Homeಕರ್ನಾಟಕಮೈಸೂರು: ಜ.25ರಿಂದ ‘ನಿರಂತರ ರಂಗ ಉತ್ಸವ’, ಐದು ನಾಟಕಗಳ ಪ್ರದರ್ಶನ

ಮೈಸೂರು: ಜ.25ರಿಂದ ‘ನಿರಂತರ ರಂಗ ಉತ್ಸವ’, ಐದು ನಾಟಕಗಳ ಪ್ರದರ್ಶನ

ಉತ್ಸವದಲ್ಲಿ ಪ್ರದರ್ಶನವಾಗುವ ಐದು ನಾಟಕಗಳ ಪರಿಚಯ ಇಲ್ಲಿದೆ

- Advertisement -
- Advertisement -

ಮೈಸೂರು: ನಿರಂತರ ಫೌಂಡೇಶನ್ ಆಯೋಜಿಸುತ್ತಾ ಬರುತ್ತಿರುವ ಪ್ರತಿಷ್ಟಿತ ‘ನಿರಂತರ ರಂಗ ಉತ್ಸವ’ ಈ ಬಾರಿ ಜನವರಿ 25ರಿಂದ ಜ.29ರವರೆಗೆ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ನಡೆಯಲಿದೆ.

ಪ್ರತಿದಿನ ಸಂಜೆ ಏಳು ಗಂಟೆಗೆ ಒಂದೊಂದು ನಾಟಕವನ್ನು ಪ್ರದರ್ಶಿಸಲಾಗುತ್ತದೆ. ಜ.25ರಂದು ಸಂಜೆ 6.15ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ನಿರಂತರ ಸಂಸ್ಥೆಯ ಪ್ರಸಾದ್ ಕುಂದೂರು ಪಾಲ್ಗೊಳ್ಳಲಿದ್ದಾರೆ.

ಜ.26ರಂದು ಪ್ರಜಾವಾಣಿ ಮೈಸೂರು ಬ್ಯುರೋ ಸಂಪಾದಕರಾದ ಕೆ.ನರಸಿಂಹಮೂರ್ತಿ, ಜ.27ರಂದು ಶಿಕ್ಷಣತಜ್ಞ ನಾ.ದಿವಾಕರ್‌, ಹಿರಿಯ ರಂಗಕರ್ಮಿ ಇಂದಿರಾ ನಾಯರ್‌, ಜ.28ರಂದು ಡಾ.ಡಿ.ಬಿ.ನಟೇಶ್‌, ಬೆಂಗಳೂರು ಹಸಿರು ಫೌಂಡೇಷನ್‌ನ ಹೊನ್ಗಳ್ಳಿ ಗಂಗಾಧರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜ.29ರಂದು ಸಂಜೆ 6.15ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು ಕವಿ ಆರಿಫ್ ರಾಜ್‌, ಬಿಬಿಎಂಪಿ ವಿಶೇಷ ಆಯುಕ್ತ, ಮಂತ್ರಿಮಂತ್ರಿಯವರ ಕಾರ್ಯದರ್ಶಿ ಜಯರಾಮ್ ರಾಯಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ನಿರಂತರ ಸಂಸ್ಥೆಯ ಶ್ರೀನಿವಾಸ್ ಪಾಲಹಳ್ಳಿ ಹಾಜರಿರುವರು.

ಪ್ರದರ್ಶನವಾಗುವ ನಾಟಕಗಳ ವಿವರ

ಜನವರಿ 25
ನಾಟಕ: ಶಾಂತಕವಿಗಳ ವಿಶ್ರಾಂತಿ
ತಂಡ: ಗೊಂಬೆಮನೆ, ಧಾರವಾಡ
ರಚನೆ & ನಿರ್ದೇಶನ: ಪ್ರಕಾಶ್ ಗರುಡ

ನಾಟಕದ ಬಗ್ಗೆ: ಇದು ಕನ್ನಡದ ಆದ್ಯ ನಾಟಕಕಾರ ಎಂದು ಹೆಸರಾದ ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ಗಳ ಜೀವನ-ಸಾಧನೆಗಳ ಕುರಿತಾದ ನಾಟಕ. ಹೆಸರೇ ಸೂಚಿಸುವಂತೆ ಶಾಂತಕವಿಗಳು ಉರ್ಫ್ ಸಕ್ಕರಿ ಬಾಳಾಚಾರ್ಯರೇ ಇದರ ಕೇಂದ್ರ ಪಾತ್ರ. ಐತಿಹಾಸಿಕ ವಿವರಗಳನ್ನು ಒಳಗೊಂಡಿರುವುದರಿಂದ ಇದನ್ನು ದಾಖಲಾತೀ ನಾಟಿಕೆ ಎಂದು ಕರೆಯಲಾಗಿದೆ. ನಾಟಿಕಾ ಎಂಬ ಪದದ ಪ್ರಯೋಗವು ಭರತಮುನಿಯ ನಾಟ್ಯಶಾಸ್ತ್ರ (ಅಧ್ಯಾಯ 20)ದಲ್ಲಿಯೂ ಮತ್ತು ಧನಂಜಯನ ದಶರೂಪಕ (ಪ್ರಕಾಶ- 3)ದಲ್ಲಿಯೂ ಕಂಡುಬರುತ್ತದೆ. ಈ ನಾಟಕ ಶಾಂತಕವಿಗಳ ಕನ್ನಡತ್ವದ ಶೋಧನೆಗಾಗಿ ಹೊಸ ರಂಗಭೂಮಿಯನ್ನು ಕಟ್ಟಲು ಅವರು ಪಟ್ಟಶ್ರಮ ಎದುರಿಸಿದ ಬಿಕ್ಕಟ್ಟುಗಳನ್ನು ಅವರ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳ ಹಿನ್ನೆಲೆಯಲ್ಲಿ ಕಟ್ಟಿಕೊಡಲು ಪ್ರಸ್ತುತ ಪ್ರಯೋಗದಲ್ಲಿ ಪ್ರಯತ್ನಿಸಲಾಗಿದೆ.

***

ಜನವರಿ 26
ನಾಟಕ: ವಾರಸುದಾರಾ
ರಚನೆ: ಜಯರಾಂ ರಾಯಪುರ
ತಂಡ: ನಿರಂತರ, ಮೈಸೂರು
ನಿ: ಪ್ರಸಾದ್ ಕುಂದೂರು

ನಾಟಕದ ಬಗ್ಗೆ: ಹಿಂದೂಸ್ತಾನದ ಚರಿತ್ರೆಯಲ್ಲಿ ಮೊಘಲ್ ಸಾಮ್ರಾಜ್ಯದ ಇತಿಹಾಸ ಎಂದೂ ಮರೆಯಲಾಗದ ಅಧ್ಯಾಯ. ಟರ್ಕಿಯಿಂದ ಬಂದ ತೈಮೂರ್ ವಂಶಸ್ಥರಾದರೂ, ಈ ಭಾರತೀಯ ನೆಲದ ಸಂಸ್ಕೃತಿ-ಸಂಘರ್ಷಗಳನ್ನು, ಭಾವೈಕ್ಯತೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ, ಬೃಹತ್ ಸಾಮ್ರಾಜ್ಯದ ಒಡೆತನ ಹೊಂದಿದ್ದ ಮೊಘಲರು, ಮೌರ್ಯರ ನಂತರ ಅಖಂಡ ಹಿಂದೂಸ್ತಾನವನ್ನು ಆಳಿದವರು. ಸರ್ವ ಧರ್ಮಗಳ ಗೌರವಿಸಿ ಪೊರೆಯುವ ಅಕ್ಬರ್‌ನ ಧಾರ್ಮಿಕ ಮತ್ತು ರಾಜಕೀಯ ಚಿಂತನೆಗಳು ಶಹಜಹಾನ್ ಮತ್ತು ಅವನ ಅತ್ಯಂತ ಪ್ರೀತಿಯ ಹಿರಿಯ ಮಗ ದಾರಶಿಕೋನ ಮರಣದಲ್ಲಿ ಪರ್ಯಾವಸನಗೊಳ್ಳುತ್ತದೆ. ಶಹಜಹಾನನ ನಾಲ್ಕು ಮಕ್ಕಳಾದ ದಾರಶಿಕೋ, ಮುರಾದ್, ಶೂಜ, ಜೌರಂಗಜೇಬನಿಗೆ ಮೊಘಲ್ ಹಾಗೂ ಹಿಂದುಸ್ತಾನದ ಬಾದಶಹ ಆಗಬೇಕಾದರೆ ತಮ್ಮ ಅಣ್ಣತಮ್ಮಂದಿರನ್ನೇ ಕೊಂದು ಗಾದಿ ಹಿಡಿಯಬೇಕು. ಇಲ್ಲವಾದರೆ ಪ್ರಾಣ ಕಳೆದುಕೊಂಡು ಪಟ್ಟ ಏರುವವನಿಗೆ ಮೆಟ್ಟಿಲಾಗಬೇಕು. ಹೀಗೆ ತೈಮೂರ್ ವಂಶವಳಿಯ ಈ ರಾಜಕೀಯ ದುರಂತದ ಚರಿತ್ರೆಯೊಳಗೆ ಯಾರು ಶಹಜಹಾನನ ನಂತರ ಮಯೂರ ಸಿಂಹಾಸನದ ಮೇಲೆ ಕೂತು ಅಖಂಡ ಹಿಂದೂಸ್ತಾನವನ್ನು ಆಳಲು ಯೋಗ್ಯರೋ ಎಂದು ಯುದ್ಧವೇ ನಿರ್ಧರಿಸಬೇಕಾಗುತ್ತದೆ. ಇಂತಹ ಮೊಘಲ್ ಸುಲ್ತಾನತ್ತಿಗಾಗಿ ನಡೆದ ರೋಚಕ ಕಾಳಗದ ಕಥನವೇ “ವಾರಸುದಾರಾ”.

****

ಜನವರಿ 27
ನಾಟಕ: ನವಿಲು ಪುರಾಣ
ರಚನೆ: ಪ್ರೊ.ಕೆ.ಈ.ರಾಧಾಕೃಷ್ಣ
ತಂಡ: ಅನೇಕ, ಬೆಂಗಳೂರುನಿ: ಸುರೇಶ್ ಆನಗಳ್ಳಿ

ನಾಟಕದ ಬಗ್ಗೆ: ಮಹಾನ್ ಉರ್ದು ಲೇಖಕ ಇನ್ತಿಜಾರ್ ಹುಸೇನರ ಕತೆಯಿಂದ ಪ್ರೇರಿತವಾದ ‘ನವಿಲು ಪುರಾಣ’ವನ್ನು ಕನ್ನಡದಲ್ಲಿ ಕಥಾರೂಪಕವಾಗಿ ರಚಿಸಿದವರು- ಸಾಂಸ್ಕೃತಿಕ ಲೋಕದಲ್ಲಿ ಕ್ರಿಯಾಶೀಲವಾಗಿರುವ ಪ್ರೊ.ಕೆ.ಈ.ರಾಧಾಕೃಷ್ಣ ಅವರು. ರಂಗ ಪ್ರದರ್ಶನಕ್ಕೆ ಪರಿಕಲ್ಪಿಸಿ ಅಳವಡಿಸಿದವರು ಮತ್ತು ನಿರ್ದೇಶಿಸಿದವರು, ನಾಡಿನ ಶ್ರೇಷ್ಠ ರಂಗತಪಸ್ವಿ ಸುರೇಶ್ ಅನಗಳ್ಳಿಯವರು.

ವಿನಾಶಕಾರಿ ಯುದ್ಧದ ಪರಿಣಾಮವಾಗಿ ನೆಲೆ ಕಳೆದುಕೊಂಡು ನಿರಾಶ್ರಿತವಾದ ನವಿಲು – ಈ ನಾಟಕದ ಕೇಂದ್ರ ರೂಪಕ. ಈ ರೂಪಕದ ಸುತ್ತ – ಪುರಾಣ, ಇತಿಹಾಸ, ವರ್ತಮಾನ ಕಾಲಘಟ್ಟಗಳ ಹಲವಾರು ಘಟನೆಗಳು ಬಿಚ್ಚಿಕೊಳ್ಳುತ್ತವೆ. ಯುದ್ಧವೆಂದರೆ ಪರರ ನೆಲವನ್ನು, ಸಂಪತ್ತನ್ನು ಕಸಿದುಕೊಳ್ಳುವ ದುಷ್ಟರ ಹುನ್ನಾರವೇ ತಾನೇ? ಬಲಾಢ್ಯರು ಸೃಷ್ಟಿಸುವ ಇಂತಹ ಯುದ್ಧೋನ್ಮಾದ ಹಾಗೂ ಅದರ ಪರಿಣಾಮವಾಗಿ ದುರ್ಬಲರು ತಮ್ಮ ನೆಲೆ ಕಳೆದುಕೊಂಡು ನಿರಾಶ್ರಿತರಾಗುವ ಧಾರುಣ ವಿದ್ಯಮಾನಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತದೆ- ಸ್ವತ: ತನ್ನ ನೆಲವನ್ನೇ ಕಳೆದುಕೊಂಡ ನವಿಲು! ನವಿಲು ಪುರಾಣವು ಯುದ್ಧದ ಪರಿಣಾಮವಾಗಿ ನೆಲವಿಹೀನರಾಗುವ ನಾಗರಿಕರ ಸಂಕಟದ ಕಥೆ ಮಾತ್ರವಲ್ಲ; ಸಕಲ ಜೀವ ಸಂಕುಲವನ್ನು ಒಳಗೊಂಡ ಪರಿಸರ ವಿನಾಶದ ಕಥೆಯೂ ಹೌದು. ಹಿಂದೊಮ್ಮೆ ತಿಳಿನೀರ ಕೊಳದಲ್ಲಿ ವಿಹರಿಸುತ್ತಿದ್ದ ರಾಜಹಂಸವು ಇಂದು ಬಡಕಲು ಬಾತುಕೋಳಿಯಾಗಿ ರೂಪಾಂತರಗೊಂಡ ವಿಷಾದದ ಎಳೆಯೂ ಈ ನಾಟಕದ ಕಥಾ ನೇಯ್ಗೆಯಲ್ಲಿದೆ.

ನವಿಲು ಪುರಾಣ ಪ್ರಯೋಗ ವಿನ್ಯಾಸದ ಕುರಿತು: ಈ ನಾಟಕದಲ್ಲಿ ರಂಗಭೂಮಿಗೆ ವಿಶಿಷ್ಟವಾದ ನಾಟಕೀಯ ಸಂಭಾಷಣೆಯ ಬದಲಿಗೆ, ಸಣ್ಣ ಕಥಾ ಸಾಹಿತ್ಯ ಪ್ರಕಾರದಲ್ಲಿ ಬಳಕೆಯಾಗುವ ಕಥನ ನಿರೂಪಣಾ ಶೈಲಿಗೆ ಒತ್ತು ಕೊಡಲಾಗಿದೆ. ಅಂದರೆ, ನಟನು ತಾನು ನಿರ್ವಹಿಸಬೇಕಾದ ಕ್ರಿಯೆಗಳನ್ನು ಪಾತ್ರದ ಹೊರ ನಿಂತು ನಿರೂಪಿಸಲಾಗುತ್ತದೆ ಹಾಗೂ ಮರುಕ್ಷಣವೇ ಪಾತ್ರವಾಗಿ ಮಾರ್ಪಟ್ಟು ಪಾತ್ರದ ಸಂಭಾಷಣೆಯನ್ನು ಹೇಳುತ್ತಾನೆ. ಈ ರೀತಿ ಏಕಕಾಲದಲ್ಲೇ ನಟ-ಪಾತ್ರ ದ್ವಂದ್ವ ಪ್ರಸ್ತುತಿಯ ಜೊತೆಗೆ ಸಾಕ್ಷ ಚಿತ್ರಗಳ ನೈಜ ಬಿಂಬಗಳ ತುಣುಕು; ಸಮೂಹ ನಟನೆಯ ನಾಟಕೀಯತೆ; ಅತಿ- ವಾಸ್ತವತೆಗಳ ಬೃಹತ್ ಬೊಂಬೆಗಳ ಆಟ – ಇತ್ಯಾದಿ ಹಲವು ಮಾಧ್ಯಮಗಳ ಮಿಶ್ರಣದ ಪಾಕವನ್ನು ನವಿಲು ಪುರಾಣದ ದೃಷ್ಟಾಂಶಗಳಲ್ಲಿ ಪ್ರಯೋಗಿಸಲಾಗಿದೆ.

***

ಜನವರಿ 28
ನಾಟಕ: ಮಿಸ್. ಸದಾರಮೆ
ರಚನೆ: ಬೆಳ್ಳಾವೆ ನರಹರಿ ಶಾಸ್ತ್ರಿ
ತಂಡ: ಸಮಷ್ಟಿ, ಬೆಂಗಳೂರು
ನಿ: ಮಂಜುನಾಥ ಎಲ್ ಬಡಿಗೇರ

ನಾಟಕದ ಬಗ್ಗೆ: ಮಿಸ್ ಸದಾರಮೆ ನಾಟಕವು ಬೆಳ್ಳಾವೆ ನರಹರಿ ಶಾಸ್ತ್ರಿಗಳಿಂದ ವಿರಚಿರ್ತವಾದ ಮೂಲ “ಸದಾರಮಾ ನಾಟಕಂ”ನ ಪರಿಷ್ಕೃತ ಆವೃತ್ತಿ. ಮೂಲತಃ ಈ ನಾಟಕವು ಗುಬ್ಬಿ ಕಂಪೆನಿಯಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಂಡು ನಂತರ ಹಿರಣ್ಣಯ್ಯನವರಿಂದ ಹಲವಾರು ಪ್ರಯೋಗಗಳನ್ನು ಕಂಡು ಪ್ರಸಿದ್ದವಾಗಿದೆ. ನಂತರ ಇದನ್ನು ಕೆ ವಿ ಸುಬ್ಬಣ್ಣನವರು ಪ್ರಸ್ತುತ ಸನ್ನಿವೇಷಕ್ಕೆ ಬದಲಾಯಿಸಿ “ಮಿಸ್ ಸದಾರಮೆ” ಎಂದು ಬಿ ವಿ ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನು ಮಾಡಿಸಿದರು. ಈ ನಾಟಕವು ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಪ್ರಯೋಗವಾದ ದಾಖಲೆಗಳಿವೆ.

ವರ್ತಕ ಬಂಗಾರ ಶೆಟ್ಟಿಯ ಮಗಳಾದ ಸದಾರಮೆಯಿಂದ ಆಕರ್ಷಿತನಾದ ರಾಜಕುಮಾರ ರಾಜ್ಯ ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ, ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ. ವಿಧಿಯ ವೈಪರೀತ್ಯದಿಂದಾಗಿ ಗಂಡ-ಹೆಂಡತಿಯರು ಒಬ್ಬರಿಂದೊಬ್ಬರು ಅಗಲಿ ಮುಗ್ದೆಯಾದ ಸದಾರಮೆ ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲ ಯಶಸ್ವಿಯಾಗಿ ಎದುರಿಸಿ ಕೊನೆಗೆ ಅವರು ಮತ್ತೆ ಒಂದಾಗುತ್ತಾರೆ.
ನಾಟಕ ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪೆನಿ ನಾಟಕ ಶೈಲಿಯ ಹಾಡುಗಳಿಂದ ವೈಭವೀಕರಿಸಲ್ಪಟ್ಟಿದೆ. ನಿರ್ದೇಶಕರು ನಾಟಕದ ಮೂಲ ಕಥೆಗೆ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ.

****

ಜನವರಿ 29
ನಾಟಕ: ದಕ್ಲಕಥಾ ದೇವಿಕಾವ್ಯ
ತಂಡ: ಜಂಗಮ ಕಲೆಕ್ಟಿವ್, ಬೆಂಗಳೂರು
ರಚನೆ & ನಿರ್ದೇಶನ: ಲಕ್ಷ್ಮಣ ಕೆ.ಪಿ.

ನಾಟಕದ ಬಗ್ಗೆ: ‘ದಕ್ಲ ಕಥಾ ದೇವಿ ಕಾವ್ಯ’ ಕನ್ನಡ ಮಹತ್ವದ ಬರಹಗಾರರು ಮತ್ತು ಕರ್ನಾಟಕ ‘ದಲಿತ ಸಂಘರ್ಷ ಸಮಿತಿ’ಯ ಸ್ಥಾಪಕ ಸದಸ್ಯರು ಆದ ಕೆ.ಬಿ.ಸಿದ್ಧಯ್ಯ ಅವರ ಖಂಡಕಾವ್ಯ ಮತ್ತು ಕಥನಗಳನ್ನು ಒಟ್ಟಿಗೆ ಹೊಸೆದು ಕಟ್ಟಿರುವ ರಂಗಪ್ರಯೋಗ. ತಳಾತೀತಳ ಸಮುದಾಯಗಳ ಕಲ್ಪನೆಯಲ್ಲಿ ಅರಳಿರುವ ಭೂಮಿ ಹುಟ್ಟಿದ, ಜೀವ ಹುಟ್ಟಿದ ಕಥನದಿಂದ ಆರಂಭವಾಗುವ ಈ ಪ್ರಯೋಗ, ಈ ಸಮುದಾಯಗಳ ಆಚರಣೆ ನಂಬುಗೆ, ಹಸಿವು, ಬಯಕೆ, ಹಾಡು-ಪಾಡನ್ನು ಬಿಚ್ಚಿಡುತ್ತಾ ಹರಿಯುತ್ತದೆ. ‘ನುಡಿ’ ಎನ್ನುವುದು ಈ ಸಮುದಾಯಗಳಿಗೆ ಮೈಯ್ಯನ್ನು ಬಿಟ್ಟಿರಲಾಗದ ಉಸುರಿದ್ದಂತೆ. ಅರೆ, ತಮಟೆಯಂತಹ ವಾದ್ಯಗಳು ಆ ನುಡಿಬಳ್ಳಿಯ ಕುಡಿಗಳು. ಹೀಗೆ ಅಸ್ಪೃಶ್ಯ ಜಗತ್ತು ನಾದ ಜಗತ್ತು ಕೂಡ ಹೌದು. ಹೀಗಿರುವಾಗ ಶತಮಾನಗಳಿಂದ ದೂರವಿದ್ದ ‘ಅಕ್ಷರ’ವೆಂಬ ಮತ್ತೊಂದು ಅಂಗ ಅಸ್ಪೃಶ್ಯ ಮೈ ಪ್ರಜ್ಞೆಗೆ ತಾಕಿಕೊಂಡಾಗ ಅಲ್ಲಿ ಉಂಟಾಗುವ ಪ್ರೀತಿ, ಹಗೆಯ ಸಂಬಂಧವನ್ನು ಪ್ರಯೋಗ ಎದುರಾಗುತ್ತದೆ. ಹೀಗೆ ‘ಅಸ್ಪೃಶ್ಯತೆ ಮತ್ತು ಅಕ್ಷರದ ಅನುಭವದಿಂದ ದಕ್ಕಿದ ಅರಿವಿನ ಮೂಲಕ ನಮ್ಮಾಳದ ಮನುಷ್ಯನನ್ನು ಎದುರುಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...