Homeಮುಖಪುಟನ್ಯೂಯಾರ್ಕ್ ಟೈಮ್ಸ್‌ ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಿದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್‌

ನ್ಯೂಯಾರ್ಕ್ ಟೈಮ್ಸ್‌ ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಿದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್‌

- Advertisement -
- Advertisement -

ಭಾರತದ ಬಗ್ಗೆ ಅಪಪ್ರಚಾರ ಮಾಡುವುದೇ ‘ದಿ ನ್ಯೂಯಾರ್ಕ್ ಟೈಮ್ಸ್‌’ ಪತ್ರಿಕೆಯ ಏಕೈಕ ಉದ್ದೇಶವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕುಗ್ಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಪ್ರಕಟಿಸಿರುವ ಲೇಖನಕ್ಕೆ ಸಂಬಂಧಿಸಿದಂತೆ ಅನುರಾಗ್ ಪ್ರತಿಕ್ರಿಯಿಸಿದ್ದಾರೆ.

“ಭಾರತದ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಮೋದಿಯವರಿಂದ ಅಂತಿಮ ದಾಳಿ ಆರಂಭವಾಗಿದೆ” ಎಂಬ ಶೀರ್ಷಿಕೆಯಲ್ಲಿ ‘ದಿ ಕಾಶ್ಮೀರ್ ಟೈಮ್ಸ್‌’ನ ಕಾರ್ಯನಿರ್ವಾಹಕ ಸಂಪಾದಕರಾದ ಅನುರಾಧಾ ಭಾಸಿನ್ ಅವರು ಲೇಖನ ಬರೆದಿದ್ದು, ಬುಧವಾರ ಅದು ಪ್ರಕಟವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ದಮನಕಾರಿ ಮಾಧ್ಯಮ ನೀತಿಗಳು ಕಾಶ್ಮೀರಿ ಪತ್ರಿಕೋದ್ಯಮವನ್ನು ನಾಶಪಡಿಸುತ್ತಿವೆ, ಸರ್ಕಾರದ ಮುಖವಾಣಿಗಳಾಗಿ ಕಾರ್ಯನಿರ್ವಹಿಸುವಂತೆ ಮಾಧ್ಯಮಗಳನ್ನು ಬೆದರಿಸಲಾಗುತ್ತಿದೆ. ಸುಮಾರು 13 ಮಿಲಿಯನ್ ಜನರಿರುವ ನಮ್ಮ ಪ್ರದೇಶದಲ್ಲಿ ಮಾಹಿತಿ ಹರಿವಿನ ಮೇಲೆ ತಡೆ ನೀಡಲಾಗುತ್ತಿದೆ ಎಂದು ಭಾಸಿನ್ ಬರೆದಿದ್ದಾರೆ.

ಭಾರತದಾದ್ಯಂತ ಈ ‘ಗೊಂದಲಕಾರಿ ಮಾದರಿ’ಯನ್ನು ಅನ್ವಯಿಸಲು ಮೋದಿ ಮುಂದಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಠಾಕೂರ್‌, “ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಇತರ ಮೂಲಭೂತ ಹಕ್ಕುಗಳಂತೆ ಪರಮಪೂಜ್ಯವಾಗಿದೆ” ಎಂದು ಪ್ರತಿಪಾದಿಸಿದ್ದಾರೆ.

ಆದರೆ ಠಾಕೂರ್ ಅವರ ಪ್ರತಿಪಾದನೆಗೆ ವ್ಯತಿರಿಕ್ತವಾಗಿ ಅಂಕಿಅಂಶಗಳಿವೆ. 2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 140ನೇ ಸ್ಥಾನದಿಂದ ಕಳೆದ ವರ್ಷ 150ನೇ ಸ್ಥಾನಕ್ಕೆ ಕುಸಿದಿದೆ.

“ಕಾಶ್ಮೀರದಲ್ಲಿ ಮಾಹಿತಿ ಹರಿವಿನ ಮೇಲೆ ನಿರ್ಬಂಧ ಹೇರಲಾಗಿದೆ ಎಂಬುದು ಕಾಲ್ಪನಿಕ” ಎಂದು ವಾದಿಸಿರುವ ಠಾಕೂರ್‌, “ನ್ಯೂಯಾರ್ಕ್ ಟೈಮ್ಸ್ ಬಹಳ ಹಿಂದೆಯೇ ಭಾರತದ ಬಗ್ಗೆ ಏನನ್ನಾದರೂ ಪ್ರಕಟಿಸುವಾಗ ತಟಸ್ಥತೆಯ ಎಲ್ಲಾ ಸೋಗುಗಳನ್ನು ಕೈಬಿಟ್ಟಿದೆ” ಎಂದು ದೂರಿದ್ದಾರೆ.

“ಇದೇ ರೀತಿಯ ಮನಸ್ಥಿತಿಯನ್ನು ಹೊಂದಿರುವ ಇತರ ಕೆಲವು ವಿದೇಶಿ ಮಾಧ್ಯಮ ಸಂಸ್ಥೆಗಳು ಭಾರತ ಮತ್ತು ಮೋದಿಯವರ ಬಗ್ಗೆ ಸುಳ್ಳುಗಳನ್ನು ಹರಡುತ್ತಿವೆ. ಈ ಸಂಸ್ಥೆಗಳು ಭಾರತ ಮತ್ತು ಪ್ರಧಾನಿ ವಿರುದ್ಧ ದ್ವೇಷ ಕಾರುತ್ತಿವೆ” ಎಂದಿದ್ದಾರೆ.

ಇದನ್ನೂ ಓದಿರಿ: ಕೇಸರಿ ಪಾಳಯಕ್ಕೆ ಸುಮಲತಾ ಬೆಂಬಲ; ಮಂಡ್ಯದಲ್ಲಿ ಬಿಜೆಪಿ ಕಥೆ ಏನಾಗಲಿದೆ?

“ಇಂತಹ ಸುಳ್ಳುಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಜನರು ಬಹಳ ಪ್ರಬುದ್ಧರಾಗಿದ್ದೇವೆ. ಇಂತಹ ಅಜೆಂಡಾ ಚಾಲಿತ ಮಾಧ್ಯಮಗಳಿಂದ ನಾವು ಪ್ರಜಾಪ್ರಭುತ್ವದ ಪಾಠವನ್ನು ಕಲಿಯಬೇಕಾಗಿಲ್ಲ. ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ನ್ಯೂಯಾರ್ಕ್ ಟೈಮ್ಸ್‌ ಹರಡಿದ ಸುಳ್ಳುಗಳು ಖಂಡನೀಯ” ಎಂದು ತಿಳಿಸಿದ್ದಾರೆ.

2002ರ ಗುಜರಾತ್ ಗಲಭೆಯಲ್ಲಿ ಮೋದಿಯವರ ನಿಷ್ಕ್ರಿಯತೆಯನ್ನು ಎತ್ತಿಹಿಡಿದು ಬಿಬಿಸಿ ಬಿಡುಗಡೆ ಮಾಡಿದ ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಬಿಜೆಪಿ ಸರ್ಕಾರ ವಿರೋಧಿಸಿದ ವಾರಗಳ ನಂತರ ಅನುರಾಗ್ ಹೇಳಿಕೆಗಳು ಹೊರಬಿದ್ದಿವೆ.

ಸಾಕ್ಷ್ಯಚಿತ್ರ ಬಿಡುಗಡೆಯಾದ ಬಳಿಕ, ಕಳೆದ ಫೆಬ್ರವರಿಯಲ್ಲಿ ಭಾರತೀಯ ತೆರಿಗೆ ಅಧಿಕಾರಿಗಳು ಬಿಬಿಸಿ ಮಾಧ್ಯಮದ ಕಚೇರಿಗಳ ಮೇಲೆ ನವದೆಹಲಿ ಮತ್ತು ಮುಂಬೈನಲ್ಲಿ ದಾಳಿ ಮಾಡಿದ್ದರು. ಭಾರತದಲ್ಲಿ ಬಿಬಿಸಿಯ ಆದಾಯವು ದೇಶದಲ್ಲಿನ ಕಾರ್ಯಾಚರಣೆಗಳ ಪ್ರಮಾಣಕ್ಕೆ ಅನುಗುಣವಾಗಿಲ್ಲ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಹೇಳಿಕೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...