Homeಕರ್ನಾಟಕ'ಧರ್ಮಸ್ಥಳಕ್ಕೆ ಹೋಗಿದ್ದ ನನ್ನ ಮಗಳು ಕಾಣೆಯಾದ್ಲು, ದಯವಿಟ್ಟು ನ್ಯಾಯ ಕೊಡಿಸಿ': ಅನನ್ಯ ಭಟ್ ತಾಯಿ ಕಣ್ಣೀರು

‘ಧರ್ಮಸ್ಥಳಕ್ಕೆ ಹೋಗಿದ್ದ ನನ್ನ ಮಗಳು ಕಾಣೆಯಾದ್ಲು, ದಯವಿಟ್ಟು ನ್ಯಾಯ ಕೊಡಿಸಿ’: ಅನನ್ಯ ಭಟ್ ತಾಯಿ ಕಣ್ಣೀರು

"ಬೆಳ್ತಂಗಡಿ ಠಾಣೆಗೆ ಹೋದಾಗ ದೂರು ಸ್ವೀಕರಿಸಿಲ್ಲ. ಧರ್ಮಸ್ಥಳದಲ್ಲಿ ಯಾರೋ ನನ್ನನ್ನು ಕೂಡಿ ಹಾಕಿ ಥಳಿಸಿದ್ರು. ಮಗಳ ಅಸ್ತಿ ಸಿಕ್ರೆ ಶ್ರಾದ್ಧ ಮಾಡಿ ಪ್ರಾಣ ಬಿಡ್ತೀನಿ"

- Advertisement -
- Advertisement -

ಧರ್ಮಸ್ಥಳದಲ್ಲಿ  2003ರಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ನಾಪತ್ತೆ ಸಂಬಂಧ ದೂರು ನೀಡಲು ತಾಯಿ ಸುಜಾತಾ ಭಟ್ ಮಂಗಳವಾರ (ಜು.15) ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ.ಅರುಣ್ ಕೆ ಅವರನ್ನು ಭೇಟಿಯಾಗಿದ್ದರು.

ಪ್ರಕರಣ ಈಗಿನ ಧರ್ಮಸ್ಥಳ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಅಲ್ಲಿಯೇ ದೂರು ನೀಡುವಂತೆ ಎಸ್ಪಿ ಸಲಹೆ ನೀಡಿದ್ದರು. ಅದರಂತೆ, ರಾತ್ರಿ 8 ಗಂಟೆಯ ಸುಮಾರಿಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ಸಬ್‌ ಇನ್‌ಸ್ಪೆಕ್ಟರ್ ಸಮರ್ಥ್ ಆರ್.ಗಾಣಿಗೇರ ಅವರಿಗೆ ಸುಜಾತಾ ಭಟ್ ದೂರು ನೀಡಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದು, ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಸಂಜೆ ವಕೀಲ ಮಂಜುನಾಥ್  ಜೊತೆ ಎಸ್ಪಿಯನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಸುಜಾತಾ ಭಟ್, ” ನನ್ನ ಮಗಳು 2003ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆಂದು ಹೋದಾಕೆ ಕಾಣೆಯಾಗಿದ್ದಳು. ಆಗ ನಾನು ಕೋಲ್ಕತ್ತಾದಲ್ಲಿ ಉದ್ಯೋಗದಲ್ಲಿದ್ದೆ. ಅಲ್ಲಿಂದ ಬರುವಾಗ ಎರಡು ದಿನ ಕಳೆದಿತ್ತು. ಬಂದು ಮಗಳನ್ನು ಹುಡುಕಿದೆ. ಆದರೆ, ಆಕೆ ಸಿಗಲಿಲ್ಲ. ಹಾಗಾಗಿ, ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದೆ. ಆಗ ಬೆಳ್ತಂಗಡಿ ಪೊಲೀಸರು “ನೀನೆ ಹುಡ್ಕೋ ಹೋಗಮ್ಮ, ನಿನ್ನ ಮಗಳು ಯಾವನ್ ಜೊತೆಗೋ ಹೋಗಿರಬಹುದು. ನೀನೇ ಹುಡ್ಕೋ, ನಾವು ಹುಡುಕಿ ಕೊಡಲು ನಮಗೇನ್ ಬೇರೆ ಕೆಲ್ಸಾ ಇಲ್ವಾ, ಅದೇ ಕೆಲ್ಸಾನಾ?” ಎಂದು ಗದರಿಸಿ ನನ್ನ ಕಳಿಸಿದರು” ಎಂದು ಹೇಳಿದರು.

ಮುಂದುವರಿದು, “ನಾನು ಬೇರೆ ದಾರಿ ತೋಚದೆ ಧರ್ಮಸ್ಥಳಕ್ಕೆ ಹೋದೆ. ಅಲ್ಲಿ ಮಗಳಿಗಾಗಿ ಹುಡುಕಾಡಿ ಒಂದು ಕಡೆ ಕುಳಿತಿದ್ದೆ. ಆಗ ಯಾರೋ ನಾಲ್ಕು ಜನರು ಬಂದು “ನಿಮ್ಮ ಮಗಳನ್ನು ನೋಡಿದ್ದೀವಿ, ಹುಡುಕಿ ಕೊಡ್ತೀವಿ” ಎಂದು ಕರೆದುಕೊಂಡು ಹೋಗಿ ಕೂಡಿ ಹಾಕಿದ್ರು. ನಂತರ ಮರುದಿನ ಬೆಳಿಗ್ಗೆ ಸುಮಾರು 5 ಗಂಟೆಯ ಹೊತ್ತಿಗೆ ನನ್ನನ್ನು ಹೊರಗಡೆ ಕರೆದುಕೊಂಡು ಬಂದು ಬಿಟ್ರು. ನನ್ನನ್ನು ಕೂಡಿ ಹಾಕಿದವರು ನನ್ನ ತಲೆಗೆ ಹೊಡೆದಿದ್ರು. ಅದರ ಮಾರ್ಕ್ ಈಗಲೂ ಇದೆ. ನನ್ನನ್ನು ಕಟ್ಟಿ ಹಾಕಿದ್ದ ಮಾರ್ಕ್‌ಗಳು ಕೈಯ್ಯಲ್ಲಿ ಇವೆ. ಎರಡೂ ಕೈಗಳಲ್ಲಿ ಮಾರ್ಕ್‌ಗಳು ಇವೆ, ಕೈ ಬೆಂಡಾಗಿವೆ” ಎಂದು ತಲೆ ಮತ್ತು ಕೈಗಳನ್ನು ಸುಜಾತಾ ಭಟ್ ಮಾಧ್ಯಮಗಳ ಮುಂದೆ ತೋರಿಸಿದರು.

“ಹೊಡೆದವರು ಯಾರು? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಭಟ್, “ಯಾರು ಅಂತ ನನಗೆ ಗೊತ್ತಿಲ್ಲ. ಅವರು ಹೊಡೆದಾಗ ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಆ ಬಳಿಕ ಯಾರೋ ವ್ಯಕ್ತಿ ಬಂದು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಅನಿಸುತ್ತೆ. ನಾನು ಕೋಮಾಗೆ ಹೋಗಿದ್ದೆ. ಎಚ್ಚರ ಬಂದಾಗ ಆಸ್ಪತ್ರೆಯಲ್ಲಿ ಇದ್ದೆ. ನನ್ನನ್ನು ಆವತ್ತು ಆಸ್ಪತ್ರೆಗೆ ಸೇರಿಸಿದ ಆ ಪುಣ್ಯಾತ್ಮನಿಗೆ ನಾನು ಚಿರಋಣಿ” ಎಂದರು.

ಮಗಳು ಯಾರ ಜೊತೆ ದೇವಸ್ಥಾನಕ್ಕೆ ಹೋಗಿದ್ದರು? ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, “ಆಕೆ ಗೆಳೆಯರೊಂದಿಗೆ ಹೋಗಿರಬಹುದು. ಆ ಬಳಿಕ ಕಾಣೆಯಾಗಿದ್ದಾಳೆ ” ಎಂದು ತಿಳಿಸಿದರು.

“ಮೊನ್ನೆ ಸಾಕ್ಷಿ ದೂರುದಾರ ಹೇಳಿದಂತೆ ಪೊಲೀಸರು ಹುಡುಕಿದಾಗ ತಲೆ ಬುರುಡೆ ಸಿಕ್ಕಿದೆ. ಅದನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ಅದು ನನ್ನ ಮಗಳದ್ದಾಗಿರಬಹುದು ಅಥವಾ ನನ್ನ ಮಗಳದ್ದು ಅದೇ ರೀತಿ ಸಿಗಬಹುದು ಎಂಬ ಆಶಾ ಭಾವನೆಯೊಂದಿಗೆ ಎಸ್ಪಿಗೆ ದೂರು ಕೊಟ್ಟಿದ್ದೇನೆ. ನನ್ನ ಮಗಳ ಅಸ್ತಿ ಏನಾದರು ಸಿಕ್ಕಿದರೆ, ಸನಾತನ ಬ್ರಾಹ್ಮಣ ಹಿಂದೂ ಸಂಪ್ರದಾಯದಂತೆ ನಾನು ಅದರ ಅಂತ್ಯಕ್ರಿಯೆ ಮಾಡಬೇಕು. ಈ ಮೂಲಕ ಆಕೆಯ ಆತ್ಮಕ್ಕೆ ಶಾಂತಿ ಸಿಗಬೇಕು” ಎಂದು ಹೇಳಿದರು.

2003ರಿಂದ ಏಕೆ ಸುಮ್ಮನ್ನಿದ್ದಿರಿ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, “ನಾನು ಭಯದಿಂದ ಸುಮ್ಮನಿದ್ದೆ. ನನಗೆ ಯಾರ ಬೆಂಬಲವೂ ಇಲ್ಲ. ಬಂದು ಇಲ್ಲ, ಬಳಗವೂ ಇಲ್ಲ. ಇದ್ದ ಒಬ್ಬಳು ಮಗಳನ್ನು ಕಳೆದುಕೊಂಡಿದ್ದೇನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ” ಎಂದು ಕಣ್ಣೀರು ಹಾಕಿದರು.

“ನನ್ನ ಮಗಳು ಮಣಿಪಾಲ್‌ ಕೆಎಂಸಿಯಲ್ಲಿ ಎಂಬಿಬಿಎಸ್‌ ಓದುತ್ತಿದ್ದಳು. ಆಕೆ ಕೋರ್ಸ್‌ಗೆ ಸೇರಿ ಕೇವಲ ಆರು ತಿಂಗಳು ಆಗಿತ್ತು. ಆಕೆ ತುಂಬಾ ಕಷ್ಟಪಟ್ಟು ಓದುತ್ತಿದ್ದಳು. ಇವತ್ತು ಅವಳು ನನ್ನ ಜೊತೆಗಿಲ್ಲ. ಅವಳ ಆತ್ಮ ನನ್ನನ್ನು ಕಾಡ್ತಿದೆ. ಹಾಗಾಗಿ, ಅವಳ ಅಸ್ತಿ ಸಿಕ್ಕಿದರೆ ಪುಣ್ಯ ಬರುತ್ತದೆ ಎಂದು ಎಸ್ಪಿಯವರಿಗೆ ಹೇಳಿದ್ದೇನೆ. ಆಯ್ತಮ್ಮ ಎಂದು ಎಸ್ಪಿ ಹೇಳಿದ್ದಾರೆ. ಅವರಿಗೂ ನಾನು ಚಿರಋಣಿಯಾಗಿರುತ್ತೇನೆ” ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ಸುಜಾತಾ ಭಟ್ ಕೈ ಮುಗಿದರು.

2003ರಿಂದ ಏನು ಭಯ ಇತ್ತು ಮೇಡಂ? ಎಂಬ ಪ್ರಶ್ನೆಗೆ ಉತ್ತರಿಸಿ ಸುಜಾತಾ ಭಟ್, “ನನಗೆ ಯಾರ ಬೆಂಬಲವೂ ಇಲ್ಲ ಸರ್, ನಾನು ಒಂಟಿಯಾಗಿ ಹೋರಾಟ ಮಾಡಬೇಕಿದೆ ಸರ್ ಎಂದರು. ಮಣಿಪಾಲದ ಪರ್ಕಳದ ಹತ್ತಿರ ಪರಿಕ್ಕಾ ಅಂತ ಒಂದು ಊರಿದೆ. ಅಲ್ಲಿದ್ದ ನನ್ನ ಮನೆ ದೇವರು, ಆಸ್ತಿ ಎಲ್ಲವನ್ನೂ ಕಿತ್ತುಕೊಂಡಿದ್ದಾರೆ. ತಂದೆಯಿಂದ ಬಂದ ನನ್ನ ಪಿತ್ರಾರ್ಜಿತ ಆಸ್ತಿಯನ್ನು ನನ್ನ ಸಹಿಯೂ ಇಲ್ಲದೆ ಖರೀದಿ ಮಾಡಿದ್ದಾರೆ. ಆ ಆಸ್ತಿನೂ ನನ್ನ ಒಂದು ಭಾಗ ಆಗಿತ್ತು. ಈಗ ಅದೂ ಇಲ್ಲ. ನನಗೆ ಯಾರು ಇಲ್ಲ ಸರ್” ಎಂದು ಹೇಳಿದರು.

“ನನ್ನ ಮಗಳು ಧರ್ಮಸ್ಥಳದಲ್ಲೇ ಕಾಣೆಯಾಗಿದ್ದು, ಈ ಬಗ್ಗೆ ನಾನು 2003ರಲ್ಲೇ ಬೆಳ್ತಂಗಡಿ ಠಾಣೆಯಲ್ಲಿ ದೂರು ಕೊಟ್ಟಿದ್ದೆ. ಆದರೆ, ಅವರು ತೆಗೆದುಕೊಂಡಿಲ್ಲ. ಈಗ ನಾನು ಎಸ್ಪಿ ಬಳಿ ದೂರು ಕೊಟ್ಟಿದ್ದೇನೆ. ಅವರು ಧರ್ಮಸ್ಥಳ ಠಾಣೆಗೆ ಹೋಗಲು ಹೇಳಿದ್ದಾರೆ” ಎಂದು ತಿಳಿಸಿದರು.

ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಮಾತನಾಡಿ, “ಸಾಕ್ಷಿ ದೂರುದಾರ ಮೊನ್ನೆ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ಕೊಟ್ಟ ಬಳಿಕ ಸುಜಾತಾ ಭಟ್ ನನ್ನನ್ನು ಸಂಪರ್ಕಿಸಿದರು. “ಧರ್ಮಸ್ಥಳದ ಪ್ರಕರಣ ನಡೆಯುತ್ತಿದೆಯಲ್ಲ, ನನ್ನ ಮಗಳದ್ದು ಆ ರೀತಿಯ ಪ್ರಕರಣ ನಡೆದಿದೆ” ಎಂದರು. ಆಗ ನಾನು ಕಾನೂನಿನ ಪ್ರಕಾರ ದೂರು ಕೊಡೋಣ ಎಂದೆ. ಈಗ ದೂರು ಕೊಟ್ಟಿದ್ದೇವೆ. ಇವರ (ಸುಜಾತಾ ಭಟ್) ಬೇಡಿಕೆ ಏನೆಂದರೆ, ಇವರು ಯಾರನ್ನೂ ಜೈಲಿಗೆ ಹಾಕಿ ಎಂದು ಹೇಳುತ್ತಿಲ್ಲ. ಇವರಿಗೆ ಯಾರೂ ಇಲ್ಲ. ಇಲ್ಲಿ ಹೂಳಲಾಗಿದೆ ಎನ್ನಲಾದ ಹೆಣಗಳ ಬಗ್ಗೆ ಹುಡುಕಾಟ ನಡೆಸುವಾಗ ನನ್ನ ಮಗಳ ಅಸ್ತಿ ಏನಾದರು ಸಿಕ್ಕಿ, ಅದು ಡಿಎನ್‌ಎ ಮೂಲಕ ಖಚಿತವಾದರೆ ನನಗೆ ಕೊಡಿ. ಅದಕ್ಕೆ ಶ್ರಾದ್ಧ ಮಾಡಿ, ತಾನೂ ಜೀವ ಬಿಡುತ್ತೇನೆ ಎಂಬ ಸ್ಥಿತಿಯಲ್ಲಿ ಇದ್ದಾರೆ” ಎಂದರು.

“ಎಸ್ಪಿಯವರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ. ಕಾನೂನಿನ ಪ್ರಕಾರ ಏನು ಮಾಡಬೇಕೋ ಅದು ಮಾಡುತ್ತೇವೆ ಎಂದಿದ್ದಾರೆ. ಎಸ್ಪಿ ಹೇಳಿದಂತೆ ನಾವು ಧರ್ಮಸ್ಥಳ ಠಾಣೆಗೆ ದೂರು ಕೊಡುತ್ತೇವೆ” ಎಂದರು.

ಸುಜಾತಾ ಭಟ್ ಅವರ ಆಸ್ತಿ ವಿಚಾರ ಪ್ರಸ್ತಾಪಿಸಿದಾಗ, “ಅದು ಸಿವಿಲ್ ವ್ಯಾಜ್ಯವಾಗಿದೆ. ಅದನ್ನು ಇಲ್ಲಿ ಪ್ರಸ್ತಾಪಿಸಲು ಆಗುವುದಿಲ್ಲ ಎಂದು ಹೇಳಿದರು.

ದೂರಿನ ಬಗ್ಗೆ ವಿಚಾರಣೆ ನಡೆಸಿ ಕ್ರಮ: ಎಸ್ಪಿ ಡಾ.ಅರುಣ್ 

2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಅನನ್ಯ ಭಟ್ ಕಣ್ಮರೆಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಯುವತಿಯ ತಾಯಿ ಜುಲೈ 15ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಬೆಂಗಳೂರು| ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಇಬ್ಬರು ಉಪನ್ಯಾಸಕರು ಸೇರಿ ಮೂವರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...