Homeಮುಖಪುಟಅಮ್ಮಂದಿರ ದಿನ | ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ಮುಂಬೈಯ 7 ಆಸ್ಪತ್ರೆಗಳು

ಅಮ್ಮಂದಿರ ದಿನ | ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ಮುಂಬೈಯ 7 ಆಸ್ಪತ್ರೆಗಳು

- Advertisement -
- Advertisement -

ದೇಶವು ಅಮ್ಮಂದಿರ ದಿನ ಆಚರಿಸುತ್ತಿದ್ದಂತೆ, ಗರ್ಭಿಣಿ ಮಹಿಳೆಯೊಬ್ಬರಿಗೆ ಕೊರೊನಾ ಕಾರಣ ನೀಡಿ ಏಳು ಆಸ್ಪತ್ರೆಗಳು  ಚಿಕಿತ್ಸೆ ನಿರಾಕರಿಸಿದ ಘಟನೆ ಮುಂಬೈಯಲ್ಲಿ ನಡೆದಿದೆ.

ಕೊರೊನಾ ಸೋಂಕಿರಾಗಿರುವ ಮಹಿಳೆಯೊಬ್ಬರಿಗೆ ಮುಂಬೈಯ ಏಳು ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದ್ದು, ನಂತರ ಆಸ್ಪತ್ರೆಯೊಂದಕ್ಕೆ ದಾಖಲಾದ ಮಹಿಳೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಹಿಳೆಗೆ ಗರ್ಭಧಾರಣೆಯ ಕೊನೆಯ ಹಂತದಲ್ಲಿ ಕೊರೊನ ಸೋಂಕು ಇರುವುದು ಪರೀಕ್ಷಿಸಲಾಗಿತ್ತು. ಆದಾಗ್ಯೂ, ಅಮ್ಮಂದಿರ ದಿನ ಜನಿಸಿದ ಅವರ ಮೂರೂ ನವಜಾತ ಮಕ್ಕಳಿಗೆ ಕೊರೊನಾ ವೈರಸ್ ಸೋಂಕಿಲ್ಲವೆಂದು ಡೃಡಪಟ್ಟಿದೆ.

ಗರ್ಭಧಾರಣೆಯ ಸಮಯದಲ್ಲಿ ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದ ಆಸ್ಪತ್ರೆ ಇದ್ದಕ್ಕಿದ್ದಂತೆ ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದವು. ಇದರಿಂದಾಗಿ ಮಹಿಳೆಯೂ ಒಟ್ಟು ಏಳು ಖಾಸಗಿ ಆಸ್ಪತ್ರೆಗನ್ನು ಸಂಪರ್ಕಿಸಿದ್ದರೂ ಆಸ್ಪತ್ರೆಗಳು ಚಿಕಿತ್ಸೆಯನ್ನು ನಿರಾಕರಿಸಿದವು.

ಅಂತಿಮವಾಗಿ, ಮುಂಬೈಯ “ನಾಯರ್ ಆಸ್ಪತ್ರ” ಅವರಿಗೆ ಚಿಕಿತ್ಸೆ ನೀಡಲು ಒಪ್ಪಿಕೊಂಡಿದೆ. ನಾಯರ್ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಿಭಾಗದ ಡಾ.ಗಣೇಶ್ ಶಿಂಧೆ ಮಾತನಾಡಿ “ಮಹಿಳೆ ಮತ್ತು ಅವಳ ಕುಟುಂಬ ಪವಾಡದಂತೆ ನಡೆದ ಘಟನೆಗಳಿಗೆ ಖುಷಿಗೊಂಡಿದ್ದಾರೆ ಅಲ್ಲದೆ ಇದು ನಮ್ಮ ಸಿಬ್ಬಂದಿಗಳಿಗೂ ಸಂತೋಷದ ಸಂದರ್ಭವಾಗಿದೆ.” ಎಂದು ಹೇಳಿದ್ದಾರೆ.

ದೇಶದಲ್ಲೆ ಅತೀ ಹೆಚ್ಚು ಕೊರೊನಾ ರೋಗಿಗಳಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದಾಗಿದೆ. ಇಲ್ಲಿ ಇದುವರೆಗೂ 20 ಸಾವಿರಕ್ಕಿಂತಲೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದೆ ಹಾಗೂ 750 ಕ್ಕಿಂತಲೂ ಸಾವುಗಳಾಗಿದೆ.


ಇದನ್ನೂ ಓದಿ: ಕೊರೊನಾ ಭಯಕ್ಕೆ ಚಿಕಿತ್ಸೆ ನಿರಾಕರಿಸಿದ ಮುಂಬೈನ ಐದು ಆಸ್ಪತ್ರೆಗಳು: ವ್ಯಕ್ತಿ ಸಾವು


ವಿಡಿಯೊ ನೋಡಿ: ಸದ್ದು… ಈ ಸುದ್ದಿಗಳೇನಾದವು?-6: ‘….ವಾಹಿನಿ’ ಮಾಧ್ಯಮಗಳು ಹೇಳದ ಮಾಹಿತಿಗಳು, ಕೇಳದ ಪ್ರಶ್ನೆಗಳು ಇಲ್ಲಿವೆ.


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಾಗರೀಕತೆಯ ಸವಲತ್ತುಗಳು ಹೆಚ್ಚಿದಂತೆಲ್ಲ ಮನುಷ್ಯ ಮಾನವೀಯತೆಯನ್ನು ಮರೆಯುತ್ತಿದ್ದಾನೆ. ಇದು ಆಗಬಾರದು.

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...