Homeಅಂಕಣಗಳುಮೋದಿಜಿಯ ಸಮುದ್ರ ಗೀತೆಗಳು

ಮೋದಿಜಿಯ ಸಮುದ್ರ ಗೀತೆಗಳು

- Advertisement -
- Advertisement -

| ಥೂತ್ತೇರಿ ಯಾಹೂ |

ಭಾಜಪದ ಮೊದಲ ಪ್ರಧಾನಿ ವಾಜಪೇಯಿ ಆಗಾಗ್ಗೆ ಕವನ ಕೆರೆಯುತ್ತಿದ್ದರು. ಕವಿ ಹೃದಯವೂ ಅವರಿಗಿತ್ತು. ಆದ್ದರಿಂದ ಬಿಜೆಪಿ-ಕವಿ ಎನಿಸಿದ್ದರು. ಅವರಿಗೆ ನಾನೇನು ಕಡಿಮೆ ಎಂದು ಸೆಡ್ಡು ಹೊಡೆದಿರುವ ಈಗಿನ ಪ್ರಧಾನಿ ನರೇಂದ್ರ ಮೋದಿಯೂ ಪದಬೇಧಿ ಮಾಡಿಕೊಂಡು ಅದನ್ನೇ ಕಾವ್ಯವೆಂದು ಪರಿಗಣಿಸಿ ಬಿಜೆಪಿ ಕಾವ್ಯಪ್ರಿಯರಿಗೆ ಬಡಿಸಿದ್ದಾರಂತಲ್ಲಾ. ಅದನ್ನ ಕನ್ನಡ ಕರಪತ್ರ ಎಂಬ ಪತ್ರಿಕೆ ಪ್ರಕಟಿಸಿರುವುದಲ್ಲದೆ ಮೋದಿಯ ಪ್ರಾಮಾಣಿಕ ಅಭಿವ್ಯಕ್ತಿಯನ್ನ ತಿರುಚಿ ಪ್ರಕಟಿಸಿದೆಯಲ್ಲಾ. ವಾಸ್ತವವಾಗಿ ಮೋದಿ ಮೂಲಪ್ರತಿ ಹೇಗಿತ್ತು ಎಂಬ ಊಹೆಯ ಸಾಲುಗಳನ್ನು ನ್ಯಾಯಪಥ ಓದುಗರಿಗೆ ಕೊಡುವುದು ನಮ್ಮ ಧರ್ಮ. ಇದು ಕವಿಯೊಬ್ಬನ ಕಾವ್ಯದ ಸಾಲುಗಳ ನಡುವಿನ ಅಕ್ರಮ ಪ್ರವೇಶವಲ್ಲ. ಕಳೆದ ಶತಮಾನದಲ್ಲೇ ವರಕವಿ ಬೇಂದ್ರೆಯವರು ವಾಚನಕ್ಕೆ ಕಳುಹಿಸಿದ ಕವನದ ಸಾಲುಗಳಲ್ಲಿ ಕಡೆಯ ಕೆಲಸಾಲುಗಳು ಬಿಟ್ಟು ಹೋಗಿದ್ದು ಅದನ್ನ ಊಹಿಸಿ ಬರೆದು ಪೂರ್ಣಗೊಳಿಸಿದ ಕೀರ್ತಿ, ಕೀರ್ತಿನಾಥ ಕುರ್ತುಕೋಟಿಯವರದ್ದು. ಅಂತಹ ಭಾಗ್ಯ ಯಾಹುಗೆ ದೊರಕಿದ್ದು ಭಿನ್ನದೊಳಗಿನ ಸೌಭಾಗ್ಯವಲ್ಲವೆ, ಥೂತ್ತೇರಿ!

“ಮೋದಿಯ ಪದಬೇದಿ”

1

ನಮಸ್ತೇ ಸದಾ ವತ್ಸಲೇ ಸಾಗರ;
ನೀನು ಧೀರ ಗಂಭೀರ, ಆದರೆ ನಾನು,
ಸೀರ, ಬೀರ, ಚ್ವೌರ, ಕ್ವಾರ,
ನೀನು ನೀಲಿ
ನಮ್ಮ ಸಂಘ ಹಳದಿ
ನೀನು ಜಗತ್ತಿಗೆ ಜೀವನ ನೀಡುವೆ
ನಾನು ಸಂಘವೆಂಬ ವಿಷವೃಕ್ಷಕ್ಕೆ
ಹಾಲೆರೆಯುವೆ.
ಸಮುದ್ರದ ಮೇಲೆ ಕೋಲಾಹಲವಿದೆ,
ಭಾರತದ ಒಳಗೆ ಹಾಲಾಹಲವಿದೆ,
ನೀನು ವಿಚಲಿತನಾಗಲ್ಲ,
ನಾವು ಸದಾ ವಿಚಲಿತರು.
ಗರ್ಜಿಸುವ ಕನ್ನಯ್ಯನನ್ನು ಕಂಡರೆ
ನಮ್ಮವರು ಭಯಭೀತರಾಗುತ್ತಾರೆ.
ಸಾಬರನ್ನು ಕಂಡರೆ ಸಣ್ಣಗೆ ನಡುಗುತ್ತಾರೆ.
ನಿನ್ನೊಳಗೆ ಅಡಗಿರುವ ಶಾರ್ಕುಗಳಂತೆ
ಭಾರತದಲ್ಲಿ ಅಡಿಗಿದ್ದಾರವರು.

2
ನಮಸ್ತೇ ಸದಾವತ್ಸಲೇ ಸಾಗರ;
ನೀನು ಶಕ್ತಿಭಂಡಾರ.
ನಾನು ಕುಯುಕ್ತಿ ಬಿಡಾರ,
ನೀನು ಯಾವತ್ತೂ ನಿನ್ನ ಪರಿಧಿಯಲ್ಲಿರುತ್ತೀ.
ನಾವು ಸದಾ ಪರಿಧಿ ಮೀರುತ್ತೇವೆ,
ನೀನು ಯಾವತ್ತೂ ದೊಡ್ಡತನದ ಬೋಧನೆ ಮಾಡುತ್ತಿ,
ನಾವು ಪ್ರತಿಬಾರಿ ಸಣ್ಣತನದಲ್ಲೇ ವಾದಿಸುತ್ತೇವೆ.
ನಿನ್ನ ಅಲೆಗಳಲ್ಲಿ ಜೀವನ ಸಂದೇಶವಿದೆ,
ನಮ್ಮ ಮಾತುಗಳಲ್ಲಿ ಸರ್ವನಾಶದ ಆಶಯವಿದೆ.
ನಿನಗೆ ಯಾವ ಆಸೆಯೂ ಇಲ್ಲ,
ಭರತಖಂಡವನ್ನು ಹಿಂದೂ ರಾಷ್ಟ್ರ ಮಾಡುವ ದುರಾಶೆ ನಮ್ಮನ್ನು ಆಕ್ರಮಿಸಿದೆ.

3
ನಮಸ್ತೆ ಸದಾವತ್ಸಲೇ ಸಾಗರ;
ನಡೆಯುತ್ತಲೇ ಜೀವನ ನಡೆಸುತ್ತಿ,
ನಾನು ತಿರುಗುತ್ತಲೇ ಜೀವನ ನಡೆಸುತ್ತಿದ್ದೇನೆ.
ತಿರುಗಲು ನನಗೆ ಆಯಾಸವೇ ಇಲ್ಲ
ಏಕೆಂದರೆ ನನಗೆ ಮನೆ ಎಂಬುದೇ ಇಲ್ಲ,
ಅದಕ್ಕೆ ವಿದೇಶಗಳ ತಿರುಗುತ್ತೇನೆ.
ನನ್ನ ದೇಶದಲ್ಲೇ ತಿರುಗಿದರೆ
ಅತಿವೃಷ್ಠಿ ಅನಾವೃಷ್ಠಿಗೆ ತುತ್ತಾದವರ
ಅತಿಯಾದ ಬೇಡಿಕೆ ನಿಂದನೆಯ ನರಕ,
ಅದಕ್ಕೆ ವಿದೇಶಗಳ ತಿರುಗುತ್ತೇನೆ.
ನಾಯಿಗೆ ಕೆಲಸವಿಲ್ಲ,
ಕೂರಲು ಸಮಯವಿಲ್ಲ ಎಂಬಂತೆ,
ನನ್ನ ಅಲೆಮಾರಿ ಸಂದೇಶ
ಅನವರತ-ಅನವರತ.

4
ಓಂ ನಮೋ ಸದಾವತ್ಸಲೇ ಸಾಗರ:
ಅಲೆಯಿಂದ ಅಲೆಗಳು ಹೊರಬೀಳುವುದಿಲ್ಲ.
ಇದೇ ಸಂಘಕ್ಕೆ ಆದರ್ಶ,
ಬಿದ್ದರೂ ಉಪ ಅಲೆಗಳ ಆಶ್ರಯ,
ಹಿಂದೂ ಮಹಾಸಭಾ, ವಿಶ್ವಹಿಂದೂ ಪರಿಷತ್,
ಆರೆಸ್ಸೆಸ್ಸು, ಭಜರಂಗದಳದ ಅಲೆಗಳೆಲ್ಲಾ
ಸಂಘ ಸಂಯಮಗೊಂಡ ಸಮುಚ್ಛಯಗಳು.

5
ನಮಸ್ತೆ ಸದಾವತ್ಸಲೇ ಸಾಗರ:
ಸೂರ್ಯನ ಜೊತೆಗೆ ನಿನ್ನ ಗೆಳೆತನ ಹಳೆಯದು,
ನನ್ನ ಸಂಘ ಪರಿವಾರದ ಗೆಳೆತನವೂ ಹಳೆಯದು.
ಜೀವಂತ ಜಲ ನೀನು,
ನಿನ್ನನ್ನು ಕುಡಿದು, ಹೊರಬಿಡುವ ಜನ್ಮವಷ್ಟೇ ನನ್ನದು.
ನೀನು ಆಗಸವನ್ನ ಚುಂಬಿಸುತ್ತೀ,
ನಾನೇನು ಚುಂಬಿಸಲೀ,
ಚುಂಬನದಿಂದ ವಂಚಿತ ನಾನು.
ನೀನು ಮೋಡವಾಗಿ ಮಳೆ ಸುರಿಸುತ್ತಿ,
ನಾನು ಜನಸಾಗರದ ಮೇಲೆ ಸುಳ್ಳು ಸುರಿಸುತ್ತೇನೆ.
ನೀನು ಮಧುರಭಾವ ಇಟ್ಟುಕೊಂಡಿದ್ದಿ,
ಸಂಘ ಸೇರಿದಾಗಲೇ ನನ್ನ ಮಧುರಭಾವ ಮಾಯವಾಯ್ತು,
ಈಗೇನಿದ್ದರೂ ಮಧುರ ಕಾಶ ತಲೆನೋವಷ್ಟೇ..

6
ಓಂ ನಮೋ ಸದಾವತ್ಸಲೇ ಸಾಗರ:
ಜೀವನದ ಈ ಸೌಂದರ್ಯ ನೀಲಕಂಠನ ಆದರ್ಶ ನಿನ್ನದು,
ಜೀವನದ ಸೌಂದರ್ಯ ಹಾಳುಮಾಡುವುದೇ ನಮ್ಮ ಆದರ್ಶ.
ನೀನು ಭೂಮಿಯ ವಿಷವನ್ನು ಕುಡಿಯುತ್ತಿ,
ನಾವು ಭರತ ಖಂಡಕೆ ವಿಷ ಉಣಿಸುತ್ತೇವೆ.
ನೀನು ಲವಣಾಂಶವನ್ನು ನಿನ್ನಲ್ಲೇ ಇಟ್ಟುಕೊಳ್ಳುವೆ,
ನಾವು ತಡೆಯಲಾಗದೆ ಆಗಾಗ್ಗೆ ಬಿಟ್ಟುಬಿಡುತ್ತೇವೆ.
ನೀನು ಜಗತ್ತಿಗೆ ಹೊಸ ಜೀವನ ನೀಡುತ್ತಿ,
ನಾವು ಜಗತ್ತಿಗೆ ಹೊಸ ನರಕ ಕೊಡುತ್ತಿದ್ದೇವೆ.
ನೀನು ಜೀವನ ನಡೆಸುವ ಮರ್ಮ ನೀಡುತ್ತಿ,
ನಾವು ಜೀವನ ಸರ್ವನಾಶ ಮಾಡುವ ಕರ್ಮ ನೀಡುತ್ತೇವೆ.
ಹೇ ಸಮುದ್ರವೆ, ನಿನಗೆ ನನ್ನ ಶತಸಹಸ್ರ
ಪ್ರಣಾಮಗಳು.
ಥೂ…. ಥೂ….. ಥೂತ್ತೇರಿ!!!

ಸೆ: ಕನ್ನಡ ಕರಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...