಕೆಯ ಒಂದು ವರದಿಯಲ್ಲಿ ಹೇಳಿರುವಂತೆ ಸಾಯುತ್ತಿರುವ ಮಕ್ಕಳಲ್ಲಿ 70 ಶೇಕಡಾ ಹೆಣ್ಣು ಮಕ್ಕಳು. ಅದರಲ್ಲೂ ಮುಖ್ಯವಾಗಿ ಅತ್ಯಂತ ದಲಿತರಾಗಿರುವ ಜಾತಿಗಳಿಗೆ ಸೇರಿದವರು. ಈ ತಡೆದುಯಬಹುದಾದ ಸಾವುಗಳಿಗೆ ಮುಖ್ಯ ಕಾರಣವೆಂದರೆ, ದಲಿತ ವರ್ಗಗಳ, ಅದಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳ ಕುರಿತು ಇರುವ ಅಸಡ್ಡೆ.

ಜೂನ್ 10ರಂದು ಒಂದೇ ದಿನ 20 ಮಕ್ಕಳು ಸತ್ತ ವರದಿ ಬಂದ ನಂತರವೇ ರಾಜ್ಯ ಘನಘೋರ ನಿದ್ದೆಯಿಂದ ಎಚ್ಚೆತ್ತುಕೊಂಡಿತು. ಆರೋಗ್ಯ ರಾಜ್ಯ ಮಂತ್ರಿ ಅಶ್ವಿನಿ ಚೌಧರಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾವುದೇ ಎಗ್ಗಿಲ್ಲದೇ ಚುನಾವಣಾ ಕಾರಣದಿಂದ ಈ ಬಾರಿ ಅರೋಗ್ಯ ಜಾಗೃತಿ ಕಾರ್ಯಕ್ರಮಗಳು ಸರಿಯಾಗಿ ನಡೆಯಲಿಲ್ಲ ಎಂದು ‘ಪ್ರಾಮಾಣಿಕ’ವಾಗಿಯೇ ಹೇಳಿಬಿಟ್ಟಿದ್ದಾರೆ. ಈ ಜಾಗೃತಿ ಕಾರ್ಯಕ್ರಮಗಳು ಎನ್ಓಪಿಯ ಮುಖ್ಯ ಭಾಗವಾಗಿದ್ದು, ಇದು ರಾಷ್ಟ್ರೀಯ ಸುದ್ದಿ ಆದ ಬಳಿಕವೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದಾರೆ.

ಉತ್ತರದಾಯಿತ್ವ ಎಲ್ಲಿದೆ? ಜನರಿಗೆ ನೀಡಬೇಕಾಗಿದ್ದ ಜನಶಕ್ತಿ ಮತ್ತು ಸಂಪನ್ಮೂಲಗಳನ್ನು ಚುನಾವಣೆ ಕಡೆಗೆ ತಿರುಗಿಸಲಾಗಿತ್ತು. ಇದರ ಸಂಪೂರ್ಣ ಜವಾಬ್ದಾರಿಯನ್ನು ಮುಂದಿನ ಐದು ವರ್ಷಗಳ ರಾಜ್ಯಭಾರಕ್ಕಾಗಿ ಚುನಾವಣಾ ಸಭೆಗಳಲ್ಲಿ ವ್ಯಸ್ತವಾಗಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಹಿಸಿಕೊಳ್ಳಬೇಡವೆ? ರಾಜ್ಯ ಸರಕಾರವು ಈ ಎಳೆಯ ಮಕ್ಕಳ ಅಪೌಷ್ಟಿಕತೆಯ ಪರಿಸ್ಥಿತಿಯನ್ನೂ ಬದಲಿಸುವಲ್ಲಿ ವಿಫಲವಾಗಿರುವುದನ್ನೂ ಒಪ್ಪಿಕೊಳ್ಳಬೇಡವೆ?

ಹೊಟ್ಟೆಗಿಲ್ಲದ ಮಕ್ಕಳು ಯಾವುದೇ ಹಣ್ಣು ತಿಂದರೆಂದು ಅವರನ್ನಾಗಲೀ, ಅವರ ಹೆತ್ತವರನ್ನಾಗಲೀ ಯಾರು ದೂರಲು ಸಾಧ್ಯವಿದೆಯೇ? ಯವುದೇ ಮಗು ಹೊಟ್ಟೆಗಿಲ್ಲದೇ ಮಲಗಲು ಬಿಡಬಾರದು ಎಂಬುದು ನಮ್ಮ ಜವಾಬ್ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...