ಆಲ್ ಇಂಡಿಯಾ ಬಾಜ್ಮ್-ಎ-ರೆಹಮತ್-ಎ-ಆಲಂ ಸಂಘಟನೆಯು, ಮುಹಮ್ಮದ್ ದೀಪಕ್ ಎಂದೇ ಜನಪ್ರಿಯರಾಗಿರುವ ದೀಪಕ್ ಕುಮಾರ್ ಅವರಿಗೆ 2026 ರ ರೆಹಮತ್-ಎ-ಆಲಂ ಶಾಂತಿ ಪ್ರಶಸ್ತಿಯನ್ನು ಘೋಷಿಸಿದೆ.
ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯಾದ ಮಿಲಾದ್-ಉನ್-ನಬಿಯನ್ನು ಗುರುತಿಸಲು ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು.
ಉತ್ತರಾಖಂಡದ ಕೋಟ್ದ್ವಾರದ ನಿವಾಸಿ ದೀಪಕ್, ಹಿಂದುತ್ವ ಗುಂಪಿನ ದಾಳಿಗೆ ಒಳಗಾಗಿದ್ದ ವೃದ್ಧ ಮುಸ್ಲಿಂ ಅಂಗಡಿ ಮಾಲೀಕನ ಬೆಂಬಲಕ್ಕೆ ನಿಂತ ನಂತರ ದೇಶದ ಗಮನ ಸೆಳೆದರು. ಹಿಂದುತ್ವ ಗುಂಪನ್ನು ಎದುರಿಸಿದ್ದ ಅವರು ತಮ್ಮನ್ನು “ಮುಹಮ್ಮದ್ ದೀಪಕ್” ಎಂದು ಹೇಳಿಕೊಂಡಿದ್ದರು. ಅವರ ನಡೆಯು ಏಕತೆ ಮತ್ತು ಸಹ ನಾಗರಿಕರಿಗೆ ಗೌರವದ ಸಂಕೇತವಾಗಿ ವ್ಯಾಪಕ ಗಮನ ಸೆಳೆಯಿತು.
ರೆಹಮತ್-ಎ-ಆಲಂ ಶಾಂತಿ ಪ್ರಶಸ್ತಿಯು ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು, ಸಮುದಾಯಗಳಲ್ಲಿ ಪರಸ್ಪರ ಗೌರವವನ್ನು ಪ್ರೋತ್ಸಾಹಿಸಲು ಮತ್ತು ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಕೆಲಸ ಮಾಡುವ ವ್ಯಕ್ತಿಗಳನ್ನು ಗುರುತಿಸುತ್ತದೆ ಎಂದು ಸಂಘಟಕರು ಹೇಳಿದ್ದಾರೆ.
ದೀಪಕ್ ಅವರ ಕ್ರಮಗಳು ಸಹಾನುಭೂತಿ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದೆ. ಇದು ಇಸ್ಲಾಂ ಧರ್ಮದ ಬೋಧನೆಗಳು ಮತ್ತು ಮಾನವೀಯತೆಯ ವಿಶಾಲ ಸಂದೇಶದ ಕೇಂದ್ರಬಿಂದುವಾಗಿದೆ ಎಂದು ಅವರು ವಿವರಿಸಿದರು.
ಈ ಪ್ರಶಸ್ತಿಯು ಮಿಲಾದ್-ಉನ್-ನಬಿಯನ್ನು ಸ್ಮರಿಸಲು ಮತ್ತು ಶಾಂತಿ, ಸಹೋದರತ್ವ ಮತ್ತು ಕೋಮು ಸಾಮರಸ್ಯದ ಮೌಲ್ಯಗಳನ್ನು ಸಾರುವ ಕಾರ್ಯಕ್ರಮಗಳ ಭಾಗವಾಗಿದೆ.


