Homeಮುಖಪುಟನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ಒಂಥರಾ ಪರೀಕ್ಷೆಗೂ ಮೊದಲೇ ಕ್ವೆಶನ್ ಪೇಪರ್ ಲೀಕ್! ಅದೂ ಟಫ್ ಕ್ವೆಶನ್ ಇರುವಂತಿಲ್ಲ

- Advertisement -
- Advertisement -

ಈ ವಿಡಿಯೋ ನೋಡಿ….
ಸಂದರ್ಶಕರಲ್ಲೊಬ್ಬರು ಕೇಳಿದ ಪ್ರಶ್ನೆ ಮೋದಿ ರೆಫರ್ ಮಾಡುತ್ತಿದ್ದ ಫೋಲ್ಡರಿನ ಒಂದು ಕಾಗದದ ಮೇಲ್ಭಾಗದಲ್ಲಿ ಯಥಾವತ್ತಾಗಿ ಪ್ರಿಂಟಾಗಿತ್ತು! ಅಂದರೆ, ಸಂದರ್ಶನಕ್ಕೂ ಮೊದಲೇ ಪ್ರಶ್ನೆಗಳು ಮೋದಿ ಬಳಿ ಇರುತ್ತವೆ. ಅದಕ್ಕೆ ಅವರು ಉತ್ತರ ರೆಡಿ ಮಾಡಿಕೊಂಡು ಬಂದಿರುತ್ತಾರೆ… ಒಂಥರಾ ಪರೀಕ್ಷೆಗೂ ಮೊದಲೇ ಕ್ವೆಶನ್ ಪೇಪರ್ ಲೀಕ್! ಅದೂ ಟಫ್ ಕ್ವೆಶನ್ ಇರುವಂತಿಲ್ಲ…. ಥೂ ಅಸಹ್ಯ…

ಫ್ಯಾಕ್ಟ್ ಚೆಕಿಂಗ್ ಸಂಸ್ಥೆ ಅಲ್ಟ್‍ನ್ಯೂಸ್‍ನ ಸಂಸ್ಥಾಪಕ ಪ್ರತೀಕ್ ಸಿನ್ಹಾರವರು, ನ್ಯೂ ನೇಷನ್ ಚಾನೆಲ್ ಮೋದಿಯೊಂದಿಗೆ ನಡೆಸಿದ ಸಂದರ್ಶನದ ವಿಡಿಯೋವನ್ನು ಸ್ಲೋ ಡೌನ್ ಮಾಡಿ, ಈ ವಿವರಗಳನ್ನು ತೆರೆದು ಇಟ್ಟಿದ್ದಾರೆ…
ಮೊದಲಿಗೆ , ಪ್ರತೀಕ್ ಸಿನ್ಹಾ ಈ ಕುರಿತಂತೆ ಮಾಡಿರುವ ಈ ಟ್ವೀಟ್‍ಗಳನ್ನು ಓದಿ:

ಪ್ರತೀಕ್ ಟ್ವೀಟ್: ‘ನಿರೂಪಕ (ಸಂದರ್ಶಕ) ದೀಪಕ್ ಚೌರಾಸಿಯಾ ಕೇಳುವ ಒಂದು ಪ್ರಶ್ನೆಯು, ಮೋದಿ ಉತ್ತರಿಸಲು ರೆಫರ್ ಮಾಡುತ್ತಿದ್ದ ಕಾಗದದ ಮೇಲ್ಭಾಗದಲ್ಲಿ ಅಕ್ಷರಶ: ಯಥಾವತ್ತಾಗಿ ಮುದ್ರಣವಾಗಿದೆ….’

ಪ್ರತೀಕ್ ಟ್ವೀಟ್2: ಇಲ್ಲಿರುವ ಸಂದರ್ಶನದ ವಿಡಿಯೊ ( ಸ್ಲೋ ಡೌನ್ ಮಾಡಿದ್ದೇವೆ) ನೋಡಿ… ಮೋದಿ ಉತ್ತರಿಸುವ ಮೊದಲು ತಮ್ಮಲ್ಲಿರುವ ಫೈಲ್‍ನಲ್ಲಿನ ಕಾಗದವೊಂದನ್ನು ನೋಡುತ್ತಿರುವ ದೃಶ್ಯ…

ಈಗ ವಿಷಯಕ್ಕೆ ಬರೋಣ. ಪತ್ರಿಕಾಗೋಷ್ಠಿಯನ್ನೇ ನಡೆಸದ ಪ್ರಧಾನಿ ಎಂಬ ಕುಖ್ಯಾತಿಯ ಪ್ರಧಾನಿ ನರೇಂದ್ರ ಮೋದಿ, ಈ ಚುನಾವಣಾ ಸುಗ್ಗಿಯಲ್ಲಿ ಹಲವು ಆಯ್ದ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ಕೊಡುತ್ತಲೇ ಇದ್ದಾರೆ. ಈ ಸಂದರ್ಶನಗಳ ಬಗ್ಗೆ ಇರುವ ಒಂದು ಸಾಮಾನ್ಯ ವಿಮರ್ಶೆ ಎಂದರೆ, ಸಂದರ್ಶಕರು ಯಾವುದೇ ‘ಟಫ್’ ಪ್ರಶ್ನೆ ಕೇಳುತ್ತಿಲ್ಲ ಎಂಬುದು…

ಈಗ ಇಲ್ಲಿ ತೋರಿಸುತ್ತಿರುವ ಒಂದು ವಿಡಿಯೋ ಕ್ಲಿಪ್ ಪ್ರಕಾರ, ನ್ಯೂಸ್ ನೇಷನ್ ಟಿವಿಗೆ ಕೊಟ್ಟ ಸಂದರ್ಶನದಲ್ಲಿ, ಇಲ್ಲಿ ಉಲ್ಲೇಖಿಸಿದ ನಿರ್ದಿಷ್ಟ ಪ್ರಶ್ನೆಯನ್ನು ಮೋದಿಗೆ ಸಂದರ್ಶನಕ್ಕೂ ಮೊದಲೇ ಕೊಡಲಾಗಿತ್ತು! ಅಲ್ಟ್‍ನ್ಯೂಸ್‍ನ ಪ್ರತೀಕ್ ಸಿನ್ಹಾ ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಮೋದಿಗೆ ಮೊದಲೇ ಪ್ರಶ್ನೆಗಳನ್ನು ಕಳಿಸಿ ಕೊಟ್ಟು ಸಂದರ್ಶನ ಮಾಡಲಾಗುತ್ತಿದೆ ಎಂಬುದರ ಎಳೆಯನ್ನು ನಮ್ಮ ಮುಂದೆ ಇಟ್ಟಿದ್ದಾರೆ.

ಸಂದರ್ಶನದಲ್ಲಿ ನಿರೂಪಕ ದೀಪಕ್ ಚೌರಾಸಿಯಾ, ‘ಇತ್ತೀಚಿನ ವರ್ಷಗಳಲ್ಲಿ ತಾವು ಯಾವುದಾದರೂ ಕವನ ಬರೆದಿದ್ದೀರಾ?’ ಎಂದು ಮೋದಿಗೆ ಪ್ರಶ್ನಿಸುತ್ತಾರೆ. ಮೋದಿ ತಮ್ಮ ಫೈಲ್‍ನಲ್ಲಿ ‘ತಮ್ಮ’ ಕವನದ ಪೇಜ್ ತೆಗೆದಾಗ, ಅದರ ಮೇಲ್ಭಾಗದಲ್ಲಿ ಚೌರಾಸಿಯಾ ಪ್ರಶ್ನೆ ಯಥಾವತ್ ಮುದ್ರಣವಾಗಿದ್ದನ್ನು ಈ ವಿಡಿಯೋ ತುಣುಕು ತೋರಿಸುತ್ತದೆ…

ನಿರೂಪಕ ಇತ್ತೀಚೆಗೆ ಬರೆದ ಒಂದು ಕವಿತೆಯನ್ನು ವಾಚಿಸಿ ಎಂದಾಗ, ಮೋದಿ ತಮ್ಮ ಫೈಲ್ ಪಡೆದು ಕವಿತೆ (ಮುದ್ರಿತ) ಇರುವ ಪೇಜ್ ತೆಗೆಯುತ್ತಾರೆ… ಇಲ್ಲೇ ಇರುವುದು ರಹಸ್ಯ! ಆಪೇಜ್‍ನ ಮೇಲ್ಭಾಗದಲ್ಲಿ ನಿರೂಪಕ ಕೇಳಿದ ಪ್ರಶ್ನೆ ಡಿಟ್ಟೋ ಪ್ರಿಂಟ್ ಆಗಿದೆ!
ಈ ಸಂದರ್ಶನ ಈಗಾಗಲೇ ಸಾಕಷ್ಟು ತಮಾಷೆಗೆ ಒಳಗಾಗಿದೆ. ಬಾಲಾಕೋಟ್ ದಾಳಿಯ ದಿನದಂದು, ‘ಮೋಡಗಳಿರುವುದರಿಂದ ಪಾಕಿಸ್ತಾನದ ರೆಡಾರ್‍ಗಳಿಗೆ ನಮ್ಮ ವಿಮಾನಗಳನ್ನು ಗುರುತಿಸಲಾಗದು, ಇದೇ ಸುಸಂದರ್ಭ…ಬೇಗನೇ ದಾಳಿ ಆರಂಭಿಸಿ’ ಎಂದು ಸೇನೆಯ ಉನ್ನತ ಅಧಿಕಾರಿಗಳಿಗೆ ತಾನು ಹೇಳಿದ್ದೆ, ಅದರಿಂದ ಕಾರ್ಯಾಚರಣೆ ಶುರುವಾಗಿತು ಎಂದು ಮೋದಿ ಹೇಳಿದ್ದನ್ನು ಜಗತ್ತೇ ಜೋಕ್ ತರಹ ನೋಡುತ್ತಿದೆ.

ಡಿಜಿಟಲ್ ಕ್ಯಾಮೆರಾ, ಇಮೇಲ್ ಮತ್ತು ಪರ್ಸ್‍ಲೆಸ್ ಮೋದಿ

ಅದೇ ಸಂದರ್ಶನದಲ್ಲೇ ಮೋದಿಯವರು 1987-89 ರಲ್ಲೇ ಡಿಜಿಟಲ್ ಕ್ಯಾಮೆರದಲ್ಲಿ ಫೋಟೊ ತೆಗೆದು ದೆಹಲಿಗೆ ಮೇಲ್ ಮಾಡಿದ್ದೆ ಎಂದು ಬೂಸಿ ಬಿಟ್ಟಿದ್ದಾರೆ. ಆಗ ಡಿಜಿಟಲ್ ಕ್ಯಾಮೆರಾವಾಗಲಿ, ಇಮೇಲ್ ಆಗಲಿ ಇರಲಿಲ್ಲ, ಮೋದಿ ಇನ್ನೊಂದು ಸುಳ್ಳು ಹೇಳಿದ್ದಾರೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕ ಟ್ರೋಲ್ ಗೆ ಒಳಗಾಗಿದೆ.

1997-98 ಎನ್ನುವ ಬದಲು ಮೋದೀಜಿ 1987-88 ಎಂದು ಬಾಯ್ತಪ್ಪಿ ಹೇಳಿದ್ದಾರೇನೋ ಎಂದು ಅವರ ಭಕ್ತರು ಈಗ ಸಬೂಬು ಕೊಡ್ತಾ ಇದ್ದಾರೆ. ಅಲ್ರಿ, ರೆಡಿಮೇಡ್ ಪ್ರಶ್ನೆ, ರೆಡಿಮೇಡ್ ಉತ್ತರದಲ್ಲೂ ಈ ರೀತಿ ಬಾಯ್ತಪ್ಪಿ ಹೇಳ್ತಾರಾ? ಇದು ಇನ್ನಷ್ಟು ಮೂರ್ಖತನದ ಸ್ಯಾಂಪಲ್ಲು, ಅದಕ್ಕಿಂತ ಹೆಚ್ಚಾಗಿ ಸುಳ್ಳನ ಎಡವಟ್ಟು!

ಆಯ್ತು ಅದು ಸರಿ ಎಂದಿಟ್ಟುಕಳ್ಳೋಣ….ಅದೇ ಸಂದರ್ಶನದಲ್ಲಿ ಆ ಸಂದರ್ಭದಲ್ಲಿ ತಮಗೆ ಒಂದು ಪರ್ಸ್ ಖರೀದಿಸುವಷ್ಟೂ ಕಾಸು ಇರಲಿಲ್ಲ ಎಂದಿದ್ದಾರೆ. ಆದರೆ 1995ರ ಸುಮಾರಿಗೆ ಒಂದು ಡಿಜಿಟಲ್ ಕ್ಯಾಮೆರಾದ ದರ 5 ಸಾವಿರ ರೂ.ಗಿಂತ ಹೆಚ್ಚಿತ್ತು. 1995ರಲ್ಲಿ ವಿಎಸ್‍ಎನ್‍ಎಲ್‍ನಿಂದ ಒಂದು ಶೆಲ್ ಇಮೇಲ್ ಅಕೌಂಟ್ ಪಡೆಯಲು ವಾರ್ಷಿಕ 5 ಸಾವಿರ ರೂ ಮೇಲೆ ಹಣ ನೀಡಬೇಕಿತ್ತು…ಆಗ ಟಿಸಿಪಿ/ಐಪಿ ಅಥವಾ ಡಿಜಿಟಲ್ ಅಕೌಂಟಿಗೆ ವಾರ್ಷಿಕ 15 ಸಾವರಿದಷ್ಟು ಫೀಸ್ ತೆರಬೇಕಿತ್ತು… ವಿಎಸ್‍ಎನ್‍ಎಲ್‍ಗೂ ಮೊದಲು 1990ರ ದಶಕದ ಮಧ್ಯಭಾದಲ್ಲಿ ‘ಅಕ್ಸೆಸ್ ಮೇಲ್’ ಇಮೇಲ್ ಸೇವೆ ಕೊಡುತ್ತಿತ್ತಾದರೂ, ಅದು ಕೆಲವೇ ಬುಲೆಟಿನ್ ಬೋರ್ಡ್ ಸೇವೆಗಳನ್ನು ಒಳಗೊಂಡಿತ್ತು…
ಸಾರಾಂಶ: ಒಂದು ಸುಳ್ಳು, ಅದರ ಹಿಂದೊಂದು ಸುಳ್ಳು…. ಮೋದಿ ಸಮರ್ಥಿಸಿಕೊಳ್ಳಲು ಹೋದವರೇ ನಾಚಿಕೆ ಪಡಬೇಕಾದ ಸ್ಥಿತಿ!

ಅಂದರೆ, ತಮಗೆ ಬೇಕಾದ ಮಾಧ್ಯಮಗಳಿಗೆ ಸಂದರ್ಶನ ನೀಡುವ ಡೇರ್‍ಡೆವಿಲ್ ಮೋದಿ, ಮೊದಲೇ ಸಂದರ್ಶಕರಿಂದ ಪ್ರಶ್ನೆ ಪಡೆದಿರುತ್ತಾರೆ. ಅಲ್ಲಿ ಯಾವ ಕಠಿಣ ಪ್ರಶ್ನೆಗಳೂ ಇರುವುದಿಲ್ಲ. ಮೋದಿ ಬಯಸಿದ ಪ್ರಶ್ನೆಗಳೇ ಇರುತ್ತವೆ. ಅದಕ್ಕ ಮೋದಿ ಉತ್ತರಗಳನ್ನು ಸಿದ್ಧ ಮಾಡಿಕೊಡು ಬಂದಿರುತ್ತಾರೆ!

ಇದು ಪಕೋಡಾ ಪ್ರಧಾನಿ ಪೇಯ್ಡ್ ಮೀಡಿಯಾಕ್ಕೆ ಪೇಪ್ಪರಮೆಂಟು ತಿನ್ನಿಸುವ, ಪೇಯ್ಡ್ ಮೀಡಿಯಾ ವೀಕ್ಷಕರು/ಓದುಗರನ್ನು ವಂಚಿಸುವ ಪರಿ… ಕಳೆದ 5 ವರ್ಷಗಳಿಂದ ಇದೇ ನಡೆದಿದೆ ಅಲ್ಲವೇ?
ಪೂರ್ಣ ಸಂದರ್ಶನಕ್ಕಾಗಿ ಈ ಕೆಳಗಿನ ವಿಡಿಯೋ ನೋಡಿ:

(ಆಧಾರ: thescroll.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....